Posts

Showing posts from September, 2026

ಪಾಕಿಸ್ತಾನದಲ್ಲಿ ವಿದೇಶಿ ಮಾಧ್ಯಮಗಳ ಮೇಲೆ ಹೊಸ ನಿಬರ್ಂಧ: ವರದಿಗೆ ಸರ್ಕಾರಿ ಮೂಲವೇ ಕಡ್ಡಾಯ

 ಇಣುಕು ನೋಟ * ಬಿವಿಸೀ ಪಾಕಿಸ್ತಾನ ಸರ್ಕಾರ ವಿದೇಶಿ ಮತ್ತು ಸ್ಥಳೀಯ ಮಾಧ್ಯಮಗಳ ಮೇಲೆ ಕಠಿಣ ನಿಯಂತ್ರಣ ಹೇರಿದೆ. ಇತ್ತೀಚಿನ ನಿಯಮಗಳ ಪ್ರಕಾರ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸುದ್ದಿ ಪ್ರಸಾರಕ್ಕೆ ಕೇವಲ ಅಧಿಕೃತ ಮೂಲಗಳನ್ನು ಮಾತ್ರ ಬಳಸಬೇಕು. ರಾಷ್ಟ್ರೀಯ ಭದ್ರತೆ, ರಾಜತಾಂತ್ರಿಕ ಸಂಬಂಧಗಳು ಮತ್ತು ಅಂತಾರಾಷ್ಟ್ರೀಯ ಮಾತುಕತೆಗಳ ಕುರಿತು ವರದಿ ಮಾಡುವಾಗ ತಪ್ಪು ಮಾಹಿತಿ ತಡೆಯುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ. ಕಾನೂನು ಸಚಿವ ಅಜಮ್ ನಜೀರ್ ತಾರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವಾಗ ಸಂವಿಧಾನದ "ರೆಡ್ ಲೈನ್" ದಾಟಬಾರದು ಎಂದು ಎಚ್ಚರಿಸಿದರು.  ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಂಬಲವಿದೆ ಆದರೆ ಅದು ಸಂವಿಧಾನದ 19ನೇ ವಿಧಿಯ ಮಿತಿಯಲ್ಲಿರಬೇಕು ಎಂದರು. ವಿಶೇಷವಾಗಿ ಗಲ್ಫ್ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಊಹಾಪೆÇೀಹದ ಕಾಮೆಂಟರಿ ಮಾಡಿದರೆ ತಪ್ಪು ತಿಳುವಳಿಕೆ ಉಂಟಾಗಬಹುದು ಎಂದು ಹೇಳಿದರು.  ರಾಷ್ಟ್ರೀಯ ಭದ್ರತೆ ಅಥವಾ ವಿದೇಶಾಂಗ ಸಂಬಂಧಗಳಿಗೆ ಸಂಬಂಧಿಸಿದ ಮಿತಿಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಕೆ ನೀಡಿದರು. ಇದರೊಂದಿಗೆ ಪಾಕಿಸ್ತಾನ ಸರ್ಕಾರ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳನ್ನು ಸಹ ಅನುಮೋದಿಸಿದೆ. ಈ ನಿಯಮಗಳ ಪ್ರಕಾರ ಸಾಮಾಜಿಕ ಮಾಧ್ಯಮ ಕಂಪನಿಗಳು ಕಾನೂನುಬಾಹಿ...

ಪ್ರತಿಭಟನೆಗಳು ಮುಗಿದವು; ಆದರೆ ಇನ್ನೂ ಪಾಠ ಕಲಿಯುವ ಮನಸ್ಸು ಕಾಣುತ್ತಿಲ್ಲ

 ನೇರಾನೇರ * ಬಿವಿಸೀ ದೆಹಲಿ ವಿದ್ಯಾರ್ಥಿ ಚಳವಳಿಯು ತಾತ್ಕಾಲಿಕವಾಗಿ ಅಂತ್ಯ ಕಂಡಿರಬಹುದು. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ, ಕೆಲವು ಭರವಸೆಗಳು ಹಾಗೂ ಸರ್ಕಾರದ ಘೋಷಣೆಗಳೊಂದಿಗೆ ಪ್ರತಿಭಟನೆ ನಿಂತಿದೆ. ಆದರೆ ಈ ಹೋರಾಟ ದೇಶದ ರಾಜಕೀಯ, ಆಡಳಿತ ಮತ್ತು ಸಮಾಜಕ್ಕೆ ನೀಡಿದ ಎಚ್ಚರಿಕೆಯನ್ನು ನಾವು ನಿಜವಾಗಿಯೂ ಅರ್ಥ ಮಾಡಿಕೊಂಡಿದ್ದೇವೆಯೇ ಎಂಬ ಪ್ರಶ್ನೆಯೇ ಈಗ ಮುಖ್ಯವಾಗಿದೆ. ಈ ಹೋರಾಟದ ಮೂಲದಲ್ಲಿ ಕೇವಲ ಪರೀಕ್ಷಾ ಅಕ್ರಮಗಳ ಪ್ರಶ್ನೆ ಇರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲಿನ ವಿಶ್ವಾಸ ಕುಸಿತ, ಉದ್ಯೋಗಾವಕಾಶಗಳ ಕೊರತೆ, ಆಡಳಿತದ ಉತ್ತರದಾಯಿತ್ವದ ಅಭಾವ ಹಾಗೂ ಯುವಜನರ ಭವಿಷ್ಯದ ಬಗ್ಗೆ ಬೆಳೆಯುತ್ತಿರುವ ಅನಿಶ್ಚಿತತೆ ಎಲ್ಲವೂ ಸೇರಿ ಈ ಅಸಮಾಧಾನವನ್ನು ಸ್ಫೋಟಗೊಳಿಸಿದವು. ಅನೇಕ ವಾರಗಳ ಕಾಲ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದರೂ, ಆಡಳಿತದ ಮೊದಲ ಪ್ರತಿಕ್ರಿಯೆ ಸಂವಾದವಲ್ಲ; ಪ್ರತಿಭಟನೆಯನ್ನು ನಿಯಂತ್ರಿಸುವ ಪ್ರಯತ್ನವಾಗಿತ್ತು. ಭಾರತದ ರಾಜಕೀಯದಲ್ಲಿ ಪ್ರತಿಭಟನೆಗಳನ್ನು ಬಹುಸಾರಿ ತಾತ್ಕಾಲಿಕ ತೊಂದರೆಯಾಗಿ ನೋಡುವ ಪ್ರವೃತ್ತಿ ಇದೆ. ಜನರ ಅಸಮಾಧಾನವನ್ನು ಆಲಿಸಿ ಸಮಸ್ಯೆಯ ಮೂಲಕ್ಕೆ ಹೋಗುವುದಕ್ಕಿಂತ, ನಾಯಕರು ಅದನ್ನು ವಿರೋಧ ಪಕ್ಷದ ಸಂಚು ಅಥವಾ ರಾಜಕೀಯ ಪ್ರೇರಿತ ಚಳವಳಿ ಎಂದು ಬಣ್ಣಿಸುವುದು ಸಾಮಾನ್ಯವಾಗಿದೆ. ಪರಿಣಾಮವಾಗಿ ಸಮಸ್ಯೆ ಬಗೆಹರಿಯುವುದಿಲ್ಲ; ಅದು ಮತ್ತಷ್ಟು ಆಳಕ್ಕೆ ಹೋಗುತ್ತದೆ. ಈ ವಿದ್ಯಾರ್ಥಿ ಚಳವಳಿಯೂ ಅದಕ್ಕೆ ಹೊರತ...

ಕಾಶ್ಮೀರದಲ್ಲಿ ಪಂಡಿತರ ಸುರಕ್ಷತೆ: ಸರ್ಕಾರದ ಭರವಸೆ ಮತ್ತು ನೈಜತೆ ನಡುವಿನ ಸಂಘರ್ಷ

Image
  * ಬಿವಿಸೀ ಕಾಶ್ಮೀರ ಕಣಿವೆಯಲ್ಲಿ ಅಲ್ಪಸಂಖ್ಯಾತ ಕಾಶ್ಮೀರಿ ಪಂಡಿತರ ಮೇಲಿನ ಬೆದರಿಕೆಗಳು ಮತ್ತು ಹಿಂಸಾಚಾರದ ಕಪ್ಪು ನೆರಳು ಮತ್ತೊಮ್ಮೆ ದಟ್ಟವಾಗಿ ಆವರಿಸಿದೆ. ದಶಕಗಳಿಂದ ನೆಲೆ ಕಳೆದುಕೊಂಡು ನಿರಾಶ್ರಿತರಾಗಿ ಬದುಕುತ್ತಿರುವ ಈ ಸಮುದಾಯವನ್ನು ಸಂಪೂರ್ಣವಾಗಿ ಕಣಿವೆಯಿಂದ ಓಡಿಸುವ ದುಷ್ಟ ಯತ್ನ ಮತ್ತೆ ಭರದಿಂದ ಸಾಗಿದೆ. ಕಣಿವೆಯಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ, ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿಯಲಾಗಿದೆ ಮತ್ತು ಸಾಮಾನ್ಯ ಸ್ಥಿತಿ ಮರಳಿದೆ ಎಂಬ ಕೇಂದ್ರ ಸರ್ಕಾರದ ಸುದೀರ್ಘವಾದ ಮತ್ತು ಬೃಹತ್ ಪ್ರಚಾರದ ಪ್ರತಿಪಾದನೆಗಳ ನಡುವೆಯೂ ಕಾಶ್ಮೀರಿ ಪಂಡಿತರಲ್ಲಿ ಮನೆಮಾಡಿರುವ ತೀವ್ರ ಭಯ ಹಾಗೂ ಅಭದ್ರತೆಯ ವಾತಾವರಣವು ಆಡಳಿತದ ಭದ್ರತಾ ವ್ಯವಸ್ಥೆಯನ್ನು ತೀವ್ರವಾಗಿ ಪ್ರಶ್ನಿಸುವಂತೆ ಮಾಡಿದೆ. ಕಳೆದ ಕೆಲವು ದಿನಗಳಿಂದ ವಿವಿಧ ಉಗ್ರಗಾಮಿ ಸಂಘಟನೆಗಳು ನೀಡುತ್ತಿರುವ ಬಹಿರಂಗ ಬೆದರಿಕೆ ಪತ್ರಗಳು ಹಾಗೂ ಸರಣಿ ಗುರಿ ಆಧಾರಿತ ದಾಳಿಗಳ ಮುನ್ಸೂಚನೆಗಳು ಕಣಿವೆಯಲ್ಲಿರುವ ಕಾಶ್ಮೀರಿ ಪಂಡಿತರನ್ನು ತೀವ್ರ ಅಸಹಾಯಕತೆಗೆ ತಳ್ಳಿವೆ. 1990ರ ದಶಕದ ಕಪ್ಪು ದಿನಗಳ ಅತ್ಯಂತ ಕಹಿ ನೆನಪುಗಳನ್ನು ತೊರೆದು, ಸರ್ಕಾರದ ಪುನರ್ವಸತಿ ಯೋಜನೆಗಳು ಮತ್ತು ವಿಶೇಷ ಉದ್ಯೋಗ ಪ್ಯಾಕೇಜ್‍ಗಳ ಅಡಿಯಲ್ಲಿ ಧೈರ್ಯ ಮಾಡಿ ಮರಳಿ ಬಂದು ಕಾರ್ಯನಿರ್ವಹಿಸುತ್ತಿದ್ದ ನೌಕರರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ಇದೀಗ ಪ್ರಾಣಭಯದಿಂದ ತತ್ತರಿಸುತ್ತಿದ್ದಾರೆ. ತಮ್ಮ ಮೂಲ ನೆಲಕ್ಕೆ ಮರಳಿ ಆಸ...