Posts

Showing posts from January, 2026

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಅಪೆಕ್ಸ್ ಬ್ಯಾಂಕ್‍ನಲ್ಲಿ ಪಟ್ಟಭದ್ರ ಹಿತಾಸಕ್ತಿ ಏಕೆ?

 ನೇರಾನೇರ * ಬಿವಿಸೀ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‍ನ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಅಸಹ್ಯಕರ ಸಂಘರ್ಷವು ಸಹಕಾರಿ ಸಂಸ್ಥೆಗಳನ್ನು ಕಾಡುತ್ತಿರುವ ಒಂದು ಆಳವಾದ ಕಾಯಿಲೆಯನ್ನು ಬಹಿರಂಗಪಡಿಸುತ್ತದೆ: ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಹಸ್ತಕ್ಷೇಪ. ಜಿಲ್ಲಾ ಸಹಕಾರಿ ಬ್ಯಾಂಕುಗಳ ಚುನಾಯಿತ ಪ್ರತಿನಿಧಿಗಳು ತೆಗೆದುಕೊಳ್ಳಬೇಕಾದ ಸರಳ ನಿರ್ಧಾರವು ಈಗ ಮುಖ್ಯಮಂತ್ರಿ ಮತ್ತು ಅವರ ಉಪನಾಯಕರ ನಡುವಿನ ಅಧಿಕಾರದ ಹೋರಾಟವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಈ ಉನ್ನತ ಸಂಸ್ಥೆಯು ನಾಯಕತ್ವ ಮತ್ತು ಮಾರ್ಗದರ್ಶನವಿಲ್ಲದೆ ಸೊರಗುವಂತಾಗಿದೆ. ಇದರ ಪರಿಣಾಮವಾಗಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಇನ್ನೂ ರೂಪುಗೊಂಡಿಲ್ಲ. ಹಲವು ವರ್ಷಗಳಿಂದ ಒಂದು ಅಲಿಖಿತ ಪದ್ಧತಿಯು ಜಾರಿಯಲ್ಲಿದೆ, ಅದರ ಪ್ರಕಾರ ಮುಖ್ಯಮಂತ್ರಿ ಅಥವಾ ಅವರು ಅಧಿಕಾರ ನೀಡಿದ ವ್ಯಕ್ತಿಯು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನು "ಆಯ್ಕೆ" ಮಾಡುತ್ತಾರೆ. ಕಾಲಕ್ರಮೇಣ ಇದು ಒಂದು ಹಕ್ಕಿನಂತೆ ಚಾಲ್ತಿಗೆ ಬಂದಿದೆ. ರಾಜಕಾರಣಿಗಳು ಸಹಕಾರಿ ಕ್ಷೇತ್ರದಿಂದ ರಾಜಕೀಯವನ್ನು ದೂರವಿಡಬೇಕು ಎಂದು ಪದೇ ಪದೇ ಉಪದೇಶ ನೀಡುತ್ತಾರಾದರೂ, ಈ ಅಧ್ಯಕ್ಷ ಸ್ಥಾನವನ್ನು ಪ್ರಜಾಪ್ರಭುತ್ವದ ಆಯ್ಕೆಯ ಬದಲು ರಾಜಕೀಯ ಸವಲತ್ತಿನಂತೆ ಪರಿಗಣಿಸಲಾಗುತ್ತಿದೆ. ಇಲ್ಲಿನ ಕಪಟತನವು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ದೀರ್ಘಕಾಲದ ವಿಚಾರಣೆಗಳ ಹೊರತಾಗಿಯೂ ಇನ್ನೂ ಇತ್ಯರ್ಥವಾಗದ ಭ್ರಷ್ಟಾಚಾರದ ಆರೋಪ...

ಯುಗದ ಚಿಂತನೆಗೆ ದಿಕ್ಕು ನೀಡಿದ ಆದಿ ಶಂಕರಾಚಾರ್ಯರು

* ಬಿವಿಸೀ ವಿಶ್ವದ 14 ಪ್ರಮುಖ ದಿನಪತ್ರಿಕೆಗಳಲ್ಲಿ ಸಂಪಾದಕರಾಗಿದ್ದ ಪೊಥಾನ್ ಜೋಸೆಪ್, ರಾಷ್ಟ್ರಕವಿ ಕುವೆಂಪು ಮುಂತಾದವರಿಂದ ತಮ್ಮ `ಅರಿವೇ ಗುರು', `ಜ್ಞಾನವೇ ಮೋಕ್ಷದ ಮಾರ್ಗ' ಮೀಮಾಂಸೆಗಾಗಿ ಪ್ರಶಂಸಿಸಲ್ಪಟ್ಟಿದ್ದ ಆದಿ ಶಂಕರಾಚಾರ್ಯರು ಪೌರಾಣಿಕ ವ್ಯಕ್ತಿಯಲ್ಲ. ಅವರು ಕ್ರಿ ಶ ಎಂಟನೇ ಶತಮಾನದಲ್ಲಿ ಬದುಕಿ (ಕೆಲವರ ಪ್ರಕಾರ 5ನೇ ಶತಮಾನದಲ್ಲಿ), ಸಂಚರಿಸಿ, ವಾದವಿವಾದಗಳಲ್ಲಿ ತೊಡಗಿ, ಸ್ಪಷ್ಟ ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ ಐತಿಹಾಸಿಕ ವ್ಯಕ್ತಿ. ಆದರೆ ಅವರ ಮರಣಾನಂತರದ ಶತಮಾನಗಳಲ್ಲಿ, ಅವರ ಜೀವನ ಮತ್ತು ಚಿಂತನೆಯ ಸುತ್ತ ರೂಪುಗೊಂಡ ಗೌರವಪೂರ್ಣ ಕಥನಗಳು ಅವರನ್ನು ಸಾಮಾನ್ಯ ಇತಿಹಾಸಪುರುಷನ ಮಟ್ಟಕ್ಕಿಂತ ಮೇಲಕ್ಕೆ ಎತ್ತಿದವು. ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಶಂಕರರ ಮಹತ್ವವನ್ನು ಸರಿಯಾಗಿ ಗ್ರಹಿಸಲು ಅಗತ್ಯ. ಇಂದು ಆದಿಶಂಕರರು ಅಂತರರಾಷ್ಟ್ರೀಯವಾಗಿ ಭಾರತದ ತತ್ವಚಿಂತನೆಯ ಪ್ರಮುಖ ಅಧ್ವರ್ಯುವೆನಿಸಿದ್ದಾರೆ. ಶಂಕರಾಚಾರ್ಯರ ಪ್ರಮುಖ ಸಾಧನೆ ಅದ್ವೈತ ತತ್ವದ ಶಾಸ್ತ್ರೀಯ ಸ್ಥಾಪನೆ. ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೆ ಅವರು ರಚಿಸಿದ ಭಾಷ್ಯಗಳು ತರ್ಕ, ಭಾಷಾ ಶಿಸ್ತು ಮತ್ತು ತತ್ವಸ್ಪಷ್ಟತೆಯಿಂದ ಕೂಡಿವೆ. ಜ್ಞಾನವೇ ಮೋಕ್ಷದ ಮಾರ್ಗ ಎಂಬ ಅವರ ದೃಷ್ಟಿಕೋನ, ಆ ಕಾಲದ ಧಾರ್ಮಿಕ ಆಚರಣೆಗಳ ಕೇಂದ್ರಸ್ಥಾನದಲ್ಲಿದ್ದ ಕರ್ಮಕಾಂಡದ ಪ್ರಾಬಲ್ಯಕ್ಕೆ ಬೌದ್ಧಿಕ ಸವಾಲು ಎಸೆಯಿತು. ಇದು ಕೇವಲ ತತ್ವಶಾಸ್ತ್ರೀಯ...

ಭ್ರಷ್ಟಾಚಾರ ಕರ್ನಾಟಕವನ್ನು ಆಳುತ್ತಿದೆ

 ಪ್ರಚಲಿತ * ಬಿವಿಸೀ ಕರ್ನಾಟಕದಲ್ಲಿ ಭ್ರಷ್ಟಾಚಾರವು ಈಗ ಅಡಗಿರುವ ಕಾಯಿಲೆಯಾಗಿ ಉಳಿದಿಲ್ಲ; ಬದಲಾಗಿ ಅದು ಆಡಳಿತದ ಮೂಲ ವ್ಯವಸ್ಥೆಯಾಗಿಯೇ (ಆಪರೇಟಿಂಗ್ ಸಿಸ್ಟಮ್) ಮಾರ್ಪಟ್ಟಿದೆ. ಲೋಕಾಯುಕ್ತದಂತಹ ಸಂಸ್ಥೆಗಳು, ದಾಳಿಗಳು, ಆಸ್ತಿ ಮುಟ್ಟುಗೋಲು ಮತ್ತು ದೊಡ್ಡ ಮಟ್ಟದ ಘೋಷಣೆಗಳ ಹೊರತಾಗಿಯೂ, ಭ್ರಷ್ಟಾಚಾರವು ರಾಜ್ಯದ ಅತ್ಯಂತ ನಂಬಿಕಸ್ತ ವ್ಯವಹಾರವಾಗಿ ಬೆಳೆಯುತ್ತಲೇ ಇದೆ. ಪ್ರಜಾಪ್ರಭುತ್ವವನ್ನು ಬೆಚ್ಚಿಬೀಳಿಸಬೇಕಾದ ಇಂತಹ ವಿಚಾರಗಳು ಇಂದು ಅತಿ ಸಾಮಾನ್ಯ ಸಂಗತಿಗಳಾಗಿವೆ. ನಾಗರಿಕ ಸೇವಾ ಅಧಿಕಾರಿಗಳು ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಈಗ ಜನರಲ್ಲಿ ಆಕ್ರೋಶ ಮೂಡಿಸುತ್ತಿಲ್ಲ; ಬದಲಾಗಿ ಸಾರ್ವಜನಿಕರ ಹತಾಶೆ ಮತ್ತು ಅವಿಶ್ವಾಸವನ್ನು ಮತ್ತಷ್ಟು ದೃಢಪಡಿಸುತ್ತಿವೆ. ಇದು ಕೇವಲ ಮೇಲ್ಪದರದ ಸಣ್ಣ ಭ್ರಷ್ಟಾಚಾರವಲ್ಲ. ಇದು ಕೆಳಗಿನಿಂದ ಮೇಲಿನ ಹಂತದವರೆಗೂ ವ್ಯಾಪಿಸಿರುವ ಒಂದು ವ್ಯವಸ್ಥಿತ ಉದ್ಯಮ. ಹಳ್ಳಿ ಕಚೇರಿಗಳಿಂದ ಸಚಿವಾಲಯದವರೆಗೆ, ಗುಮಾಸ್ತರಿಂದ ಹಿಡಿದು ಮಂತ್ರಿಗಳವರೆಗೆ, ಲಂಚವನ್ನು ಅಧಿಕೃತ ಹಕ್ಕಿನಂತೆ ಕೇಳಲಾಗುತ್ತದೆ. ನಾಗರಿಕರು ತಮ್ಮ ಕಾನೂನುಬದ್ಧ ಸೇವೆಗಳಿಗಾಗಿಯೂ ಹಣ ನೀಡಬೇಕಾದ ಅನಿವಾರ್ಯತೆ ಇದೆ. ಹಣ ಕೊಡದಿದ್ದರೆ ಕಡತಗಳು ಮುಂದೆ ಸಾಗುವುದಿಲ್ಲ. ಪರವಾನಗಿಗಳು, ಬಿಲ್‍ಗಳು, ಪ್ರಮಾಣಪತ್ರಗಳು ಮತ್ತು ಅನುಮತಿಗಳಿಗೆ ಮುಕ್ತವಾಗಿ ಬೆಲೆ ನಿಗದಿಪಡಿಸಲಾಗಿದೆ. ಯಾವುದೇ ಲಜ್ಜೆ ಇಲ್ಲದೆ, ಇದೊಂದು ಹಕ್ಕು ಎನ್ನುವಂತೆ ಭ್ರ...

ಗೌರವ ಡಾಕ್ಟರೇಟ್‍ಗಳು: ಹರಾಜಿಗೆ ಇಡಲಾದ ಪ್ರತಿಷ್ಠೆಯ ಗೌರವ

 ವಿಶ್ವವಿದ್ಯಾಲಯಗಳು ತಾವು ಜ್ಞಾನದ ರಕ್ಷಕರಾಗಿ ಉಳಿಯಬೇಕೇ ಅಥವಾ ಟೊಳ್ಳು ಗೌರವದ ದಲ್ಲಾಳಿಗಳಾಗಬೇಕೇ? ................ ಇದ್ದುದು ಇದ್ದ ಹಾಗೆ * ಬಿವಿಸೀ ಗೌರವ ಡಾಕ್ಟರೇಟ್‍ಗಳನ್ನು ಹಿಂದೆ ಜ್ಞಾನ, ಸಂಸ್ಕøತಿ ಅಥವಾ ಸಾರ್ವಜನಿಕ ಜೀವನಕ್ಕೆ ತಮ್ಮ ಜೀವಿತಾವಧಿಯ ಕೊಡುಗೆಯನ್ನು ನೀಡಿದ, ಅತ್ಯುನ್ನತ ಶ್ರೇಣಿಯ ವ್ಯಕ್ತಿಗಳಿಗಾಗಿ ಮಾತ್ರ ಮೀಸಲಿಡಲಾಗಿತ್ತು. ಆದರೆ ಆ ನೈತಿಕ ಸ್ಪಷ್ಟತೆಯು ಹಲವು ವರ್ಷಗಳಿಂದ ಎಷ್ಟು ಸ್ಪಷ್ಟವಾಗಿ ಕುಸಿದಿದೆಯೆಂದರೆ, ಈ ವಿಷಯವು ವಿವಾದವಾಗಿ ಈಗ ಶಾಸನಸಭೆಯನ್ನು ಪ್ರವೇಶಿಸಿದೆ. ಸಾರ್ವಜನಿಕ ಹಿತಾಸಕ್ತಿಯ ಗಂಭೀರ ವಿಷಯಗಳನ್ನು ಎತ್ತುವಲ್ಲಿ ಹೆಸರಾಗಿರುವ ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಇತ್ತೀಚೆಗೆ ಗೌರವ ಡಾಕ್ಟರೇಟ್‍ಗಳನ್ನು ಅವಿವೇಕದಿಂದ ನಿರ್ಧರಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ವಿಶ್ವವಿದ್ಯಾಲಯಗಳು ಈ ಗೌರವದ ಮೌಲ್ಯವನ್ನು ಕುಗ್ಗಿಸದಂತೆ ತಡೆಯಲು ಸರ್ಕಾರದ ಮಧ್ಯಪ್ರವೇಶಕ್ಕೆ ಅವರು ಕರೆ ನೀಡಿದ್ದಾರೆ. ರಮೇಶ್ ಬಾಬು ಅವರ ಕಳವಳವು ಅಸಮಂಜಸವೇನಲ್ಲ. ಕರ್ನಾಟಕದಾದ್ಯಂತ ಗೌರವ ಡಾಕ್ಟರೇಟ್‍ಗಳನ್ನು ಆತಂಕಕಾರಿ ರೀತಿಯಲ್ಲಿ ಹಂಚಲಾಗುತ್ತಿದೆ. ಶೈಕ್ಷಣಿಕ ಮನ್ನಣೆಗೆ ಕಿಂಚಿತ್ತೂ ಅರ್ಹವಲ್ಲದ ಸಾಧನೆಗಳನ್ನು ಮಾಡಿದ ವ್ಯಕ್ತಿಗಳಿಗೂ ಈ ಗೌರವ ನೀಡಲಾಗುತ್ತಿದೆ. ಹಲವಾರು ಸಂದರ್ಭಗಳಲ್ಲಿ, ಇದರ ಹಿಂದಿನ ಪ್ರೇರಣೆಯು ಹಣಕಾಸಿನ ವ್ಯವಹಾರ ಅಥವಾ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಭಾವಶಾಲಿ ...

ರಾಜಕಾರಣಿಗಳ ವೈಭವೀಕರಣದಿಂದ ಪ್ರಜಾಪ್ರಭುತ್ವದ ಅಧಃಪತನ: ಮಾಧ್ಯಮ ಹಾಗೂ ಸಮಾಜದ ಜಂಟಿ ಹೊಣೆಗಾರಿಕೆ ಇದರಲ್ಲಿದೆ

 ಸ್ವತಂತ್ರ ಪತ್ರಿಕೋದ್ಯಮವು ಅಧಿಕಾರಸ್ಥರ ಮೆಚ್ಚುಗೆಗೆ ಹಂಬಲಿಸುವುದನ್ನು ಬಿಡಬೇಕು. ............. ಸಾರ್ವಜನಿಕ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸುವ ಕುರಿತು ಇಂದು ವ್ಯಕ್ತವಾಗುತ್ತಿರುವ ಅಸಮಾಧಾನವು ಕೇವಲ ನಕಾರಾತ್ಮಕ ಚಿಂತನೆಯಲ್ಲ, ಬದಲಾಗಿ ಅದು ಪ್ರಜಾಪ್ರಭುತ್ವದ ಜಾಗೃತ ಅಂತಃಪ್ರಜ್ಞೆಯಾಗಿದೆ. ಇಂದಿನ ಅನೇಕ ಚುನಾಯಿತ ಪ್ರತಿನಿಧಿಗಳು ತಮಗೆ ಸಿಕ್ಕ ಅಧಿಕಾರವನ್ನು ಸಾರ್ವಜನಿಕ ಜವಾಬ್ದಾರಿ ಎಂದುಕೊಳ್ಳುವ ಬದಲು, ಅದೊಂದು ಜನ್ಮಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತಿದ್ದಾರೆ. ಕ್ರಿಮಿನಲ್ ಹಿನ್ನೆಲೆ, ಅಸಭ್ಯ ನಡವಳಿಕೆ ಮತ್ತು ಸಾಂಸ್ಥಿಕ ಮೌಲ್ಯಗಳ ಉಲ್ಲಂಘನೆಗಳು ಈಗ ಸರ್ವೇಸಾಮಾನ್ಯವಾಗಿವೆ. ವಿಪರ್ಯಾಸವೆಂದರೆ, ಇವುಗಳನ್ನು ಪ್ರಶ್ನಿಸಿ ಸರಿಪಡಿಸುವ ಬದಲು ಮಾಧ್ಯಮಗಳ ಒಂದು ವರ್ಗ ಮತ್ತು ನಾಗರಿಕ ಸಮಾಜವು ಅಧಿಕಾರದ ಈ ಅಹಂಕಾರವನ್ನೇ ಸಂಭ್ರಮಿಸುತ್ತಿವೆ. ಕಾರ್ಯಕ್ರಮಗಳು ಇಂದು ರಾಜಕಾರಣಿಗಳ ಉಪಸ್ಥಿತಿಯಿಲ್ಲದೆ ಪೂರ್ಣಗೊಳ್ಳುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಯೊಬ್ಬ ಬಂದರಷ್ಟೇ ಕಾರ್ಯಕ್ರಮಕ್ಕೆ ಗೌರವ ಎನ್ನುವ ಮನಸ್ಥಿತಿ ಪ್ರಜಾಪ್ರಭುತ್ವದ ಆಶಯಗಳನ್ನೇ ಬುಡಮೇಲು ಮಾಡುತ್ತಿದೆ. ಸಂಸ್ಥೆಗಳಿಗೆ ಮತ್ತು ಸಾರ್ವಜನಿಕರಿಗೆ ಸಿಗಬೇಕಾದ ಪ್ರಾಮುಖ್ಯತೆಯನ್ನು ಕೇವಲ ಒಬ್ಬ ಸಚಿವ ಅಥವಾ ನಾಯಕನಿಗೆ ನೀಡಿದಾಗ, ಅಲ್ಲಿ ಕಾರ್ಯಕ್ರಮದ ಸತ್ವಕ್ಕಿಂತ ಹೆಚ್ಚಾಗಿ ಅಧಿಕಾರದ ಸಾಮಿಪ್ಯವೇ ವಿಜೃಂಭಿಸುತ್ತದೆ. ಈ ಅವನತಿಯಲ್ಲಿ ಮಾಧ್ಯಮಗ...

ಹೊಸ ಬಾಟಲಿಯಲ್ಲಿ ಹಳೆಯ ವಿಷ: ತ ನಾ.ದಲ್ಲಿ ವಂಶಾಳ್ವಿಕೆ ರಾಜಕೀಯಕ್ಕೆ ಡಿಎಂಕೆ ಸಮರ್ಥನೆ

 ಅಹುದಾದರಹುದೆನ್ನಿ * ಬಿವಿಸೀ ಮುಂಬರುವ ವಿಧಾನಸಭಾ ಚುನಾವಣೆಯು "ಆರ್ಯರು" ಮತ್ತು "ದ್ರಾವಿಡ ತಮಿಳರ" ನಡುವಿನ ಹೋರಾಟವಾಗಲಿದೆ ಎಂಬ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪ್ರತಿಪಾದನೆಯು ರಾಜ್ಯದ ರಾಜಕೀಯ ಸಂವಾದದಲ್ಲಿ ಒಂದು ಆತಂಕಕಾರಿ ತಿರುವನ್ನು ಸೂಚಿಸುತ್ತದೆ. ಇದರ ಐತಿಹಾಸಿಕ ಬೇರುಗಳು ಏನೇ ಇರಲಿ, ಇಂದು ಈ ಭಾಷೆಯು ಸ್ಪಷ್ಟವಾದ ಜನಾಂಗೀಯ ಬಣ್ಣವನ್ನು ಹೊಂದಿದೆ ಮತ್ತು ಇದನ್ನು ಉದ್ದೇಶಪೂರ್ವಕವಾಗಿಯೇ ಬಳಸಲಾಗುತ್ತಿದೆ. ಸಾಂಪ್ರದಾಯಿಕ ದ್ರಾವಿಡ ಸಿದ್ಧಾಂತದಲ್ಲಿ, "ಆರ್ಯ" ಮತ್ತು "ದ್ರಾವಿಡ" ಎಂಬ ಪದಗಳು ಜೈವಿಕ ವರ್ಗಗಳಾಗಿರದೆ ರಾಜಕೀಯ ಸಂಕೇತಗಳಾಗಿದ್ದವು. "ಆರ್ಯ" ಎಂಬುದು ಉತ್ತರದ ಸಾಂಸ್ಕøತಿಕ ಪ್ರಾಬಲ್ಯ, ಸಂಸ್ಕøತ ಮೂಲದ ಹಿಂದೂ ಸಂಪ್ರದಾಯವಾದ ಮತ್ತು ಬ್ರಾಹ್ಮಣ್ಯದ ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಿತ್ತು; "ದ್ರಾವಿಡ" ಎಂಬುದು ತಮಿಳು ಅಸ್ಮಿತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿತ್ತು. ಆದರೆ ಕಾಲಕ್ರಮೇಣ ಪದಗಳ ಅರ್ಥ ಬದಲಾಗುತ್ತದೆ. ಜಾಗತೀಕರಣಗೊಂಡ ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ, ಈ ಇಬ್ಬಗೆಯನ್ನು ಪುನರುಜ್ಜೀವನಗೊಳಿಸುವುದು ಅನಿವಾರ್ಯವಾಗಿ ಜನಾಂಗೀಯ, ಪ್ರತ್ಯೇಕತಾವಾದಿ ಮತ್ತು ವಿಭಜಕವಾಗಿ ಕೇಳಿಸುತ್ತದೆ. ಈ ಸಮಯದ ಆಯ್ಕೆಯು ಕಾಕತಾಳೀಯವಲ್ಲ. ಆಡಳಿತ ವಿರೋಧಿ ಅಲೆ ಮತ್ತು ಬಿಜೆಪಿಯ ಬೆಳೆಯುತ್ತಿರುವ ಉಪಸ್ಥಿತಿಯನ್ನು...

ಗೌಡ ಕುಟುಂಬದ ಕಾನೂನು ಮೀರಿದ ಮನಸ್ಥಿತಿ

 ತಾವು ಕಾನೂನಿಗೆ ಅತೀತರು ಎಂದು ಭಾವಿಸಿರುವ ಪಾಳೆಯಗಾರಿಕೆ ಪ್ರವೃತ್ತಿಯ ಗೌಡ & ಸನ್ಸ್ ಬಿವಿಸೀ ತಮ್ಮ ಸ್ವಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಭಾಷಣ ಕೆಲವು ಅಹಿತಕರ ಪ್ರಶ್ನೆಗಳನ್ನು ಎತ್ತಿದ್ದು, ಮಾಜಿ ಪ್ರಧಾನಮಂತ್ರಿ ಹೇಗೆ ಅಧಿಕಾರ, ಆಡಳಿತ ಪ್ರಕ್ರಿಯೆ ಮತ್ತು ಸಂಯಮದ ನಡತೆಯನ್ನು ಅರ್ಥಮಾಡಿಕೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.  ಪ್ರಜ್ಞಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಸರ್ಕಾರ ವಿಶೇಷ ತನಿಖಾ ದಳದ (ಎಸ್‍ಐಟಿ) ಅಧಿಕಾರಿಗಳನ್ನು ಸನ್ಮಾನಿಸಿರುವುದನ್ನು ಖಂಡಿಸಿರುವ ಗೌಡರ ವರ್ತನೆ ಕೇವಲ ಅಸಹನೆಯ ಪ್ರತೀಕವಷ್ಟೇ ಅಲ್ಲದೆ, ಸಾಂವಿಧಾನಿಕ ಸಂಸ್ಥೆಗಳು ರಾಜಕೀಯ ಕುಟುಂಬಗಳ ಸೇವೆಗಾಗಿಯೇ ಇವೆ ಎಂಬ ಅರ್ಥವನ್ನು ಮೂಡಿಸುತ್ತದೆ. ಉನ್ನತ ಮಟ್ಟದ, ರಾಜಕೀಯವಾಗಿ ಸೂಕ್ಷ್ಮವಾದ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಪೆÇಲೀಸ್ ಅಧಿಕಾರಿಗಳನ್ನು ಸನ್ಮಾನಿಸುವುದು ಆಡಳಿತದಲ್ಲಿ ಸಾಮಾನ್ಯವಾದ ಅಭ್ಯಾಸವಾಗಿರುತ್ತದೆ. ಪ್ರತಿಯೊಂದು ಪಕ್ಷದ ಸರ್ಕಾರವೂ ಇದನ್ನು ಮಾಡಿರುತ್ತದೆ. ಅಂತಹ ಗುರುತಿಸುವಿಕೆಯನ್ನು ಗೌಡರ ಕುಟುಂಬದ ವಿರುದ್ಧ ಸೇಡಿನ ಕ್ರಮ ಎಂದು ಆರೋಪಿಸುವುದು ನಿಯಮಾಧಾರಿತ ಆಳ್ವಿಕೆಯನ್ನೇ ನಿರಾಕರಿಸಿದಂತಾಗುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಳ್ವಿಕೆ ನಡೆಸಿರುವ ವ್ಯಕ್ತಿಯಿಂದ ಈ ರೀತಿಯ ಅಭಿಪ್ರಾಯ ಬರುವುದು ಅವರ ಕುಂದು ಕೊರತೆಗ...

Gowda family’s illusion of being above the law

  H D Deve Gowda’s recent speech at his party meeting in home base Hassan,  has raised uncomfortable questions about how a former Prime Minister understands power, process, and restraint. His public attack on the Siddaramaiah government for rewarding officers of the Special Investigation Team (SIT) in the Prajwal Revanna sexual offence case was not merely intemperate—it exposed a deeper belief that institutions exist to serve families, not the law. Rewarding police officers for successfully handling high-profile, politically sensitive cases is routine administrative practice. Governments of every party have done it. To describe such recognition as “revenge” against the Gowda family is to deny the very idea of rule-based governance. Coming from a leader who has headed both the state and the country, this appears less like confusion and more like grievance. More disturbing was Deve Gowda’s direct threat against Chief Minister Siddaramaiah—his claim that he would “fix” him when h...

ಅಧಿಕಾರಸ್ಥರ ಜತೆ ಮಾಧ್ಯಮಗಳ ಹೊಂದಾಣಿಕೆಯಿಂದ ಪ್ರಜಾತಂತ್ರಕ್ಕೆ ಧಕ್ಕೆ

 ಪ್ರಜಾಪ್ರಭುತ್ವಕ್ಕೆ ಆಳುವವರನ್ನು ಪ್ರಶಂಸಿಸುವ ಮಾಧ್ಯಮ, ಪತ್ರಿಕೆ ಅಗತ್ಯವಿಲ್ಲ. ಆಳುವವರನ್ನು ನಿರ್ಭೀತಿಯಿಂದ ಪ್ರಶ್ನಿಸುವ ಪತ್ರಿಕೆಗಳು ಬೇಕಿವೆ ಖುಲ್ಲಂಖುಲ್ಲಾ * ಬಿವಿಸೀ ನಿಜವಾದ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಮತ್ತು ಮಾಧ್ಯಮಗಳ ನಡುವಿನ ಸಂಬಂಧಗಳು ಸದಾ ಅಹಿತಕರವಾಗಿರುತ್ತದೆ, ಸ್ನೇಹಪರವಾಗಿರಲು ಸಾಧ್ಯವೇ ಇಲ್ಲ. ಎರಡರ ನಡುವೆ ಹಿತಕರ ವಾತಾವರಣ ಇರುವುದು ಆರೋಗ್ಯಕರವಲ್ಲ. ಎಚ್ಚರಿಕೆಯ ಸೂಚನೆಯೂ ಆಗಿರುತ್ತದೆ. ಮಾಧ್ಯಮಗಳು ಅಧಿಕಾರವನ್ನು ಪ್ರಶ್ನಿಸಲು ಇದೆಯೇ ಹೊರತು, ಅಧಿಕಾರದ ಮರುಭರವಸೆ ನೀಡಲು ಅಲ್ಲ. ಈ ಪಾತ್ರ ದುರ್ಬಲವಾದರೆ, ಪ್ರಜಾಪ್ರಭುತ್ವ ಹಠಾತ್ತನೆ ಕುಸಿಯುತ್ತದೆ. ಕ್ರಮೇಣ ನಾಶವಾಗುತ್ತದೆ. ಗ್ರಾಂಥಿಕವಾಗಿ ಭಾರತ ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಸಂವಿಧಾನವು ವಾಕ್‍ಸ್ವಾತಂತ್ರ್ಯ ನೀಡುತ್ತದೆ. ದೇಶವು ಬಲವಾದ ಪತ್ರಿಕೋದ್ಯಮದ ದೀರ್ಘ ಪರಂಪರೆಯನ್ನು ಹೊಂದಿದೆ. ಮಾಧ್ಯಮವಲಯ ವಿಶಾಲವಾಗಿದ್ದು, ವೈವಿಧ್ಯಮಯವಾಗಿದೆ. ಆದರೂ ಆಚರಣೆಯಲ್ಲಿ ಇಂದು ಮಿಶ್ರಿತ ಚಿತ್ರಣ ಕಾಣುತ್ತದೆ. ಕೆಲವು ಪತ್ರಕರ್ತರು ಮತ್ತು ಮಾಧ್ಯಮ ಸಾಧನಗಳು ಗಂಭೀರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕರು ಇದನ್ನು ಮಾಡುತ್ತಿಲ್ಲ. ಅದರಲ್ಲೂ ಟಿ ವಿ ವಾಹಿನಿಗಳಲ್ಲಿ ಅಧಿಕಾರವನ್ನು ಪರೀಕ್ಷಿಸುವುದಕ್ಕಿಂತಲೂ ಪ್ರತಿಧ್ವನಿಸುವುದೇ ಹೆಚ್ಚು. ಇದು ನೇರ ಸೆನ್ಸಾರ್‍ಷಿಪ್ ಕಾರಣದಿಂದಲ್ಲ. ಹೆಚ್ಚಿನ ಸಮಯದಲ್ಲಿ ಇದು ಭೀತಿಯ ಪರಿಣಾಮ. ಆದಾಯ ತೆರಿಗೆ, ಇ ಡಿ...

42ನೆ ಸಂವಿಧಾನ ತಿದ್ದುಪಡಿ - ತುರ್ತುಪರಿಸ್ಥಿತಿಯ ಎಚ್ಚರಿಕೆ

ರಾಜಕೀಯ ಅಧಿಕಾರವು ಸಾಂವಿಧಾನಿಕ ಇತಿಮಿತಿಗಳನ್ನು ಮೀರಿದ ಒಂದು ನಿರ್ಣಾಯಕ ಘಟ್ಟವಾಗಿ ಸಂವಿಧಾನದ 42ನೆಯ ತಿದ್ದುಪಡಿಯನ್ನು ಇಂದಿಗೂ ಸ್ಮರಿಸಲಾಗುತ್ತದೆ. 1976ರಲ್ಲಿ ಇಂದಿರಾಗಾಂಧಿಯ ಆಳ್ವಿಕೆಯಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜಾರಿಗೊಳಿಸಿದ ಈ ಸಾಂವಿಧಾನಿಕ ತಿದ್ದುಪಡಿಯು ಸುಧಾರಣೆಯ ಮಿತಿಗಳನ್ನೂ ದಾಟಿ, ಭಾರತದ ವ್ಯವಸ್ಥೆಯಲ್ಲಿ ಹೇಗೆ ಅಧಿಕಾರವನ್ನೇ ಬದಲಾಯಿಸಬಹುದು ಎನ್ನುವುದನ್ನು ನಿರೂಪಿಸಿತ್ತು. ನ್ಯಾಯಾಲಯದಲ್ಲಿ ಈ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದ್ದ ಅಂದಿನ ಸರ್ಕಾರವು, ನ್ಯಾಯಾಲಯಗಳು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿತ್ತು. ಸುಪ್ರೀಂಕೋರ್ಟ್ ತೀರ್ಪುಗಳು, ವಿಶೇಷವಾಗಿ ಕೇಶವಾನಂದ ಭಾರತಿ (1973) ಪ್ರಕರಣದಲ್ಲಿ, ಸಂವಿಧಾನವನ್ನು ಬದಲಿಸಲು ಸಂಸತ್ತಿಗೆ ಇರುವ ಅಧಿಕಾರದ ಮಿತಿಗಳನ್ನು ಗುರುತಿಸಿತ್ತು. ಆಳುವ ಪಕ್ಷಕ್ಕೆ ಇದು ಚುನಾಯಿತ ಸರ್ಕಾರದ ನಿರ್ಣಾಯಕ ತೀರ್ಮಾನಗಳಿಗೆ ಅಡ್ಡಿಯಾಗುತ್ತದೆ ಎಂದು ಭಾಸವಾಗಿತ್ತು. ಸರ್ಕಾರದ ಸಾಮಥ್ರ್ಯವನ್ನು ಕುಗ್ಗಿಸುತ್ತದೆ ಎಂದು ಪ್ರತಿಪಾದಿಸಲಾಗಿತ್ತು. 42ನೆಯ ತಿದ್ದುಪಡಿಯನ್ನು ಪರಿಹಾರೋಪಾಯವಾಗಿ ಸೂಚಿಸಲಾಗಿತ್ತು. ಸಂಸತ್ತನ್ನು ಬಲಪಡಿಸುವುದು, ನಿರ್ದೇಶಕ ತತ್ವಗಳನ್ನು ಪೆÇ್ರೀತ್ಸಾಹಿಸುವುದು ಮತ್ತು ನೀತಿಗಳನ್ನು ತ್ವರಿತವಾಗಿ ಜಾರಿಗೊಳಿಸುವುದು ಈ ತಿದ್ದುಪಡಿಯ ಉದ್ದೇಶ ಎಂದು ಹೇಳಲಾಗಿತ್ತು. ಆದರೆ ಈ ಸಂದರ್ಭವನ್ನು ನಿರ್ಲಕ್ಷಿಸಲಾಗುವುದಿಲ್ಲ. ತ...

The 42nd Amendment: a warning from the Emergency years

  The Forty-Second Amendment to the Indian Constitution is often remembered as a turning point when political power tried to stretch constitutional limits. Passed in 1976 during the Emergency of   Indira Gandhi era, it went far beyond routine reform and attempted to change how power itself was distributed in the Indian system. The government justified the amendment by arguing that courts were blocking social and economic reform. Supreme Court judgments, especially  Kesavananda Bharati  (1973), had placed limits on Parliament’s power to amend the Constitution. To the ruling establishment, this appeared to weaken an elected government’s ability to act decisively. The 42nd Amendment was presented as a solution — strengthening Parliament, promoting Directive Principles, and ensuring faster implementation of policy. But the context cannot be ignored. The amendment was passed when opposition leaders were imprisoned, the press was tightly controlled, and public debate ...

ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಗೂಂಡಾಗಿರಿ ಮೆರೆಯುತ್ತಿದೆ

 ಅಲವದರಲವೆನ್ನಿ * ಬಿವಿಸೀ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಂದು ಅಹಿತಕರ ಮಾದರಿ ರೂಪುಗೊಳ್ಳುತ್ತಿದೆ. ನಾಗರಿಕ ನಡೆವಳಿಕೆಯ ಕುಸಿತ, ಸಾರ್ವಜನಿಕ ನಿಂದನೆ, ಬೆದರಿಕೆ, ಶಾಸಕರಿಂದಲೇ ದೈಹಿಕ ದಾಳಿ ಇವೆಲ್ಲವೂ ಆತಂಕ ಮೂಡಿಸುವ ವರ್ತನೆಗಳಾಗಿವೆ. ಒಂದು ಕಾಲದಲ್ಲಿ ಅಪರೂಪವಾಗಿ ನಡೆಯುತ್ತದೆ ಎಂದು ಭಾವಿಸಲಾಗುತ್ತಿದ್ದ ಘಟನೆಗಳು ಈಗ ಸಮಾಜದಲ್ಲಿ ಬೇರೂರಿರುವ ವ್ಯಾಧಿ ಎನ್ನುವುದನ್ನು ಸೂಚಿಸುತ್ತಿದ್ದು, ಅಧಿಕಾರ ಪ್ರಾಪ್ತಿಯ ಮೋಹ, ಆಂತರಿಕ ಶಿಸ್ತಿನ ಕೊರತೆ ಮತ್ತು ಪಕ್ಷದ ನಾಯಕತ್ವದ ಅನಗತ್ಯ ತಾಳ್ಮೆ ಈ ಸಮಸ್ಯೆಯನ್ನು ಜಟಿಲಗೊಳಿಸುತ್ತಿದೆ. ಶಿಡ್ಲಘಟ್ಟದ ಶಾಸಕ ರಾಜೀವ್ ಗೌಡ ಅವರ ಉಚ್ಛಾಟನೆ ಈ ವಿಷಯವನ್ನು ಈಗ ಸಾರ್ವಜನಿಕವಾಗಿ ಬಯಲುಗೊಳಿಸಿದೆ. ಶಿಡ್ಲಘಟ್ಟದ ಪುರಸಭೆಯ ಮಹಿಳಾ ಮುಖ್ಯಾಧಿಕಾರಿಯವರನ್ನು ನಿಂದಿಸಿ, ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ರಾಜೀವ್ ಗೌಡ ಅವರ ವರ್ತನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಟೀಕೆಗಳು ಹೆಚ್ಚಾಗುತ್ತಿರುವಂತೆ, ಕೆಪಿಸಿಸಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಆದರೂ ಈ ಉಚ್ಛಾಟನೆ ವಿಶೇಷ ಎನಿಸಲು ಕಾರಣ ಎಂದರೆ ಇದು ಅಪರೂಪದ ಪ್ರಸಂಗ. ರಾಜೀವ್ ಗೌಡ ಅವರ ಪ್ರಕರಣವೇನೂ ಅಪರೂಪ ಅಲ್ಲ. ಕೆ ಆರ್ ನಗರದ ಕಾಂಗ್ರೆಸ್ ಶಾಸಕ ಡಿ ರವಿಶಂಕರ್ ಸಾರ್ವಜನಿಕ ಸಂವಾದದ ಸಮಯದಲ್ಲಿ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಹರಿದಾಡುತ್ತಿದೆ. ಇನ್ನೊಬ್ಬ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ...

Congress, power and the erosion of civility in Karnataka

  A troubling pattern is taking root in Karnataka’s ruling Congress: a steady erosion of civility marked by public abuse, intimidation, and even physical aggression by its own legislators. What were once dismissed as isolated lapses now point to a deeper malaise—one driven by entitlement, weak internal discipline, and tolerance from the party leadership. The expulsion of Shidlaghatta MLA  Rajiv Gowda  briefly forced this issue into the open. Gowda was accused of abusing and threatening the woman chief officer of the Shidlaghatta municipality, triggering sustained public outrage. With criticism mounting, the Karnataka Pradesh Congress Committee (KPCC) had little option but to act. Yet his removal stands out precisely because such action is exceptional. Gowda is not an isolated case.  D. Ravishankar , Congress MLA from K.R. Nagar, was caught on video physically assaulting a party worker during a public interaction.  S. N. Subbareddy  faced criticism for browb...

ಬ್ರಾಹ್ಮಣರನ್ನು ಒಟಗುಟ್ಟುವ ಕಪ್ಪೆಗಳು ಎಂದ ಬಿಳಿಮಲೆ

 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹೇಳಿಕೆಗಳು ದ್ವೇಷ ಭಾಷಣದ ಅಂಚಿನಲ್ಲಿವೆ * ವಿಶ್ಲೇಷಣೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರಷೋತ್ತಮ ಬಿಳಿಮಲೆ ಮತ್ತೊಮ್ಮೆ ಭಾರೀ ವಿವಾದದ ಮಧ್ಯೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅವರ ಹೇಳಿಕೆಗಳು ಸಂಪ್ರದಾಯವಾದಿ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಈ ಬಾರಿ ವಿವಾದ ಕೇವಲ ಸಾಂಸ್ಕøತಿಕ ಚರ್ಚೆಗೆ ಸೀಮಿತವಾಗದೆ, ಕಾನೂನು ಕ್ರಮದ ಅಂಚಿನವರೆಗೆ ತಲುಪಿರುವುದು ಗಮನಾರ್ಹ. ತಾನು ನಾಸ್ತಿಕನಾಗಿರುವುದಾಗಿ ಹೇಳಿಕೊಂಡು ಮಾತನಾಡಿದ ಅವರು, ಸಂಸ್ಕøತ ಪರಂಪರೆ, ಬ್ರಾಹ್ಮಣ ಆಚರಣೆಗಳು ಮತ್ತು ಜನಪದ-ಧಾರ್ಮಿಕ ಆಚರಣೆಗಳ ಕುರಿತು ನೀಡಿದ ಕಠಿಣ ಟೀಕೆಗಳು, ಕೇವಲ ವೈಚಾರಿಕ ಭಿನ್ನಾಭಿಪ್ರಾಯವಲ್ಲ; ಸಾರ್ವಜನಿಕ ಹುದ್ದೆಯ ಗೌರವವನ್ನು ಮೀರಿ ಹೋಗಿವೆ ಎಂಬ ಆರೋಪಗಳು ಇದೀಗ ಗಟ್ಟಿಯಾಗಿವೆ. ಬಿಳಿಮಲೆ ತಮ್ಮ ಭಾಷಣದಲ್ಲಿ “ಮುಂಡಕೋಪನಿಷತ್ತನ್ನು ಉಚ್ಚರಿಸುವ ಬ್ರಾಹ್ಮಣರು ಕಪ್ಪೆಗಳಂತಿದ್ದಾರೆ” ಎಂಬ ಅರ್ಥದ ಹೇಳಿಕೆಯನ್ನು ಮಾಡಿದ್ದಾರೆ ಎಂಬ ಆರೋಪ ಪ್ರಮುಖವಾಗಿದೆ. ಉಪನಿಷತ್ತುಗಳು ಭಾರತೀಯ ತತ್ವಚಿಂತನೆಯ ಮೂಲಸ್ತಂಭಗಳಾಗಿರುವಾಗ, ಅವುಗಳನ್ನು ಉಚ್ಚರಿಸುವವರನ್ನು ಈ ರೀತಿಯಲ್ಲಿ ಹೋಲಿಕೆ ಮಾಡಿರುವುದು ಸಂಪೂರ್ಣ ಸಮುದಾಯವೊಂದನ್ನು ಅವಮಾನಿಸುವುದಕ್ಕೆ ಸಮಾನ ಎಂದು ಟೀಕಾಕಾರರು ವಾದಿಸುತ್ತಿದ್ದಾರೆ. ಇದಲ್ಲದೆ ಅವರು ಜ್ಯೋತಿಷ್ಯ ಶಾಸ್ತ್ರವನ್ನು ವ್ಯಂ...

ದ್ವೇಷ ಭಾಷಣ : ಬಿಜೆಪಿ ಬೆಳೆಯುತ್ತದೆ, ಭಾರತ ಕ್ಷೀಣಿಸುತ್ತದೆ

ದ್ವೇಷ ಭಾಷಣ ಇಂದು ಭಾರತದಲ್ಲಿ ಕೇವಲ ರಾಜಕೀಯ ತಂತ್ರವಲ್ಲ; ಅದು ನಿಧಾನವಾಗಿ ಸಾರ್ವಜನಿಕ ಜೀವನದ ಸಾಮಾನ್ಯ ಶಬ್ದಕೋಶವಾಗುತ್ತಿದೆ. ವಿಶೇಷವಾಗಿ ಭಾರತೀಯ ಜನತಾ ಪಕ್ಷದ ರಾಜಕೀಯ ಏರಿಕೆಯಲ್ಲಿ ದ್ವೇಷ ಭಾಷಣ ಒಂದು ಶಕ್ತಿಶಾಲಿ ಇಂಧನವಾಗಿ ಪರಿಣಮಿಸಿದೆ. ಧರ್ಮ, ಜಾತಿ, ಆಹಾರ, ಉಡುಗೆ, ಭಾಷೆ-ಎಲ್ಲವೂ ರಾಜಕೀಯ ಲಾಭಕ್ಕಾಗಿ ಶಸ್ತ್ರಗಳಾಗಿವೆ. ಈ ಪ್ರಕ್ರಿಯೆಯಲ್ಲಿ ಪಕ್ಷವು ತನ್ನ ಚುನಾವಣಾ ನೆಲೆ ಗಟ್ಟಿಗೊಳಿಸುತ್ತಿರುವಾಗ, ಭಾರತ ಎಂಬ ಬಹುಮುಖ, ಬಹುಧ್ವನಿಯ ಗಣರಾಜ್ಯ ಮಾತ್ರ ನಿಧಾನವಾಗಿ ಕ್ಷೀಣಿಸುತ್ತಿದೆ. ದ್ವೇಷ ಭಾಷಣದ ರಾಜಕೀಯ ಉಪಯೋಗ ಸ್ಪಷ್ಟವಾಗಿದೆ. ಅದು ಸಮಾಜವನ್ನು `ನಾವು' ಮತ್ತು `ಅವರು' ಎಂದು ವಿಭಜಿಸುತ್ತದೆ. ಭಯವನ್ನು ಹುಟ್ಟುಹಾಕುತ್ತದೆ, ಅಸುರಕ್ಷಿತ ಭಾವನೆಯನ್ನು ಬೆಳೆಸುತ್ತದೆ. ಈ ಭಯದ ಮೇಲೆ ರಾಜಕೀಯ ನಾಯಕತ್ವ ತಾನು ರಕ್ಷಕ ಎಂದು ತೋರಿಸಿಕೊಳ್ಳುತ್ತದೆ. ಈ ಸೂತ್ರವನ್ನು ಬಿಜೆಪಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಚುನಾವಣಾ ಭಾಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಚರ್ಚೆಗಳಲ್ಲಿ-ಎಲ್ಲೆಲ್ಲೂ ವಿಭಜನೆಯ ಭಾಷೆ ಸಾಮಾನ್ಯವಾಗಿದೆ. ಕಾನೂನು, ಸಂವಿಧಾನ, ನೈತಿಕತೆ ಎಂಬ ಪದಗಳು ಹಿನ್ನಲೆಯಲ್ಲಿ ಕಣ್ಮರೆಯಾಗುತ್ತಿವೆ. ಆದರೆ ಈ ರಾಜಕೀಯ ಲಾಭದ ಬೆಲೆ ಭಾರೀ. ದ್ವೇಷ ಭಾಷಣ ಸಾಮಾನ್ಯವಾದಾಗ ಹಿಂಸೆಯೂ ಸಾಮಾನ್ಯವಾಗುತ್ತದೆ. ಮಾತಿನ ಹಿಂಸೆ ಕ್ರಮೇಣ ದೈಹಿಕ ಹಿಂಸೆಗೆ ದಾರಿ ಮಾಡಿಕೊಡುತ್ತದೆ. ಗೂಂಡಾಗಿರಿ, ಗುಂಪು ಹಲ್ಲೆಗಳು, ಸಾಮ...

ಪರಿವಾರವಾದ: ಭಾರತದ ಬಹುತ್ವದ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಮೌನ ದಾಳಿ

 ರಾಜಕೀಯದಲ್ಲಿ ವಂಶಾಳ್ವಿಕೆಯನ್ನು ವಿರೋಧಿಸುವುದು ಕೇವಲ ಪಕ್ಷಪಾತದ ರಾಜಕಾರಣವಲ್ಲ; ಅದು ಸಾಂವಿಧಾನಿಕ ಕರ್ತವ್ಯ. .................   ಅಹುದಾದರಹುದೆನ್ನಿ * ಬಿವಿಸೀ ಭಾರತದಲ್ಲಿ ವಂಶಪಾರಂಪರ್ಯ ರಾಜಕಾರಣವು ಈಗ ಕೇವಲ ಒಂದು ಅಪವಾದವಾಗಿ ಉಳಿದಿಲ್ಲ; ಅದೊಂದು ಅಭ್ಯಾಸವಾಗಿಬಿಟ್ಟಿದೆ. ಪಕ್ಷಗಳು, ಪ್ರದೇಶಗಳು ಮತ್ತು ಸಿದ್ಧಾಂತಗಳನ್ನು ಮೀರಿ, ಕುಟುಂಬ ಆಡಳಿತವು ಎಷ್ಟು ಆಳವಾಗಿ ಬೇರೂರಿದೆಯೆಂದರೆ, ಅದನ್ನು ಅನೇಕ ಬಾರಿ ಪ್ರಜಾಪ್ರಭುತ್ವದ ಮುಂದುವರಿಕೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಆದಾಗ್ಯೂ, ಬಹುತ್ವ, ಒಳಗೊಳ್ಳುವಿಕೆ ಮತ್ತು ಅರ್ಹತೆಯ ಮೇಲೆ ಅಡಿಪಾಯ ಹಾಕಿದ ಸಾಂವಿಧಾನಿಕ ಗಣರಾಜ್ಯದಲ್ಲಿ, ಅಧಿಕಾರಕ್ಕೆ ಉತ್ತರಾಧಿಕಾರವೇ ದಾರಿಯಾಗುವುದು ಪ್ರಜಾಪ್ರಭುತ್ವದ ಗಂಭೀರ ವೈಫಲ್ಯವನ್ನು ಪ್ರತಿನಿಧಿಸುತ್ತದೆ. ಈ ಕಾಯಿಲೆಯ ಅತ್ಯಂತ ಸ್ಪಷ್ಟ ಸಂಕೇತವಾಗಿ ಕಾಂಗ್ರೆಸ್ ಪಕ್ಷವು ಉಳಿದಿದೆ. ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ನಂತರ ಸೋನಿಯಾ ಗಾಂಧಿಯವರ ಪ್ರಾಬಲ್ಯವಿದ್ದ ಯುಪಿಎ ವರ್ಷಗಳವರೆಗೆ, ರಾಷ್ಟ್ರೀಯ ನಾಯಕತ್ವವು ದಶಕಗಳ ಕಾಲ ಒಂದೇ ಕುಟುಂಬದ ಸುತ್ತ ಸುತ್ತುತ್ತಿತ್ತು. ಇಂದು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ಪಕ್ಷದ ಕೇಂದ್ರಬಿಂದುವಾಗಿರುವುದು ಯಾವುದೇ ಆಂತರಿಕ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕವಲ್ಲ, ಬದಲಾಗಿ ಅವರ ವಂಶಾವಳಿಯ ಮೂಲಕ. ಚುನಾವಣಾ ಅನುಮೋದನೆಯು ಅವರ ಉಪಸ್ಥಿತಿಯನ್ನು ಕಾನೂ...

ಅತಿಯಾದ ಮಾತುಗಾರ ನಮ್ಮ ಗೃಹಮಂತ್ರಿ

 ಮಾತಿನಲ್ಲೇ ಮಂಟಪ ಕಟ್ಟುವ ಪರಮೇಶ್ವರರ ವಾಕ್-ಚಪಲ ಪೊಲೀಸ್ ಇಲಾಖೆ ಸಚಿವರಿಗೆ ಹೇಳಿಮಾಡಿಸಿದ್ದಲ್ಲ. ಅದು ಜನರಲ್ಲಿ ವಿಶ್ವಾಸ ಮೂಡಿಸಬೇಕಾದ ಇಲಾಖೆಯ ಸಚಿವರ ಬಗ್ಗೆ ಹಗುರವಾಗಿ ಜನ ಆಲೋಚಿಸುವಂತೆ ಮಾಡುತ್ತದೆ. ಅಹುದಾದರಹುದೆನ್ನಿ * ಬಿವಿಸೀ ಒಂದು ಸರ್ಕಾರದಲ್ಲಿ ಗೃಹ ಮಂತ್ರಿಯ ಸ್ಥಾನವನ್ನು ನಿರ್ಧರಿಸಲು ಅವರು ಏನು ಮಾತನಾಡುತ್ತಾರೆ ಎನ್ನುವುದು ಆಧಾರವಾಗುವುದಿಲ್ಲ, ಬದಲಾಗಿ ಏನನ್ನು ಮಾತನಾಡುವುದಿಲ್ಲ ಎನ್ನುವುದು ನಿರ್ಣಾಯಕವಾಗುತ್ತದೆ. ಗೃಹ ಸಚಿವರ ಹುದ್ದೆಯಲ್ಲಿರುವವರಿಂದ ಸಂಯಮ, ಸ್ಪಷ್ಟತೆಯನ್ನು ಅಪೇಕ್ಷಿಸಲಾಗುತ್ತದೆ. ಅಷ್ಟೇ ಅಲ್ಲದೆ ಯಾವುದೇ ಅನಿಶ್ಚಿತತೆಯ ಭಾವ ಮೂಡದ ಹಾಗೆ ಸಾರ್ವಜನಿಕರ ನಡುವೆ ಇದ್ದು ಅವರಲ್ಲಿ ಭರವಸೆ ಮೂಡಿಸುವಂತೆ ಇರಬೇಕು ಅವರ ಸ್ವಭಾವ. ರಾಜ್ಯದಲ್ಲಿ ಗೃಹ ಸಚಿವ ಜಿ ಪರಮೇಶ್ವರ ಈ ಸಮತೋಲನವನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ - ಅಗತ್ಯಕ್ಕಿಂತಲೂ ಹೆಚ್ಚು ಮಾತನಾಡುತ್ತಾರೆ, ಪರಿಸ್ಥಿತಿಯು ನಿರೀಕ್ಷಿಸುವುದಕ್ಕಿಂತಲೂ ಕಡಿಮೆ ಸಂಯಮ ತೋರುತ್ತಾರೆ. ಪರಮೇಶ್ವರ್ ಅವರು ಪದೇಪದೇ ತಾವು ದುರ್ಬಲ ಗೃಹ ಸಚಿವರಲ್ಲ ಎಂದು ಹೇಳುತ್ತಲೇ ಇರುವುದುಂಟು. ಹಾಗೆಯೇ ಅವರ ಪರಿಣಾಮಕಾರಿ ಕಾರ್ಯಗಳ ಪಟ್ಟಿಯನ್ನು ಕೊಡುತ್ತಲೇ ಇರುತ್ತಾರೆ. ಆದರೆ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲಿ ಪದೇಪದೇ ತಮ್ಮ ಕೆಲಸ-ಕಾರ್ಯಗಳ ಬಗ್ಗೆ ಸ್ವಪ್ರಚಾರ ಮಾಡಿಕೊಳ್ಳುವ ಮೂಲಕ ಏನನ್ನೂ ಸಾಧಿಸಲಾಗುವುದಿಲ್ಲ. ಇದು ನಿರಂತರವಾದ ಸ್ಥಿರವಾದ ಕ್ರಿಯೆ ಮತ್ತು...

When a Home Minister talks too much

  When silence matters more than sound bites ………….. A home minister is defined not by how often he speaks, but by when he chooses not to. The office demands restraint, clarity, and a steady public presence that reassures citizens without revealing uncertainty. In Karnataka, Home Minister G. Parameshwara has struggled to strike that balance, often speaking more than the moment requires and less than the situation demands. Parameshwara frequently insists that he is not a weak home minister and lists achievements to underline his effectiveness. But authority in matters of law and order is not established through repeated assertions. It is built through consistent action and measured communication. On this front, his public conduct has raised doubts. The Dharmasthala killings exposed this weakness sharply. Instead of controlled, minimal statements, the home minister offered a stream of remarks that were, at times, contradictory. On some occasions, he appeared to accept the seriousness ...

ಫೈರ್ ಬ್ರ್ಯಾಂಡ್‍ನಿಂದ ಮುಖ್ಯಮಂತ್ರಿಯವರೆಗೆ ಸಿದ್ದರಾಮಯ್ಯ ಪಯಣ

 ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ವಿರುದ್ದ ಪ್ರಖರ ಹೋರಾಟಗಾರರಾಗಿದ್ದ ಸಿದ್ದರಾಮಯ್ಯ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾರಥ್ಯ ವಹಿಸಿದ್ದಾರೆ ............ ಅಲವಾದರಲ್ಲವೆನ್ನಿ * ಬಿವಿಸೀ ಭಾರತದ ರಾಜಕಾರಣದಲ್ಲಿ ತಿರುವುಗಳು ಹೆಚ್ಚು, ಆದರೆ ಸಿದ್ದರಾಮಯ್ಯನವರ ರಾಜಕೀಯ ಪಯಣವನ್ನು ಗಮನಿಸಿದರೆ, ಸೈದ್ಧಾಂತಿಕ ಪಲ್ಲಟವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಒಂದು ಕಾಲದಲ್ಲಿ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ವಿರುದ್ದ ಪ್ರಖರ ಹೋರಾಟಗಾರರಾಗಿದ್ದ ಸಿದ್ದರಾಮಯ್ಯ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾರಥ್ಯ ವಹಿಸಿದ್ದಾರೆ. ಒಂದು ಕಾಲದಲ್ಲಿ ಬದ್ಧತೆಯಿಂದ ತಾವೇ ವಿರೋಧಿಸಿದ್ದ ಪಕ್ಷವನ್ನೇ ಇಂದು ಪ್ರತಿನಿಧಿಸುತ್ತಿದ್ದಾರೆ. 1970ರಲ್ಲಿ ಸಿದ್ದರಾಮಯ್ಯ ರಾಮ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣ್ ಅವರಿಂದ ಪ್ರೇರಣೆ ಪಡೆದು ಸಮಾಜವಾದಿ ರಾಜಕೀಯವನ್ನು ಪ್ರವೇಶಿಸಿದರು. 1975ರಲ್ಲಿ ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿ ಈ ಪೀಳಿಗೆಯ ನಾಯಕರಿಗೆ ನಿರ್ಣಾಯಕ ಘಟ್ಟವಾಗಿತ್ತು. ಆಗ ಮೈಸೂರು ವಲಯದ ವಿದ್ಯಾರ್ಥಿ ಹೋರಾಟ ಮತ್ತು ಸಮಾಜವಾದಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ಸಿದ್ದರಾಮಯ್ಯ,  ಸಾರ್ವಜನಿಕ ಸಭೆಗಳ ಭಾಷಣಗಳಲ್ಲಿ ತುರ್ತುಪರಿಸ್ಥಿತಿಯನ್ನು ನೇರವಾಗಿ ಖಂಡಿಸಿದ್ದರು. ಸಾಮೂಹಿಕ ಬಂಧನ, ಪತ್ರಿಕೆಗಳ ಮೇಲಿನ ನಿಬರ್ಂಧ ಮುಂತಾದುವನ್ನು ಖಂಡಿಸಿದ್ದ ಸಿದ್ದರಾಮಯ್ಯ ಇದು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯದ ಹರಣ ಎಂದ...

ಭಾರತದ ಅರಣ್ಯಗಳಿಗೆ ಹೊಸ ನಿಯಮಗಳ ಕಂಟಕ: ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಂಘರ್ಷ

 ಭಾರತದ ಅರಣ್ಯ ಸಂರಕ್ಷಣಾ ಕಾಯ್ದೆಗೆ ತರಲಾದ ಇತ್ತೀಚಿನ ತಿದ್ದುಪಡಿಗಳು ದೇಶದ ನೈಸರ್ಗಿಕ ಸಂಪತ್ತಿನ ಮೇಲೆ ಅಭೂತಪೂರ್ವ ಅಪಾಯವನ್ನು ತಂದೊಡ್ಡಿವೆ. 2026ರ ಈ ಹೊಸ ನಿಯಮಗಳು ಜಾರಿಗೆ ಬಂದಾಗಿನಿಂದ, ಪರಿಸರವಾದಿಗಳು ಮತ್ತು ವಿಜ್ಞಾನಿಗಳು ಭಾರತದ ಪರಿಸರ ಸಮತೋಲನವು ಹದಗೆಡಬಹುದು ಎಂದು ಎಚ್ಚರಿಸುತ್ತಿದ್ದಾರೆ. ಈ ಬದಲಾವಣೆಗಳು ಪ್ರಮುಖವಾಗಿ ಅರಣ್ಯದ ವ್ಯಾಖ್ಯಾನವನ್ನು ಬದಲಿಸಿರುವುದರಿಂದ, ಲಕ್ಷಾಂತರ ಹೆಕ್ಟೇರ್ ಭೂಮಿ ಈಗ ಕಾನೂನು ರಕ್ಷಣೆಯಿಂದ ವಂಚಿತವಾಗಿದೆ. ಈ ಹೊಸ ನಿಯಮದ ಅಡಿಯಲ್ಲಿ, 1996ರ ಸುಪ್ರೀಂ ಕೋರ್ಟ್‍ನ ಐತಿಹಾಸಿಕ ತೀರ್ಪಿನ ನಂತರ `ಅರಣ್ಯ' ಎಂದು ಪರಿಗಣಿಸಲಾಗಿದ್ದ ಅನೇಕ ಪ್ರದೇಶಗಳನ್ನು ಈಗ ಆ ವರ್ಗದಿಂದ ಹೊರಗಿಡಲಾಗಿದೆ. ಕೇವಲ ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ `ಅರಣ್ಯ' ಎಂದು ನಮೂದಾದ ಭೂಮಿಗೆ ಮಾತ್ರ ರಕ್ಷಣೆ ಸಿಗಲಿದೆ. ಇದರರ್ಥ, ದಾಖಲೆಗಳಲ್ಲಿ ಇಲ್ಲದ ಆದರೆ ದಟ್ಟವಾದ ಮರಗಿಡಗಳಿಂದ ಕೂಡಿದ ಸಮುದಾಯ ಕಾಡುಗಳು ಮತ್ತು ಖಾಸಗಿ ಅರಣ್ಯಗಳು ಈಗ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಯೋಜನೆಗಳಿಗೆ ಸುಲಭವಾಗಿ ಲಭ್ಯವಾಗಲಿವೆ. ಇದು ಜೀವವೈವಿಧ್ಯದ ಮೇಲೆ ನೇರವಾದ ಪ್ರಹಾರವಾಗಿದೆ. ಅಂತರಾಷ್ಟ್ರೀಯ ಗಡಿಯಿಂದ 100 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪ್ರದೇಶಗಳಿಗೆ ನೀಡಿರುವ ರಿಯಾಯಿತಿಯು ಮತ್ತೊಂದು ದೊಡ್ಡ ಕಳವಳಕ್ಕೆ ಕಾರಣವಾಗಿದೆ. ಹಿಮಾಲಯದ ಸೂಕ್ಷ್ಮ ಪರಿಸರ ವಲಯಗಳು ಮತ್ತು ಈಶಾನ್ಯ ಭಾರತದ ನಿತ್ಯಹರಿದ್ವರ್ಣ ಕಾಡುಗಳು ಈ ವ್ಯಾಪ್ತಿ...

ಡಿಕೆಶಿ ಮಹತ್ವಾಕಾಂಕ್ಷೆ ಮತ್ತು ಕಾಂಗ್ರೆಸ್ ಬುಡಕ್ಕೆ ಬಿದ್ದ ಬೆಂಕಿ

 ನೇರಾನೇರ * ಬಿವಿಸೀ ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಈಗ ಪಕ್ಷದ ಆಂತರಿಕ ಚರ್ಚೆಗಳನ್ನೂ ಮೀರಿ ಹೋಗಿದ್ದು, ದಿನನಿತ್ಯವೂ ನಡೆಯುತ್ತಿರುವ ಈ ಪ್ರಹಸನಗಳು ರಾಜಕೀಯವಾಗಿ ಹಾನಿಕಾರಕವಾಗಿ ಕಾಣುತ್ತಿದೆ. ಕರ್ನಾಟಕದಲ್ಲಿ ಒಂದು ಸ್ಥಿರ ಸರ್ಕಾರದ ಅವಧಿಯಾಗಬೇಕಿದ್ದ ಸಮಯದಲ್ಲಿ ಒಬ್ಬ ವ್ಯಕ್ತಿಯ ಕುರ್ಚಿ ವ್ಯಾಮೋಹದ ಬಗ್ಗೆ ನಿತ್ಯ ಸುದ್ದಿ ಹರಡುತ್ತಿರುವುದು, ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ನ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದ್ದು, ಪಕ್ಷದಲ್ಲಿ ಶಿಸ್ತು ಕಾಪಾಡುವಂತೆ ಮಾಡುವ ಸಾಮಥ್ರ್ಯವನ್ನೇ ಅದು ಕಳೆದುಕೊಂಡಂತೆ ಕಾಣುತ್ತಿದೆ. ಶಿವಕುಮಾರ್ ಸಾಧಾರಣ ವ್ಯಕ್ತಿಯಲ್ಲ. ಉಪ ಮುಖ್ಯಮಂತ್ರಿಯಾಗಿ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಬೆಂಗಳೂರು ಅಭಿವೃದ್ಧಿ ಮತ್ತು  ರಾಜ್ಯದ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ, ಕೃಷಿ ವಲಯವನ್ನು ನಿರ್ವಹಿಸುವ ಭಾರಿ ನೀರಾವರಿ ಸಚಿವ ಹುದ್ದೆ ಅವರ ಬಳಿ ಇದೆ.  ಬೆಂಗಳೂರಿನಲ್ಲಿ ಕುಸಿಯುತ್ತಿರುವ ಮೂಲ ಸೌಕರ್ಯಗಳು, ಯೋಜನೆಯಲ್ಲಿ ಕಾಣುವ ಗೊಂದಲಗಳು, ಆಳ್ವಿಕೆಯ ಕೊರತೆ ಇವೆಲ್ಲವೂ ತಕ್ಷಣವೇ ಗಮನಹರಿಸಬೇಕಾದ ಅಂಶಗಳಾಗಿವೆ. ಭಾರಿ ನೀರಾವರಿ ಯೋಜನೆಗಳು ಅಷ್ಟೇ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿಳಂಬ, ವಿವಾದ ಮತ್ತು ಬೃಹತ್ ಪ್ರಮಾಣದ ಸಾರ್ವಜನಿಕ ವೆಚ್ಚ ಇಲಾಖೆಯನ್ನು ಬಾಧಿಸುತ್ತಿದೆ. ಆದರೂ ಆಡಳಿತ ಹಳ್ಳಹಿಡಿದಿದ್ದು ರಾಜಕೀಯ ಪ್ರಹಸನಗಳೇ ಕೇಂದ್ರ ಬಿಂ...

When Ambition Overwhelms Governance: The DKS Problem and Congress’s Silence

  The daily spectacle around D. K. Shivakumar’s chief ministerial ambitions has moved well beyond internal party debate and into the realm of political self-harm. What should have been a period of stable governance in Karnataka has instead become a running commentary on one man’s impatience for the gaddi—and a party high command’s inability or unwillingness to impose discipline. Shivakumar is no marginal figure. As deputy chief minister handling crucial portfolios such as Bengaluru Development and Major Irrigation, he is entrusted with responsibilities that directly affect the state’s economic engine and agrarian backbone. Bengaluru’s crumbling infrastructure, planning chaos, and governance deficits alone demand full-time attention. Major irrigation projects are equally fraught, involving delays, disputes, and massive public expenditure. Yet, governance seems to take a back seat as political signalling takes centre stage. The pattern is unmistakable. Statements are issued almost da...

ಕೊಲೆ ಆರೋಪಿಗಳಿಗೆ ಜೈಲಿನ ಸವಲತ್ತುಗಳು ಹಕ್ಕುಗಳಾಗುವುದಿಲ್ಲ

 ಖುಲ್ಲಂಖುಲ್ಲಾ * ಬಿವಿಸೀ ಕನ್ನಡ ಸಿನಿಮಾ ನಟ ದರ್ಶನ್ ಮತ್ತು ಆತನ ಸಂಗಡಿಗರಿಗೆ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ಒದಗಿಸಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು ಸೆರೆಮನೆ, ಅಲ್ಲಿನ ಸವಲತ್ತುಗಳು ಮತ್ತು ಕಾನೂನು ನಿಯಮಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೊರಗೆಡಹಿದೆ. ದರ್ಶನ್ ಬೆಂಬಲಿಗರು ಮತ್ತು ಅವರ ಭಾವನಾತ್ಮಕ ಸಾರ್ವಜನಿಕ ಹೇಳಿಕೆಗಳು ಸದ್ದು ಮಾಡುತ್ತಿದ್ದು, ವಿಚಾರಣಾಧೀನ ಆರೋಪಿಗಳು ಮನೆಯಲ್ಲೇ ತಯಾರು ಮಾಡಿದ ಊಟ, ಖಾಸಗಿ ಹಾಸಿಗೆ ಮತ್ತಿತರ ವೈಯುಕ್ತಿಕ ಸೌಕರ್ಯಗಳಿಗೆ ಕಾನೂನಾತ್ಮಕ ಹಕ್ಕು ಹೊಂದಿರುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಜೈಲು ಅಧಿಕಾರಿಗಳು ಕಾನೂನುಬಾಹಿರವಾಗಿ ಇವುಗಳನ್ನು ನಿರಾಕರಿಸುತ್ತಿದ್ದಾರೆ ಎಂದೂ ಆರೋಪಿಸಲಾಗುತ್ತಿದೆ. ಈ ನಿರೂಪಣೆಯು ದಾರಿ ತಪ್ಪಿಸುವ ತಂತ್ರವಾಗಿದ್ದು ಅಪಾಯಕಾರಿಯಾಗಿದೆ. ಭಾರತದ ಕಾರಾಗೃಹ ಕಾನೂನು ಹಕ್ಕುಗಳು ಮತ್ತು ಸವಲತ್ತುಗಳ ನಡುವೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಕರ್ನಾಟಕ ಸೆರೆಮನೆ ಕಾಯ್ದೆಯಲ್ಲಿ ಜೈಲು ಅಧಿಕಾರಿಗಳು ವಿಚಾರಣಾಧೀನ ಖೈದಿಗಳಿಗೆ ಕೆಲವು ಸೌಕರ್ಯಗಳನ್ನು ಖಾಸಗಿ ಮೂಲಗಳಿಂದ ಪಡೆಯಲು ಅವಕಾಶ ನೀಡುತ್ತದೆ. ಇಲ್ಲಿ ಅನುಮತಿ ಎನ್ನುವ ಪದ ಮುಖ್ಯವಾಗಿ ಕಾರ್ಯಗತವಾಗುತ್ತದೆ. ಇದು ಅಧಿಕಾರಿಗಳ ವಿವೇಚನಾಧಿಕಾರವನ್ನು ಪ್ರತಿನಿಧಿಸುವುದೇ ಹೊರತು, ಆರೋಪಿಗಳ ಹಕ್ಕುಗಳನ್ನಲ್ಲ. ಈ ವಿವೇಚನಾಧ...

PRISON PRIVILEGES ARE NOT RIGHTS: WHY THE DARSHAN JAIL ROW EXPOSES CELEBRITY ENTITLEMENT

  The public uproar over the denial of “special facilities” to Kannada film actor Darshan and his associates has exposed a troubling misconception about prisons, privilege, and the rule of law. The noise — amplified by supporters and emotional public statements — suggests that undertrial prisoners are   legally entitled   to comforts such as home-cooked food, private bedding, or other personal facilities, and that jail authorities are unlawfully denying them. This narrative is not only misleading but dangerous. Indian prison law draws a clear line between  rights  and  privileges . The Karnataka Prisons Act allows prison authorities to  permit  undertrial prisoners to receive certain items from private sources. The operative word is “permit”. It confers discretion, not entitlement. That discretion is further governed by the Karnataka Prisons and Correctional Services Manual, which exists precisely to ensure discipline, uniformity, and equality ins...

ಬಾಂಗ್ಲಾದಲ್ಲಿ ಹಿಂದೂಗಳ ದಮನ: ಇಸ್ಲಾಮಿಕ್ ದೇಶಗಳ ಮೌನವೇಕೆ?

 ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರತಿಪಾದಿಸುವ ಇಸ್ಲಾಮಿಕ್ ದೇಶಗಳು, ಅವರ ನೀತಿಗಳು ಮುಸ್ಲಿಮರು ಬಹುಸಂಖ್ಯಾತರಾಗಿರುವ ಸಮಾಜಗಳಿಗೆ ಏಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕಿದೆ ................ ಇದ್ದುದು ಇದ್ದ ಹಾಗೆ * ಬಿವಿಸೀ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳು ಉಲ್ಬಣಿಸುತ್ತಿದ್ದು, ಹಿಂದೂಗಳನ್ನು ಗುರಿಮಾಡಿ ಕೊಲ್ಲಲಾಗುತ್ತಿದೆ. ದೇವಸ್ಥಾನ ಮತ್ತು ಮನೆಗಳನ್ನೂ ಧ್ವಂಸ ಮಾಡಲಾಗುತ್ತಿದೆ. ಬಲಾತ್ಕಾರದಿಂದ ಸ್ಥಳಾಂತರ ಮಾಡಲಾಗುತ್ತಿದೆ. ಇದು ಹಲವು ವಲಯಗಳಲ್ಲಿ ಆತಂಕ ಸೃಷ್ಟಿಸಿದೆ. ಆದರೂ ಎದ್ದು ಕಾಣುವಂತಹ ಒಂದು ಅಂಶ ಎಂದರೆ ಬಹುತೇಕ ಇಸ್ಲಾಮಿಕ್ ದೇಶಗಳ ಮೌನ. ಬೇರೆ ಸನ್ನಿವೇಶಗಳಲ್ಲಿ ಅಲ್ಪಸಂಖ್ಯಾತ ಹಕ್ಕುಗಳ ಬಗ್ಗೆ ಪ್ರಖರವಾಗಿ ದೊಡ್ಡ ದನಿಯಲ್ಲಿ ಹುಯಿಲೆಬ್ಬಿಸುವ, ವಿಶೇಷವಾಗಿ ಭಾರತದ ಸಂದರ್ಭದಲ್ಲಿ ಗಟ್ಟಿ ದನಿಯಲ್ಲಿ ಮಾತನಾಡುವ, ಎಚ್ಚರಿಕೆ ನೀಡುವ, ಈ ದೇಶಗಳ ಹಿಂದೂ ದಮನ ಬಗ್ಗೆ ಮೌನ ಅಚ್ಚರಿದಾಯಕವಾಗಿದೆ. ಟರ್ಕಿ, ಪಾಕಿಸ್ತಾನ, ಮಲೇಷಿಯಾ ಮತ್ತು ಸೌದಿ ಅರೇಬಿಯಾ ದೇಶಗಳು ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುವ ದಾಳಿಗಳನ್ನು ವಿರೋಧಿಸಿ, ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿರುತ್ತವೆ, ನಿರ್ಣಯಗಳನ್ನು ಅನುಮೋದಿಸುತ್ತಿರುತ್ತವೆ, ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಕ್ರೋಢೀಕರಿಸುತ್ತಿರುತ್ತವೆ. ಈ ಘಟನೆಗಳು ಸ್ಥಳೀಯ ಸ್ವರೂಪದ್ದಾದರೂ, ತನಿಖೆಗೆ ಒಳಗಾಗಿದ್ದರೂ ಸಹ ಈ ಪ್ರತಿಕ್ರಿ...

Silence of Islamic countries on the persecution and targeted killings of Hindus in Bangladesh

  The growing violence against Hindus in Bangladesh, including targeted killings, attacks on homes and temples, and forced displacement, has raised concern in many quarters. Yet what stands out even more sharply than the violence itself is the   near-complete silence of Islamic countries   that otherwise speak loudly and frequently on minority rights—especially when the subject is Muslims in India. Countries such as Turkey, Pakistan, Malaysia, and Saudi Arabia regularly issue statements, pass resolutions, and mobilise international opinion over incidents involving Muslims in India, even when those incidents are localised or still under investigation. However, when Hindus in Bangladesh face sustained intimidation and killings, or when minorities in Pakistan live under constant fear of blasphemy laws and mob violence, these same governments have little to say. This silence is not accidental. It reflects a clear double standard, where concern for minorities is guided not by ...

ಚುನಾಯಿತ ಅಧಿಕಾರವೇ ಸಾರ್ವಜನಿಕ ಬೆದರಿಕೆಯ ಕೇಂದ್ರ

 ಪ್ರಚಲಿತ * ಬಿವಿಸೀ ಚುನಾಯಿತ ಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳನ್ನು ಬೆದರಿಸುವುದು ಆಘಾತಕಾರಿ ಬೆಳವಣಿಗೆ. ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಶಿಡ್ಲಘಟ್ಟದ ಶಾಸಕ ರಾಜೀವ್ ಗೌಡ, ಪುರಸಭೆಯ ಹಿರಿಯ ಮಹಿಳಾ ಅಧಿಕಾರಿಯೊಬ್ಬರಿಗೆ ಬೆದರಿಕೆ ಒಡ್ಡಿರುವುದು ವರದಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಪುರಸಭೆ ಆಯುಕ್ತರಿಗೆ ಬೆದರಿಕೆ ಒಡ್ಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೇನೂ ಅಲ್ಲಲ್ಲಿ ನಡೆಯುವ ವಿರಳ ಘಟನೆಗಳಲ್ಲ. ಚುನಾಯಿತ ಪ್ರತಿನಿಧಿಗಳಲ್ಲಿ ಕಾನೂನು ವಿರೋಧಿ ಸಂಸ್ಕøತಿ ಬೆಳೆಯುತ್ತಿರುವುದರ ಸಂಕೇತ. ಈ ಬೆದರಿಕೆಗಳು ಸದಾ ಕಾಲವೂ ಅಧಿಕಾರಿಗಳನ್ನು ಕ್ರಮ ಕೈಗೊಳ್ಳುವಂತೆ ಬಲಾತ್ಕಾರ ಮಾಡುವಂತಿರುವುದಿಲ್ಲ. ಒಮ್ಮೊಮ್ಮೆ ಇದು ಕೇವಲ ಪ್ರತಿನಿಧಿಗಳ ಶಕ್ತಿ ಪ್ರದರ್ಶನವಾಗಿರುತ್ತದೆ. ಈ ಘಟನೆಗಳು ನೀಡುವ ಸ್ಪಷ್ಟ ಸಂದೇಶವೆಂದರೆ, ಶಾಸಕರು ಅಧಿಕಾರಿಗಳನ್ನು ಬೆದರಿಸಬಹುದು; ಆದರೂ ಅವರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು. ಇದು ಆಳ್ವಿಕೆ ಎನಿಸಿಕೊಳ್ಳುವುದಿಲ್ಲ. ಸಾರ್ವಜನಿಕವಾಗಿ ಬೆದರಿಸುವ ಒಂದು ಕ್ರಿಯೆಯಾಗಿ ಕಾಣುತ್ತದೆ. ಈ ಪ್ರಕರಣಗಳಿಗೆ ವ್ಯಕ್ತವಾಗುವ ಪ್ರತಿಕ್ರಿಯೆಗಳು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುತ್ತದೆ. ಶಿಡ್ಲಘಟ್ಟ ಪ್ರಕರಣದಲ್ಲಿ ಸಿಬ್ಬಂದಿಗಳ ಪ್ರತಿಭಟನೆ ನಡೆದಿದ್ದು, ಪಕ್ಷದ ವತಿಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಪುತ್ತೂರು ಪ್ರಕರಣದಲ್ಲಿ ವಿಡಿಯೋ ಸಾಕ್ಷಿ ಇದ್ದಾಗ್ಯೂ ಸಹ ...

LAWLESS BY MANDATE: WHEN ELECTED POWER TURNS INTO PUBLIC BULLYING

  It is alarming when elected representatives openly threaten government officials. The recent incidents involving   Shidlaghatta MLA Rajiv Gowda , accused of threatening a senior woman officer of a municipal corporation, and   Puttur MLA Ashok Rai , whose video threatening the town municipal commissioner went viral, are not stray events. They point to a   growing culture of lawlessness among elected politicians . These threats are not always meant to force officials to act. Often, they are meant to  display power . The message is simple: an MLA can intimidate officials and face no consequence. This is not governance. It is intimidation performed in public. The response to these cases exposes the problem further. The Shidlaghatta episode led to staff protests and a show-cause notice. The Puttur case, despite video evidence, drew far less censure and no prompt party action. This uneven response tells officials that  accountability depends on political conven...

ಭಾರತದ ಮಾಹಿತಿ ಹಕ್ಕು ಯುಗ ಅಂತ್ಯ

 ಪತ್ರಕರ್ತನಾಗಿ ನನ್ನದೇ ಅನುಭವದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಯ ದುರವಸ್ಥೆಯನ್ನು ಕಂಡಿದ್ದೇನೆ. ............... ನೇರಾನೇರ * ಬಿವಿಸೀ ಇಪ್ಪತ್ತು ವರ್ಷಗಳ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಜಾರಿಯಾದಾಗ, ಅದನ್ನು ಸಾಧಾರಣ ಪ್ರಜೆಗಳ ಕೈಗೆ ನೀಡಿದ ಒಂದು ಬಲಿಷ್ಠವಾದ ಅಸ್ತ್ರ ಮತ್ತು ಪ್ರಜಾಪ್ರಭುತ್ವದ ನಿರ್ಣಾಯಕ ಹಂತ ಎಂದು ಪರಿಗಣಿಸಲಾಗಿತ್ತು. ಇಂದು ಈ ಕಾಯ್ದೆ ಕೇವಲ ತನ್ನ ರೂಪದಲ್ಲಿ ಮಾತ್ರ ಉಳಿದಿದ್ದು ಇದೀಗ ಸತ್ವ ಕಳೆದುಕೊಂಡಿದೆ. ಮೂಲ ಭರವಸೆಯ ಸ್ಥಾನವನ್ನು ಆಕ್ರಮಿಸಿರುವುದು ದುರ್ಬಲವಾದ ಒಂದು ಕಾನೂನು. ಇದು ಇನ್ನೂ ಪ್ರಸ್ತುತವಾಗಿರುವುದಕ್ಕೆ ಕಾರಣ ಜಾಗೃತಿ ಅಭಿಯಾನಗಳು ಮತ್ತು ಅಧಿಕೃತ ಸಮರ್ಥನೆಗಳು. ಆದರೆ ಈ ಕ್ರಮಗಳು ವಾಸ್ತವಕ್ಕೆ ದೂರವಾಗಿವೆ. ಕರ್ನಾಟಕದ ಆರ್‍ಟಿಐ ಆಯುಕ್ತರು ವಿವಿಧ ಜಿಲ್ಲೆಗಳಲ್ಲಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಆರ್‍ಟಿಐ ಕಾಯ್ದೆಯನ್ನು ನಾಗರಿಕರಿಗೆ ಮಾಹಿತಿಗಳನ್ನು ಪಡೆದುಕೊಳ್ಳಲು ಮತ್ತು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಲು ಇರುವ ಒಂದು ಪರಿಣಾಮಕಾರಿ ಸಾಧನ ಎಂದು ಬಣ್ಣಿಸುತ್ತಾರೆ. ಆದರೆ ಈ ಕಾರ್ಯಕ್ರಮಗಳು ಕಾಟಾಚಾರಕ್ಕೆಂಬತೆ ಕೇವಲ ಶೋಗಳಾಗಿವೆ. ಕಾಯ್ದೆಯನ್ನು ಅನುಷ್ಠಾನಗೊಳಿಸದೆ ಜಾಗೃತಿ ಮೂಡಿಸುವುದು ಅರ್ಥಹೀನ. ನಾಗರಿಕರಿಗೆ ಆರ್‍ಟಿಐ ಕಾಯ್ದೆಯ ಬಗ್ಗೆ ಅರಿವು ಇಲ್ಲದೆ ಏನಿಲ್ಲ. ಆದರೆ ಸರ್ಕಾರಗಳಿಂದ ಆರ್...