Posts

Showing posts from July, 2026

ಬ್ಯಾಂಕ್‍ಗಳ ವಿಲೀನ: ಗಾತ್ರ ಹೆಚ್ಚಿದರೆ ಬ್ಯಾಂಕಿಂಗ್ ವ್ಯವಸ್ಥೆ ಬಲಗೊಳ್ಳುವುದೇ?

 ನಮ್ಮ ಕರಾವಳಿಯ ರಾಷ್ಟ್ರೀಕೃತ ಕಾರ್ಪೊರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಖ್ ವಿಲೀನಕ್ಕೆ ಬಲಿಯಾದವು. ಯಾರಿಗೇನು ಪ್ರಯೋಜನವಾಯಿತು? ................. ಖುಲ್ಲಂಖುಲ್ಲಾ * ಬಿವಿಸೀ  ಸಾರ್ವಜನಿಕ ವಲಯದ ಬ್ಯಾಂಕ್‍ಗಳ ವಿಲೀನವನ್ನು ಸಾಮಾನ್ಯವಾಗಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತದೆ. ದೊಡ್ಡ ಬ್ಯಾಂಕ್‍ಗಳು ಹೆಚ್ಚು ಬಂಡವಾಳ ಹೊಂದಿರುತ್ತವೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲವು ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡಬಲ್ಲವು ಎಂಬ ವಾದವನ್ನು ಮುಂದಿಡಲಾಗುತ್ತದೆ. ಆದರೆ ಬ್ಯಾಂಕಿಂಗ್ ಕ್ಷೇತ್ರದ ಅನುಭವವನ್ನು ಗಮನಿಸಿದರೆ, ಬ್ಯಾಂಕ್‍ಗಳ ಗಾತ್ರ ಹೆಚ್ಚುವುದರಿಂದ ಮಾತ್ರ ಅವುಗಳ ಕಾರ್ಯಕ್ಷಮತೆ ಮತ್ತು ಹಣಕಾಸಿನ ಆರೋಗ್ಯ ಸುಧಾರಿಸುತ್ತದೆ ಎನ್ನುವುದು ಖಚಿತವಲ್ಲ. ಸಮಸ್ಯೆಯ ಮೂಲವನ್ನು ಸ್ಪರ್ಶಿಸದ ವಿಲೀನಗಳು ಹಲವು ಬಾರಿ ಕೇವಲ ಆಡಳಿತಾತ್ಮಕ ಬದಲಾವಣೆಯಾಗಿಯೇ ಉಳಿಯುತ್ತವೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಮುಖ ಸವಾಲು ಬ್ಯಾಂಕ್‍ಗಳ ಸಂಖ್ಯೆಯಲ್ಲ. ದುರ್ಬಲ ಆಡಳಿತ, ಸಾಲ ಮಂಜೂರಾತಿಯಲ್ಲಿನ ಲೋಪಗಳು, ಅಪಾಯವನ್ನು ಸರಿಯಾಗಿ ಅಂದಾಜಿಸದಿರುವುದು, ರಾಜಕೀಯ ಹಾಗೂ ಇತರ ಪ್ರಭಾವಗಳಿಂದ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಸಮರ್ಪಕ ಮೇಲ್ವಿಚಾರಣೆಯ ಕೊರತೆಯೇ ಅನೇಕ ಬ್ಯಾಂಕ್‍ಗಳನ್ನು ಸಂಕಷ್ಟಕ್ಕೆ ತಳ್ಳಿವೆ. ಇಂತಹ ಪರಿಸ್ಥಿತಿಯಲ್ಲಿ ಎರಡು ಅಥವಾ ಮೂರು ಬ್ಯಾಂಕ್‍ಗಳನ್ನು ...

ಇಂಗ್ಲಿಷ್ ಭಾರತೀಯ ಭಾಷೆಯೇ?

ಸುಪ್ರೀಂ ಪ್ರಶ್ನೆಯ ಹಿಂದಿನ ಸವಾಲಿನ ಚಿಂತನೆ * ಬಿವಿಸೀ ಒಂದು ಕಾಲದಲ್ಲಿ ಆಳ್ವಿಕೆಯ ಸಂಕೇತವಾಗಿದ್ದ ಇಂಗ್ಲಿಷ್, ಇಂದು ಭಾರತೀಯತೆಯ ಭಾಗವಾಗಿದೆಯೇ? ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಳಿರುವ ಈ ಪ್ರಶ್ನೆ ಕೇವಲ ಭಾಷೆಯ ಚರ್ಚೆಯಲ್ಲ. ಅದು ಭಾರತದ ಇತಿಹಾಸ, ಸಂವಿಧಾನ, ಶಿಕ್ಷಣ ನೀತಿ, ಸಾಂಸ್ಕøತಿಕ ಅಸ್ಮಿತೆ ಮತ್ತು ಭವಿಷ್ಯದ ಭಾಷಾ ರಾಜಕಾರಣದ ಕುರಿತ ವಿಶಾಲವಾದ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಭಾಷೆಯ ಜನ್ಮಸ್ಥಳ ಮುಖ್ಯವೇ, ಅಥವಾ ಅದನ್ನು ಬದುಕಿಸಿದ ಜನರ ಸ್ವೀಕಾರ ಮುಖ್ಯವೇ ಎಂಬ ಮೂಲ ಪ್ರಶ್ನೆಯನ್ನು ಈ ಚರ್ಚೆ ನಮ್ಮ ಮುಂದೆ ಇಟ್ಟಿದೆ. ಮೂರು ಭಾಷಾ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಇಂಗ್ಲಿಷ್ ಅನ್ನು ಇನ್ನೂ 'ವಿದೇಶಿ' ಅಥವಾ 'ಸ್ಥಳೀಯವಲ್ಲದ' ಭಾಷೆ ಎಂದು ನೋಡುವುದು ಎಷ್ಟರಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಎತ್ತಿತು. ಎರಡು ಶತಮಾನಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಬಳಕೆಯಲ್ಲಿರುವ ಭಾಷೆಯನ್ನು ಅದರ ವಸಾಹತುಶಾಹಿ ಹಿನ್ನೆಲೆಯ ಕಾರಣಕ್ಕೆ ಮಾತ್ರ ಪರಿಗಣಿಸಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದು ಅಂತಿಮ ತೀರ್ಪಲ್ಲದಿದ್ದರೂ, ದೇಶದ ಭಾಷಾ ನೀತಿಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ. ಇಂಗ್ಲಿಷ್ ಈಗ ಭಾರತೀಯ ಜೀವನದ ಪ್ರತಿಯೊಂದು ಪ್ರಮುಖ ಕ್ಷೇತ್ರದಲ್ಲೂ ತನ್ನ ಸ್ಥಾನವನ್ನು ಗಟ್ಟಿಯಾಗಿ ಪಡೆದುಕೊಂಡಿದೆ. ನ್ಯಾಯಾಂಗ, ಆಡಳಿತ, ಉನ್ನತ ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಮಾಹಿತಿ ತಂ...

ಕೇಂದ್ರ ಸರಕಾರ ಅಧೀನದ ಒಎನ್‍ಜಿಸಿ ಕಂಪೆನಿಯ 668 ಕೋಟಿ ರೂ ದೇಣಿಗೆ ಆರೆಸ್ಸೆಸ್ ಸಂಸ್ಥೆಗಳಿಗೆ

 ನವದೆಹಲಿ: ಕೇಂದ್ರ ಸರ್ಕಾರದ ಸ್ವಾಮ್ಯದ ತೈಲ ಮತ್ತು ಅನಿಲ ಮಹಾ ಸಂಸ್ಥೆ ಒಎನ್‍ಜಿಸಿ (ಇದು ಮಂಗೂಳೂರಿನಲ್ಲಿ ಎಂಆರ್‍ಪಿಎಲ್ ತೈಲ ಉತ್ಪಾದನಾ ಘಟಕವನ್ನು ನಡೆಸುತ್ತಿದೆ) ಕಳೆದ ಹತ್ತು ವರ್ಷಗಳಲ್ಲಿ ತನ್ನ ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ನಿಧಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿವೆ ಎಂದು ಹೇಳಲಾಗಿರುವ 20 ಸಂಸ್ಥೆಗಳಿಗೆ ಒಟ್ಟು 668.01 ಕೋಟಿ ರೂಪಾಯಿಗಳನ್ನು ನೀಡಿದೆ ಎಂಬ ಆರೋಪ ಹೊಸ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರಕಟವಾದ ತನಿಖಾ ವರದಿ ಹುಬ್ಬೇರಿಸಿದೆ. ವರದಿಯ ಪ್ರಕಾರ, 2015ರಿಂದ 2025ರ ಅವಧಿಯಲ್ಲಿ ಒಎನ್‍ಜಿಸಿ ತನ್ನ ಸಿಎಸ್‍ಆರ್ ಕಾರ್ಯಕ್ರಮಗಳಡಿ ಸುಮಾರು 4,531 ಕೋಟಿ ರೂಪಾಯಿಗಳನ್ನು ಎರಡು ಸಾವಿರಕ್ಕೂ ಹೆಚ್ಚು ಯೋಜನೆಗಳು ಮತ್ತು ಸಂಸ್ಥೆಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಸುಮಾರು 14.7 ಶೇಕಡಾ, ಅಂದರೆ 668.01 ಕೋಟಿ ರೂಪಾಯಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಂಟು ಹೊಂದಿವೆ ಎಂದು ಹೇಳಲಾಗಿರುವ 20 ಸಂಸ್ಥೆಗಳಿಗೆ ಸಂದಿವೆ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ. ಪಟ್ಟಿಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸೇವಾ ಚಟುವಟಿಕೆಗಳು, ಆದಿವಾಸಿ ಕಲ್ಯಾಣ ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಟ್ರಸ್ಟ್‍ಗಳು ಮತ್ತು ಸಂಘಟನೆಗಳ ಹೆಸರುಗಳಿವೆ. ಇವುಗಳು ಪ್ರತ್ಯೇಕವಾಗಿ ನೋಂದಾಯಿತ ಸಂಸ್ಥೆಗಳಾಗಿದ್ದರೂ...

ಧಮೇರ್ಂದ್ರ ಪ್ರಧಾನರ ರಾಜೀನಾಮೆ ಪಿಎಂ ಮೋದಿ ಏಕೆ ಕೇಳುತ್ತಿಲ್ಲ?

ನೇರಾನೇರ * ಬಿವಿಸೀ ನೀಟ್ ಪರೀಕ್ಷಾ ಅಕ್ರಮ, ವಿಶ್ವವಿದ್ಯಾಲಯ ಅನುದಾನ ಆಯೋಗದ ಪರೀಕ್ಷಾ ಗೊಂದಲ, ಸಿಬಿಎಸ್‍ಇ ಮೌಲ್ಯಮಾಪನದ ವಿವಾದ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದಾಗಿ ವಿವಾದಗಳು ಸಿಡಿಯುತ್ತಿದ್ದರೂ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ ಅವರ ರಾಜೀನಾಮೆ ಕೇಳಿಬರುತ್ತಿಲ್ಲ. ಹಿಂದಿನ ದಶಕಗಳಲ್ಲಿ ಇಂತಹ ಸಂದರ್ಭಗಳಲ್ಲಿ ಸಚಿವರು ನೈತಿಕ ಹೊಣೆ ಹೊತ್ತು ಸ್ಥಾನ ತ್ಯಜಿಸುತ್ತಿದ್ದರೆ, ಈಗ ಅದೇ ರಾಜಕೀಯ ಸಂಪ್ರದಾಯ ಕಾಣಿಸುತ್ತಿಲ್ಲ.  ಹಲವಾರು ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಪೆÇೀಷಕರ ಸಂಘಗಳು ಸಚಿವರ ರಾಜೀನಾಮೆಗೆ ಒತ್ತಾಯಿಸಿವೆ. ಆದಾಗ್ಯೂ, ಕೇಂದ್ರ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆಡಳಿತ ಪಕ್ಷದ ದೃಷ್ಟಿಯಲ್ಲಿ ಕೇವಲ ಆರೋಪಗಳು ಅಥವಾ ಆಡಳಿತಾತ್ಮಕ ವೈಫಲ್ಯಗಳ ಆಧಾರದ ಮೇಲೆ ಸಚಿವರನ್ನು ಬದಲಿಸುವುದು ಸೂಕ್ತವಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ. ಭಾರತೀಯ ರಾಜಕೀಯದಲ್ಲಿ ಒಂದು ಕಾಲದಲ್ಲಿ ನೈತಿಕ ಹೊಣೆಗಾರಿಕೆಯ ಪರಂಪರೆ ಇತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ರೈಲು ಅಪಘಾತದ ಬಳಿಕ ರಾಜೀನಾಮೆ ನೀಡಿದ್ದರು. ಎ ರಾಜಾ, ಅಶೋಕ್ ಚವಾಣ್ ಸೇರಿದಂತೆ ಹಲವು ಸಚಿವರು ತನಿಖೆ ನಡೆಯುವ ಸಂದರ್ಭದಲ್ಲೇ ಹುದ್ದೆ ತೊರೆದ ಉದಾಹರಣೆಗಳಿವೆ. ರಾಜೀನಾಮೆ ಅಪರಾಧ ಸಾಬೀತಾಗಿದೆ ಎಂಬುದರ ಸಂಕೇತವಲ್ಲ; ತನಿಖೆ ನಿರಾತಂಕವಾಗಿ ನಡೆಯಲು ಮತ್ತು ಸರ್ಕಾರದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಕೈಗೊಳ್ಳುವ ...

ದಿಲ್ಲಿ ಗದ್ದುಗೆಯ ಮುಂದೆ ಸಾಷ್ಟಾಂಗವೆರಗಿದ ಕನ್ನಡ ಸ್ವಾಭಿಮಾನ

 ಸಚಿವ ಸಂಪುಟದ ವಿಸ್ತರಣೆಗೆ ಅನುಮತಿ ನೆಪದಲ್ಲಿ ಆಡಳಿತಕ್ಕೇ ಪಕ್ಷವಾತ! ಪ್ರಚಲಿತ * ಬಿವಿಸೀ ಕರ್ನಾಟಕದ ಸಚಿವ ಸಂಪುಟ ವಿಸ್ತರಣೆಯ ಸುತ್ತ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ನಾಟಕವು ಕೇವಲ ಒಂದು ವಾಡಿಕೆಯ ಆಡಳಿತಾತ್ಮಕ ಪ್ರಕ್ರಿಯೆಯಾಗಿ ಉಳಿದಿಲ್ಲ; ಅದೊಂದು ಅತ್ಯಂತ ಕೆಳಮಟ್ಟದ ಹಾಗೂ ಲಜ್ಜೆಗೆಟ್ಟ ಪ್ರಹಸನವಾಗಿ ಮಾರ್ಪಟ್ಟಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯವು ಕೇವಲ ಹದಿಮೂರು ಸಚಿವರನ್ನು ಒಳಗೊಂಡ ಒಂದು ಕುಂಠಿತ ಅಸ್ಥಿಪಂಜರ ಸದೃಶ ಸರ್ಕಾರವನ್ನು ಅತ್ಯಂತ ಕಷ್ಟದಿಂದ ಹೊತ್ತು ಸಾಗುತ್ತಿದೆ. ಮೂವತ್ತಕ್ಕೂ ಹೆಚ್ಚು ಸಚಿವರ ಅಗತ್ಯವಿರುವ ಜಾಗದಲ್ಲಿ ಈ ಅತ್ಯಂತ ಕಿರಿದಾದ ಅಲ್ಪ ಸಂಖ್ಯಾತ ತಂಡ ಇಡೀ ರಾಜ್ಯದ ಹಣೆಬರಹವನ್ನು ಮತ್ತು ಆಡಳಿತ ಯಂತ್ರವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ನೇರ ಪರಿಣಾಮವಾಗಿ ಪ್ರಮುಖ ಸರ್ಕಾರಿ ಇಲಾಖೆಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿವೆ, ನೂರಾರು ಮಹತ್ವದ ಆಡಳಿತ ಕಡತಗಳು ಧೂಳು ಹಿಡಿಯುತ್ತಿವೆ, ಮತ್ತು ಒಟ್ಟಾರೆ ಆಡಳಿತ ವ್ಯವಸ್ಥೆಯು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೆ ಸಂಪೂರ್ಣವಾಗಿ ಲಕ್ವಕ್ಕೆ ತುತ್ತಾಗಿ ನಿಶ್ಚಲವಾಗಿದೆ. ಈ ಗಂಭೀರವಾದ ಜನವಿರೋಧಿ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಬದಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್‍ನ ಉನ್ನತ ನಾಯಕರು ಮತ್ತು ಶಾಸಕರ ದಂಡು ನವದೆಹಲಿಗೆ ಕಡ್ಡಾಯವಾಗಿ ದಂಡಪ್ರಣಾ...

ಮಾಧ್ಯಮ ಸಲಹೆಗಾರರ ಹೊಣೆ ಮತ್ತು ವಾರ್ತಾ ಇಲಾಖೆಯ ಸುಧಾರಣೆ

 * ಬಿವಿಸೀ ಕರ್ನಾಟಕದ ಮುಖ್ಯಮಂತ್ರಿ ಮೂವರು ಮಾಧ್ಯಮ ಸಲಹೆಗಾರರನ್ನು ನೇಮಿಸಿಕೊಂಡ ಬೆನ್ನಲ್ಲೇ ಅವರಲ್ಲೊಬ್ಬರನ್ನು ಹಳೆಯ ಸಾಮಾಜಿಕ ಜಾಲತಾಣದ ಪೆÇೀಸ್ಟ್ ಒಂದರ ಕಾರಣಕ್ಕೆ ಹುದ್ದೆಯಿಂದ ಮುಕ್ತಗೊಳಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಇಬ್ಬರು ಮಾಧ್ಯಮ ಸಲಹೆಗಾರರು ಕಾರ್ಯನಿರ್ವಹಿಸುತ್ತಿದ್ದರೂ, ಸಾರ್ವಜನಿಕ ವಲಯದಲ್ಲಿ ಮುಖ್ಯಮಂತ್ರಿಗಳ ಈ ಕ್ರಮವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವು ಮುಖ್ಯಮಂತ್ರಿಗಳಿಗೆ ಮಾಧ್ಯಮ ಸಲಹೆಗಾರರೇ ಇದ್ದಿರಲಿಲ್ಲ. ಇನ್ನು ಕೆಲವರಿಗೆ ಕೇವಲ ಒಬ್ಬರೇ ಇದ್ದರು. ಆದರೆ ಇಬ್ಬರು ಸಲಹೆಗಾರರಿದ್ದರೂ ಅವರ ಅಧಿಕಾರ ಮತ್ತು ಜವಾಬ್ದಾರಿಗಳ ವ್ಯಾಪ್ತಿ ಏನು ಎಂಬುದು ಜನರಿಗಾಗಲಿ ಅಥವಾ ಮಾಧ್ಯಮ ರಂಗದವರಿಗಾಗಲಿ ಸ್ಪಷ್ಟವಾಗಿಲ್ಲ. ಈ ಇಬ್ಬರಲ್ಲಿ ಯಾರು ಯಾವ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂಬ ಅಧಿಕೃತ ಮಾಹಿತಿಯನ್ನು ಮುಖ್ಯಮಂತ್ರಿಗಳೂ ನೀಡಿಲ್ಲ. ಈ ನಿಗೂಢತೆ ಮತ್ತು ಅಸ್ಪಷ್ಟತೆಯು ಅನಗತ್ಯ ಗೊಂದಲಗಳಿಗೆ ಕಾರಣವಾಗಿದೆ. ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು (ಡಿಐಪಿ) ಸದ್ಯ ಐಪಿಎಸ್ ಶ್ರೇಣಿಯ ಆಯುಕ್ತರು ಮತ್ತು ಐಎಎಸ್ ದರ್ಜೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇಷ್ಟೊಂದು ದೊಡ್ಡ ವ್ಯವಸ್ಥೆಯನ್ನು ಹೊಂದಿದ್ದರೂ, ಅದರ ಕಾರ್ಯವೈಖರಿ ಮಾತ್ರ ಅಪೇಕ್ಷಿತವೆನಿಸಿದೆ. ಈ ಇಲಾಖೆಯು ಮಾಧ್ಯಮಸ್ನೇಹಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಮಾಧ್ಯಮ ಮಂದಿ ಹೇಳುವ ಮಾತು. ಮಾಧ್ಯಮ ಪ್ರತಿನಿಧಿಗಳು...

ಉಡುಪಿ-ಮಂಗಳೂರು-ಕಾಸರಗೋಡು ಮೆಟ್ರೋ: ಕರಾವಳಿಯ ಬಹುಕಾಲದ ಕನಸು ನನಸಾಗಲಿ

 ಅಭಿವೃದ್ಧಿಗಾಗಿ * ಬಿವಿಸೀ ಮಂಗಳೂರು ಇಂದು ಕೇವಲ ಒಂದು ನಗರವಲ್ಲ; ಅದು ಕರಾವಳಿ ಕರ್ನಾಟಕದ ಆರ್ಥಿಕ ಹೃದಯ. ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ, ಕೈಗಾರಿಕೆ, ವಾಣಿಜ್ಯ, ಬಂದರು ಚಟುವಟಿಕೆ ಮತ್ತು ವಿದೇಶಿ ಉದ್ಯೋಗಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಈ ನಗರ, ದೇಶದ ಅಭಿವೃದ್ಧಿ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದೆ. ಭಾರತದ ವಿವಿಧ ರಾಜ್ಯಗಳಲ್ಲಷ್ಟೇ ಅಲ್ಲ, ಮಧ್ಯಪ್ರಾಚ್ಯ, ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಮಂಗಳೂರಿನ ಮೂಲದ ಉದ್ಯಮಿಗಳು, ವೈದ್ಯರು, ಇಂಜಿನಿಯರ್‍ಗಳು ಮತ್ತು ವೃತ್ತಿಪರರು ಯಶಸ್ಸಿನ ಕಥೆಗಳನ್ನು ನಿರ್ಮಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳ ಇತಿಹಾಸದಲ್ಲೂ ಮಂಗಳೂರು ವಿಶಿಷ್ಟ ಸ್ಥಾನ ಪಡೆದಿದೆ. ಪ್ರತಿಷ್ಠಿತ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಆಗಮಿಸುತ್ತಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎರಡು ಪ್ರಮುಖ ರೈಲು ನಿಲ್ದಾಣಗಳು, ನವ ಮಂಗಳೂರು ಬಂದರು, ಮೀನುಗಾರಿಕಾ ಬಂದರು, ಕೈಗಾರಿಕಾ ವಲಯಗಳು ಹಾಗೂ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ಮಂಗಳೂರಿನ ಬೆಳವಣಿಗೆಗೆ ಬಲವಾದ ಅಡಿಪಾಯವಾಗಿವೆ. ಇದರ ಜೊತೆಗೆ ಉಡುಪಿ ಮತ್ತು ಕಾಸರಗೋಡು ನಗರಗಳು ಇಂದು ಮಂಗಳೂರಿನೊಂದಿಗೆ ಆರ್ಥಿಕವಾಗಿ ಒಂದೇ ಜೀವನಾಡಿಯಂತೆ ಬೆಸೆದುಕೊಂಡಿವೆ. ಈ ಮೂರು ನಗರಗಳ ನಡುವಿನ ಸುಮಾರು 140 ಕಿಲೋಮೀಟ...

The Illusion of Indispensability: Why Political Parties Ignore Public Perception at Their Own Peril

  BVSee Perception is the ultimate currency in modern politics, a truth repeatedly demonstrated across both regional and national arenas. Political parties often fall into the trap of assuming electoral mandates are permanent, only to be abruptly corrected by an observant electorate. This lesson was driven home in Karnataka when the previous Bharatiya Janata Party (BJP) administration by lame-duck Basavaraj Bommai, weighed down by public dissatisfaction over perceived maladministration and corruption, was voted out in favor of the Congress party. Yet, history repeats itself with remarkable speed. The current Congress administration, led by former Chief Minister Siddaramaiah and now Chief Minister DK Shivakumar, is finding itself entangled in similar governance crises. For the average citizen, the distinction between alternating regimes is rapidly blurring. Congress’s apparent emphasis on structural caste divisions has increasingly been viewed as a polarizing tactic, alienating vote...

ಮಾತು ಕಡಿಮೆ ಮಾಡಿದರೆ, ನಿಮಗೂ ಗೌರವ, ರಾಜಕೀಯಕ್ಕೂ ಮರ್ಯಾದೆ !

 ಕರ್ನಾಟಕದ ರಾಜಕೀಯದಲ್ಲಿ ಇಂದು ಅತಿ ದೊಡ್ಡ ಮಾಲಿನ್ಯ ಯಾವುದು ಎಂದು ಕೇಳಿದರೆ ಉತ್ತರ ಒಂದೇ - ಮಾತಿನ ಮಾಲಿನ್ಯ. ಧೂಳು, ಹೊಗೆ, ಶಬ್ದ ಮಾಲಿನ್ಯಗಳಂತೆ ಈಗ ರಾಜಕೀಯವೂ ಅತಿಯಾದ ಹೇಳಿಕೆಗಳ ಮಾಲಿನ್ಯದಿಂದ ನರಳುತ್ತಿದೆ. ಯಾರೂ ಕೇಳದ ಪ್ರಶ್ನೆಗೆ ಉತ್ತರ, ಯಾರೂ ಕೇಳದ ವಿಷಯಕ್ಕೆ ಪ್ರತಿಕ್ರಿಯೆ, ತಮ್ಮ ವ್ಯಾಪ್ತಿಗೆ ಸಂಬಂಧಿಸದ ವಿಚಾರಕ್ಕೂ ಅಭಿಪ್ರಾಯ - ಇದೇ ನಮ್ಮ ರಾಜಕಾರಣಿಗಳಿಗೆ ಬಡಿದ ವ್ಯಾಧಿ, ದೈನಂದಿನ ವ್ಯಸನ. ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ಪರಿಸ್ಥಿತಿ ಒಂದೇ. ಬಿಜೆಪಿ-ಜೆಡಿಎಸ್‍ದಲ್ಲಿ ಎಚ್ ಡಿ ಕುಮಾರಸ್ವಾಮಿ, ಬಿಜೆಪಿಯಲ್ಲಿ ಆರ್ ಅಶೋಕ್, ಬಿ ವೈ ವಿಜಯೇಂದ್ರ, ಚಲವಾದಿ ನಾರಾಯಣಸ್ವಾಮಿ, ಪ್ರತಾಪ್ ಸಿಂಹ, ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಹಲವರು ಪ್ರತಿದಿನ ಒಂದಲ್ಲೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಪ್ರತಿಯೊಬ್ಬರೂ ಪಕ್ಷದ ಅಧಿಕೃತ ಧ್ವನಿಯಂತೆ ಮಾತನಾಡುತ್ತಾರೆ. ಪಕ್ಷದ ನಿಲುವು ಯಾವುದು, ವೈಯಕ್ತಿಕ ಅಭಿಪ್ರಾಯ ಯಾವುದು ಎಂಬ ಗಡಿ ಮಸುಕಾಗಿಬಿಟ್ಟಿದೆ. ಇತ್ತ ಆಡಳಿತ ಪಕ್ಷದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕೆಲ ಸಚಿವರು, ಕೆಲ ಶಾಸಕರು, ಕೆಲ ನಾಯಕರು - ಎಲ್ಲರೂ ಕ್ಯಾಮೆರಾ ಕಂಡರೆ ಸಾಕು, ಮೈಕ್ರೊಫೆÇೀನ್ ಕಂಡರೆ ಸಾಕು, ತಕ್ಷಣ ಪ್ರತಿಕ್ರಿಯೆ ನೀಡಲೇಬೇಕು ಎಂಬ ಮನೋಭಾವದಲ್ಲಿ ಬದುಕುತ್ತಿರುವಂತೆ ಕಾಣುತ್ತದೆ. ಮುಖ್ಯಮಂತ್ರಿ ಹೇಳುವ ಮುನ್ನವೇ ಸಚಿವರು ಮಾತನಾಡುತ್ತಾರೆ. ಸಚಿವರು ಹೇಳುವ ಮುನ್ನವೇ ಶಾಸಕರು ವ್ಯಾಖ್ಯಾನ ಕ...

ದುಬಾರೆ: ಆನೆಗಳ ಜಗತ್ತಿನೊಳಗೆ ಒಂದು ಅಪೂರ್ವ ಪಯಣ

 * ಬಿವಿಸೀ ಕೊಡಗು ಜಿಲ್ಲೆಯ ಹಸಿರು ಕಾಡುಗಳ ನಡುವೆ ಕಾವೇರಿ ನದಿಯ ದಡದಲ್ಲಿ ನೆಲೆಸಿರುವ ದುಬಾರೆ ಆನೆ ಶಿಬಿರ ಪ್ರಕೃತಿ, ವನ್ಯಜೀವಿ ಮತ್ತು ಸಾಹಸ ಪ್ರವಾಸವನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಅವಕಾಶ ನೀಡುವ ವಿಶಿಷ್ಟ ತಾಣವಾಗಿದೆ. ಮಡಿಕೇರಿ ಮತ್ತು ಕುಶಾಲನಗರದಿಂದ ಸುಲಭವಾಗಿ ತಲುಪಬಹುದಾದ ಈ ಪ್ರದೇಶವು ವರ್ಷವಿಡೀ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಒಂದು ಕಾಲದಲ್ಲಿ ಅರಣ್ಯ ಇಲಾಖೆಯ ಮರ ಸಾಗಣೆ ಕಾರ್ಯದಲ್ಲಿ ಬಳಸುತ್ತಿದ್ದ ಆನೆಗಳಿಗೆ ತರಬೇತಿ ನೀಡುತ್ತಿದ್ದ ಕೇಂದ್ರವಾಗಿ ದುಬಾರೆ ಪ್ರಸಿದ್ಧವಾಗಿತ್ತು. ಇಂದು ಅದು ಆನೆಗಳ ಸಂರಕ್ಷಣೆ, ಆರೈಕೆ ಮತ್ತು ಪರಿಸರ ಜಾಗೃತಿ ಮೂಡಿಸುವ ಪ್ರಮುಖ ಕೇಂದ್ರವಾಗಿ ರೂಪಾಂತರಗೊಂಡಿದೆ. ಇಲ್ಲಿ ಭೇಟಿ ನೀಡುವವರು ಆನೆಗಳ ದೈನಂದಿನ ಜೀವನವನ್ನು ಹತ್ತಿರದಿಂದ ನೋಡುವ ಅವಕಾಶ ಪಡೆಯುತ್ತಾರೆ. ಬೆಳಗಿನ ವೇಳೆಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ನೀಡುವುದು, ಅವುಗಳ ಆರೈಕೆ ಹೇಗೆ ನಡೆಯುತ್ತದೆ ಎಂಬುದನ್ನು ಮಹಾವತ್‍ಗಳ ಮಾರ್ಗದರ್ಶನದಲ್ಲಿ ವೀಕ್ಷಿಸುವುದು ಪ್ರವಾಸದ ಪ್ರಮುಖ ಆಕರ್ಷಣೆಯಾಗಿದೆ. ಶಿಬಿರದತ್ತ ಸಾಗುವ ಮೊದಲು ಕಾವೇರಿ ನದಿಯನ್ನು ದೋಣಿ ಅಥವಾ ತೆಪ್ಪದ ಮೂಲಕ ದಾಟಬೇಕಾಗುತ್ತದೆ. ಈ ಚಿಕ್ಕ ನದಿಯಾತ್ರೆಯೇ ಪ್ರವಾಸಕ್ಕೆ ವಿಶೇಷ ಮೆರುಗು ನೀಡುತ್ತದೆ. ನದಿಯ ತಂಪಾದ ಗಾಳಿ, ಸುತ್ತಲಿನ ದಟ್ಟ ಹಸಿರು ಕಾಡು ಮತ್ತು ಪಕ್ಷಿಗಳ ಕಲರವ ಮನಸ್ಸಿಗೆ ಹೊಸ ಚೈತನ್ಯ ತುಂಬುತ್ತದೆ. ಮಳೆಗಾಲದ ನಂತರ ...

ನ್ಯಾಯಯುತ ನೇಮಕಾತಿಯೇ ಉತ್ತಮ ಆಡಳಿತದ ಆರಂಭ

 ಕೆಪಿಎಸ್‍ಸಿಗೆ ಪ್ರಭಾವವಲ್ಲ, ಪ್ರತಿಭೆಯೇ ಅಂತಿಮ ಮಾನದಂಡವಾಗಲಿ ಉತ್ತಮ ಪ್ರಭುತ್ವ * ಬಿವಿಸೀ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ರಾಜ್ಯದ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವದ ಸಾಂವಿಧಾನಿಕ ಸಂಸ್ಥೆ. ಈ ಸಂಸ್ಥೆಯ ಮೇಲೆ ಜನರ ವಿಶ್ವಾಸ ಕುಸಿದರೆ, ಕೇವಲ ನೇಮಕಾತಿ ಪ್ರಕ್ರಿಯೆಯಷ್ಟೇ ಅಲ್ಲ, ಇಡೀ ಆಡಳಿತ ವ್ಯವಸ್ಥೆಯ ನೈತಿಕ ನೆಲೆಯೇ ಅಲುಗಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅಕ್ರಮ, ನ್ಯಾಯಾಲಯದ ವ್ಯಾಜ್ಯಗಳು ಮತ್ತು ರಾಜಕೀಯ ಪ್ರಭಾವದ ಆರೋಪಗಳು ಕೆಪಿಎಸ್‍ಸಿಯ ವಿಶ್ವಾಸಾರ್ಹತೆಗೆ ಗಂಭೀರ ಹೊಡೆತ ನೀಡಿವೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸುವ ಅಗತ್ಯ ಎಂದಿಗಿಂತಲೂ ಹೆಚ್ಚಾಗಿದೆ. ಕೆಪಿಎಸ್‍ಸಿ ನಡೆಸುವ ಪ್ರತಿಯೊಂದು ಪರೀಕ್ಷೆಯ ಹಿಂದೆ ಲಕ್ಷಾಂತರ ಯುವಕರ ಕನಸು ಅಡಗಿದೆ. ವರ್ಷಗಳ ಕಾಲ ಶ್ರಮಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವ ಅಭ್ಯರ್ಥಿಗಳು, ಅಂತಿಮವಾಗಿ ಪ್ರತಿಭೆಗಿಂತ ಪ್ರಭಾವವೇ ಮೇಲುಗೈ ಸಾಧಿಸುತ್ತದೆ ಎಂಬ ಭಾವನೆಗೆ ಒಳಗಾದರೆ, ಅದು ಪ್ರಜಾಪ್ರಭುತ್ವದ ಸಮಾನ ಅವಕಾಶದ ತತ್ವಕ್ಕೇ ಧಕ್ಕೆ ತರುತ್ತದೆ. ಆದ್ದರಿಂದ ಕೆಪಿಎಸ್‍ಸಿಯ ಸುಧಾರಣೆ ಎನ್ನುವುದು ಕೇವಲ ಆಡಳಿತಾತ್ಮಕ ಕ್ರಮವಲ್ಲ; ಅದು ಯುವಜನತೆಯ ವಿಶ್ವಾಸವನ್ನು ಮರುಸ್ಥಾಪಿಸುವ ಸಾಮಾಜಿಕ ಹೊಣೆಗಾರಿಕೆಯೂ ಹೌದು. ಸುಧಾರಣೆಗಳು ಕೇವಲ ಅಧ್ಯಕ್ಷರು ಅಥವಾ ಸದಸ್ಯರನ್ನು ಬದಲಿಸುವ...

Stop Sermons, Start Police Reform

  Every year, Police Commemoration Day, Police Flag Day and other ceremonial occasions produce a familiar ritual. The Chief Minister or Home Minister stands before senior police officers, praises their sacrifices and then delivers a stern warning against corruption. The speech is invariably accompanied by a promise of clean governance and strict action against erring personnel. There is nothing objectionable about reminding the police of their duty. The problem is that these annual admonitions have become predictable, mechanical and largely meaningless. They no longer inspire confidence among the public or even within the police force because the message is often delivered by political leaders whose own governments are accused of lacking transparency. Many ministers across the country have faced investigations by enforcement agencies or have had serious allegations of corruption levelled against them. Whether those cases end in conviction or not, the moral authority to lecture othe...

The Delhi Durbar and the Paralysis of Karnataka’s Governance

* BVSee The ongoing political theater surrounding Karnataka’s cabinet expansion has officially crossed the line from a routine political exercise into a deplorable farce. For nearly a month, the state has been saddled with a lame-duck ministry — a skeletal crew of just 13 ministers trying to manage a government meant for a cabinet of over 30. Whole departments sit dormant, administrative files pile up, and governance is effectively in a state of paralysis. Instead of addressing this vacuum, the top tier of Karnataka’s leadership—including former Chief Minister Siddaramaiah, Chief Minister Shivakumar, and KPCC leader Hariprasad — were recently spotted making the mandatory pilgrimage to New Delhi. They flew out to wait for an audience, a "darshan," and the ultimate blessings of the party’s central leadership. When one of the "high priests" of the high command proved too busy to grant an audience, the state’s top executives were forced to return to Bengaluru empty-hand...

ಬರದ ನಾಡಿಗೆ ದಸರಾ ವೈಭವವೇ? ಸರ್ಕಾರ ಮರುಚಿಂತನೆ ಮಾಡಲಿ

 ಕೇವಿಯಟ್ * ಬಿವಿಸೀ ಮೈಸೂರು ದಸರಾ ಕರ್ನಾಟಕದ ಸಾಂಸ್ಕøತಿಕ ಪರಂಪರೆಯ ಒಂದು ಭಾಗ ಎನ್ನುವುದರಲ್ಲಿ ವಿವಾದವಿಲ್ಲ. ಆದರೆ ಪರಂಪರೆ ಎನ್ನುವ ಒಂದೇ ಕಾರಣಕ್ಕೆ ಪ್ರತಿವರ್ಷವೂ ಸಾರ್ವಜನಿಕ ಹಣದ ನೂರಾರು ಕೋಟಿ ರೂ ಭಾರೀ ವೆಚ್ಚದಲ್ಲಿ ಅದನ್ನು ಅದೇ ವೈಭವದಲ್ಲಿ ನಡೆಸಬೇಕೇ ಎಂಬ ಪ್ರಶ್ನೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ರಾಜ್ಯದ ಹಲವು ಭಾಗಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ, ಮಳೆ ಕೊರತೆ ಮತ್ತು ಬರದ ಆತಂಕವನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಜನರ ಒಂದು ವರ್ಗ ಈ ಬಾರಿ ದಸರಾವನ್ನು ಸರಳವಾಗಿ ಆಚರಿಸಿ, ಉಳಿಯುವ ಹಣವನ್ನು ಜನೋಪಯೋಗಿ ಕಾರ್ಯಗಳಿಗೆ ಮೀಸಲಿಡಬೇಕೆಂದು ಆಗ್ರಹಿಸುತ್ತಿದೆ. ಆದರೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ದಸರಾವನ್ನು ನಿಗದಿಯಂತೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರ ವಾದವೆಂದರೆ, ದಸರಾ ಕೇವಲ ಹಬ್ಬವಲ್ಲ; ಅದು ಕರ್ನಾಟಕದ ಸಾಂಸ್ಕೃತಿಕ ಗುರುತು, ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ, ಸಾವಿರಾರು ಮಂದಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶ ಕಲ್ಪಿಸುವ ಆರ್ಥಿಕ ಚಟುವಟಿಕೆ. ರಾಜ್ಯದ ಪ್ರತಿಷ್ಠೆಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ವೇದಿಕೆಯೂ ಹೌದು ಎನ್ನುವುದು ಅವರ ಸಮರ್ಥನೆ. ಈ ವಾದಕ್ಕೆ ತನ್ನದೇ ಆದ ತೂಕವಿದ್ದರೂ, ಇಂದಿನ ಆರ್ಥಿಕ ವಾಸ್ತವಿಕತೆಯ ಎದುರು ಅದು ಸಾಕಷ್ಟು ಸಮರ್ಥನೆಯಾಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ನೌಕರರಿಗೆ ಪ್ರತಿ ತಿಂಗಳೂ ಸಮಯಕ್...

ಬಾಂಗ್ಲಾ ವಲಸಿಗರ ಹುಡುಕಾಟ: ಉಳಿದ ಜಿಲ್ಲೆಗಳ ಮೌನ ಏಕೆ?

 ಮಂಗಳೂರು ಪೊಲೀಸರು ಕಂಡಿದ್ದು, ಉಳಿದವರು ಕಾಣಲಿಲ್ಲವೇಕೆ? ಇದ್ದುದು ಇದ್ದಹಾಗೆ * ಬಿವಿಸೀ ಮಂಗಳೂರು ನಗರ ಪೆÇಲೀಸರು ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ವಲಸಿಗರನ್ನು ಮತ್ತೊಮ್ಮೆ ಪತ್ತೆಹಚ್ಚಿರುವುದು ಶ್ಲಾಘನೀಯ ಕ್ರಮ. ಇದು ಕೇವಲ ಕಾನೂನು ಜಾರಿಯ ವಿಷಯವಲ್ಲ; ರಾಷ್ಟ್ರದ ಆಂತರಿಕ ಭದ್ರತೆಗೂ ಸಂಬಂಧಿಸಿದ ಪ್ರಶ್ನೆಯಾಗಿದೆ. ಆದರೆ ಈ ಯಶಸ್ಸು ಮತ್ತೊಂದು ಪ್ರಶ್ನೆಯನ್ನು ಸಹ ಎತ್ತಿದೆ. ಅಕ್ರಮ ಬಾಂಗ್ಲಾದೇಶಿ ವಲಸಿಗರು ಕರ್ನಾಟಕದಲ್ಲಿ ಮಂಗಳೂರು ಮತ್ತು ಅದರ ಸುತ್ತಮುತ್ತ ಮಾತ್ರ ಇದ್ದಾರೆಯೇ? ಅಥವಾ ರಾಜ್ಯದ ಇತರ ನಗರಗಳಲ್ಲಿಯೂ ಇದ್ದು, ಅವರನ್ನು ಪತ್ತೆಹಚ್ಚುವ ಪ್ರಯತ್ನಗಳು ಸಮರ್ಪಕವಾಗಿ ನಡೆಯುತ್ತಿಲ್ಲವೇ? ಇದುವರೆಗೆ ಮಂಗಳೂರು ಪೆÇಲೀಸರು ಎರಡು ಕಾರ್ಯಾಚರಣೆಗಳಲ್ಲಿ ಒಟ್ಟು 19 ಮಂದಿಯನ್ನು ಬಂಧಿಸಿದ್ದಾರೆ. ಈ ಸಂಖ್ಯೆ ದೊಡ್ಡದಾಗಿರದಿದ್ದರೂ, ಸಮಸ್ಯೆಯ ವ್ಯಾಪ್ತಿಯನ್ನು ಸೂಚಿಸುವ ಆರಂಭಿಕ ಸೂಚಕವಾಗಿ ಕಾಣಬಹುದು. ಸ್ಥಳೀಯವಾಗಿ ಹಲವು ವರ್ಷಗಳಿಂದ ನಿರ್ಮಾಣ, ಮೀನುಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ಅಸಂಘಟಿತ ಕಾರ್ಮಿಕ ವಲಯಗಳಲ್ಲಿ ಅಕ್ರಮ ವಲಸಿಗರು ಕೆಲಸ ಮಾಡುತ್ತಿರುವ ಕುರಿತು ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಡೆದ ಕಾರ್ಯಾಚರಣೆಗಳು ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಕಲಬುರಗಿ ಸೇರಿದಂತೆ ವೇಗವಾಗಿ ಬೆಳೆಯುತ್ತಿರುವ...

`ಕೊಂದವರು ಯಾರು?' ಪ್ರಶ್ನೆಗೆ ಉತ್ತರವಿಲ್ಲ, ಗುಡ್ಡ ಅಗೆದು ಇಲಿಯನ್ನೂ ತೆಗೆಯದ ಕಸರತ್ತು

 ನ್ಯಾಯದ ಸಮಾಧಿಯ ಮೇಲೆ ನಿಂತ ಎಸ್‍ಐಟಿ ವರದಿ:  ಧರ್ಮಸ್ಥಳದ ಸಂತ್ರಸ್ತೆಯರ ರಕ್ತದ ಕಲೆಗೆ ಸಿಗದ ಮುಕ್ತಿ ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ ಎರಡು ದಶಕಗಳಲ್ಲಿ ಸಂಭವಿಸಿದ ನೂರಾರು ನಿಗೂಢ ಸಾವುಗಳು ಹಾಗೂ ಭೀಕರ ಅತ್ಯಾಚಾರಗಳ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ರಚನೆಯಾಗಿದ್ದ ವಿಶೇಷ ತನಿಖಾ ತಂಡವು ಸಾರ್ವಜನಿಕರ ನಂಬಿಕೆಗೆ ಘೋರ ದ್ರೋಹ ಬಗೆದಿದೆ.  ಅತ್ಯಾಚಾರಕ್ಕೊಳಗಾಗಿ ಅಮಾನುಷವಾಗಿ ಕೊಲೆಯಾದ ಸೌಜನ್ಯ ಸೇರಿದಂತೆ ಅಸಂಖ್ಯಾತ ಅಸಹಾಯಕ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಬೇಕಿದ್ದ ತನಿಖಾ ತಂಡವು, ಅದರ ಮೂಲ ಉದ್ದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿರುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತವಾಗಿದೆ. ಸಾರ್ವಜನಿಕರ ತೀವ್ರ ಹೋರಾಟ ಮತ್ತು ರಾಜ್ಯ ಮಹಿಳಾ ಆಯೋಗದ ಒತ್ತಾಯದ ಮೇರೆಗೆ ಅಸ್ತಿತ್ವಕ್ಕೆ ಬಂದ ಈ ಸಮಿತಿಯು ನ್ಯಾಯಕ್ಕಾಗಿ ದನಿಯೆತ್ತಿದವರನ್ನೇ ಜೈಲಿಗಟ್ಟಲು ಸಂಚು ರೂಪಿಸಿರುವುದು ಜಗತ್ತಿನ ಕಣ್ಣಿಗೆ ಮಣ್ಣೆರಚುವ ಕುತಂತ್ರವಾಗಿದೆ. ಕರಾವಳಿ ಜನತೆಯ ಸುದೀರ್ಘ ಹೋರಾಟವನ್ನು ಹತ್ತಿಕ್ಕಲು ತನಿಖಾ ವರದಿಯನ್ನು ಅಸ್ತ್ರವಾಗಿ ಬಳಸಿರುವುದು ಇಡೀ ತನಿಖಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಸಂಪೂರ್ಣವಾಗಿ ಪ್ರಶ್ನಿಸುವಂತೆ ಮಾಡಿದೆ. ಧರ್ಮಸ್ಥಳದ ಪಾವಿತ್ರ್ಯತೆಯ ಮರೆಯಲ್ಲಿ ನಡೆದ ಅತ್ಯಾಚಾರಗಳು ಮತ್ತು ನಿಗೂಢ ಕೃತ್ಯಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಹಸ್ರಾರು ಸಾರ್ವಜನಿಕ ಪ್ರತಿಭ...

ಮೈಸೂರು ದಸರಾದಲ್ಲಿ ಕಂಬಳ: ಯಾರ ಹಠ, ಯಾರ ಹಿತ?

 ಜನದನಿ * ಬಿವಿಸೀ ಮೈಸೂರು ದಸರಾ ರಾಜ್ಯದ ಸಾಂಸ್ಕøತಿಕ ಪರಂಪರೆಯ ಪ್ರತೀಕ. ಕರಾವಳಿಯ ಕಂಬಳವೂ ತನ್ನದೇ ಆದ ಇತಿಹಾಸ, ಕೃಷಿ ಮತ್ತು ಜನಜೀವನದೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಜಾನಪದ ಕ್ರೀಡೆ. ಎರಡಕ್ಕೂ ಗೌರವವಿದೆ. ಆದರೆ ಒಂದರ ಸ್ವರೂಪವನ್ನು ಮತ್ತೊಂದರ ಮೇಲೆ ಹೇರುವ ಪ್ರಯತ್ನವನ್ನು ಸಂಸ್ಕೃತಿ ವಿಸ್ತರಣೆ ಎಂದು ಕರೆಯಬೇಕೋ, ರಾಜಕೀಯ ಹಠ ಎಂದು ಕರೆಯಬೇಕೋ ಎಂಬ ಪ್ರಶ್ನೆ ಈಗ ಮೈಸೂರಿನಲ್ಲಿ ಎದ್ದಿದೆ.  ಕಂಬಳವನ್ನು ಮೈಸೂರು ದಸರಾದ ಅಂಗವಾಗಿಸಬೇಕು ಎಂಬ ಪ್ರಸ್ತಾವನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಒಪ್ಪಿಗೆ ಸೂಚಿಸಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಈ ಯೋಜನೆಯ ಪರವಾಗಿ ಬಹಿರಂಗವಾಗಿ ನಿಂತಿರುವುದು ಕೇವಲ ಕಂಬಳದ ಮೇಲಿನ ಅಭಿಮಾನವೇ, ಅಥವಾ ತಂದೆಯ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬೇಕೆಂಬ ರಾಜಕೀಯ ಬದ್ಧತೆಯೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಜನಾಭಿಪ್ರಾಯ ಬದಲಾಗಿದ್ದರೂ ಸರ್ಕಾರ ತನ್ನ ನಿಲುವು ಬದಲಿಸದಿರುವುದು ಇದೇ ಅನುಮಾನಕ್ಕೆ ಬಲ ನೀಡುತ್ತದೆ. ಈಗಿನ ಮುಖ್ಯಮಂತ್ರಿ ಶಿವಕುಮಾರ್ ಕರಾವಳಿಯಲ್ಲಿ ಕಂಬಳ ಕಾರ್ಯಕ್ರಮವೊಂದರಲ್ಲಿ ಮೈಸೂರು ದಸರಾದಲ್ಲಿ ಕಂಬಳ ಏರ್ಪಡಿಸುವ ಪ್ರಸ್ತಾಪಕ್ಕೆ ಒತ್ತಾಸೆ ನೀಡಿದ್ದರು. ಆದರೆ ಕರಾವಳಿಯ ಪ್ರತಿನಿಧಿಯಾಗಿರುವ ಅಶೋಕ್ ರೈ ಅವರಿಗೆ ಮೈಸೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಇಷ್ಟೊಂದು ಉತ್ಸ...

ಬಿಡದಿ ಟೌನ್‍ಶಿಪ್ ಯೋಜನೆ ಮತ್ತು ದೇವೇಗೌಡರ ಕುಟುಂಬ ಸ್ವಾರ್ಥ

 ನೇರಾನೇರ * ಬಿವಿಸೀ ಬೆಂಗಳೂರು ಮತ್ತು ಮೈಸೂರು ನಗರಗಳ ಮಧ್ಯೆ ಅತಿ ವೇಗವಾಗಿ ಬೆಳೆಯುತ್ತಿರುವ ಬಿಡದಿ ಭಾಗದಲ್ಲಿ ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವಾಕಾಂಕ್ಷೆಯ ಟೌನ್‍ಶಿಪ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಆದರೆ, ಈ ಭಾಗದಲ್ಲಿರುವ ತಮ್ಮ ಹಾಗೂ ತಮ್ಮ ಕುಟುಂಬದ ಭೂಮಿಯನ್ನು ಉಳಿಸಿಕೊಳ್ಳಲು ಜೆಡಿಎಸ್ ರಾಜ್ಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಇದು ಕೇವಲ ರಾಜಕೀಯ ವಿರೋಧವಾಗಿ ಉಳಿಯದೆ, ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಹಾಕುವ ಮತ್ತು ಕಾನೂನು ಸುವ್ಯವಸ್ಥೆಯನ್ನು ಬುಡಮೇಲು ಮಾಡುವ ತಂತ್ರವಾಗಿ ಮಾರ್ಪಟ್ಟಿದೆ. ಇಡೀ ರಾಜ್ಯವನ್ನು ತಮ್ಮ ಕುಟುಂಬಾಸಕ್ತಿಗಾಗಿ ಬಳಸಿಕೊಳ್ಳುವುದಕ್ಕೂ ರೆಡಿ ಇರುವ ಭಂಡರು ಈ ಗೌಡ ಎಂಡ್ ಸನ್ಸ್. ಇವರು ಇನ್ನೂ ಫ್ಯೂಡೆಲ್ ಮೈಂಡ್ ಸೆಟ್‍ನಿಂದ ಹೊರಬಂದಿಲ್ಲ. ಆರಂಭದಲ್ಲಿ ಸ್ಥಳೀಯ ರೈತರನ್ನು ಪ್ರಚೋದಿಸಿ ಉಪವಾಸ ಸತ್ಯಾಗ್ರಹ ನಡೆಸುವಂತೆ ಮಾಡಲಾಯಿತು. ಅದರಿಂದ ಯಾವುದೇ ಪ್ರಯೋಜನವಾಗದಿದ್ದಾಗ, ಸರ್ಕಾರಿ ಸರ್ವೇಕ್ಷಣಾಧಿಕಾರಿಗಳ ಮೇಲೆ ಮಹಿಳೆಯರು ಮತ್ತು ಪುಂಡರ ಗುಂಪನ್ನು ಎತ್ತಿಕಟ್ಟಿ ಪೆÇರಕೆಯಿಂದ ಹಲ್ಲೆ ನಡೆಸುವಂತೆ ಪ್ರಚೋದಿಸಲಾಗಿದೆ. (ರಾಜಕೀಯವಾಗಿ ಪ್ರಬಲರಾಗಿರುವವರ ಪ್ರಚೋದನೆಯಿಲ್ಲದೇ ಅವರು ಇಂಥ ಕೆಲಸ ಮಾಡಲು ಸಾಧ್ಯವಿಲ್ಲ.) ವಾಹನದಿಂದ ಕೆಳಗಿಳಿಯುತ್ತಿದ್ದ ಅಧಿಕಾರಿಗಳನ್ನು ಅಟ್ಟಾಡಿಸಿ ಹೊಡೆದಿರುವುದು ಕೇವಲ ಬೇಜವಾಬ್ದಾರಿತನವಲ್ಲ, ಅದ...

ರಾಷ್ಟ್ರವಾದದ ರಾಜಕೀಯದಲ್ಲಿ ಕಾಂಗ್ರೆಸ್ ಏಕೆ ಸೋಲುತ್ತಿದೆ?

 ಇತಿಹಾಸದ ಪುಟಗಳಿಂದ * ಬಿವಿಸೀ ಮೊದಲು ರಾಷ್ಟ್ರವಾದವು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕಾಂಗ್ರೆಸ್‍ನ ಅತ್ಯಂತ ದೊಡ್ಡ ರಾಜಕೀಯ ಬಂಡವಾಳವಾಗಿತ್ತು. ಬ್ರಿಟಿಷರ ವಿರುದ್ಧ ದೇಶವನ್ನು ಒಗ್ಗೂಡಿಸಿದ ಪಕ್ಷವಾಗಿ ಕಾಂಗ್ರೆಸ್ ತನ್ನನ್ನು ರಾಷ್ಟ್ರಭಕ್ತಿಯ ಪ್ರತೀಕವಾಗಿ ರೂಪಿಸಿಕೊಂಡಿತ್ತು. ಆದರೆ ಕಳೆದ ಒಂದು ದಶಕದಲ್ಲಿ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ಇಂದು ರಾಷ್ಟ್ರವಾದದ ಚರ್ಚೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್ ತನ್ನದೇ ಐತಿಹಾಸಿಕ ಪರಂಪರೆಯನ್ನು ಸಮರ್ಥವಾಗಿ ಜನರಿಗೆ ತಲುಪಿಸಲು ವಿಫಲವಾಗಿದೆ. ಬಿಜೆಪಿ ರಾಷ್ಟ್ರವಾದವನ್ನು ಕೇವಲ ದೇಶಪ್ರೇಮದ ಭಾವನೆಯಾಗಿ ಮಾತ್ರವಲ್ಲ, ಸಾಂಸ್ಕøತಿಕ ಗುರುತು, ರಾಷ್ಟ್ರೀಯ ಭದ್ರತೆ ಮತ್ತು ಬಲಿಷ್ಠ ನಾಯಕತ್ವದೊಂದಿಗೆ ಜೋಡಿಸಿದೆ. ಗಡಿ ಭದ್ರತೆ, ಉಗ್ರವಾದದ ವಿರುದ್ಧ ಕಠಿಣ ನಿಲುವು, ಸಶಸ್ತ್ರ ಪಡೆಗಳ ಗೌರವ, ರಾಮಮಂದಿರ ನಿರ್ಮಾಣ, ವಿಧಿ 370 ರದ್ದು ಮತ್ತು ಏಕರೂಪ ನಾಗರಿಕ ಸಂಹಿತೆಯಂತಹ ವಿಷಯಗಳನ್ನು ರಾಷ್ಟ್ರೀಯ ಅಸ್ಮಿತೆಯ ಸಂಕೇತಗಳಾಗಿ ಯಶಸ್ವಿಯಾಗಿ ಬಿಂಬಿಸಿದೆ. ಈ ನಿರಂತರ ರಾಜಕೀಯ ಸಂದೇಶವು ಬಿಜೆಪಿಗೆ ರಾಷ್ಟ್ರವಾದದ ಮೇಲಿನ ನೈತಿಕ ಹಕ್ಕಿನ ಭಾವನೆಯನ್ನು ನಿರ್ಮಿಸಿಕೊಟ್ಟಿದೆ. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ತನ್ನ ರಾಷ್ಟ್ರೀಯ ಪರಂಪರೆಯನ್ನು ಜನಮನದಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಕ್ಷದ ಪಾತ್ರ, ಸಂವಿಧಾನದ ನಿರ್ಮಾಣ, ಪ್ರಜಾಪ್ರಭುತ್ವ ...

ನೂರಡಿ ವರ್ತುಲ ರಸ್ತೆ: ಸಾವಿರ ಕೋಟಿ ಕನಸು ಎಲ್ಲಿ ಮಾಯವಾಯಿತು?

 * ಬಿವಿಸೀ ಒಂದು ಕಾಲದಲ್ಲಿ ಮಂಗಳೂರು ನಗರದ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸುವ ಯೋಜನೆ ಎಂದು ಬಿಂಬಿಸಲ್ಪಟ್ಟಿದ್ದ ನೂರಡಿ ವರ್ತುಲ ರಸ್ತೆ ಇಂದು ಸಾರ್ವಜನಿಕ ಚರ್ಚೆಯಿಂದಲೇ ಕಣ್ಮರೆಯಾಗಿದೆ. ನಗರದ ನಾಲ್ಕು ದಿಕ್ಕುಗಳನ್ನು ಸಂಪರ್ಕಿಸುವ, ಸಂಚಾರ ದಟ್ಟಣೆ ನಿವಾರಿಸುವ ಹಾಗೂ ಹೊಸ ನಗರಾಭಿವೃದ್ಧಿಗೆ ದಾರಿ ಮಾಡಿಕೊಡುವ ಮಹತ್ವಾಕಾಂಕ್ಷಿ ಯೋಜನೆ ಎಂದು ಘೋಷಿಸಲ್ಪಟ್ಟಿದ್ದ ಈ ಯೋಜನೆಯ ಬಗ್ಗೆ ಈಗ ಸರ್ಕಾರದ ಕಡತಗಳಲ್ಲೂ, ಜನಪ್ರತಿನಿಧಿಗಳ ಭಾಷಣಗಳಲ್ಲೂ ಹೆಚ್ಚಿನ ಉಲ್ಲೇಖವೇ ಕಾಣಿಸುತ್ತಿಲ್ಲ. ಸುಮಾರು ಎರಡು ದಶಕಗಳ ಹಿಂದೆ ಈ ಯೋಜನೆಗೆ ಕಾರ್ಯಸಾಧ್ಯತಾ ವರದಿಗಳು ಸಿದ್ಧವಾದವು. ಖಾಸಗಿ ವಲಯದ ಪಾಲುದಾರಿಕೆಯಲ್ಲಿ ಯೋಜನೆ ಜಾರಿಗೊಳಿಸುವ ಮಾತುಗಳು ಕೇಳಿಬಂದವು. ನಗರದ ಹೊರವಲಯದಲ್ಲಿ ನೂರಡಿ ಅಗಲದ ವರ್ತುಲ ರಸ್ತೆಯನ್ನು ನಿರ್ಮಿಸಿ, ಅದರ ಸುತ್ತಲಿನ ಭೂಮಿಯ ಅಭಿವೃದ್ಧಿಯಿಂದಲೇ ಯೋಜನೆಗೆ ಹಣಕಾಸು ಒದಗಿಸಬಹುದೆಂಬ ಮಾದರಿಯನ್ನೂ ಮುಂದಿಡಲಾಗಿತ್ತು. ಆ ಸಮಯದಲ್ಲಿ ಒಂದು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಯೂ ಯೋಜನೆಯ ರೂಪುರೇಷೆಗಳಲ್ಲಿ ಆಸಕ್ತಿ ತೋರಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಕೆಲವೆಡೆ ಪ್ರಾಥಮಿಕ ಸರ್ವೆ, ಗುರುತು ಹಾಕುವ ಕೆಲಸಗಳು ನಡೆದವು ಎನ್ನುವ ದಾಖಲೆಗಳೂ ಇವೆ. ಆದರೆ ನಂತರ ಯೋಜನೆ ನಿಧಾನವಾಗಿ ಸಾರ್ವಜನಿಕ ನೆನಪಿನಿಂದ ಮಾಯವಾಯಿತು. ಭೂಸ್ವಾಧೀನದ ಸಂಕೀರ್ಣತೆ, ಭೂಮಿಯ ಬೆಲೆ ಏರಿಕೆ, ರಾಜಕೀಯ ಆದ್ಯತೆಗಳ ಬದಲಾವಣೆ, ಹಣಕಾಸಿನ ಅನಿಶ್ಚಿತತೆ ಹಾಗ...

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಎಥೆನಾಲ್ ನೀತಿ ವಿವಾದ

 * ಬಿವಿಸೀ ಭಾರತದಲ್ಲಿ ಪೆಟ್ರೋಲ್‍ಗೆ ಪರ್ಯಾಯವಾಗಿ ಎಥೆನಾಲ್ ಮಿಶ್ರಣ ಮಾಡುವ ಸರ್ಕಾರದ ಪ್ರಸ್ತಾವನೆಯ ವಿರುದ್ಧ ವಾಹನ ಸವಾರರು, ಆಟೋಮೊಬೈಲ್ ತಜ್ಞರು ಮತ್ತು ಗ್ರಾಹಕ ಹಕ್ಕುಗಳ ಹೋರಾಟಗಾರರಿಂದ ತೀವ್ರ ತಾಂತ್ರಿಕ ಹಾಗೂ ಆರ್ಥಿಕ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಪ್ರಸ್ತುತ ದೇಶಾದ್ಯಂತ ಜಾರಿಯಲ್ಲಿರುವ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಲೇ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ ಮತ್ತು ಇಂಜಿನ್‍ಗಳಿಗೆ ಭಾರಿ ಹಾನಿಯಾಗುತ್ತಿದೆ ಎಂದು ಗ್ರಾಹಕರು ವ್ಯಾಪಕವಾಗಿ ದೂರುತ್ತಿರುವಾಗ, ಮೆಥೆನಾಲ್ ಅನ್ನು ಇಂಧನವಾಗಿ ಬಳಸುವುದು ವಾಹನಗಳ ಆಯುಷ್ಯಕ್ಕೆ ಮತ್ತು ಸಾರ್ವಜನಿಕರ ಜೇಬಿಗೆ ಮತ್ತಷ್ಟು ಮಾರಕವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಪೆಟ್ರೋಲ್‍ಗೆ ಎಥೆನಾಲ್ ಹಾಗೂ ಮೆಥೆನಾಲ್ ಮಿಶ್ರಣ ಮಾಡುವ ಸರ್ಕಾರದ ಮಹತ್ವಾಕಾಂಕ್ಷೆಯ ಇಂಧನ ನೀತಿಯ ಪ್ರಮುಖ ರೂವಾರಿಯಾದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಕೇಳಿಬಂದಿರುವ ವೈಯಕ್ತಿಕ ಹಿತಾಸಕ್ತಿ ಸಂಘರ್ಷದ ಆರೋಪಗಳು ಹಾಗೂ ಆಟೋಮೊಬೈಲ್ ತಜ್ಞರು ಈ ಇಂಧನಗಳ ಬಳಕೆಯ ವಿರುದ್ಧ ಎತ್ತಿರುವ ಗಂಭೀರ ತಾಂತ್ರಿಕ ಆಕ್ಷೇಪಗಳ ನಡುವೆ ಸಮತೋಲಿತ ವಾದ-ಪ್ರತಿವಾದಗಳು ಕೇಳಿಬರುತ್ತಿವೆ. ಸಚಿವರ ವಿವರಣೆ  ತಮ್ಮ ಕುಟುಂಬದ ಕಂಪನಿಗಳು ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವುದರಿಂದಲೇ ಈ ನೀತಿಯನ್ನು ಉತ್ತೇಜಿಸಲಾಗುತ್ತಿದೆ ಎಂಬ ಮಾಧ್ಯಮಗಳ ವರದಿಯನ್ನು...

ಚೀನಾದಿಂದ ಭಾರತದ ಬೌದ್ಧ ಪರಂಪರೆಗೆ ಸವಾಲು

 * ವಿಶ್ಲೇಷಣೆ ಹದಿನಾಲ್ಕನೇ ದಲೈಲಾಮಾ ಅವರ ಉತ್ತರಾಧಿಕಾರದ ಪ್ರಶ್ನೆ ಹತ್ತಿರ ಬರುತ್ತಿದ್ದಂತೆ ಹಿಮಾಲಯದ ಸುತ್ತಲಿನ ಆಧ್ಯಾತ್ಮಿಕ ಮತ್ತು ರಾಜಕೀಯ ಕಣವು ತೀವ್ರಗೊಳ್ಳುತ್ತಿದೆ. ಇದೀಗ ಭೂಪ್ರದೇಶದ ಜಗಳದ ಜೊತೆಗೆ ಧರ್ಮವನ್ನು ಕೂಡ ಒಂದು ಶಕ್ತಿಯ ಆಯುಧವಾಗಿ ಚೀನಾ ಮತ್ತು ಭಾರತ ಬಳಸುತ್ತಿವೆ. ಬೌದ್ಧ ಧರ್ಮದ ಮೂಲ ಭಾರತದಲ್ಲಿದ್ದರೂ, ಜಾಗತಿಕವಾಗಿ ಬೌದ್ಧ ಪರಂಪರೆಯ ಮುಂಚೂಣಿ ನಾಯಕತ್ವವನ್ನು ತಾನೇ ವಹಿಸಿಕೊಳ್ಳಲು ಚೀನಾ ದೊಡ್ಡ ಪ್ರಯತ್ನ ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಬೀಜಿಂಗ್ ತನ್ನನ್ನು ಬೌದ್ಧ ಧರ್ಮದ ರಕ್ಷಕ ಮತ್ತು ಪ್ರವರ್ತಕ ಎಂದು ಬಿಂಬಿಸಲು ಶತಕೋಟಿ ಡಾಲರ್ ಖರ್ಚು ಮಾಡುತ್ತಿದೆ. ನೇಪಾಳದ ಲುಂಬಿನಿಯಲ್ಲಿ ಬುದ್ಧನ ಜನ್ಮಸ್ಥಳದ ಸುತ್ತಲೂ ಎರಡು ಬಿಲಿಯನ್ ಡಾಲರ್ ವೆಚ್ಚದ ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದ ವಿಸ್ತರಣೆಗೆ ಹಣ ನೀಡುವುದು, ಥೈಲ್ಯಾಂಡ್, ಶ್ರೀಲಂಕಾ, ಮ್ಯಾನ್ಮಾರ್‍ನಲ್ಲಿ ದೇವಾಲಯ ಪುನರ್ನಿರ್ಮಾಣ ಮತ್ತು ಸರ್ಕಾರಿ ಅನುದಾನಿತ ಯಾತ್ರೆಗಳನ್ನು ಆಯೋಜಿಸುವುದು ಇದರ ಭಾಗವಾಗಿದೆ. ಟಿಬೆಟ್‍ನಲ್ಲಿ ಬೌದ್ಧ ಮಠಗಳ ಮೇಲೆ ನಿಗಾ, ಮರುಜನ್ಮ ಪಡೆದ ಲಾಮಾಗಳ ಅಧಿಕೃತ ದಾಖಲೆ ನಿರ್ವಹಣೆ ಮತ್ತು ಧಾರ್ಮಿಕ ಚಟುವಟಿಕೆಗಳ ಕಟ್ಟುನಿಟ್ಟಿನ ನಿಯಂತ್ರಣದ ಮೂಲಕ ಟಿಬೆಟ್‍ನ ರಾಷ್ಟ್ರೀಯತೆಯನ್ನು ದುರ್ಬಲಗೊಳಿಸುವ ಗುರಿಯೂ ಇದಕ್ಕಿದೆ. ಚೀನಾ ಬೌದ್ಧ ಧರ್ಮವನ್ನು ಭಾರತದಿಂದ ಬೇರ್ಪಡಿಸಿ ಅದನ್ನು ಚೀನೀ ನಾಗರಿಕತೆಯ ವಿಸ್ತರಣೆಯಾಗಿ ಮರುನಿರೂಪಿಸಲು...

ಕುದುರೆಮುಖ: ಮಂಜಿನ ಹೊದಿಕೆಯಲ್ಲಿನ ಪಶ್ಚಿಮ ಘಟ್ಟದ ಹಸಿರು ಸ್ವರ್ಗ

 ಪಶ್ಚಿಮ ಘಟ್ಟದ ಮಡಿಲಿನಲ್ಲಿ ಹಸಿರಿನ ಹೊದಿಕೆಯನ್ನು ಹೊದ್ದುಕೊಂಡು, ಮೋಡಗಳೊಂದಿಗೆ ಆಟವಾಡುವ ಪರ್ವತಶ್ರೇಣಿಗಳು, ಕಣ್ಣಿಗೆ ತಂಪು ನೀಡುವ ಹುಲ್ಲುಗಾವಲುಗಳು, ದಟ್ಟ ಕಾಡುಗಳು ಮತ್ತು ಹರಿಯುವ ಹೊಳೆಗಳ ನಡುವೆ ನೆಲೆಸಿರುವ ಕುದುರೆಮುಖ ಕರ್ನಾಟಕದ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದು. ಸಮುದ್ರಮಟ್ಟದಿಂದ ಸುಮಾರು 1,894 ಮೀಟರ್ ಎತ್ತರದಲ್ಲಿರುವ ಈ ಶಿಖರವು ಕುದುರೆಯ ಮುಖದ ಆಕಾರವನ್ನು ಹೋಲುವುದರಿಂದಲೇ 'ಕುದುರೆಮುಖ' ಎಂಬ ಹೆಸರು ಬಂದಿದೆ. ಪ್ರಕೃತಿಪ್ರಿಯರು, ಚಾರಣಾಸಕ್ತರು ಹಾಗೂ ಛಾಯಾಗ್ರಾಹಕರಿಗೆ ಇದು ನಿಜಕ್ಕೂ ಕನಸಿನ ತಾಣ. ಕುದುರೆಮುಖ ರಾಷ್ಟ್ರೀಯ ಉದ್ಯಾನವು ಅಪರೂಪದ ಜೀವ ವೈವಿಧ್ಯದ ನಿಧಿಯಾಗಿದೆ. ಸುಮಾರು ಆರುನೂರು ಚದರ ಕಿಲೋಮೀಟರ್ ವ್ಯಾಪ್ತಿಯ ಈ ಅರಣ್ಯ ಪ್ರದೇಶವು ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆ, ಸಾಂಬಾರ್, ಕಾಡುನಾಯಿ, ಕಾಳಿಂಗ ಸರ್ಪ ಸೇರಿದಂತೆ ಅನೇಕ ವನ್ಯಜೀವಿಗಳಿಗೆ ಆಶ್ರಯವಾಗಿದೆ. ಮಲಬಾರ್ ಟ್ರೋಗನ್, ಗ್ರೇಟ್ ಹಾರ್ನ್‍ಬಿಲ್, ನೀಲಗಿರಿ ಮರಪಾರಿವಾಳ ಸೇರಿದಂತೆ ಅಪರೂಪದ ಪಕ್ಷಿಗಳ ಕಲರವ ಇಲ್ಲಿ ಪ್ರತಿದಿನವೂ ಕೇಳಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಪರ್ವತಗಳ ಮೇಲೆ ಹರಡುವ ಮಂಜು ಮತ್ತು ಹಸಿರು ಹೊದಿಕೆ ಪ್ರವಾಸಿಗರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವ ಅನುಭವ ನೀಡುತ್ತದೆ. ಕುದುರೆಮುಖದ ಪ್ರಮುಖ ಆಕರ್ಷಣೆಯೇ ಶಿಖರದ ಚಾರಣ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಆರಂಭವಾಗುವ ಈ ಚಾರಣ ಮಾರ್ಗವು ಹುಲ್ಲುಗಾವಲು, ಕಾಡು, ಸ...

ನಿರುಪಯುಕ್ತವಾಗಿರುವ ಎಂಜಿನಿಯರಿಂಗ್ ಕಾಲೇಜು ಶಿಕ್ಷಣ

 * ಬಿವಿಸೀ ದೇಶದಲ್ಲಿ ಎಂಜಿನಿಯರಿಂಗ್ ಶಿಕ್ಷಣವು ಇಂದು ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು ಕಡೆ ಕೃತಕ ಬುದ್ಧಿಮತ್ತೆಯಿಂದಾಗಿ ಪಠ್ಯಕ್ರಮದಲ್ಲಿ ತೀವ್ರ ಬದಲಾವಣೆಗಳ ಅಗತ್ಯವಿದೆ. ಮತ್ತೊಂದು ಕಡೆ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗುತ್ತಿರುವುದರಿಂದ ನೂರಾರು ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚುವ ಸ್ಥಿತಿಗೆ ಬಂದಿವೆ.  ಪ್ರತಿ ವರ್ಷ ಲಕ್ಷಾಂತರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯುತ್ತಿವೆ. ಇದಕ್ಕೆ ಮುಖ್ಯ ಕಾರಣ ಉದ್ಯೋಗದ ಖಾತ್ರಿ ಇಲ್ಲದಿರುವುದು. ಪದವಿ ಮುಗಿಸಿದ ನಂತರವೂ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ಸಿಗುತ್ತಿಲ್ಲ. ಕಾಲೇಜುಗಳು ಕಲಿಸುವುದು ಉದ್ಯಮಕ್ಕೆ ಬೇಕಾದ ಕೌಶಲ್ಯವಲ್ಲ. ಶುಲ್ಕ ಹೆಚ್ಚು ಆದರೆ ಫಲಿತಾಂಶ ಕಡಿಮೆ ಎಂಬ ಭಾವನೆ ಪೆÇೀಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿದೆ. ಇದರಿಂದಾಗಿ ಅವರು ಎಂಜಿನಿಯರಿಂಗ್ ಬಿಟ್ಟು ಇತರ ಕೋರ್ಸ್‍ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಮೂಲಭೂತ ಸೌಲಭ್ಯ, ಉತ್ತಮ ಬೋಧಕರು ಮತ್ತು ಉದ್ಯಮದ ಸಂಪರ್ಕವಿಲ್ಲದ ಕಾಲೇಜುಗಳು ಮೊದಲು ಮುಚ್ಚುವ ಸಾಲಿನಲ್ಲಿ ನಿಂತಿವೆ. ಇದೇ ಸಮಯದಲ್ಲಿ ಕೃತಕ ಬುದ್ಧಿಮತ್ತೆಯು ಎಂಜಿನಿಯರಿಂಗ್ ಶಿಕ್ಷಣದ ಸ್ವರೂಪವನ್ನೇ ಬದಲಾಯಿಸುತ್ತಿದೆ. ಕೇವಲ ಕೋಡಿಂಗ್ ಕಲಿತರೆ ಸಾಲದು. ಇಂದಿನ ವಿದ್ಯಾರ್ಥಿಗಳು ಡೇಟಾ ವಿಶ್ಲೇಷಣೆ, ಯಂತ್ರ ಕಲಿಕೆ, ಎಐ ಮಾದರಿಗಳ ತರಬೇತಿ ಮತ್ತು ಎಐನ ನೈತಿಕ ಬಳಕೆಯ ಬಗ್ಗೆಯೂ ತಿಳಿದುಕೊಳ್ಳಬೇಕು. ಚಾಟ್‍ಜಿಪಿಟಿಯಂತಹ ಎಐ ಟೂಲ್...

ಸತ್ಲುಜ್ ವಿವಾದ: ಚಿತ್ರವನ್ನು ತಡೆಯುವುದೇ ಪರಿಹಾರವೇ?

 25,000 ಜನರ ಹತ್ಯೆ ಏನೂ ಅಲ್ಲವೇ? ಅದು ಇತಿಹಾಸದಲ್ಲಿ ಕರಗಿ ಹೋಗಬೇಕೇ? ಸತ್ಯಕ್ಕೆ ಅಪಚಾರ * ಬಿವಿಸೀ ಒಂದು ಸಿನಿಮಾ ಬಿಡುಗಡೆಯಾಗುವ ಮುನ್ನವೇ ವಿವಾದಕ್ಕೆ ಸಿಲುಕುವುದು ಹೊಸ ಸಂಗತಿಯಲ್ಲ. ಆದರೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅದನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕುವುದು ಅಪರೂಪದ ಬೆಳವಣಿಗೆ. ದಿಲ್ಜಿತ್ ದೋಸಾಂಜ್ ಅಭಿನಯದ `ಸತ್ಲಜ್' ಚಿತ್ರಕ್ಕೆ ಸಂಭವಿಸಿರುವುದು ಇದೇ. ಇದರೊಂದಿಗೆ ಮತ್ತೊಮ್ಮೆ ಒಂದು ಮೂಲಭೂತ ಪ್ರಶ್ನೆ ಮುನ್ನೆಲೆಗೆ ಬಂದಿದೆ - ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಕರ್ತವ್ಯ ಇತಿಹಾಸದ ಕಹಿ ಅಧ್ಯಾಯಗಳನ್ನು ಮುಚ್ಚಿಡುವುದೇ, ಅಥವಾ ಅವುಗಳ ಕುರಿತು ಸಮಾಜದಲ್ಲಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸುವುದೇ? ಈ ಚಿತ್ರವು ಪಂಜಾಬ್ ಉಗ್ರವಾದದ ಅವಧಿಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಮಾನವ ಹಕ್ಕು ಉಲ್ಲಂಘನೆಗಳು ಮತ್ತು ಅವುಗಳನ್ನು ಬಹಿರಂಗಪಡಿಸಿದ ಜಸ್ವಂತ್ ಸಿಂಗ್ ಖಾಲ್ರಾ ಅವರ ಬದುಕನ್ನು ಆಧರಿಸಿದೆ. ಈ ಕಥನವನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು ಎಂಬ ಪ್ರಶ್ನೆಯೇ ಇಲ್ಲ. ಆದರೆ ಭಿನ್ನ ದೃಷ್ಟಿಕೋನವನ್ನು ಹೊಂದಿರುವ ಕೃತಿಯೇ ಸಾರ್ವಜನಿಕ ವೀಕ್ಷಣೆಗೆ ಅನರ್ಹ ಎಂಬ ತೀರ್ಮಾನ ಪ್ರಜಾಪ್ರಭುತ್ವದ ಆತ್ಮಕ್ಕೆ ಹೊಂದಿಕೆಯಾಗುವುದಿಲ್ಲ. ಕಲಾಕೃತಿಯ ಸತ್ಯಾಸತ್ಯತೆಯನ್ನು ಅಂತಿಮವಾಗಿ ನಿರ್ಧರಿಸುವುದು ಸರ್ಕಾರವಲ್ಲ; ಮಾಹಿತಿ ಪಡೆದ ಸಮಾಜ ಮತ್ತು ಇತಿಹಾಸದ ಪರಿಶೀಲನೆಯೇ. ಸರ್ಕಾರ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಕಾರಣವನ...

ಬದಲಾಗದ ರಾಜಕೀಯ ಅಸ್ತ್ರ ಮತ್ತು ತನಿಖಾ ಸಂಸ್ಥೆಗಳ ಸ್ವಾಯತ್ತತೆ

 ಖುಲ್ಲಂ ಖುಲ್ಲಾ * ಬಿವಿಸೀ ತನಿಖಾ ಸಂಸ್ಥೆಗಳ ದುರ್ಬಳಕೆ ಭಾರತೀಯ ರಾಜಕಾರಣದಲ್ಲಿ ಹೊಸದೇನಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳ (ಇಡಿ) ಮೂಲಕ ದಾಳಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಜೋರಾಗಿ ಕೇಳಿಬರುತ್ತಿವೆ. ಇದನ್ನು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕಾಂಗ್ರೆಸ್ ಬಣ್ಣಿಸುತ್ತಿದೆ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಅಧಿಕಾರದ ಗದ್ದುಗೆಯಲ್ಲಿದ್ದಾಗ ಯಾವುದೇ ರಾಜಕೀಯ ಪಕ್ಷವೂ ಈ ಪ್ರಲೋಭನೆಯಿಂದ ಮುಕ್ತವಾಗಿರಲಿಲ್ಲ ಎಂಬ ಕಹಿ ಸತ್ಯ ಹೊರಬರುತ್ತದೆ. ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡ ನಿದರ್ಶನಗಳು ಸಾಕಷ್ಟಿವೆ. ಅಂದು ಉತ್ತರ ಪ್ರದೇಶದ ಮಾಯಾವತಿ ಅವರ ಮೇಲಿನ ಪ್ರಕರಣಗಳನ್ನು ರಾಜಕೀಯ ಲಾಭ-ನಷ್ಟಗಳ ಆಧಾರದ ಮೇಲೆ ನಿಭಾಯಿಸಿದ ರೀತಿ ಹಾಗೂ ಗುಜರಾತ್‍ನ ಅಂದಿನ ಬಿಜೆಪಿ ನಾಯಕರನ್ನು ಸಿಲುಕಿಸಲು ಏಜೆನ್ಸಿಗಳನ್ನು ಬಳಸಿಕೊಂಡ ಆರೋಪಗಳು ಇದಕ್ಕೆ ಸಾಕ್ಷಿ. ಅದೇ ಸಮಯದಲ್ಲಿ, ತಮ್ಮದೇ ಸರ್ಕಾರದ ಸಚಿವರಾಗಿದ್ದ ಚಿದಂಬರಂ ಅಥವಾ ಮೈತ್ರಿ ಪಕ್ಷದ ಡಿಎಂಕೆ ನಾಯಕ ರಾಜಾ ಅವರ ವಿರುದ್ಧದ ನೂರಾರು, ಸಾವಿರಾರು ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರದ ಹಗರಣಗಳು ಮುನ್ನೆಲೆಗೆ ಬಂದಾಗ, ಸ್ವಯಂಪ್ರೇರಿತವಾಗಿ ತನಿಖೆ ನಡೆಸಿ ಸತ್ಯ ಹೊರಗೆಳೆಯುವಲ್ಲಿ ಅಂದಿನ ಯುಪಿಎ ಸರ್ಕಾರ ತೋರಿದ ...

ಧರ್ಮಸ್ಥಳದ ನೆರಳಲ್ಲಿ ನ್ಯಾಯದ ಕದನ

 ಅತ್ಯಾಚಾರ-ಹತ್ಯೆಗಳ ಎಸ್‍ಐಟಿ ತನಿಖೆಗೆ ಸ್ವಾಮಿಗಳು, ಮತ್ತು ರಾಜಕಾರಣಿಗಳ ಹಸ್ತಕ್ಷೇಪಕ್ಕೆ ಮುಕ್ತಿ ಎಂದು? ಇದ್ದುದು ಇದ್ದಹಾಗೆ * ಬಿವಿಸೀ ಧರ್ಮ, ರಾಜಕಾರಣ ಮತ್ತು ಕಾನೂನು ವ್ಯವಸ್ಥೆಗಳ ನಡುವಿನ ಅಪವಿತ್ರ ಮೈತ್ರಿ ಕರಾವಳಿಯ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ತರುತ್ತಿದೆ. ಆಧ್ಯಾತ್ಮಿಕ ಸಾಧನೆ, ಲೋಕಕಲ್ಯಾಣದ ಚಿಂತನೆಗಳಲ್ಲಿ ತೊಡಗಿರಬೇಕಾದ ಕೆಲವು ಮಠಾಧೀಶರು ತಮ್ಮ ಮೂಲ ಸ್ಥಾನಗಳನ್ನು ಮರೆತು ರಾಜಕೀಯ ಪ್ರಚಾರ ಹಾಗೂ ಅಪರಾಧಿಗಳ ಪರವಾಗಿ ವಕಾಲತ್ತು ವಹಿಸಲು ಬೀದಿಗಿಳಿದಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಅತ್ಯಾಚಾರ ಮತ್ತು ಸಾಮೂಹಿಕ ಕೊಲೆಗಳಂತಹ ಘೋರ ಅಪರಾಧಗಳ ಆರೋಪ ಹೊತ್ತವರ ರಕ್ಷಣೆಗೆ ಧಾರ್ಮಿಕ ಮುಖಂಡರು ಧಾವಿಸುತ್ತಿರುವುದು ಇಡೀ ಕರ್ನಾಟಕದ ಪ್ರಜ್ಞಾವಂತ ನಾಗರಿಕರ ಆತ್ಮಸಾಕ್ಷಿಯನ್ನು ಘಾಸಿಗೊಳಿಸಿದೆ. ಧಾರ್ಮಿಕ ವಿಚಾರಗಳಿಗಿಂತ ರಾಜಕೀಯ ಸಂಗತಿಗಳಲ್ಲೇ ಮುಳುಗಿರುವ ಕಲಬುರ್ಗಿಯ ಪ್ರಣವಾನಂದ ನೇತೃತ್ವದ ಸ್ವಾಮಿಗಳ ಗುಂಪು ಧರ್ಮಸ್ಥಳಕ್ಕೆ ಭೇಟಿ ನೀಡಿ, ಕೇವಲ ಧಾರ್ಮಿಕ ಹಿನ್ನೆಲೆ ಅಥವಾ ಪ್ರಭಾವದ ಕಾರಣಕ್ಕೆ ಆರೋಪಿಗಳ ಪರವಾಗಿ ಮರುಕ ತೋರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಧರ್ಮದ ಪರಮಾವಧಿ. ಸಾಮಾನ್ಯ ಜನರಿಗೊಂದು ಕಾನೂನು, ಪ್ರಭಾವಿ ಧಾರ್ಮಿಕ ವ್ಯಕ್ತಿಗಳಿಗೊಂದು ಕಾನೂನು ಇದೆಯೇ ಎಂಬ ಮೂಲಭೂತ ಪ್ರಶ್ನೆ ಇಂದು ಸಮಾಜವನ್ನು ಕಾಡುತ್ತಿದೆ. ಅಪರಾಧ ಎಸಗಿದ ವ್ಯ...

ರಾಮಮಂದಿರ ದೇಣಿಗೆ ಲೂಟಿ: ಅಲುಗಾಡುತ್ತಿರುವ ಬಿಜೆಪಿ ಬೇರು

 ಸಮಕಾಲೀನ * ಬಿವಿಸೀ ಲಕ್ನೋ: ಅಯೋಧ್ಯೆ ರಾಮಮಂದಿರದ ದೇಣಿಗೆ ಹಣದ ದುರುಪಯೋಗದ ವಿವಾದವು ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಹೊತ್ತಿಗೆ ಈ ಹಗರಣವು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ದೊಡ್ಡ ಸವಾಲಾಗಿ ಪರಿಣಮಿಸಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ದೇಣಿಗೆ ಪೆಟ್ಟಿಗೆಯಿಂದ ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಸುಮಾರು 70 ಬಾರಿ ಕಳ್ಳತನ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಪತ್ತೆಯಾಗಿದೆ. ಈ ಕುರಿತು ವಿಶೇಷ ತನಿಖಾ ತಂಡವು ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಬೆನ್ನಲ್ಲೇ, ವಿವಾದಕ್ಕೆ ಸಿಲುಕಿದ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಅಂಗೀಕರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ. ಕೋಟ್ಯಂತರ ಭಕ್ತರ ಆರಾಧ್ಯ ದೈವದ ಹೆಸರಿನಲ್ಲಿ ನಡೆದ ಈ ವ್ಯವಸ್ಥಿತ ವಂಚನೆಯು ಧಾರ್ಮಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಟ್ರಸ್ಟ್‍ನ ಪಾರದರ್ಶಕತೆಯನ್ನು ಸಂಪೂರ್ಣವಾಗಿ ಪ್ರಶ್ನಿಸುವಂತೆ ಮಾಡಿದೆ. ರಾಮಮಂದಿರದ ಹೆಸರಿನಲ್ಲಿ ನಡೆದಿದೆ ಎನ್ನಲಾದ ಈ ಹಗರಣವು ಕೇವಲ ರಾಜಕೀಯ ವಿರೋಧಿಗಳಿಗೆ ಅಸ್ತ್ರವಾಗಿಲ್ಲ, ಬದಲಿಗೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಆಂತರಿಕ ವಲಯದಲ್ಲೂ ತೀವ್ರ ಕಳವಳಕ್ಕೆ ಕಾರಣವಾಗಿದೆ. ಹಿಂ...

ಮಂಗಳೂರಿನಲ್ಲಿ 8 ಬಾಂಗ್ಲಾದೇಶಿಯರ ಬಂಧನವು ಭಾರತದ ನುಸುಳುವಿಕೆ ಬಿಕ್ಕಟ್ಟನ್ನು ಅಣಕಿಸುವಂತಿದೆ

 ಪ್ರಚಲಿತ * ಬಿವಿಸೀ ಸುರತ್ಕಲ್ ಆರಕ್ಷಕರು ಮುಕ್ಕಾ ಬಳಿಯ ನಿರ್ಮಾಣ ಪ್ರದೇಶವೊಂದರಲ್ಲಿ ಎಂಟು ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿರುವುದನ್ನು ದೊಡ್ಡ ಯಶಸ್ಸು ಎಂದು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಮುರ್ಷಿದಾಬಾದ್ ಮೂಲಕ ಭಾರತದೊಳಗೆ ನುಸುಳಿ, ಪಶ್ಚಿಮ ಬಂಗಾಳದ ನಕಲಿ ಆಧಾರ್ ಪತ್ರಗಳನ್ನು ಸೃಷ್ಟಿಸಿ, ಇಲ್ಲಿನ ಕಾರ್ಮಿಕ ವಲಯದಲ್ಲಿ ಸೇರಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಭೂತಪೂರ್ವ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವ ಕರಾವಳಿ ನಗರಿ ಮಂಗಳೂರಿನಲ್ಲಿ ಕೇವಲ ಎಂಟು ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿರುವುದು ಕಣ್ಣೊರೆಸುವ ತಂತ್ರದಂತೆ ಕಾಣುತ್ತದೆ. ಕರಾವಳಿ ಕರ್ನಾಟಕದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಸಾವಿರಾರು ಅಕ್ರಮ ಕಾರ್ಮಿಕರು ಕೆಲಸ ಮಾಡುತ್ತಿರುವುದು ಬಹಿರಂಗ ಸತ್ಯವಾಗಿದ್ದು, ಇದು ನಮ್ಮ ಸಾರ್ವಭೌಮ ಗಡಿಗಳ ಭದ್ರತೆಯನ್ನು ಅಣಕಿಸುವಂತಿದೆ. ಮಂಗಳೂರಿನಲ್ಲೊಂದರಲ್ಲಿಯೇ ಮತ್ತು ಅವಳಿ ಜಿಲ್ಲೆಗಳ ಪಟ್ಟಣಗಳಲ್ಲಿ ಇಂಥ ನುಸುಳುಕೋರ ಬಾಂಗ್ಲಾದೇಶಿಯರು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದು ನಂಬಲರ್ಹ ಮಾತು.  ಅಕ್ರಮ ವಲಸೆಯ ನಿರಂತರ ಹರಿವಿಗೆ ರಾಜಕೀಯ ಉದಾಸೀನತೆ ಮತ್ತು ಆಡಳಿತಾತ್ಮಕ ದುರಾಸೆಯೇ ಪ್ರಮುಖ ಕಾರಣವಾಗಿದೆ. ಪಶ್ಚಿಮ ಬಂಗಾಳದಂತಹ ಗಡಿ ರಾಜ್ಯಗಳಲ್ಲಿನ ನಿರ್ಬಂಧವಿಲ್ಲದ ಗಡಿಗಳನ್ನು ದಶಕಗಳಿಂದ ರಾಜಕೀಯ ಲಾಭಕ್ಕಾ...

ಬಿಜೆಪಿ ಉಳಿಯಬೇಕಾದರೆ ವಿಜಯೇಂದ್ರ ಹೋಗಲೇಬೇಕು

 ಖರೇ ಹೇಳಬೇಕೆಂದ್ರೆ * ಬಿವಿಸೀ ಕರ್ನಾಟಕ ಬಿಜೆಪಿಯ ಇಂದಿನ ದೊಡ್ಡ ಸಂಕಷ್ಟ ಕಾಂಗ್ರೆಸ್ ಅಲ್ಲ; ತನ್ನದೇ ನಾಯಕತ್ವ. ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಮ್ಮದೇ ಪಕ್ಷದ ಕೆಲವು ನಾಯಕರು ತಮ್ಮ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿರುವುದು ಕೇವಲ ಒಂದು ಹೇಳಿಕೆಯಲ್ಲ, ಪಕ್ಷದ ಆಂತರಿಕ ವೈಫಲ್ಯದ ಬಹಿರಂಗ ಒಪ್ಪಿಗೆಯಾಗಿದೆ. ಸಂಚು ನಿಜವೇ, ಸುಳ್ಳೇ ಎಂಬುದು ಇಲ್ಲಿ ಮುಖ್ಯವಲ್ಲ. ಒಂದು ರಾಜ್ಯ ಘಟಕದ ಅಧ್ಯಕ್ಷನು ತನ್ನ ಸಂಘಟನೆಯನ್ನು ಒಗ್ಗೂಡಿಸುವ ಜವಾಬ್ದಾರಿ ಹೊಂದಿರುತ್ತಾನೆ; ತನ್ನದೇ ಪಕ್ಷದ ಒಳಜಗಳವನ್ನು ಪತ್ರಿಕೆಗಳ ಮುಂದೆ ಬಿಚ್ಚಿಡುವ ಜವಾಬ್ದಾರಿ ಅಲ್ಲ. ಯಾವುದೇ ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು, ಗುಂಪುಗಾರಿಕೆ ಇರುವುದು ಹೊಸ ವಿಷಯವಲ್ಲ. ಆದರೆ ಅವುಗಳನ್ನು ಸಂಘಟನೆಯೊಳಗೆ ಬಗೆಹರಿಸುವ ಸಾಮಥ್ರ್ಯವೇ ನಾಯಕತ್ವದ ನಿಜವಾದ ಪರೀಕ್ಷೆ. ಅಧ್ಯಕ್ಷನೇ ತನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಸಾರ್ವಜನಿಕವಾಗಿ ದೂರಿದರೆ, ಆತ ತನ್ನ ಪಕ್ಷದ ಮೇಲಿನ ಹಿಡಿತವನ್ನೇ ಕಳೆದುಕೊಂಡಿದ್ದಾನೆ ಎಂಬ ಸಂದೇಶ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಹೋಗುತ್ತದೆ. ಇದು ವ್ಯಕ್ತಿಯ ವೈಫಲ್ಯವಲ್ಲ; ಇಡೀ ಪಕ್ಷದ ಪ್ರತಿಷ್ಠೆಗೆ ಬಿದ್ದ ಪೆಟ್ಟು. ವಿಜಯೇಂದ್ರ ಅವರ ಹೇಳಿಕೆಗೆ ಬಿಜೆಪಿಯೊಳಗೇ ತೀವ್ರ ವಿರೋಧ ವ್ಯಕ್ತವಾಗಿದೆ. ಹಿರಿಯ ನಾಯಕರು ಬಹಿರಂಗವಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ...

ಮಂತ್ರಿಗಳ ಬಾಯಿಗೆ ಬೀಗ ಹಾಕುವ ಸಮಯ ಬಂದಿದೆ

 ಸಚಿವ ಸಂಪುಟವೋ, ಮಾತಿನ ಮಲ್ಲರ ವೇದಿಕೆಯೋ? ........... ನೇರ-ನಿಷ್ಠುರ * ಬಿವಿಸೀ ಸರ್ಕಾರದ ಯಶಸ್ಸನ್ನು ಅದರ ಯೋಜನೆಗಳು ಮಾತ್ರ ನಿರ್ಧರಿಸುವುದಿಲ್ಲ; ಅದರ ಪರವಾಗಿ ಯಾರು, ಯಾವಾಗ, ಏನು ಮಾತನಾಡುತ್ತಾರೆ ಎಂಬುದೂ ಅಷ್ಟೇ ಮುಖ್ಯ. ದುರದೃಷ್ಟವಶಾತ್, ಕರ್ನಾಟಕ ಸರ್ಕಾರದಲ್ಲಿ ಇಂದು ಕಾಣುತ್ತಿರುವ ಚಿತ್ರಣವೇ ಬೇರೆ. ಯಾವ ವಿಷಯ ಬಂದರೂ ಒಬ್ಬೊಬ್ಬ ಸಚಿವರು ತಮ್ಮ ಇಲಾಖೆಗೆ ಸಂಬಂಧವಿರಲಿ, ಇರದಿರಲಿ ಹೇಳಿಕೆ ನೀಡುತ್ತಾರೆ. ಪರಿಣಾಮ - ಸರ್ಕಾರಕ್ಕೆ ಒಂದೇ ಧ್ವನಿ ಎಂಬ ಭಾವನೆ ಕಣ್ಮರೆಯಾಗಿ, ಗೊಂದಲ, ಪರಸ್ಪರ ವಿರೋಧಾಭಾಸ ಮತ್ತು ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳು ಮೂಡುತ್ತಿವೆ. ಸಚಿವ ಸಂಪುಟ ಎನ್ನುವುದು ಚರ್ಚಾ ವೇದಿಕೆಯಲ್ಲ; ಅದು ಆಡಳಿತದ ಅತ್ಯುನ್ನತ ಕಾರ್ಯನಿರ್ವಹಣಾ ಸಂಸ್ಥೆ. ಸಚಿವರು ತಮ್ಮ ಇಲಾಖೆಯ ಕಾರ್ಯ, ಸಾಧನೆ ಮತ್ತು ನೀತಿಗಳ ಬಗ್ಗೆ ಮಾತನಾಡುವುದು ಸಹಜ. ಆದರೆ ಸರ್ಕಾರದ ಸಮಗ್ರ ನೀತಿಗಳು, ಸೂಕ್ಷ್ಮ ರಾಜಕೀಯ ವಿಷಯಗಳು ಅಥವಾ ಇತರ ಇಲಾಖೆಗಳ ವಿಚಾರಗಳಲ್ಲಿ ಮಾತನಾಡುವುದು ಮುಖ್ಯಮಂತ್ರಿ ಅಥವಾ ಸರ್ಕಾರದಿಂದ ಅಧಿಕೃತವಾಗಿ ನಿಯೋಜಿಸಲ್ಪಟ್ಟ ವಕ್ತಾರರ ಹೊಣೆಗಾರಿಕೆ. ಈ ಸರಳ ಆಡಳಿತ ಶಿಸ್ತೇ ಕರ್ನಾಟಕದಲ್ಲಿ ಮಾಯವಾಗಿದೆ. ಸಚಿವರಾದ ಸತೀಶ ಜಾರಕಿಹೊಳಿ, ಯತೀಂದ್ರ ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ ಮತ್ತು ಯು ಟಿ ಖಾದರ್ ಸೇರಿದಂತೆ ಕೆಲ ಸಚಿವರು ಇತ್ತೀಚಿನ ದಿನಗಳಲ್ಲಿ ತಮ್ಮ ಇಲಾಖೆಯ ವ್ಯಾಪ್ತಿಯನ್ನು ಮೀರಿ ವಿವಿಧ ರಾಜಕೀಯ ಹಾಗೂ ಆಡಳಿತಾತ್...

ನೆಹರೂ ಸಂಪುಟದಲ್ಲಿ ಜನಸಂಘದ ಸ್ಥಾಪಕ!

 ಇದು ಹೇಗೆ ಸಾಧ್ಯವಾಯಿತು? ಇತಿಹಾಸದ ಪುಟಗಳಿಂದ * ಬಿವಿಸೀ ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಪ್ರಮುಖ ರಾಜಕೀಯ ಎದುರಾಳಿಗಳಾಗಿರುವುದರಿಂದ, ಬಿಜೆಪಿಯ ಹಿಂದಿನ ಅವತಾರವಾದ ಜನಸಂಘದ ಸ್ಥಾಪಕರಾದ ಡಾ ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಸ್ವಾತಂತ್ರ್ಯಾನಂತರದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು ಎಂಬುದು ಅನೇಕರಿಗೆ ಅಚ್ಚರಿಯ ವಿಷಯ. ಆದರೆ, ಆ ಕಾಲದ ರಾಜಕೀಯ ಪರಿಸ್ಥಿತಿ ಇಂದಿನಂತಿರಲಿಲ್ಲ. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ ದೇಶ ವಿಭಜನೆ, ನಿರಾಶ್ರಿತರ ಪುನರ್ವಸತಿ, ಸಂಸ್ಥಾನಗಳ ವಿಲೀನ ಮತ್ತು ಹೊಸ ರಾಷ್ಟ್ರ ನಿರ್ಮಾಣದಂತಹ ಮಹತ್ವದ ಸವಾಲುಗಳನ್ನು ಎದುರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ನೆಹರೂ ಅವರು ಕೇವಲ ಕಾಂಗ್ರೆಸ್ ನಾಯಕರನ್ನಷ್ಟೇ ಅಲ್ಲದೆ, ವಿವಿಧ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸಮರ್ಥ ವ್ಯಕ್ತಿಗಳನ್ನೂ ತಮ್ಮ ಮೊದಲ ಸಚಿವ ಸಂಪುಟಕ್ಕೆ ಆಹ್ವಾನಿಸಿದರು. ಅದರಂತೆ ಡಾ ಶ್ಯಾಮಾ ಪ್ರಸಾದ್ ಮುಖರ್ಜಿ ಅವರಿಗೆ ಕೈಗಾರಿಕೆ ಮತ್ತು ಸರಬರಾಜು ಖಾತೆಯ ಸಚಿವ ಸ್ಥಾನ ನೀಡಲಾಯಿತು. ಇದೇ ಸಚಿವ ಸಂಪುಟದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರು ಕಾನೂನು ಸಚಿವರಾಗಿದ್ದರು. ಇಬ್ಬರೂ ಆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾಗಿರಲಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ, 1947ರಲ್ಲಿ ಭಾರತೀಯ ಜನಸಂಘವೇ ಅಸ್ತಿತ್ವದಲ್ಲಿರಲಿಲ್ಲ. ಆ ಪಕ್ಷವನ್ನು ಡಾ ಮುಖರ್ಜಿ ಅವರು 1951ರಲ್ಲಿ ಸ್ಥಾಪಿಸಿದರು. ಸ್ವಾತಂತ್ರ್ಯಕ...

Too many voices, too little governance

  Ministers must govern, not grab headlines ............ * BVSee A government is judged not merely by what it does, but also by what it says—and who says it. By that yardstick, the Karnataka government appears to be suffering from a serious communication disorder. Every other day, one minister or another makes a statement on issues that have little or nothing to do with his official responsibilities. The result is confusion, contradiction and a growing perception that the government speaks in many voices, but with no single authority. A Cabinet is not a debating society. Nor is every minister a government spokesperson. Parliamentary democracy functions on the principle of collective responsibility, which also demands communication discipline. Ministers are expected to speak authoritatively on matters concerning their own portfolios. Policy decisions affecting the government as a whole are ordinarily articulated by the Chief Minister or by ministers specifically authorised to do so....

BJP's Karnataka dilemma: Vijayendra must step aside

  The Karnataka BJP today finds itself confronting a crisis of credibility that is entirely of its own making. At the centre of the storm is its state president, B Y Vijayendra, whose recent public assertion that some leaders within his own party are conspiring against him has exposed deep fissures in the organisation. Whether such a conspiracy exists or not is almost beside the point. A state party president is expected to inspire confidence, resolve differences behind closed doors and project organisational unity. By taking an internal dispute to the media, Vijayendra has done exactly the opposite. Political parties inevitably witness factional rivalries. Mature leadership lies not in advertising those divisions but in managing them. When the president himself publicly complains of sabotage from colleagues, he sends a message that he has lost command over the organisation he is meant to lead. The resulting embarrassment is not personal; it is institutional. The backlash from with...