Posts

Showing posts from February, 2026

ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆ: ರಾಜಕೀಯ ಲೆಕ್ಕಾಚಾರ ಉಲ್ಟಾ ಹೊಡೆದಿದ್ದೇಕೆ ?

 ಪ್ರಚಲಿತ  * ಬಿವಿಸೀ ನರೇಂದ್ರ ಮೋದಿ ಸರ್ಕಾರವು ರಾಹುಲ್ ಗಾಂಧಿ ವಿರುದ್ಧ ಉದ್ದೇಶಿತ ಹಕ್ಕುಚ್ಯುತಿ ನಿರ್ಣಯದಿಂದ ಹಿಂದೆ ಸರಿದಿರುವುದು ಕೇವಲ ಸೌಜನ್ಯದ ಕಾರಣಕ್ಕಲ್ಲ, ಬದಲಾಗಿ ಬದಲಾದ ರಾಜಕೀಯ ಪರಿಸ್ಥಿತಿಯ ಒತ್ತಡದಿಂದ ಎಂಬುದು ಸ್ಪಷ್ಟವಾಗಿದೆ. ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭಾರತದ ಒಪ್ಪಂದಗಳು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತಿವೆ ಎಂದು ಸಂಸತ್ತಿನಲ್ಲಿ ರಾಹುಲ್ ಮಾಡಿದ ಗಂಭೀರ ಆರೋಪಗಳು ಕೇವಲ ವಿರೋಧ ಪಕ್ಷದ ಸಾಮಾನ್ಯ ಟೀಕೆಯಾಗಿ ಉಳಿಯದೆ, ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವೊದಗಿಸಿವೆ. ಅವರು ಈ ವಿಷಯವನ್ನು ಅತ್ಯಂತ ಭಾವನಾತ್ಮಕವಾಗಿ ಮತ್ತು ಅಷ್ಟೇ ದೃಢವಾಗಿ ಮಂಡಿಸಿದ್ದು, ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳನ್ನೇ ಪ್ರತಿಧ್ವನಿಸಿದಂತೆ ಭಾಸವಾಯಿತು. ಅನಿಶ್ಚಿತ ಮತ್ತು ವ್ಯವಹಾರಿಕ ಮನೋಭಾವದ ನಾಯಕರೊಂದಿಗೆ ನಡೆಯುವ ಪಾರದರ್ಶಕವಲ್ಲದ ಒಪ್ಪಂದಗಳು ಭಾರತಕ್ಕೆ ಅಪಾಯ ತರಬಹುದು ಎಂಬ ಅವರ ಮಾತುಗಳು ಜನರಿಗೆ ತಲುಪಿದವು. ಕಳೆದ ಹಲವು ವರ್ಷಗಳಿಂದ ಮೋದಿ ಸರ್ಕಾರವು `ಆತ್ಮನಿರ್ಭರತೆ'ಯನ್ನು ಸಾರ್ವಭೌಮತ್ವ ಮತ್ತು ಆಯಕಟ್ಟಿನ ಸ್ವಾತಂತ್ರ‍್ಯದ ಸಂಕೇತವಾಗಿ ಬಿಂಬಿಸುತ್ತಾ ಬಂದಿದೆ. ಇಂತಹ ಸನ್ನಿವೇಶದಲ್ಲಿ, ವ್ಯಾಪಾರ ಒಪ್ಪಂದಗಳ ವಿಷಯದಲ್ಲಿ ಭಾರತವು ಪರಕೀಯ ಒತ್ತಡಕ್ಕೆ ಮಣಿಯುತ್ತಿದೆ ಎಂಬ ಸಣ್ಣ ಸಂಶಯವೂ ರಾಜಕೀಯವಾಗಿ ಸರ್ಕಾರಕ್ಕೆ ಮುಜುಗರ ತರುವಂಥದ್ದಾಗಿತ್ತು. ರಾಹುಲ್ ಗಾಂಧಿ ಈ ಸಂಶಯವನ್ನೇ ಒಂದು ನೇರ ರಾ...

Congress risks self-destruction in Karnataka power tussle

  A forced transition could split the ruling party   The Congress in Karnataka is drifting toward a dangerous flashpoint. What began as routine leadership speculation has now hardened into open signalling, mobilisation, and counter-mobilisation. If the party high command ultimately decides in favour of D.K. Shivakumar replacing Siddaramaiah, the consequences may be far more destabilising than Delhi anticipates. Siddaramaiah is not merely an incumbent Chief Minister; he is presently the balancing force within a complex coalition of castes, regions and party factions. His administrative grip, budget management and welfare narrative have given the government a measure of stability. More importantly, he is widely perceived to enjoy the confidence of a majority of Congress MLAs. That legislative backing cannot be brushed aside as a minor detail. If the high command overrides this ground reality and installs Shivakumar, the immediate fallout could be severe. Siddaramaiah’s camp...

ರಾಜ್ಯದಲ್ಲಿ ಅಧಿಕಾರಕ್ಕಾಗಿ ಸೆಣಸಾಟ: ಕಾಂಗ್ರೆಸ್ ಪಾಲಿಗೆ ಇದು ಸ್ವಯಂ ವಿನಾಶದ ಹಾದಿಯೇ?

 ಬಿವಿಸೀ ಕರ್ನಾಟಕ ಕಾಂಗ್ರೆಸ್‍ನಲ್ಲಿ ನಾಯಕತ್ವದ ಬದಲಾವಣೆಯ ಕುರಿತಾದ ಚರ್ಚೆಗಳು ಈಗ ಕೇವಲ ಸಾಮಾನ್ಯ ಊಹಾಪೆÇೀಹಗಳಾಗಿ ಉಳಿಯದೆ, ಆಡಳಿತ ಪಕ್ಷವನ್ನು ಒಂದು ಅಪಾಯಕಾರಿ ಹಂತಕ್ಕೆ ತಂದು ನಿಲ್ಲಿಸಿವೆ. ಒಂದು ವೇಳೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಬದಲಿಗೆ ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ನಿರ್ಧರಿಸಿದರೆ, ಅದರ ಪರಿಣಾಮಗಳು ದೆಹಲಿ ನಾಯಕರು ಅಂದಾಜಿಸಿರುವುದಕ್ಕಿಂತಲೂ ಹೆಚ್ಚು ಭೀಕರವಾಗಿರಲಿವೆ. ಸಿದ್ದರಾಮಯ್ಯ ಅವರು ಕೇವಲ ಅಧಿಕಾರದಲ್ಲಿರುವ ಮುಖ್ಯಮಂತ್ರಿಯಲ್ಲ, ಬದಲಿಗೆ ರಾಜ್ಯದ ಸಂಕೀರ್ಣ ಜಾತಿ ಸಮೀಕರಣಗಳು, ವಿವಿಧ ಪ್ರಾದೇಶಿಕ ಹಿತಾಸಕ್ತಿಗಳು ಮತ್ತು ಪಕ್ಷದೊಳಗಿನ ಭಿನ್ನ ಬಣಗಳನ್ನು ಸಮತೋಲನದಲ್ಲಿಟ್ಟಿರುವ ಪ್ರಬಲ ಶಕ್ತಿಯಾಗಿದ್ದಾರೆ. ಅವರ ಆಡಳಿತಾತ್ಮಕ ಹಿಡಿತ, ಆಯವ್ಯಯ ನಿರ್ವಹಣೆ ಮತ್ತು ಜನಕಲ್ಯಾಣ ಯೋಜನೆಗಳ ನಿರೂಪಣೆಯು ಸರ್ಕಾರಕ್ಕೆ ಒಂದು ಭದ್ರವಾದ ಅಡಿಪಾಯವನ್ನು ಒದಗಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಬಹುಪಾಲು ಶಾಸಕರ ಬೆಂಬಲ ಸಿದ್ದರಾಮಯ್ಯ ಅವರ ಪರವಾಗಿರುವುದು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ. ಒಂದು ವೇಳೆ ಹೈಕಮಾಂಡ್ ಈ ವಾಸ್ತವವನ್ನು ಕಡೆಗಣಿಸಿ ಶಿವಕುಮಾರ್ ಅವರನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದರೆ, ಅದರ ತಕ್ಷಣದ ಫಲಿತಾಂಶವು ಪಕ್ಷದ ಒಗ್ಗಟ್ಟಿನ ಮೇಲೆ ತೀವ್ರವಾದ ಪೆಟ್ಟು ನೀಡಬಹುದು. ಸಿದ್ದರಾಮಯ್ಯ ಅವರ ಬಣವು ಈಗಾಗಲೇ ಇಂತಹ ಬದಲಾವಣೆಯ ವಿರುದ್ಧ ಪ್ರತಿರೋಧದ ಮುನ್ಸೂಚನೆಗಳನ್ನು ನೀಡುತ್ತಿದೆ. ...

ಆತ್ಮನಿರ್ಭರತೆಯನ್ನು ಅವುಡುಗಚ್ಚಿಕೊಂಡು ಅಮೆರಿಕಕ್ಕೆ ಶರಣಾದ ಮೋದಿ

 ರಾಜನೀತಿ * ಬಿವಿಸೀ ಭಾರತದ ಕಚ್ಚಾತೈಲ ಖರೀದಿ ಮತ್ತು ಆಮದು ನೀತಿಯ ಸುತ್ತ ಸೃಷ್ಟಿಯಾಗುತ್ತಿರುವ ಚಿತ್ರಣ ಕೆಲವು ಅಹಿತಕರ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ಕಳೆದ ಕೆಲವು ವರ್ಷಗಳಿಂದ ಮೋದಿ ಸರ್ಕಾರವು ಪಶ್ಚಿಮ ರಾಷ್ಟ್ರಗಳ ಒತ್ತಡ ತಂತ್ರಗಳಿಗೆ ಪ್ರತಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದು, ಜಾಗತಿಕ ಖಂಡನೆಯ ಹೊರತಾಗಿಯೂ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಲೇ ಇದೆ. ಈ ಧೋರಣೆಯನ್ನು ಆಂತರಿಕವಾಗಿ ಕಾರ್ಯತಂತ್ರದ ಸ್ವಾಯತ್ತತೆ ಎಂದೇ ಬಣ್ಣಿಸಲಾಗುತ್ತಿತ್ತು. ಭಾರತ ಮೊದಲು, ಆನಂತರ ಮೈತ್ರಿ ಎನ್ನುವ ಧೋರಣೆ ಅಲ್ಲಿ ಕಾಣಬಹುದಿತ್ತು. ಈಗ ವರದಿಗಳನ್ನು ಗಮನಿಸಿದರೆ, ನಮ್ಮ ರಿಫೈನರಿಗಳಿಗೆ ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಕಡಿಮೆ ಮಾಡಲು ನಿರ್ದೇಶನಗಳನ್ನು ಭಾರತ ಸರಕಾರ ನೀಡುತ್ತಿದೆ ಎನ್ನಲಾಗಿದೆ. ಅಮೆರಿಕ ಮತ್ತು ವೆನೆಜುವೆಲಾದಿಂದ ತೈಲ ಖರೀದಿಸುವಂತೆ ಆದೇಶಿಸಲಾಗುತ್ತಿದೆ. ಇದು ಡೊನಾಲ್ಡ್ ಟ್ರಂಪ್ ಅವರ ದೀರ್ಘ ಕಾಲದ ದುರಾಗ್ರಹಕ್ಕೆ ಪೂರಕವಾಗಿ ಕಾಣುತ್ತದೆ. ಇದು ಕೇವಲ ವಾಣಿಜ್ಯ ಒಪ್ಪಂದದ ಹೊಂದಾಣಿಕೆಯಾಗಿದ್ದಲ್ಲಿ ಸರ್ಕಾರ ಇದನ್ನು ಸ್ಪಷ್ಟವಾಗಿ ಹೇಳಬೇಕು. ಅಥವಾ ಇದು ವಿಶಾಲ ವ್ಯಾಪಾರ ಒಪ್ಪಂದದ ಚೌಕಾಸಿಯ ಭಾಗವಾಗಿದ್ದರೆ, ದೇಶದ ಜನತೆ ಪಾರದರ್ಶಕತೆಯನ್ನು ಅಪೇಕ್ಷಿಸುತ್ತಾರೆ. ಮೌನವಾಗಿದ್ದಷ್ಟೂ ಅನುಮಾನಗಳು ಹೆಚ್ಚಾಗುತ್ತವೆ. ಬದಲಾವಣೆಯಾಗಿರುವುದು ಏನು? ಕೇಂದ್ರ ಸರ್ಕಾರ ಒತ್ತಡವನ್ನು ತಡೆದುಕೊಂಡಿದೆ. ಇಂದು ಯಾವು...

Energy Sovereignty or Strategic Surrender?

  The emerging clarity around India’s crude oil decisions raises uncomfortable questions. For years, the Modi government projected defiance in the face of Western pressure, continuing discounted Russian oil purchases despite global criticism. That posture was sold domestically as strategic autonomy — India first, alliances later. Now, reports indicate instructions to refiners to scale down Russian crude and increase purchases from the United States and Venezuela — a shift that aligns neatly with President Trump’s long-stated demands. If this is purely a commercial recalibration, the government must say so clearly. If it is part of a broader trade bargain, the country deserves transparency. Silence invites suspicion. What changed? Earlier, New Delhi withstood pressure. Today, it appears to have adjusted course without explanation. Energy security is not a minor procurement issue; it is a cornerstone of foreign policy and economic stability. When a long-standing supplier is quietly s...

Secrecy as state policy: why the Modi government fears disclosure

  A troubling impression is gaining ground across the country: the NDA government at the Centre is deliberately withholding vital information from citizens on matters that directly affect livelihoods, national security, and public trust. The unfolding controversy over the India–US trade deal has brought this concern into sharp focus. Commerce Minister Piyush Goyal assured farmers that their interests were fully protected. Yet the United States soon disclosed the deal’s terms, revealing free market access for certain American cereals in India. This contradiction is not technical; it goes to the heart of credibility. When disclosures emerge from Washington instead of New Delhi, anger among farmers is inevitable. Congress president Mallikarjun Kharge’s charge of a “stab in the back” resonates because the facts lend it weight. The pattern extends beyond trade. Russia has openly accused the U.S. of pressuring India to curb Russian oil purchases—an issue the Modi government never acknowl...

Trump claimed India surrendered on Russian oil—and Modi let it stand

  Donald Trump’s claim that India agreed to stop buying Russian oil and switch to American supplies was not a casual boast. It was a deliberate assertion of dominance. What followed exposed a deeper weakness: India chose silence. New Delhi never formally accepted such a condition. Yet when Trump went public, the government failed to rebut him with clarity or conviction. A later, procedural clarification satisfied the record but not the world. In global politics, what is not denied loudly is assumed to be true. By staying quiet, India allowed Trump to define the outcome—and the hierarchy. Russian oil purchases were more than an economic choice. They had become India’s most visible assertion of strategic autonomy after the Ukraine war, signalling that New Delhi could resist Western pressure. Trump’s statement punctured that image in one stroke. The damage was immediate and broad: to India’s credibility with Russia, to its standing in the Global South, and to Modi’s carefully cultivat...

ಮಾಹಿತಿ ಬಹಿರಂಗಪಡಿಸಲು ಮೋದಿ ಸರ್ಕಾರಕ್ಕೆ ಏಕೆ ಭಯ?

 ದೇಶದ ಸಾರ್ವಜನಿಕ ಚರ್ಚೆಗಳಲ್ಲಿ ಒಂದು ಆತಂಕಕಾರಿ ಭಾವನೆ ಮಡುಗಟ್ಟುತ್ತಿದೆ. ಕೇಂದ್ರ ಎನ್‍ಡಿಎ ಸರ್ಕಾರವು ಉದ್ದೇಶಪೂರ್ವಕವಾಗಿ ನಾಗರಿಕರಿಂದ ಮಾಹಿತಿಯನ್ನು ಮುಚ್ಚಿಡುತ್ತಿದ್ದು, ಜನಸಾಮಾನ್ಯರ ಜೀವನವನ್ನು ಪ್ರಭಾವಿಸುವ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಾಗೂ ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಡೆಹಿಡಿಯುತ್ತಿರುವುದು ಈ ಕಳವಳಕ್ಕೆ ಕಾರಣವಾಗಿದೆ. ಭಾರತ-ಅಮೆರಿಕಾದ ನಡುವೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದದ ಬಗ್ಗೆ ಈ ಕಳಕಳಿಯನ್ನೇ ಉದಾಹರಣೆಯಾಗಿ ನೋಡಿ. ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರೈತರಿಗೆ ಅವರ ಹಿತಾಸಕ್ತಿಯನ್ನು ಕಾಪಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದಾಗ್ಯೂ ಅಮೆರಿಕ ಕೂಡಲೇ ಒಪ್ಪಂದದ ನಿಯಮಗಳನ್ನು ಬಹಿರಂಗಪಡಿಸಿದ್ದು, ಅಮೆರಿಕದ ಕೆಲವು ಧಾನ್ಯಗಳಿಗೆ ಭಾರತೀಯ ಮಾರುಕಟ್ಟೆಗೆ ಮುಕ್ತ ಸಂಪರ್ಕ ಕಲ್ಪಿಸಿರುವುದು ಸ್ಪಷ್ಟವಾಗಿದೆ. ಈ ವಿರೋಧಾಭಾಸವು ತಾಂತ್ರಿಕವಲ್ಲ. ಸರ್ಕಾರದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಹುದು. ಭಾರತದ ಬದಲು ಅಮೆರಿಕದಿಂದ ಈ ರೀತಿ ಮಾಹಿತಿ ಬಹಿರಂಗಗೊಳ್ಳುವುದು ರೈತರ ಆಕ್ರೋಶಕ್ಕೆ ಕಾರಣವಾಗಿರುವುದು ಸಹಜವೇ ಆಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ``ದೇಶದ ಜನರಿಗೆ ಮೋದಿ ಸರಕಾರ ಬೆನ್ನಿಗೆ ಚೂರಿ'' ಹಾಕಿದ ಆರೋಪ ಪ್ರತಿಧ್ವನಿಸುತ್ತಿದ್ದು, ರೈತರ ದನಿಗೆ ದನಿಗೂಡಿಸುತ್ತದೆ. ಈ ಮಾದರಿಯನ್ನು ವ್ಯಾಪಾರ ವ್ಯವಹಾರಗಳಿಂದಾಚೆಗೂ ಗಮನಿಸಬಹುದು. ಅಮೆರಿಕ ಭಾರತದ ಮೇ...

ಸೋಪ್ ಜಾಹೀರಾತಿಗಿಳಿದ ಸಚಿವರು

 ಬಿವಿಸೀ ನಮ್ಮ ಸಚಿವರು ಸೋಪ್ ಜಾಹೀರಾತಿನಲ್ಲಿ ಸ್ಟಾರ್ ಜತೆ ಭುಜ ಹೊಸೆದಿರುವುದು ಹೊಸ ವಿದ್ಯಮಾನ. ಸ್ವಪ್ರಚಾರ ಇಲ್ಲಿಯವರೆಗೆ ಬಂದು ನಿಂತಿದೆ! ಮೈಸೂರು ಸ್ಯಾಂಡಲ್ ಸೋಪ್‍ನ ಮುಖಪುಟದ ಜಾಹೀರಾತಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರ ಭಾವಚಿತ್ರ ಇರುವುದು ನೋಡಿದರೆ ಯಾರಿಗಾದರೂ ಅಚ್ಚರಿಯಾಗದೇ ಇರದು. ಒಂದು ವಿಧವಾಗಿ ಯಾವುದೇ ಸಂದರ್ಭದಲ್ಲಾದರೂ ಇದು ಪ್ರಶ್ನಾರ್ಹವೇ ಆಗುತ್ತದೆ. ಪ್ರಸ್ತುತ ಸನ್ನಿವೇಶಗಳಲ್ಲಿ ಇದು ಅಸಮರ್ಥನೀಯ ಕೂಡ. ಮೈಸೂರು ಸ್ಯಾಂಡಲ್ ಸರ್ಕಾರಿ ಒಡೆತನದ ಒಂದು ವಾಣಿಜ್ಯ ಉತ್ಪನ್ನವೇ ಹೊರತು ಸರ್ಕಾರದ ಕಲ್ಯಾಣ ಯೋಜನೆಯಲ್ಲ ಅಥವಾ ಅಧಿಕೃತ ವಿವರಣೆ ಅಪೇಕ್ಷಿಸುವ ಸಾರ್ವಜನಿಕ ಸೇವೆಯೂ ಅಲ್ಲ.  ಮಾರಾಟವನ್ನು ಹೆಚ್ಚಿಸುವುದೇ ಉದ್ದೇಶವಾಗಿದ್ದಲ್ಲಿ, ಜಾಹೀರಾತಿನ ಹಿಂದಿನ ತರ್ಕವನ್ನು ನೇರವಾಗಿ ಹೀಗೆ ಹೇಳಬಹುದು.  ಉತ್ಪನ್ನ ಮತ್ತು ಬ್ರಾಂಡ್ ಪರಂಪರೆ ಹಾಗೂ ನಿಯೋಜಿಸಲ್ಪಡುವ ಸೆಲೆಬ್ರಿಟಿ ಉತ್ಪನ್ನದ ರಾಯಭಾರಿಗಳಾಗುತ್ತಾರೆ. ಅಷ್ಟೇ ಸಾಕಾಗಿತ್ತು. ಆದರೆ ಜಾಹೀರಾತಿನಲ್ಲಿ ಸಚಿವರನ್ನು ಒಳಗೊಳ್ಳುವುದರಿಂದ ವಾಣಿಜ್ಯ ಮೌಲ್ಯವೇನೂ ಹೆಚ್ಚಾಗುವುದಿಲ್ಲ. ಬದಲಾಗಿ ಉತ್ಪನ್ನದ ಉತ್ತೇಜನವನ್ನು ರಾಜಕೀಯ ಅಸ್ತಿತ್ವದ ಪ್ರದರ್ಶನವನ್ನಾಗಿ ಮಾಡುತ್ತದೆ. ಇದಕ್ಕಾಗಿ ತೆರಿಗೆದಾರರ ಹಣವನ್ನು ಬಳಸಲಾಗುತ್ತದೆ. ಈ ಜಾಹೀರಾತು ಪ್ರಕಟವಾಗಿರುವ ಸಮಯವೂ ಸಹ ವಿಷಯವನ್ನು ಜಟಿಲಗೊಳಿಸುತ್ತದೆ. ಸರ್ಕಾರದ ಸೋಪ್ ಕಾರ್ಖಾನೆ ಈಗಾ...

When ministers sell soap, governance loses its shine

  A front-page advertisement for Mysore Sandal Soap featuring the Chief Minister, Deputy Chief Minister and the Industries Minister would have been questionable at any time. In the present circumstances, it is simply indefensible. Mysore Sandal is a government-owned commercial product, not a welfare scheme and not a public service that demands official explanation. If the aim was to boost sales, the logic of advertising is straightforward: product, brand legacy and the hired film celebrity as brand ambassador. That should have been enough. The inclusion of ministers adds no commercial value whatsoever. Instead, it muddies the message and turns a product promotion into a display of political presence, funded by the taxpayer. The timing makes matters worse. The government soap factory is already facing allegations of financial mismanagement and excessive political interference. Opposition parties have argued that professional autonomy has been compromised by political control. In suc...

Dharmasthala case: political certainty meets judicial reality

  When public anger over the Soujanya rape and murder refused to fade, Karnataka’s Home Minister G Parameshwara chose personal wish  over facts. He declared the case a “closed chapter,” insisting there was no scope for reopening it. Deputy Chief Minister D K Shivakumar went a step further. In his characteristic bluntness, he dismissed allegations against the powerful Dharmasthala establishment as `shadyantra', effectively taking sides with the temple’s administrators. Those statements were not casual remarks; they shaped the State’s posture of denial for years. The Karnataka High Court’s recent order has now rendered those political certainties untenable. By seeking full details of seventy-four unnatural death cases including that of Soujanya, recorded over two decades in and around Dharmasthala, the court has made it clear that closure declared by politicians carries no legal sanctity. More significantly, the court has revived a question the government deliberately buried: co...

ತಾನೊಂದು ಬಗೆದರೆ, ದೈವ ಬಗೆದಿದ್ದೇ ಬೇರೆ!

 ತಮ್ಮ ಪ್ರಮಾದಗಳನ್ನು ಕಷ್ಟಪಟ್ಟು ನುಂಗಿಕೊಳ್ಳಬೇಕಾದ ಡಿಸಿಎಂ ಡಿಕೆಶಿ ಮತ್ತು ಗೃಹಮಂತ್ರಿ ಪರಮೇಶ್ವರ ಪ್ರಚಲಿತ * ಬಿವಿಸೀ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸುತ್ತ ಸಾರ್ವಜನಿಕರ ಆಕ್ರೋಶ ಕಡಿಮೆಯಾಗದೆ ಇದ್ದರೂ ಸಹ ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ್ ವಾಸ್ತವತೆಗಳಿಗಿಂತಲೂ ವೈಯುಕ್ತಿಕ ಅಪೇಕ್ಷೆಗಳಿಗೆ ಮೊರೆ ಹೋಗಿದ್ದಾರೆ. `ಸೌಜನ್ಯಗೆ ನ್ಯಾಯ' ಆಂದೋಳನ ತೀವ್ರವಾಗಿರುವಾಗಲೇ  ``ಸೌಜನ್ಯ ಪ್ರಕರಣವು ಮುಗಿದ ಅಧ್ಯಾಯ'' ಎಂದು ಹೇಳುವ ಮೂಲಕ ಪರಮೇಶ್ವರ್ ಈ ಮೊಕದ್ದಮೆಯನ್ನು ಪುನಃ ತೆರೆಯುವ ಅವಶ್ಯಕತೆ ಇಲ್ಲ ಎಂದು ಹೇಳಿ ವಿವಾಕ್ಕೀಡಾಗಿದ್ದರು. ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಆದ ಶೈಲಿಯಲ್ಲಿ ಧರ್ಮಸ್ಥಳದ ವಿರುದ್ಧ ಮಾಡಲಾಗುತ್ತಿರುವ ಆರೋಪಗಳನ್ನು `ಷಡ್ಯಂತ್ರ ಎಂದು ಬಣ್ಣಿಸಿ ತಾವೇ ಸ್ವತಃ ಟೀಕೆ ಮತ್ತು ಭರ್ತ್ಸನೆಗೆ ಈಡಾಗಿದ್ದರು. ಈ ಇಬ್ಬರು ಮಹಿಮರ ಪ್ರತಿಕ್ರಿಯೆಗಳು ದೇವಾಲಯದ ಆಡಳಿತ ಮಂಡಳಿಗೆ ಒತ್ತಾಸೆಯಾಗಿ ನಿಂತಿರುವ ಸೂಚನೆಯಾಗಿದ್ದವು. ಈ ಹೇಳಿಕೆಗಳು ಸಾಧಾರಣ ಮಾತುಗಳಲ್ಲ, ಹಲವು ವರ್ಷಗಳ ಕಾಲ ನ್ಯಾಯವನ್ನು ನಿರಾಕರಿಸಿರುವ ಸರ್ಕಾರದ ಧೋರಣೆಯ ಸಂಕೇತವಾಗಿತ್ತು. ಈ ರಾಜಕೀಯ ಅನಿಶ್ಚಿತತೆಗಳನ್ನು ನಿರಾಕರಿಸುವ ರೀತಿಯಲ್ಲಿ ಎಂದು ಇತ್ತೀಚೆಗೆ ಕರ್ನಾಟಕದ ಹೈಕೋರ್ಟ್ ತನ್ನ ಆದೇಶದ ಮೂಲಕ ಸ್ಪಷ್ಟಪಡಿಸಿದೆ. ಕಳೆದ ಎರಡು ದಶಕಗಳಲ್ಲಿ ಕ್ರೋಢೀಕರಿಸಿರುವ 74 ಅಸಹ...

ಮುಖ್ಯಮಂತ್ರಿಯಾಗುವ ಬಯಕೆಗೆ ಆಳ್ವಿಕೆಯ ಬಲಿ

 ಮಾತು ಕಡಿಮೆ ಮಾಡಿ ಆಳ್ವಿಕೆಯನ್ನು ಚುರುಕುಗೊಳಿಸುವುದೇ ದಾರಿ * ಬಿವಿಸೀ ಇಂದು ಕರ್ನಾಟಕದ ಕಾಂಗ್ರೆಸ್ ಪಕ್ಷ ಆಡಳಿತಾರೂಢ ಪಕ್ಷದ ಹಾಗೆ ಕಾಣುವುದಿಲ್ಲ. ಹೆಚ್ಚಾಗಿ ಅಡೆತಡೆಯಿಲ್ಲದ ಮಾತುಗಳನ್ನಾಡುವ ಒಂದು ಸಂಘದಂತಾಗಿದ್ದು, ಮಾತನಾಡುವುದನ್ನು ತಡೆಯುವವರು ಯಾರು ಎಂಬುದು ಸ್ಪಷ್ಟವಿಲ್ಲ. ಈ ಸಮಸ್ಯೆಯ ಕೇಂದ್ರ ಇರುವುದು ಇಬ್ಬರು ನಾಯಕರು, ಇಬ್ಬರಲ್ಲೂ ಸಂಯಮ ಕಾಣುವುದಿಲ್ಲ - ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ. ಶಿವಕುಮಾರ್ ಅವರ ಮುಖ್ಯಮಂತ್ರಿಯಾಗುವ ಹಂಬಲ ಗೋಪ್ಯವಾಗೇನೂ ಉಳಿದಿಲ್ಲ. ಅಥವಾ ಅಚ್ಚರಿಯ ಅಂಶವೂ ಅಲ್ಲ. ಅಚ್ಚರಿದಾಯಕ ಸಂಗತಿ ಎಂದರೆ, ನಾಯಕತ್ವದ ಪ್ರಶ್ನೆ ಬಗೆಹರಿಸಲಾಗಿದೆ ಎಂದು ಹೈಕಮಾಂಡ್ ಹೇಳುತ್ತಲೇ ಇದ್ದರೂ ಸಹ ಸಾರ್ವಜನಿಕವಾಗಿ ಅವರು ತಮ್ಮ ಹಂಬಲವನ್ನು ಪದೇಪದೇ ವ್ಯಕ್ತಪಡಿಸುತ್ತಿರುವುದು. ಪ್ರತಿಯೊಂದು ಹೇಳಿಕೆಯೂ, ಸೂಚನೆಯೂ  ಸಹ ಅವರ ಬೆಂಬಲಿಗರ ಪ್ರಶಂಸೆಗೆ ಒಳಗಾಗುತ್ತಿದ್ದು ಡಿಕೆಶಿ ಮುಖ್ಯಮಂತ್ರಿಯಾಗುವ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಿದೆ. ಈ ಬೆಳವಣಿಗೆಗಳು ಏನನ್ನೂ ಸಾಧಿಸುವುದಿಲ್ಲ, ಹೆಚ್ಚೆಂದರೆ ಹುದ್ದೆ ಖಾಲಿ ಇಲ್ಲದಿದ್ದಾಗಲೂ ಸಹ ನಾಯಕತ್ವದ ಪ್ರಶ್ನೆ ಚಾಲನೆಯಲ್ಲಿರುತ್ತದೆ. ರಾಜಕಾರಣದಲ್ಲಿ ಮತ್ತೆ ಮತ್ತೆ ಹೇಳುತ್ತಲೇ ಇರುವುದರಿಂದ ವ್ಯಕ್ತಿಯ ಹಕ್ಕೊತ್ತಾಯಕ್ಕೆ ಬಲ ಬರುವುದಿಲ್ಲ. ಶಿಸ್ತನ್ನು ಹಾಳುಮಾಡುತ್ತದೆ. ಯತೀಂದ್ರ ಅವರ ಹಸ್ತಕ್ಷೇಪವು ಅ...

ಗಡಿಗಳ ಒಳಗೆ ವಾಸಿಸುವವರ ದಾಖಲೆ ಸರ್ಕಾರದ ಬಳಿಯೇ ಇಲ್ಲವೇ?

 ವಲಸಿಗರನ್ನು ಗುರುತಿಸಲಾಗದ ನಿಷ್ಕ್ರಿಯತೆಯನ್ನು ಯಾವ ಪ್ರಜಾಪ್ರಭುತ್ವವೂ ಸಹಿಸಲಾಗುವುದಿಲ್ಲ ....................   ಆಂತರಿಕ ಭದ್ರತೆ * ಬಿವಿಸೀ ಸಾಮಾನ್ಯವಾಗಿ ಸರ್ಕಾರಗಳು ನುಣುಚಿಕೊಳ್ಳಲು ಬಯಸುವ ವಿಷಯವೊಂದನ್ನು ಕರ್ನಾಟಕದ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಸಾರ್ವಜನಿಕ ಚರ್ಚೆಗೆ ಒಳಪಡಿಸಿದೆ. ರಾಜ್ಯದಲ್ಲಿರುವ ಬಾಂಗ್ಲಾದೇಶಿ ಅಕ್ರಮ ವಲಸಿಗರ ಬಗ್ಗೆ ವಿಚಾರಣೆ ನಡೆಸುವ ಸಂದರ್ಭದಲ್ಲಿ, ನ್ಯಾಯಮೂರ್ತಿಗಳು ಬೆಂಗಳೂರು ಒಂದರಲ್ಲೇ 20 ಲಕ್ಷ ಅಕ್ರಮ ವಲಸಿಗರು ಇರಬಹುದು, ಇದು ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅಂಕಿ ಅಂಶಗಳು ನಿಖರವೋ ಅಲ್ಲವೋ ಎನ್ನುವುದಕ್ಕಿಂತಲೂ ಕಳಕಳಿಯ ವಾಸ್ತವಾಂಶವೆಂದರೆ ರಾಜ್ಯವಾಗಲೀ ಕೇಂದ್ರ ಸರ್ಕಾರವಾಗಲೀ, ಅಧಿಕೃತವಾಗಿ ಎಷ್ಟು ವಿದೇಶೀಯರು ದಾಖಲೆಗಳಿಲ್ಲದೆ ದೇಶದಲ್ಲಿದ್ದಾರೆ ಎಂದು ದಾಖಲೆಗಳ ಸಮೇತ ನೀಡಲು ಸಾಧ್ಯವಾಗಿಲ್ಲ. ವಲಸಿಗರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಇಲ್ಲದಿರುವುದು ಆಳ್ವಿಕೆಯ ವೈಫಲ್ಯವಾಗಿದೆ. ಸಾರ್ವಭೌಮ ದೇಶವೊಂದು ತನ್ನ ಗಡಿಗಳ ಒಳಗೆ ಯಾರು ವಾಸಿಸುತ್ತಾರೆ ಎಂಬ ಮಾಹಿತಿ ಹೊಂದಿರದಿದ್ದರೆ ಅದು ಮೂಲಭೂತ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುತ್ತದೆ. ಅಂದಾಜುಗಳು ಮುಕ್ತವಾಗಿ ಹರಿದಾಡುತ್ತವೆ. ಎನ್‍ಜಿಒಗಳು ಬಾಂಗ್ಲಾದೇಶದ ಅಕ್ರಮ ವಲಸಿಗರು ಕೋಟ್ಯಂತರ ಇರುವುದಾಗಿ ಹೇಳುತ್ತವೆ. ಆದರೆ ಸರ್ಕಾರಗಳು ಮೌನವಾಗಿರುತ್ತವೆ, ಇಲ್ಲವಾದರೆ ಉತ್ತರ ನೀ...

Dharmasthala under the lens: Can judicial oversight deliver long-denied justice?

  seventy-four deaths and a question of accountability .................... The Karnataka High Court’s decision to directly seek comprehensive details on the 74 unnatural death cases linked to Dharmasthala marks a decisive moment in a controversy that has lingered for decades in whispers, accusations, and unanswered questions. The division bench led by Chief Justice Vibhu Bakhru has effectively signalled that the matter can no longer remain buried under procedural delays, selective investigations, or institutional silence. The petition filed by Kusumavathy, mother of Soujanya — the teenager whose brutal rape and murder shook public conscience — has once again reopened a wound that never truly healed. The High Court’s move to make the State government itself a party to the proceedings is not merely procedural; it is a clear message that accountability cannot be outsourced or deflected. For years, critics have alleged that the so-called “Republic of Dharmasthala” operated under the s...

ಧರ್ಮಸ್ಥಳ ಪ್ರಕರಣಗಳು: ವಿಳಂಬವಾದರೂ ನ್ಯಾಯ ದೊರೆಯುವುದೇ?

 ಹೈಕೋರ್ಟಿನ ಮಧ್ಯಪ್ರವೇಶದಿಂದ ಇದು 74 ಸಾವುಗಳ ವಿಚಾರದಲ್ಲಿ ಕೋರ್ಟ್ ಅಧೀನದ ತನಿಖೆಯಾಗುವ ಸಾಧ್ಯತೆ ಇದೆ. ಇದು ನಾಗರಿಕ ಸಮಾಜದ ಬೇಡಿಕೆಯೂ ಆಗಿತ್ತು. ................ ಪ್ರಚಲಿತ * ಬಿವಿಸೀ ಕರ್ನಾಟಕ ಹೈಕೋರ್ಟ್ ಧರ್ಮಸ್ಥಳದಲ್ಲಿ ನಡೆದಿರುವ 74 ಅಸಹಜ ಸಾವುಗಳ ಬಗ್ಗೆ ಸಮಗ್ರ ವರದಿಯನ್ನು ನೇರವಾಗಿಯೇ ಕೇಳಿರುವುದು, ಇಡೀ ವಿವಾದದಲ್ಲಿ ನಿರ್ಣಾಯಕ ಬೆಳವಣಿಗೆಯಾಗಿದ್ದು, ದಶಕಗಳಿಂದ ಊಹಾಪೆÇೀಹಗಳು, ಗುಮಾನಿಗಳು, ಆರೋಪಗಳು ಮತ್ತು ಉತ್ತರಕಾಣದ ಪ್ರಶ್ನೆಗಳಿಂದ ಕೂಡಿದ್ದ ಘಟನೆಗಳಿಗೆ ಹೊಸ ಆಯಾಮ ಕಲ್ಪಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಭಕ್ರು ನೇತೃತ್ವದ ವಿಭಾಗೀಯ ಪೀಠವು ಪರಿಣಾಮಕಾರಿ ನಿರ್ಧಾರವನ್ನು ಕೈಗೊಂಡಿದ್ದು, ಈ ವಿಷಯವು ಇನ್ನು ಪೆÇ್ರಸೀಜರ್ ಹೆಸರಿನಲ್ಲಿ ವಿಳಂಬ ಎದುರಿಸುವಂತಿಲ್ಲ, ಆಯ್ಕೆಯನುಸಾರ ತನಿಖೆ ಮಾಡುವುದಾಗಲೀ, ಸಾಂಸ್ಥಿಕ ಮೌನವನ್ನಾಗಲೀ ಸಹಿಸಲಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ. ಕರ್ನಾಟಕದ ಸಾರ್ವಜನಿಕ ಪ್ರಜ್ಞೆಯನ್ನೇ ಕದಡಿದ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಲ್ಲಿ ಬಲಿಯಾದ ಸೌಜನ್ಯಾಳ ತಾಯಿ ಕುಸುಮಾವತಿ ಸಲ್ಲಿಸಿರುವ ಅರ್ಜಿಯು, ಈವರೆಗೂ ವಾಸಿಯಾಗದೆ ಉಳಿದಿರುವ ಗಾಯವನ್ನು ಮತ್ತೊಮ್ಮೆ ತೆರೆದಿದೆ. ಹೈಕೋರ್ಟಿನ ಈ ತೀರ್ಮಾನದಿಂದ ರಾಜ್ಯ ಸರ್ಕಾರವೇ ಪ್ರಕ್ರಿಯೆಯ ಒಂದು ಭಾಗವಾಗಲಿದೆ. ಉತ್ತರದಾಯಿತ್ವವನ್ನು ಮತ್ತೊಬ್ಬರ ಮೇಲೆ ಹೊರಿಸುವುದಾಗಲೀ ದಿಕ್ಕು ತಪ್ಪಿಸುವುದಾಗಲೀ ಸಾಧ್ಯವಿಲ್ಲ ...

ಗೋವನ್ನೂ ರಕ್ಷಿಸಿ, ಗೋಮಾಂಸ ರಫ್ತು ನಿಲ್ಲಿಸಬೇಡಿ!

 ಗೋಮಾಂಸ ಸೇವನೆ ಏಕೆ ಪಾಪ, ರಫ್ತು ಮಾಡಲು ಲಾಭದಾಯಕ ಎನ್ನುವುದನ್ನು ಬಿಜೆಪಿ ಪ್ರಾಮಾಣಿಕವಾಗಿ ಉತ್ತರಿಸಲಿ. ........ ಬಿವಿಸೀ ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ಗೋ ರಕ್ಷಣೆಯನ್ನು ನಿರ್ಣಾಯಕ ರಾಜಕೀಯ ಧ್ಯೇಯವನ್ನಾಗಿ ಪರಿಗಣಿಸಿದ್ದು ಈ ನಿಟ್ಟಿನಲ್ಲಿ ಕಠಿಣ ಕಾನೂನುಗಳನ್ನು ರೂಪಿಸಿದೆ. ನೈತಿಕ ಉಪದೇಶಗಳನ್ನು ನೀಡುತ್ತಿದೆ, ತಳಮಟ್ಟದಲ್ಲಿ ರಸ್ತೆಗಳಲ್ಲೇ ಗೋರಕ್ಷಕ ಪಡೆಗಳು ಸಕ್ರಿಯವಾಗಿವೆ. ಆದರೆ ಈ ಘೋಷಣೆಗಳೊಂದಿಗೇ ಆರ್ಥಿಕವಾಗಿ ಒಂದು ಕಟು ಸತ್ಯವನ್ನೂ ಗುರುತಿಸಬಹುದು. ಭಾರತ ಗೋಮಾಂಸ ರಫ್ತು ಮಾಡುವ ಪ್ರಮುಖ ದೇಶವಾಗಿದ್ದು, ವರ್ಷದಿಂದ ವರ್ಷಕ್ಕೆ ಬಿಜೆಪಿ ಆಳ್ವಿಕೆಯಲ್ಲೇ ಗೋಮಾಂಸದ ರಫ್ತು ಪ್ರಮಾಣ ಹೆಚ್ಚಾಗುತ್ತಿದೆ. ವಿಷ್ಲೇಶಕರು ಮತ್ತು ಟೀಕಾಕಾರರು ಈ ವೈರುಧ್ಯವನ್ನು ಉಲ್ಲೇಖಿಸುತ್ತಲೇ ಬಂದಿದ್ದಾರೆ. ಇಲ್ಲಿ ಮುಖ್ಯವಾಗಿ ಕಾಣುವುದು ಆರೋಪ ಮಾತ್ರವಲ್ಲ, ಆಡಳಿತಾರೂಢ ವಲಯದಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲು ಸಾಧ್ಯವಾಗದಿರುವುದು ಮಹತ್ವದ ಪ್ರಶ್ನೆಯಾಗುತ್ತದೆ. ಇತ್ತೀಚೆಗೆ ಈ ಕುರಿತು ದನಿ ಎತ್ತುತ್ತಿರುವುದು ಅವಿಮುಕೇಶ್ವರಾನಂದ ಸರಸ್ವತಿ. ಜ್ಯೋತಿರ್ಮಠದ ಸ್ವಘೋಷಿತ ಹಾಗೂ ವಿವಾದಾಸ್ಪದ ಸ್ವಾಮಿಯಾಗಿರುವ ಅವಿಮುಕ್ತೇಶ್ವರಾನಂದ ಅವರು ಉದಾರಾವಾದಿ ನೆಲೆಯ ವಿಶ್ಲೇಷಕರೂ ಅಲ್ಲ, ಸೆಕ್ಯುಲರ್ ರಾಜಕಾರಣಕ್ಕೆ ನಿಕಟವಾದವರೂ ಅಲ್ಲ. ಈ ಕಾರಣಕ್ಕಾಗಿಯೇ ಅವರ ಪ್ರವೇಶ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡುತ...

Protect the cow, export the beef

  The BJP-led governments at the Centre and in several states have made cow protection a defining political motif, backed by strict laws, moral sermons and street-level vigilantism. Yet running alongside this rhetoric is a stubborn economic fact: India continues to export beef in massive quantities, year after year, even under uninterrupted BJP rule. Critics have flagged this contradiction periodically. What is striking is not the allegation itself, but the inability of the ruling ecosystem to answer it. The latest voice to revive the charge is Avimukteshwaranand Saraswati, the controversial self-styled Shankaracharya of Jyotirmath. He is no liberal critic and no friend of secular politics. Precisely for that reason, his intervention is awkward for the BJP. When a figure speaking from within the Hindu religious space questions beef exports under a government that proclaims cow protection as dharma, the charge acquires a different weight. He is not alone. Swami Agnivesh repeatedly q...

ನಾಗರಿಕ ಪ್ರಜ್ಞೆ ಮತ್ತು ಸಂವಿಧಾನದ ಜೀವಂತಿಕೆ

 ಜಿಜ್ಞಾಸೆ * ಬಿವಿಸೀ ಸಂವಿಧಾನವು ಕೇವಲ ಒಂದು ನಿರ್ಜೀವ ಕಾನೂನು ಪುಸ್ತಕವಲ್ಲ; ಅದು ಒಂದು ರಾಷ್ಟ್ರದ ಪ್ರಾಣಶಕ್ತಿ ಮತ್ತು ಕೋಟ್ಯಂತರ ಜನರ ಹಕ್ಕುಗಳ ಕವಚ. ಇತ್ತೀಚಿನ ವರ್ಷಗಳಲ್ಲಿ ನಾವು ಸಂವಿಧಾನದ `ಅಕ್ಷರ' ಅಥವಾ `ಬರಹ'ವನ್ನು ಅನುಸರಿಸುತ್ತಿದ್ದೇವೆಯಾದರೂ, ಅದರ ಮೂಲ `ಆಶಯ' ಅಥವಾ `ಆತ್ಮ' ಎಲ್ಲೋ ಕಳೆದುಹೋಗುತ್ತಿದೆ ಎಂಬ ಆತಂಕ ಮೂಡುತ್ತಿದೆ. ಸಂವಿಧಾನದ ಆಶಯವನ್ನು ಪುನರುಜ್ಜೀವನಗೊಳಿಸುವುದು ಎಂದರೆ ಕೇವಲ ನಿಯಮಗಳನ್ನು ಪಾಲಿಸುವುದಲ್ಲ, ಬದಲಿಗೆ ಆ ನಿಯಮಗಳ ಹಿಂದಿರುವ ನೈತಿಕ ಉದ್ದೇಶಗಳನ್ನು ಮತ್ತು ನ್ಯಾಯದ ತುಡಿತವನ್ನು ಮರುಸ್ಥಾಪಿಸುವುದಾಗಿದೆ. ಸಂವಿಧಾನದ ಮುನ್ನುಡಿಯು "ಭಾರತದ ಜನತೆಯಾದ ನಾವು" ಎಂದು ಪ್ರಾರಂಭವಾಗುವಾಗ, ಅದು ಅಧಿಕಾರದ ಕೇಂದ್ರಬಿಂದು ನಾಗರಿಕನೇ ಹೊರತು ಆಡಳಿತಗಾರನಲ್ಲ ಎಂಬ ಸತ್ಯವನ್ನು ಸಾರುತ್ತದೆ. ಈ ಆಶಯದ ಪುನರುಜ್ಜೀವನವು ನಮ್ಮ ಪ್ರಜಾಪ್ರಭುತ್ವದ ಅಂಗಗಳಾದ ನ್ಯಾಯಾಂಗ, ಕಾಯಾರ್ಂಗ ಮತ್ತು ಶಾಸಕಾಂಗಗಳು ತಮ್ಮ ಸ್ವತಂತ್ರ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದರ ಮೇಲೆ ನಿಂತಿದೆ. ಈ ಸಂಸ್ಥೆಗಳು ಕೇವಲ ಯಾಂತ್ರಿಕವಾಗಿ ಕೆಲಸ ಮಾಡದೆ, ಜನರ ಸಾಂವಿಧಾನಿಕ ನೈತಿಕತೆಯನ್ನು ಎತ್ತಿ ಹಿಡಿಯುವಲ್ಲಿ ಅವುಗಳ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಬೇಕಿದೆ. ಒಬ್ಬ ಸಾಮಾನ್ಯ ನಾಗರಿಕನಿಗೆ ವ್ಯವಸ್ಥೆಯ ಮೇಲೆ ಪೂರ್ಣ ಭರವಸೆ ಮೂಡಿದಾಗ ಮಾತ್ರ ಸಂವಿಧಾನಕ್ಕೆ ಜೀವ ಬರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು...

ಹರಿಪ್ರಸಾದ್ ಅತಿರೇಕದ ನಡೆ ದುಬಾರಿಯಾಗಬಹುದು

 ಆಕ್ರೋಶ ಕ್ಷಮಾಪಣೆಯಿಂದಾಗುವ  ಮುಜುಗರವನ್ನು ತಪ್ಪಿಸಬಹುದಿತ್ತು. ...... ಇತ್ತೀಚಿನ ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ನಡೆದ ಅಸಹ್ಯಕರ ಬೆಳವಣಿಗೆಗಳು, ರಾಜಕೀಯ ಪ್ರತಿಭಟನೆಯೊಂದು ಸಾಂಸ್ಥಿಕವಾಗಿ ಹೇಗೆ ಅಪಮಾನಕರವಾಗಿ ಪರಿಣಮಿಸುತ್ತದೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣುತ್ತದೆ. ರಾಜ್ಯಪಾಲರ ವರ್ತನೆಯ ವಿರುದ್ಧ ಒಂದು ತರ್ಕಬದ್ಧವಾದ, ತೀಕ್ಷ್ಣ ಸಂಘರ್ಷವಾಗಬಹುದಾಗಿದ್ದ ಘಟನೆ, ಸದನದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿದ್ದು, ಇದಕ್ಕೆ ಮೂಲ ಕಾರಣರಾದವರು ಹಿರಿಯ ಶಾಸಕರೊಬ್ಬರ ಸಂಯಮವಿಲ್ಲದ ನಾಟಕೀಯ ನಡವಳಿಕೆ. ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರನ್ನು ದೈಹಿಕವಾಗಿ ತಡೆಗಟ್ಟಲು ಮೇಲ್ಮನೆ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಯತ್ನಿಸಿದ್ದು, ಸಂಸದೀಯ ನಿಯಮಗಳನ್ನು ಉಲ್ಲಂಘಿಸುವ ಗಂಭೀರ ಘಟನೆಯಾಗಿದೆ. ರಾಜ್ಯಪಾಲರು ವಿವಾದಾಸ್ಪದವಾಗಿರಬಹುದು, ಅವರ ನಡವಳಿಕೆ ಮತ್ತು ತೀರ್ಮಾನಗಳನ್ನು ಪ್ರಶ್ನಿಸಬಹುದು, ಬಲವಾಗಿ ಅದನ್ನು ಪ್ರಶ್ನಿಸಲೂಬಹುದು; ಆದರೆ ಏನೇ ಆದರೂ ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರಾಗಿರುತ್ತಾರೆ. ಅವರ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ ಅದು ರಾಜಕೀಯ ಸ್ವರೂಪದಲ್ಲಿದ್ದು ನಿಯಮಬದ್ಧವಾಗಿರಬೇಕಾಗುತ್ತದೆ. ದೈಹಿಕವಾಗಿ ಅಥವಾ ವೈಯುಕ್ತಿಕ ನೆಲೆಯಲ್ಲಿ ಅಲ್ಲ. ಒಮ್ಮೆ ಈ ಲಕ್ಷ್ಮಣರೇಖೆಯನ್ನು ದಾಟಿದರೆ ಶಾಸಕಾಂಗವೇ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಸಚಿವ ಸಂಪುಟ ಸಿದ್...

ಸಾರ್ವಜನಿಕ ಆಸ್ತಿಯ ಅವಿವೇಕದ ಬಳಕೆ: ಮಠಗಳಿಗೆ ಸರ್ಕಾರದ ಕಳವಳಕಾರಿ ಭೂದಾನ

 ಖುಲ್ಲಂಖುಲ್ಲಾ * ಬಿವಿಸೀ 32 ಧಾರ್ಮಿಕ ಮಠಗಳಿಗೆ ಬೃಹತ್ ಪ್ರಮಾಣದ ಸಾರ್ವಜನಿಕ ಭೂಮಿಯನ್ನು ಮಂಜೂರು ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರವು ಕೇವಲ ರಾಜಕೀಯ ಓಲೈಕೆಯ ವಿಷಯವಲ್ಲ; ಇದು ಸರ್ಕಾರದ ಅಧಿಕಾರದ ಉದ್ದೇಶ ಮತ್ತು ಮಿತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ. ಸಿದ್ದರಾಮಯ್ಯ ಸರ್ಕಾರವು ಈ ಕ್ರಮವನ್ನು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿದೆ, ಅಂದರೆ ಈ ಫಲಾನುಭವಿ ಮಠಗಳು ಹಿಂದುಳಿದ ಮತ್ತು ಪರಿಶಿಷ್ಟ ಜಾತಿಯ ಸಮುದಾಯಗಳನ್ನು ಪ್ರತಿನಿಧಿಸುತ್ತವೆ ಎಂದು ವಾದಿಸುತ್ತಿದೆ. ಈ ತರ್ಕವು ಮೂಲಭೂತವಾಗಿ ದೋಷಪೂರಿತ. ಸಾಮಾಜಿಕ ನ್ಯಾಯ ಎನ್ನುವುದು ಜನರಿಗಾದ ವಂಚನೆಯನ್ನು ಹೋಗಲಾಡಿಸುವುದಕ್ಕಾಗಿ ಇರಬೇಕೇ ಹೊರತು, ಧಾರ್ಮಿಕ ಸಂಸ್ಥೆಗಳಿಗೆ ಹೆಚ್ಚುವರಿ ಆಸ್ತಿಗಳನ್ನು ಒದಗಿಸುವುದಕ್ಕಲ್ಲ. ಕರ್ನಾಟಕದಲ್ಲಿರುವ ಯಾವುದೇ ಮಠಗಳು ಸಂಪನ್ಮೂಲಗಳ ಕೊರತೆ ಇರುವ ಸಂಸ್ಥೆಗಳೇನಲ್ಲ. ಅವು ಸಾಮಾಜಿಕ ಅಧಿಕಾರವನ್ನು ಹೊಂದಿವೆ, ಸಮುದಾಯದಿಂದ ನಿರಂತರ ದೇಣಿಗೆಗಳನ್ನು ಪಡೆಯುತ್ತವೆ ಮತ್ತು ಗಣನೀಯ ಆಸ್ತಿ ಹಾಗೂ ರಾಜಕೀಯ ಪ್ರಭಾವವನ್ನು ಹೊಂದಿವೆ. ಇವು ಸರ್ಕಾರದ ಭೂದಾನಕ್ಕೆ ಅರ್ಹತೆಯಿರುವಂಥ ಸಂಸ್ಥೆಗಳು ಎಂದು ಪರಿಗಣಿಸುವುದು ನ್ಯಾಯ ಮತ್ತು ಸಮಾನತೆಯ ಪರಿಕಲ್ಪನೆಯನ್ನೇ ಅಣಕಿಸಿದಂತಾಗುತ್ತದೆ. ಹಾಗೆಯೇ, ಹಿಂದಿನ ಬಿಜೆಪಿ ಸರ್ಕಾರವು ಮಾಡಿದ ಇದೇ ರೀತಿಯ ಭೂ ಮಂಜೂರಾತಿಗಳನ್ನು ಬೊಟ್ಟು ಮಾಡಿ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ...