Posts

Showing posts from November, 2025

ನೇಮಕಾತಿ ಎಂಬ ಮರೀಚಿಕೆ: ಖಾಲಿ ಬೊಕ್ಕಸದ ಭರವಸೆ

Image
  ಕರ್ನಾಟಕವು ಸಹಿಸಿಕೊಳ್ಳಲಾಗದ ಬಾಧ್ಯತೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವಶ್ಯ ಆಳ್ವಿಕೆಯ ವೆಚ್ಚಗಳಿಗೆ ಕೊರತೆಯಾಗಿದೆ. ............. ಕೇವಿಯಟ್ * ಬಿವಿಸೀ ಕರ್ನಾಟಕದ ನಿರುದ್ಯೋಗ ಸಮಸ್ಯೆ ಈಗ ಕೇವಲ ಆರ್ಥಿಕ ವಿಷಯವಾಗಿ ಉಳಿದಿಲ್ಲ. ಇದು ರಾಜ್ಯದ ಆಡಳಿತ ವ್ಯವಸ್ಥೆ ಕುಸಿಯುತ್ತಿರುವುದರ ಸಂಕೇತವಾಗಿ ಕಾಣುತ್ತಿದೆ. ಹಲವು ತಿಂಗಳುಗಳಿಗೊಮ್ಮೆ ಸರ್ಕಾರ ಸಾವಿರಾರು ಹೊಸ ಉದ್ಯೋಗ ನೇಮಕಾತಿಯನ್ನು, ಎಲ್ಲ ವಿಭಾಗಗಳಲ್ಲೂ ಘೋಷಿಸುತ್ತದೆ. ಇದು ಹಲವು ವರ್ಷಗಳಿಂದ ಉದ್ಯೋಗ ನಿರೀಕ್ಷೆಯಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳಲ್ಲಿ ಭರವಸೆ ಮೂಡಿಸುತ್ತದೆ. ಆದರೆ ಈ ಘೋಷಣೆಗಳು ಮೇಲ್ನೋಟಕ್ಕೆ ಭರವಸೆದಾಯಕವಾಗಿ ಕಂಡರೂ, ವಾಸ್ತವದಲ್ಲಿ ನಾಟಕೀಯ ಪ್ರಸಂಗವಾಗಿರುತ್ತದೆ. ಇದಕ್ಕೆ ಏನೂ ವೆಚ್ಚ ತಗುಲುವುದಿಲ್ಲ, ಬದಲಾಗಿ ತಾತ್ಕಾಲಿಕ ಆಶಾಭಾವನೆಯನ್ನು ಮೂಡಿಸುವ ಮೂಲಕ ಸಮಯ ಹರಣ ಮಾಡಲು ನೆರವಾಗುತ್ತದೆ. ಇದರಿಂದಾಚೆಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕಟು ವಾಸ್ತವ ಎಂದರೆ ರಾಜ್ಯ ಸರ್ಕಾರಕ್ಕೆ ಉದ್ಯೋಗ ದೊರಕಿಸಲು ಸಾಮಥ್ರ್ಯವಿಲ್ಲ. ಹಣಕಾಸು ಪರಿಸ್ಥಿತಿ ಡೋಲಾಯಮಾನವಾಗಿದ್ದು, ಗ್ಯಾರಂಟಿ ಯೋಜನೆಗಳಿಗೂ ಹಣ ಒದಗಿಸಲಾಗದಂಥ ಸ್ಥಿತಿ ಬಂದಿದೆ. ತೆರಿಗೆದಾರರು ಕೊಟ್ಟ ಹಣ ಏನಾಗುತ್ತದೆಯೋ ಗೊತ್ತಿಲ್ಲ. ಸಾಲದ ಹೊರೆ ಹೆಚ್ಚಾಗುತ್ತಿದೆ, ಹಲವು ಬಿಲ್‍ಗಳೂ ಪಾವತಿಯಾಗದೆ ಉಳಿದಿವೆ, ಮೂಲ ಸೌಕರ್ಯಗಳು ನೆನೆಗುದಿಗೆ ಬಿದ್ದಿವೆ. ಸರ್ಕಾರಿ ನೌಕರರ ವೇತನಗಳು ಸರ್ಕಾರದ ಇತಿಮಿತಿಗಳನ...

THE GREAT RECRUITMENT MIRAGE: HOW KARNATAKA'S GOVERNMENT IS RUNNING ON EMPTY

  Karnataka’s unemployment crisis is no longer just an economic issue; it has become a symbol of a collapsing administrative state. Every few months, the government announces “thousands of new appointments” across departments, generating hope among the millions of unemployed youth who have waited years for a breakthrough. But these announcements, impressive as they sound, are nothing more than political theatre. They cost nothing, create temporary optimism, and buy time. Beyond that, they serve no purpose. The hard truth is this:  the state simply cannot afford to hire.  Its finances are stretched thin by an explosion of unfunded welfare guarantees, mounting debt, pending bills, and neglected infrastructure. Salaries for existing employees take up more than the government can comfortably pay. As a result, recruitment has been quietly frozen, even as departments are starved of manpower. Across the administration, anywhere between 60 to 70 percent of sanctioned posts lie va...

ಯಾತ್ರಾ ಸ್ಥಳಗಳು ಮತ್ತು ಸಾರ್ವಜನಿಕ ಪ್ರಜ್ಞೆ

 ಭಾರತಕ್ಕೆ ಪವಿತ್ರ ಸ್ಥಾನಗಳಿಗೆ ಹೆಚ್ಚು ಪ್ರಯಾಣ ಮಾಡುವ ಜನರ ಬದಲಾಗಿ ನಿತ್ಯಜೀವನದಲ್ಲಿ ಮೌಲ್ಯಗಳನ್ನು ಅನುಸರಿಸುವ ಜನರು ಬೇಕಿದ್ದಾರೆ ............... ನಾವು ನಮ್ಮ ಕರ್ತವ್ಯ ನಿರ್ವಹಿಸಿ, ವರ್ತನೆ ಬದಲಾಯಿಸಿಕೊಳ್ಳುವ ಬದಲು ನಮ್ಮ ಪಾಪಗಳನ್ನು ತೊಳೆಯಲು ಯತ್ನಿಸುತ್ತಿದ್ದೇವೆಯೇ? ಭಾರತೀಯ ಸಮಾಜವು ಪಾರಂಪರಿಕವಾಗಿ ಪಾಪ ಪುಣ್ಯಗಳಲ್ಲಿ ನಂಬಿಕೆ ಇಟ್ಟುಕೊಂಡೇ ನಡೆದುಬಂದಿದೆ. ನಮ್ಮ ಪ್ರತಿಯೊಂದು ಕ್ರಿಯೆಯೂ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬುತ್ತಲೇ ಬಂದಿದ್ದೇವೆ. ಆದರೆ ಇಂದು ವಿಚಿತ್ರವಾದ ಮಾದರಿಯನ್ನು ನೋಡಬಹುದು. ಭಾರತೀಯರು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥಯಾತ್ರೆಗಳಿಗೆ ಹೋಗುತ್ತಿದ್ದಾರೆ. ಆದರೂ ನಮ್ಮ ದೈನಂದಿನ ಜೀವನ ಮೌಲ್ಯಗಳು ಶಿಥಿಲವಾಗುತ್ತಲೇ ಇವೆ. ಇದು ಜಟಿಲ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ನಾವು ತೀರ್ಥಯಾತ್ರೆಗಳನ್ನು ನಮ್ಮ ಕ್ರಿಯೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಪರಿಗಣಿಸುತ್ತಿದ್ದೇವೆಯೇ? ಪ್ರಾಚೀನ ಭಾರತದಲ್ಲಿ ಪುಣ್ಯ ಎಂದರೆ ಕ್ಷಮೆಯನ್ನು ಖರೀದಿಸುವ ಪ್ರಕ್ರಿಯೆಯಾಗಿರಲಿಲ್ಲ. ಅದು ಉತ್ತಮ ರೀತಿಯಲ್ಲಿ ಬದುಕುವುದು, ಸತ್ಯವಂತರಾಗಿರುವುದು, ಜವಾಬ್ದಾರಿಯುತ ಜೀವನ ನಡೆಸುವುದು ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸುತ್ತ ನಡೆದುಕೊಳ್ಳುವುದಾಗಿತ್ತು. ಹಲವು ಶತಮಾನಗಳು ಕಳೆದ ನಂತರ, ದೇವಾಲಯಗಳು ಹೆಚ್ಚು ಹೆಚ್ಚಾಗಿ ಆರ್ಥಿಕ ಕೇಂದ್ರಗಳಾದಂತೆಲ್ಲಾ, ಜನರ ಗಮನವೂ ಬದಲಾಗುತ್ತಲ...

ಶಿರಾಡಿ ಘಾಟ್ ಬಗ್ಗೆ ಅಲಕ್ಷ್ಯ ಅಕ್ಷಮ್ಯ ಅಪರಾಧ

 ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಎಲ್ಲ ರೀತಿಯ ಹವಾಮಾನಗಳಿಗೂ ಹೊಂದಿಕೊಳ್ಳುವ ಬಂದರು ನಗರ ಮಂಗಳೂರಿಗೂ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯಾಗಿದ್ದರೂ, ಸಹ ಈ ಹೆದ್ದಾರಿಯು ಮೂರು ದಶಕಗಳ ಕಾಲ ಭಾರತದ ಆಡಳಿತಾತ್ಮಕ ಅಸಡ್ಡೆ, ನಿರ್ಲಕ್ಷ್ಯಗಳಿಗೆ ಸ್ಮಾರಕವಾಗಿ ನಿಂತಿದೆ. 1990ರಿಂದಲೂ 40 ಕಿಲೋಮೀಟರ್ ಶಿರಾಡಿ ಘಾಟ್ ರಸ್ತೆ ದುರಸ್ತಿಯಲ್ಲಿದ್ದು ಇಂದು ರಸ್ತೆಯ ಸ್ಥಿತಿ ಅಪಾಯಕಾರಿ ಹಂತ ತಲುಪಿದೆ. ಎಂದಿನಂತೆಯೇ ಅವಲಂಬಿಸಲಾಗದ ರಸ್ತೆಯಾಗಿ ಉಳಿದಿದೆ. ಪ್ರತಿ ವರ್ಷ ಮುಂಗಾರು ಮಳೆ ಮುಗಿದ ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಮುಂದುವರೆಯುತ್ತದೆ. ಪ್ರತಿವರ್ಷ ಇದೇ ಪುನರಾವರ್ತನೆಯಾಗುತ್ತದೆ. ನಿಧಾನಗತಿಯ ಪ್ರಗತಿ, ಅರ್ಧಕ್ಕೆ ಕೈಬಿಟ್ಟ ಕೆಲಸಗಳು, ಮೇಲ್ವಿಚಾರಣೆ ಇಲ್ಲದಿರುವುದು, ಅಧಿಕಾರಿಗಳ ಉತ್ತರದಾಯಿತ್ವ ಇಲ್ಲದಿರುವುದು ಇದಕ್ಕೆ ಕಾರಣಗಳಾಗಿವೆ. ಇದು ಮೂಲೆಯಲ್ಲಿರುವ ಗ್ರಾಮೀಣ ರಸ್ತೆಯಲ್ಲ. ದಿನಕ್ಕೆ 25 ಸಾವಿರ ವಾಹನಗಳು - ಸರಕು ಸಾಗಾಣಿಕೆ ವಾಹನಗಳು, ಬಸ್‍ಗಳು, ತುರ್ತು ಸೇವೆಯ ವಾಹನಗಳು, ನಿತ್ಯ ಸಂಚಾರಿಗಳು - ಈ ರಸ್ತೆಯನ್ನು ಬಳಸುವುದು ವಾಸ್ತವ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು, ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾಗರಿಕರಿಂದ, ಕೈಗಾರಿಕೋದ್ಯಮಿಗಳಿಂದ, ರಫ್ತು ವ್ಯಾಪಾರಿಗಳಿಂದ ಸಲ್ಲಿಸಲಾಗಿರುವ ಅಸಂಖ್ಯಾತ ಅರ್ಜಿಗಳನ್ನು ನಿರ್ಲಕ್ಷಿಸುತ್ತಿದೆ. ಸಚಿವಾಲಯವು ಈ ಸಮಸ್...

THE CRIMINAL NEGLECT OF SHIRADI GHAT: A REGION BETRAYED BY DELIBERATE INDIFFERENCE

  For three long decades, the 40-kilometre Shiradi Ghat stretch of National Highway-75 — the only lifeline connecting Karnataka’s capital Bengaluru with its only all-weather port city Mangaluru — has stood as a monument to India’s administrative apathy. The road has been under “repair” since the 1990s, yet its condition today is as dangerous and unreliable as ever. Every year, once the monsoon recedes, repair work begins. And every year, the same cycle repeats: slow progress, abandoned works, no monitoring, and no accountability from the authorities responsible. This is not a remote rural road. More than  25,000 vehicles  — freight carriers, buses, emergency services, and daily commuters — depend on this corridor every single day. Yet the Union Ministry of Road Transport, led by Nitin Gadkari, has treated repeated petitions from citizens, industry bodies, and exporters with indifference. The ministry has never viewed this as a matter requiring urgent national attention, d...

PILGRIMAGES AND OUR CONSCIENCE: ARE WE TRYING TO WASH SINS INSTEAD OF CHANGING OUR BEHAVIOUR?

  India has always believed in   punya   (good merit) and   pāpa   (wrongdoing). We believe our actions have consequences. But today, a strange pattern is visible: Indians go on more pilgrimages than ever, yet our everyday ethics often seem weaker. This raises a difficult question — are we using pilgrimages as a way to escape responsibility for our actions? In ancient India,  punya  did not mean buying forgiveness. It simply meant living a good, truthful, responsible life. Pilgrimages were meant to help people slow down, think about their actions, and reconnect with moral values. Over many centuries, as temples grew into large economic centres, the focus slowly shifted. Visiting a holy place became more important than living a holy life. This is also connected to how Indians understand karma. Many Indians see life as a balance sheet — wrong actions leave a mark, and good actions can reduce that mark. This made people believe that going on a pilgrimage ...

ಹೆಗ್ಗಡೆಗಳ ವಿವಾದಗಳ ನಡುವೆ ಕೇಂದ್ರ ನಾಯಕರ ಬರ್ತಡೇ ಶುಭಾಶಯ ಬಿಂಬಿಸುವ ಸಂದೇಶ ಏನು?

 ಗಂಭೀರ ಆರೋಪಗಳು ಮತ್ತು ನಾಗರಿಕ ಸಮಾಜದ ಪ್ರಶ್ನೆಗಳ ನಡುವೆ ಪ್ರಧಾನಿ, ರಾಷ್ಟ್ರಪತಿ ಹಾಗೂ ಗೃಹಮಂತ್ರಿಗಳ ಶುಭಾಶಯಗಳು ನೀಡಿದ ಸಂದೇಶವು ಜವಾಬ್ದಾರಿಯ ರಾಜಕೀಯದ ಭರವಸೆಯನ್ನೇ ದುರ್ಬಲಗೊಳಿಸಿದೆ. .... ಕರಾವಳಿ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ವೀರೇಂದ್ರ ಹೆಗ್ಗಡೆಗೆ ಕೇಂದ್ರ ಮಟ್ಟದ ಬರ್ತಡೇ ಸಂದೇಶಗಳು ಬಂದ ಕ್ಷಣದಿಂದಲೇ ಹೊಸ  ಚರ್ಚೆಗಳು ಎದ್ದಿವೆ. ಇವು ಸಾಮಾನ್ಯ ಜನ್ಮದಿನ ಶುಭಾಶಯಗಳಲ್ಲ. ರಾಷ್ಟ್ರದ ಅತಿ ಶಕ್ತಿಶಾಲಿ ಮೂರು ಸ್ಥಾನಗಳಿಂದ - ಪ್ರಧಾನಿ, ರಾಷ್ಟ್ರಪತಿ, ಗೃಹಮಂತ್ರಿಗಳಿಂದ- ಬಂದಿರುವುದರಿಂದ ಇದು ಕೇವಲ ಗೌರವ ಅಲ್ಲ, ಒಂದು ಪ್ರಾತಿನಿಧಿಕ ರಾಜಕೀಯ ಸಂದೇಶ. ಆದರೆ ಇದೇ ಸಂದರ್ಭದಲ್ಲಿ ನಾಗರಿಕ ಸಮಾಜ, ಮಹಿಳಾ ಹೋರಾಟಗಾರರು ಮತ್ತು ಕರಾವಳಿ ಪ್ರಜ್ಞಾವಂತರು ವರ್ಷಗಳಿಂದ ಕೇಳಿಬರುತ್ತಿರುವ ನಿರಾಕರಿಸಲಾಗದ ಆರೋಪಗಳಿಗೆ ಉತ್ತರಕ್ಕಾಗಿ ಕಾಯುತ್ತಲೇ ಇದ್ದಾರೆ. ಇದೇ ವ್ಯತ್ಯಾಸ ಜನರಲ್ಲಿ ಗೊಂದಲ, ಅಸಮಾಧಾನ ಮತ್ತು ನೈತಿಕ ಪ್ರಶ್ನೆಗಳ ಜಿಜ್ಞಾಸೆಯನ್ನು ಹೆಚ್ಚಿಸಿದೆ. ವೀರೇಂದ್ರ ಹೆಗ್ಗಡೆ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಇರುವ ಆರೋಪಗಳು ಅಸಂಬದ್ಧ ಮಾತುಕತೆಗಳಲ್ಲ. ಸುಳ್ಳು ದಾಖಲೆ ನೀಡಿ ಸರ್ಕಾರದ ಭೂ ಮಂಜೂರಾತಿ ಪಡೆದುಕೊಂಡಿರುವುದು, ಹೆಗ್ಗಡೆ ಕುಟುಂಬದ ನಿಯಂತ್ರಣದಲ್ಲಿರುವ ಸಂಸ್ಥೆಗಳಿಂದ ತೆರಿಗೆ ತಪ್ಪಿಸುವಿಕೆ, ಹೆಗ್ಗಡೆ ಕುಟುಂಬದ ನಿಯಂತ್ರಿತ ಸಮಾಜ ಸೇವಾ ಸಂಸ್ಥೆಗಳಲ್ಲಿ ಪರಿಶಿಷ್ಟ ವರ್...

`ಕುಮಾರಸ್ವಾಮಿಯ ಕ್ಷಣ'ಕ್ಕೆ ಒಡ್ಡಿಕೊಂಡ ಸಿದ್ದರಾಮಯ್ಯ

 ಅಧಿಕಾರ ಬಿಡಲು ಒಪ್ಪದ ಸಿದ್ದರಾಮಯ್ಯ ನಿಲುವು, ಹೈಕಮಾಂಡ್ ಅನಿಶ್ಚಿತತೆಯೊಂದಿಗೆ, ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಟಿಸಿದ್ದು, ಇದು ಸಿದ್ದರಾಮಯ್ಯ ಅವರನ್ನು ಮಾತ್ರವೇ ಅಲ್ಲದೆ ಕಾಂಗ್ರೆಸ್ ಪಕ್ಷವನ್ನೂ ಹಾಳುಮಾಡುತ್ತಿದೆ. ಅಹುದಾದರಹುದೆನ್ನಿ * ಬಿವಿಸೀ ಕರ್ನಾಟಕದಲ್ಲಿ ಅನಾವರಣಗೊಳ್ಳುತ್ತಿರುವ ರಾಜಕೀಯ ಚಟುವಟಿಕೆಗಳು ಎರಡು ದಶಕಗಳ ಹಿಂದೆ ಅಧಿಕಾರ ಹಂಚಿಕೆಗಾಗಿ ಒಪ್ಪಿಕೊಳ್ಳಲಾಗಿದ್ದ ಕುಮಾರಸ್ವಾಮಿ-ಯಡಿಯೂರಪ್ಪ ಮೈತ್ರಿ ಭಂಗವಾದ ಸಂದರ್ಭವನ್ನು ನೆನಪಿಗೆ ತರುತ್ತಿದೆ. ಇತಿಹಾಸ ಕೇವಲ ಮರುಕಳಿಸುತ್ತಿಲ್ಲ, ಇನ್ನೂ ನಾಟಕೀಯವಾಗಿ ನಿರ್ಣಾಯಕವಾಗಿ ತೆರೆದುಕೊಳ್ಳುತ್ತಿದೆ. 2009-10ರಲ್ಲಿ ಎಚ್ ಡಿ ಕುಮಾರಸ್ವಾಮಿ ಎರಡೂವರೆ ವರ್ಷ ಅಧಿಕಾರ ನಡೆಸಿ, ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಲು ನಿರಾಕರಿಸಿದಾಗ, ಇದು ಸ್ವತಃ ಕುಮಾರಸ್ವಾಮಿ ಮತ್ತು ಗೌಡರ ಕುಟುಂಬದ ವಿಶ್ವಾಸಾರ್ಹತೆಗೆ ಅಪಾರ ಹಾನಿ ಉಂಟುಮಾಡಿತ್ತು. ಅನಿವಾರ್ಯವಾಗಿ ಮಧ್ಯಂತರ ಚುನಾವಣೆಗಳು ನಡೆಯಬೇಕಾಯಿತು. ಈ ಘಟನೆಯು ಶಾಶ್ವತವಾಗಿ ಗೌಡರ ನೈತಿಕ ನೆಲೆಯನ್ನು ನಾಶಪಡಿಸಿತ್ತು. ಇಂದು ಸಿದ್ದರಾಮಯ್ಯ ಇದೇ ರೀತಿಯ ವಿಶ್ವಾಸಾರ್ಹತೆಯ ನೆಲೆಯಲ್ಲಿ ಸಮಾಲು ಎದುರಿಸುತ್ತಿದ್ದಾರೆ. 2023ರಲ್ಲಿ ಹೈಕಮಾಂಡ್ ಕರ್ನಾಟಕ ಸರ್ಕಾರದ ರಚನೆಗೆ ಸೂಚಿಸಿದ ಸೂತ್ರದ ಅನುಸಾರ 50:50 ಅನುಪಾತದಲ್ಲಿ ಮುಖ್ಯಮಂತ್ರಿ ಪದವಿಯನ್ನು ಹಂಚಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಒಪ್ಪಿದ್ದರು ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಇದು ಪೂ...

THE KUMARASWAMY MOMENT HAUNTING SIDDARAMAIAH

  The political theatre unfolding in Karnataka today is uncannily similar to the events that consumed the Kumaraswamy–Yediyurappa coalition nearly two decades ago. History is not just repeating itself; it is doing so with an almost dramatic precision. In 2009–10, H. D. Kumaraswamy’s refusal to vacate the Chief Minister’s chair — after enjoying two and a half years of power — shattered the Gowda family’s credibility and led to a midterm poll. That episode permanently damaged their moral standing. Today, Siddaramaiah stands on the edge of a comparable credibility precipice. The public perception — whether entirely accurate or not — is that Siddaramaiah had indeed agreed to a 50:50 rotational arrangement when the Congress high command settled the leadership dispute in 2023. He may not admit it openly, but the widespread belief remains that he was expected to hand over the Chief Ministership to D. K. Shivakumar at the halfway mark. Siddaramaiah’s repeated declarations that he will “abi...

ಆಳ್ವಿಕೆಯನ್ನೇ ನಿರ್ವಹಿಸದ ಕಾಂಗ್ರೆಸ್ ಸರ್ಕಾರ, ರಾಜ್ಯವು ರಾಷ್ಟ್ರಪತಿ ಆಳ್ವಿಕೆಯತ್ತ ಸಾಗುತ್ತಿದೆಯೇ?

 ಕೇವಿಯಟ್ * ಬಿವಿಸೀ ಕರ್ನಾಟಕ ಇಂದು ಸಿಲುಕಿರುವ ಬಿಕ್ಕಟ್ಟು ಕೇವಲ ರಾಜಕೀಯವಲ್ಲ, ಹೆಚ್ಚಿನದಾಗಿ ನೈತಿಕವಾಗಿ ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದಾಗ ಜನರಿಗೆ, ಹಿಂದಿನ ಆಳ್ವಿಕೆಯ ಕುಸಿತವೇ ಮುಖ್ಯವಾಗಿ ಪ್ರಶ್ನೆಯಾಗಿತ್ತು. ಆದರೆ ಸರ್ಕಾರವು ಜನರ ಅಮೂಲ್ಯ ಆಯ್ಕೆಯನ್ನು ಊಹಿಸಲಾಗದ ಮಟ್ಟಿಗೆ ವ್ಯರ್ಥಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ನಡುವೆ ಸದ್ದಿಲ್ಲದೆ ಆರಂಭವಾದ ಗೊಣಗಾಟಗಳು ಈಗ ಮುಕ್ತ ಕದನವಾಗಿ ಕಾಣುತ್ತಿದ್ದು, ಇದು ಆಡಳಿತವನ್ನು ಅಸ್ತವ್ಯಸ್ತಗೊಳಿಸಿರುವುದಷ್ಟೇ ಅಲ್ಲದೆ, ಆಳ್ವಿಕೆಯ ಬುನಾದಿಯನ್ನೇ ಅಲುಗಾಡಿಸಿದೆ. ರಾಜ್ಯವನ್ನು ಈಗ ಆಳಲಾಗುತ್ತಿಲ್ಲ, ಕೇವಲ ಪರಸ್ಪರ ಮಾತುಕತೆಗಳ ಮೂಲಕ ಮೌಖಿಕ ಆದೇಶದಲ್ಲಿ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ಅವರು ತಾವೇ ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಘೋಷಿಸಿರುವುದು ರಾಜ್ಯ ರಾಜಕಾರಣದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿದೆ. ಹಲವು ತಿಂಗಳ ಕಾಲ ಡಿಕೆಶಿ ಬಣವು 50:50 ಅನುಪಾತದ ಬಗ್ಗೆ ಮುಕ್ತವಾಗಿಯೆ ಮಾತನಾಡುತ್ತಿದ್ದು, ನಾಯಕತ್ವವು ತಮಗೆ ಆಡಳಿತವನ್ನು ವಹಿಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಒತ್ಡಡ ಹೇರುತ್ತಲೇ ಬಂದಿದೆ. ಸಿದ್ದರಾಮಯ್ಯ ಅರ್ಧ ಅವಧಿ ಪೂರೈಸಿರುವುದರಿಂದ ಇದಕ್ಕೆ ಪುಷ್ಟಿ ದೊರೆತಿದೆ. ಆದರೆ ಸಿದ್ದರಾಮಯ್ಯ ಬಣವು ಡಿಕೆಶಿ ಅವರ ಹಕ್ಕೊತ್ತಾಯವನ್ನು `ಕಲ್ಪಿತ' ಎಂದು ಅಲ್ಲಗಳೆಯು...

ಪಳೆಯುಳಿಕೆಯಾಗುಳಿದ ಜೆಡಿಎಸ್

 ಜೆಡಿಎಸ್ ಗುರಿಕಾರರಾದ ಗೌಡ ಕುಟುಂಬಕ್ಕೆ ಬೇಕಿರುವುದು ಕುಟುಂಬದ ಹಿತವರ್ಧನೆ. ಅದಕ್ಕೆ ಬೇಕಾಗಿ ಉಳಿದವರೆಲ್ಲ ಕಾಲಾಳುಗಳು. .... ಅಹುದಾದರಹುದೆನ್ನಿ * ಬಿವಿಸೀ ಜನತಾ ದಳ (ಜಾತ್ಯತೀತ) ಪಕ್ಷವು ಈಗ ಒಂದು ಪಳೆಯುಳಿಕೆಯಾಗಿದ್ದು, ಸಾರ್ವಜನಿಕರ ಬೆಂಬಲ ಇಲ್ಲದೆ ಅಥವಾ ಸೈದ್ಧಾಂತಿಕ ಬದ್ಧತೆ ಇಲ್ಲದೆ, ಆಳ್ವಿಕೆಯ ಸ್ಮರಣಾರ್ಹ ದಾಖಲೆಗಳಿಲ್ಲದೆ, ಕೇವಲ ಒಂದು ಕುಟುಂಬದ ಅನುಕೂಲತೆಗಳನ್ನು ಅವಲಂಬಿಸಿ ಉಳಿದುಕೊಂಡಿದೆ. ಈ ಕುಟುಂಬವು ತನ್ನ ಕುಸಿಯುತ್ತಿರುವ ಪ್ರಭಾವವನ್ನು ಉಳಿಸಿಕೊಳ್ಳಲು ಹತಾಶವಾಗಿದೆ. ಒಂದು ಕಾಲದಲ್ಲಿ ಎಚ್ ಡಿ ದೇವೇಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿದ್ದ ಜೆಡಿಎಸ್ ಕಳೆದ ಹತ್ತು ವರ್ಷಗಳಲ್ಲಿ ಸಂಪೂರ್ಣವಾಗಿ ಅಧೋಗತಿಗೆ ಕುಸಿದಿದ್ದು, ಈಗ ರಾಷ್ಟ್ರೀಯ ವರ್ಚಸ್ಸು ಕೇವಲ ಹಾಳೆಗಳ ಮೇಲೆ ಉಳಿದಿದೆ. ಕರ್ನಾಟಕದಲ್ಲೂ ಸಹ ಜೆಡಿಎಸ್ ಮಸುಕಾಗುತ್ತಿರುವ ತನ್ನ ವರ್ಚಸ್ಸಿನ ಹಿಂದೆ ಸಾಂಕೇತಿಕ ಪ್ರಾತಿನಿಧ್ಯ ಹೊಂದಿದೆ ಮಾತ್ರ. ಈ ಸತ್ಯವನ್ನು ಅರಗಿಸಿಕೊಳ್ಳುವುದು ಪಾಪದ ಕೊಡ ತುಂಬಿದಂತಿರುವ ಗೌಡ ಕುಟುಂಬಕ್ಕೆ ಕಷ್ಟ, ಆದರೆ ಅನಿವಾರ್ಯ. ಜೆಡಿಎಸ್ ಬಹಳ ಹಿಂದೆಯೇ ತನ್ನ ರಾಜಕೀಯ ಪಕ್ಷದ ಸ್ವರೂಪವನ್ನು ಕಳೆದುಕೊಂಡಿತ್ತು. ಕುಟುಂಬ ನಿರ್ವಹಣೆಯ ಉದ್ಯಮವಾಗಿ, ವ್ಯಾವಹಾರಿಕವಾಗಿ ಮತ್ತು ಅವಕಾಶವಾದಿಯಾಗಿ ತನ್ನ ಸ್ಥಾನವನ್ನು ಕಾಪಾಡಿಕೊಂಡಿತ್ತು. ಪಕ್ಷದ ಮೈತ್ರಿಯೂ ಸಹ ತತ್ವಾಧಾರಿತವಾಗಿರಲಿಲ್ಲ. ಕೇವಲ ಚೌಕಾಸಿಗಳ ಮೂಲಕ ಏರ್ಪಟ್ಟಿತ...

A SCRIPTED INVESTIGATION?

  How the SIT lost its way in the quest for justice in the Dharmasthala mass burial and sexual assault cases?   The trajectory of the Special Investigation Team probing the Dharmasthala mass burial and related sex assault cases has taken a disturbing turn, one that raises urgent questions about its integrity, priorities, and purpose. In recent weeks, a pattern has emerged so clearly that it can no longer be dismissed as coincidence: instead of pursuing the perpetrators of grave offences, the SIT appears to have turned its full weight against those who sought justice. Nothing captures this inversion more starkly than the celebratory mood witnessed at the annual  Laksha Deepotsava  in Dharmasthala. Journalists who were the recipients of Dharmasthala governing family's munificence spoke defending Heggades against charges of wrongdoing. As the temple town glowed in a million lamps, the Heggade establishment displayed a sense of   triumph. The timing was no...

ಕೋರ್ಟ್ ಉಸ್ತುವಾರಿಯ ತನಿಖೆ ಮಾತ್ರ ಧರ್ಮಸ್ಥಳ ಎಸ್‍ಐಟಿಯನ್ನು ಸರಿದಾರಿಗೆ ತರಲು ಸಾಧ್ಯ

 ಧರ್ಮಸ್ಥಳದ ಸಾಮೂಹಿಕ ಹತ್ಯೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಗಳ ತನಿಖೆ ಆರಂಭಿಸಿದ್ದ ಎಸ್‍ಐಟಿ ನಡುವಿನಲ್ಲೇ ದಾರಿ ತಪ್ಪಿದೆ   ..............   * ಸಂಪಾದಕೀಯ ಧರ್ಮಸ್ಥಳದ ಸಾಮೂಹಿಕ ಹತ್ಯೆ ಮತ್ತು ತತ್ಸಂಬಂಧಿತ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದ ವಿಶೇಷ ತನಿಖಾ ದಳ, ಕೊನೆಯಲ್ಲಿ ವಿವಾದಾಸ್ಪದ ತಿರುವಿನಲ್ಲಿದೆ. ಈ ನಿಟ್ಟಿನಲ್ಲಿ ತನಿಖೆಯ ಪ್ರಾಮಾಣಿಕತೆ, ಆದ್ಯತೆ ಮತ್ತು ಉದ್ದೇಶಗಳ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಎಸ್‍ಐಟಿ ಸಾಗುತ್ತಿರುವ ಹಾದಿ ಕುರಿತಾಗಿ ಸ್ಪಷ್ಟವಾಗಿ ಹೊರಬಂದ ಒಂದು ಮಾದರಿಯನ್ನು ಗಮನಿಸಿದರೆ, ಇದು ಕಾಕತಾಳೀಯ ಎನಿಸುವುದಿಲ್ಲ. ಅತ್ಯಾಚಾರ ಎಸಗಿದವರನ್ನು, ಕೊಲೆಗಡುಕರನ್ನು ಬೆನ್ನಟ್ಟಿ ಶಿಕ್ಷೆಗೊಳಪಡಿಸುವ ಬದಲು, ನ್ಯಾಯಕ್ಕಾಗಿ ಹೋರಾಡುತ್ತಿರುವವರ ವಿರುದ್ಧವೇ ಎಸ್‍ಐಟಿ ತನ್ನ ಬಲ ಪ್ರಯೋಗ ಮಾಡುತ್ತಿದೆ. ಈ ಬೆಳವಣಿಗೆಯನ್ನು ಸ್ಪಷ್ಟವಾಗಿ ಧರ್ಮಸ್ಥಳದಲ್ಲಿ ನಡೆದ ಲಕ್ಷ ದೀಪೆÇೀತ್ಸವದ ಸಂಭ್ರಮದಲ್ಲಿ ಕಾಣಬಹುದಿತ್ತು. ಈ ಸಂದರ್ಭದಲ್ಲಿ ಧರ್ಮಸ್ಥಳದ ಆಡಳಿತ ನಡೆಸುವ ಕುಟುಂಬದ ಔದಾರ್ಯದಿಂದ ಧನ್ಯರಾಗಿರುವ ಪತ್ರಕರ್ತರ ಮಾತುಗಳಲ್ಲಿ ಗುರುತಿಸಬಹುದಿತ್ತು. ಈ ಪತ್ರಕರ್ತರು ಹೇಯ ಆರೋಪಗಳಿಗೆ ಈಡಾಗಿರುವ ಹೆಗ್ಗಡೆ ಕುಟುಂಬದವರನ್ನು ಹಾಡಿಹೊಗಳಿ ಅಟ್ಟಕ್ಕೇರಿಸಿದ್ದು ಮತ್ತು ಆರೋಪಗಳನ್ನು ಮಾಡುತ್ತಿರುವವರ ವ...

ರಾಷ್ಟ್ರಪತಿ, ರಾಜ್ಯಪಾಲರು ಮಸೂದೆಗಳಿಗೆ ಸಹಿ ಹಾಕುವ ಸಮಯಮಿತಿಗಳ ವಿವಾದ

 ಮೂಲ ತತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ   ಇನ್ ತಪ್ಪಾಗಿ ಅರ್ಥೈಸಿದ ಮಾಧ್ಯಮಗಳು, ಗೊಂದಲಕ್ಕೆ ಒಳಗಾದದ್ದು ಸಾರ್ವಜನಿಕ ಚರ್ಚೆ   ವಿಶ್ಲೇಷಣೆ * ಬಿವಿಸೀ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿಯವರಿಂದ ಬಂದ ಆರ್ಟಿಕಲ್ 143ರ ಸಲಹಾತ್ಮಕ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ  ಹೊಸ ತೀರ್ಮಾನ ನೀಡಿದ ಕ್ಷಣದಿಂದಲೇ, ರಾಷ್ಟ್ರದ ರಾಜಕೀಯ ಮತ್ತು ಮಾಧ್ಯಮ ವಲಯಗಳಲ್ಲಿ ಒಂದು ಗದ್ದಲ ಎದ್ದಿತು. ಬಹುತೇಕ ದೊಡ್ಡ ಮಾಧ್ಯಮ ಸಂಸ್ಥೆಗಳ ವಿಶ್ಲೇಷಣೆ ಒಂದೇ ದಿಕ್ಕಿನತ್ತ ಓಡಿತು - “ನ್ಯಾಯಾಲಯ ತನ್ನ ಹಿಂದಿನ ತೀರ್ಪನ್ನು ತಿರಸ್ಕರಿಸಿದೆ; ಸಮಯ ನಿಗದಿಪಡಿಸಿದ ಹಿಂದಿನ ನಿಲುವು ಕುಸಿದಿದೆ”. ಇದು ಸರಿಯಲ್ಲ. ವಾಸ್ತವದಲ್ಲಿ, ಸರ್ವೋಚ್ಚ ನ್ಯಾಯಾಲಯವು ತನ್ನ ಹಿಂದೆ ನೀಡಿದ್ದ ಯಾವುದೇ ತೀರ್ಪನ್ನು ರದ್ದುಪಡಿಸಿಲ್ಲ, ಹಾಗೆ ಮಾಡಲು ಈ ವೇದಿಕೆ ಸಲಹಾತ್ಮಕ ಅಭಿಪ್ರಾಯ ವೇದಿಕೆ ಮಾತ್ರ. ಆದರೂ ಈ ತಪ್ಪಾದ ಅರ್ಥವಿವರಣೆ ದೇಶದಾದ್ಯಂತ ಹರಡಿದ್ದು, ಸಂವಿಧಾನದ ಗಂಭೀರತೆಯ ಪ್ರಶ್ನೆಯನ್ನು ಸರಳ ಸುದ್ದಿಶೈಲಿಯಲ್ಲಿ ತಿರುಗಿಸಿ ಹಾಕಿದಂತಾಗಿದೆ. ಮೊದಲು ಸ್ಪಷ್ಟಪಡಿಸಬೇಕಾದದ್ದು ಆರ್ಟಿಕಲ್ 143 ಅಡಿಯಲ್ಲಿ ಬಂದಿರುವ ಪ್ರಶ್ನೆಗೆ ನ್ಯಾಯಾಲಯ ನೀಡುವುದು ‘ತೀರ್ಪು’ ಅಲ್ಲ, ಸಲಹಾತ್ಮಕ ಅಭಿಪ್ರಾಯ. ಇದು ನ್ಯಾಯಾಲಯದ ವಿಧಿವಿಧಾನಾತ್ಮಕ ಅಧಿಕಾರಕ್ಷೇತ್ರಕ್ಕಿಂತ ಬೇರೆ. ಹಳೆಯ ತೀರ್ಪನ್ನು ಬದಲಿಸುವ ಸಾಮಥ್ರ್ಯ ಹೊಂದಿರುವುದು ಆರ್ಟಿಕಲ್ 32 ಅಥವಾ ಆರ್ಟಿಕಲ್ 136 ಅಡಿಯಲ್ಲಿ ...

ಸಂದಿಗ್ಧ ಸ್ಥಿತಿಯಲ್ಲಿ ಕರ್ನಾಟಕ ಕಾಂಗ್ರೆಸ್

 ಪಕ್ಷ ತನಗೆ ಸಿಎಂ ಗದ್ದುಗೆ ಹಸ್ತಾಂತರಿಸದಿದ್ದರೆ, ಡಿಕೆಶಿ ಬಿಜೆಪಿಯೊಡನೆ ಮೈತ್ರಿ ಮಾಡಿಕೊಂಡು ಸಿಎಂ ಹುದ್ದೆ ಗಳಿಸುವ ಯೋಚನೆಯಲ್ಲಿದ್ದಾರೆ ಎಂಬ ಗುಮಾನಿಯೂ ಕೇಳಿಬರುತ್ತಿದೆ. ವೀಕ್ಷಣೆ * ಬಿವಿಸೀ ರಾಜ್ಯದಲ್ಲಿ ನಡೆದಿರುವ ಕಳೆದ ಹಲವು ದಿನಗಳ ಬೆಳವಣಿಗೆಗಳು, ಹೋದ ಒಂದು ವರ್ಷದಿಂದಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸರ್ಕಾರದ ಸ್ಥಿರತೆಯನ್ನೂ ಹಾಳು ಮಾಡಿವೆ. ಆಂತರಿಕವಾಗಿ ಒಳಗೊಳಗೇ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವಿನ ಸಂಘರ್ಷ ಬಹಿರಂಗವಾಗಿದ್ದು, ಪಕ್ಷದ ಹೈಕಮಾಂಡ್ ಈಗ ಈ ಆಂತರಿಕ ಕಲಹವನ್ನು ಗಮನಿಸುತ್ತಿದೆ. ಡಿ ಕೆ ಶಿವಕುಮಾರ್ ಅವರು ಹಠಾತ್ತನೆ 30 ಶಾಸಕರನ್ನು ಒಟ್ಟುಗೂಡಿಸಿರುವುದು ಮತ್ತು ದೆಹಲಿಯಲ್ಲಿ ಅವರ ಹಕ್ಕೊತ್ತಾಯದ ಉಪಸ್ಥಿತಿಯು, ಮಾತುಕತೆಗಳನ್ನೂ ಮೀರಿ, ಬಹಿರಂಗ ಹಕ್ಕು ಪ್ರತಿಪಾದನೆಯಾಗಿ ಪರಿಣಮಿಸಿದೆ. ಈಗ ಶಿವಕುಮಾರ್ ಮಧ್ಯಮಾವಧಿಯ ಅಧಿಕಾರ ಹಸ್ತಾಂತರದ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ತಮಗೆ ನಾಯಕತ್ವದ ಸಮ್ಮಾನ ಕೊಡುವಂತೆ ಆಗ್ರಹಿಸುತ್ತಿದ್ದಾರೆ. ಸರ್ಕಾರದ ರಚನೆಯಾದಾಗ ಇದ್ದಂತಹ ಒಪ್ಪಂದದ ಅನುಸಾರ, ಸಿದ್ದರಾಮಯ್ಯ ಈ ಸಮಯದಲ್ಲಿ ಕೆಳಗಿಳಿದು ಸಿಎಂ ಹುದ್ದೆ ತಮಗೆ ಬಿಟ್ಟುಕೊಡಬೇಕು ಎಂದು ಬಲವಾಗಿ ಆಗ್ರಹಿಸಲಾರಂಭಿಸಿದ್ದಾರೆ. ಈ ರೀತಿಯ ಒಪ್ಪಂದಕ್ಕೆ ಅಧಿಕೃತವಾದ ದಾಖಲೆ ಇಲ್ಲದೆ ಇದ್ದರೂ ಸಹ ಶಿವಕುಮಾರ್ ಅವರ ಆತ್ಮವಿಶ್ವ...

When the KDA Chairman becomes a liability: the case for letting Bilimale go

Image
  KDA cannot be a stage for freelance ideology P urushottam Bilimale, Chairman of the Kannada Development Authority, has once again demonstrated how temperament and office can be dangerously mismatched. The position he holds demands administrative restraint, cultural sensitivity, and an unwavering focus on strengthening Kannada in government and public life. What Karnataka has instead received is a stream of off-the-cuff remarks that generate noise, not progress. His latest outburst—that Yakshagana artists are “by nature homosexuals”—is not just factually absurd but socially damaging. It insults practitioners of a cherished art form, trivialises queer identity, and exposes a startling disregard for the dignity of communities the state is obligated to protect. The public reaction, ranging from performers to cultural patrons, has been predictably furious. And rightly so. But this controversy merely caps a pattern. Since assuming office, Bilimale’s public presence has been defined les...

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹೊರೆಯಾಗಿರಬಾರದು

Image
  ಬಿಳಿಮಲೆ, ತಮ್ಮ ಪದವಿಯನ್ನು ತ್ಯಜಿಸಲಿ, ಅವರಿಗೆ ಮನಸ್ವೀ ಮಾತನಾಡಲು ಅವಕಾಶ ಇರುವ ವಾತಾವರಣವನ್ನು ಸೇರಿಕೊಳ್ಳಲಿ ............... ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ವ್ಯಕ್ತಿಯು ಕಾರ್ಯನಿರ್ವಹಿಸುವ ಕಚೇರಿಯ ಹೊಣೆಗಾರಿಕೆಗಳಿಗೂ ಮತ್ತು ಅದನ್ನು ನಿರ್ವಹಿಸುವವರ ವೈಯುಕ್ತಿಕ ಭಾವನೆಗಳಿಗೂ ಎಷ್ಟು ಅಂತರವಿರಲಿಕ್ಕೆ ಸಾಧ್ಯ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಅವರು ಹೊಂದಿರುವ ಹುದ್ದೆಯಲ್ಲಿ ಆಡಳಿತಾತ್ಮಕ ಸಂಯಮ, ಸಾಂಸ್ಕøತಿಕ ಸೂಕ್ಷ್ಮತೆ ಬಹಳ ಮುಖ್ಯವಾಗಿರುತ್ತದೆ, ಹಾಗೆಯೇ ಕನ್ನಡ ಭಾಷೆಯ ಬಳಕೆಯನ್ನು ಸರ್ಕಾರದಲ್ಲಿ, ಸಾರ್ವಜನಿಕ ವಲಯದಲ್ಲಿ ಬೆಳೆಸುವ ಜವಾಬ್ದಾರಿ ಹೊಂದಿರುತ್ತದೆ. ಆದರೆ ಕರ್ನಾಟಕದ ಜನತೆ ಪಡೆದಿರುವುದು ಬಿಳಿಮಲೆಯವರ ಅಸಂಬದ್ಧ ಹೇಳಿಕೆಗಳೇ ಆಗಿದ್ದು, ಇದು ವಿವಾದದ ಸದ್ದು ಮಾಡುತ್ತದೆಯೇ ಹೊರತು ಸಂಸ್ಕøತಿಗಾಗಲೀ, ಆಡಳಿತಕ್ಕಾಗಲೀ ಮೂರು ಕಾಸಿನ ಪ್ರಯೋಜನವಾಗುವುದಿಲ್ಲ. ಈ ಅಸಂಬಂದ್ಧ ಹೇಳಿಕೆಗಳಲ್ಲಿ ಮುಖ್ಯವಾಗಿ ಕಾಣುವುದು ತಾನು ಹೇಳುವುದೆಲ್ಲ ಅಣಿಮುತ್ತುಗಳು ಎಂಬ ಅಹಮಿಕೆ ಉದಾಹರಣೆಗೆ ಅವರ ಇತ್ತೀಚಿನ ಅವರ ಹೇಳಿಕೆ ಯಕ್ಷಗಾನ ಕಲಾವಿದರು ಸ್ವಭಾವತಃ ಸಲಿಂಗ ಕಾಮಿಗಳು ಎಂಬ ಅವರ ಅಭಿಪ್ರಾಯ ವಸ್ತುಶಃ ಅಸಂಬದ್ಧವಷ್ಟೇ ಅಲ್ಲದೆ, ಸಾಮಾಜಿಕವಾಗಿ ಹಾನಿಕಾರಕವಾದುದು. ಇದರಿಂದ ಪಾರಂಪರಿಕ ಕಲೆಯನ್ನು ಆಶ್ರಯಿಸಿದ ಕಲಾವಿದರನ್ನು ಅವಮಾನಿಸಿದಂತಾಗುವುದೇ ಅಲ್ಲದೆ, ಅವರ ಅಸ್ಮಿತೆಯನ್ನೂ ನಗಣ್...

ಕರ್ನಾಟಕದ ಸ್ಥಿತಿ ಕುರಿತು ಮಲಯಾಳಿ ಮಾಧ್ಯಮ ಏನು ಹೇಳುತ್ತದೆ?

 ಮಲಯಾಳಿ ಮಾಧ್ಯಮಗಳ ವಿಶ್ಲೇಷಣೆಯು ಸ್ಥಿರವಾಗಿದ್ದು, ಮುಲಾಜಿಲ್ಲದೆ ವಿಶ್ಲೇಷಣೆ ಮಾಡುತ್ತಿವೆ ಇದ್ದುದು ಇದ್ದಹಾಗೆ * ಬಿವಿಸೀ ಕಳೆದ ಒಂದು ತಿಂಗಳಲ್ಲಿ ಮಲಯಾಳಿ ಮಾಧ್ಯಮಗಳು ಕರ್ನಾಟಕದ ಕರಾಳ ಚಿತ್ರವನ್ನು ಬಿತ್ತರಿಸಿವೆ. ಹೆಚ್ಚುತ್ತಿರುವ ಅಪರಾಧಗಳು, ದುಬಾರಿ ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ವಿರೋಧಿ ಬಣಗಳ ಕಲಹ ಈ ವಿಷಯಗಳನ್ನೇ ಕೇಂದ್ರೀಕರಿಸಿವೆ. ಮಲಯಾಳಿ ಸುದ್ದಿಪತ್ರಿಕೆಗಳು, ಆನ್ ಲೈನ್ ವೇದಿಕೆಗಳು, ವಾರಪತ್ರಿಕೆಗಳು ಕರ್ನಾಟಕವನ್ನು ಹೆಚ್ಚು ತೀಕ್ಷ್ಣವಾಗಿ ಗಮನಿಸುತ್ತಿರುವುದನ್ನು ಕಳೆದ ವಾರದಲ್ಲಿ ಕಾಣಬಹುದು. ಈ ವಾಹಿನಿಗಳ ಒಟ್ಟಾರೆ ವಿಶ್ಲೇಷಣೆ ನೇರವಾಗಿದೆ. ರಾಜ್ಯ ಸರ್ಕಾರ ಓಲಾಡುತ್ತಿದೆ. ಕಾನೂನು ಸುವ್ಯವಸ್ಥೆಯ ವೈಫಲ್ಯ, ಬರಿದಾಗುವ ಹಂತಕ್ಕೆ ತಲುಪಿರುವ ರಾಜ್ಯ ಬೊಕ್ಕಸ, ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹ ಈ ನಿರೂಪಣೆಗಳಲ್ಲಿ ಪ್ರಧಾನವಾಗಿವೆ. ಕಾನೂನು ಸುವ್ಯವಸ್ಥೆಯನ್ನು ಕುರಿತಂತೆ, ಮಲಯಾಳಿ ವಿಶ್ಲೇಷಕರು ಉನ್ನತ ಹಂತದ ಅಪರಾಧಗಳನ್ನು ವರದಿ ಮಾಡಿದ್ದು, ಪೆÇಲೀಸ್ ಪಡೆಗಳು ಹೆಚ್ಚು ನಿಷ್ಕ್ರಿಯರಾಗಿ ಕಾಣುತ್ತಿರುವುದನ್ನು ವರದಿ ಮಾಡಿವೆ. ಹಲವು ವರದಿಗಳ ಅನುಸಾರ ಸರ್ಕಾರದ ಪ್ರತಿಕ್ರಿಯೆಯೂ ಸಹ ರಕ್ಷಣಾತ್ಮಕವಾಗಿದ್ದು ಈ ಕುಸಿತವನ್ನು ನಿರಾಕರಿಸಲಾಗುತ್ತಿದೆಯೇ ಹೊರತು, ಬಗೆಹರಿಸಲು ಮುಂದಾಗುತ್ತಿಲ್ಲ. ಇದೇ ಕುಸಿತವನ್ನು ರಾಜ್ಯ ಹಿಂದೆ ಗಳಿಸಿದ್ದ ಆದರಕ್ಕೆ ಹೋಲಿಸಿ, ಈಗ ಆಡಳಿತಾತ್ಮಕ...

WHAT THE MALAYALAM MEDIA NOW SAYS ABOUT KARNATAKA: CRIME, POPULISM AND A CONGRESS AT WAR WITH ITSELF

  Over the past month, Malayalam media commentary has painted a stark picture of Karnataka — a state troubled by rising crime, strained by costly welfare schemes, and destabilised by fierce factional rivalry within the ruling Congress. ……………… Malayalam newspapers, online portals and weekly magazines have followed Karnataka with unusually sharp attention in recent weeks. Their collective assessment is blunt: the state is wobbling. Law-and-order failures, a treasury stretched to breaking point, and open internal warfare within the Congress dominate their narrative. On law and order, Malayalam commentators highlight a pattern of high-profile crimes and a police force seen as increasingly tentative. Several reports suggest that the government’s responses appear defensive, more concerned with denying decline than addressing it. This sense of drift is contrasted with Karnataka’s earlier reputation for administrative discipline, creating a tone of disappointment across editorials. As some...

ಕರಾವಳಿ ಅಭಿವೃದ್ಧಿ ಪ್ರಾಧಿಕಾರವೆಂಬ ಗೊಂಬೆ ಮರು ಸ್ಥಾಪನೆ

Image
                                                                                       ಎಮ್ ಎ ಗಫೂರ್ ಪ್ರಾಧಿಕಾರ ಮಾಡಬಹುದಾದ ಎಲ್ಲ ಕೆಲಸಗಳನ್ನೂ ಸರಕಾರದ ಲೋಕೋಪಯೋಗಿ ಇಲಾಖೆ ಮಾಡಬಲ್ಲದು. ............. ಅಲವಾದರಲ್ಲವೆನ್ನಿ* ಬಿವಿಸೀ ಜನರು ಈಗಾಗಲೇ ಮರೆತು ಹೋಗಿರುವ ಉಡುಪಿಯ ಕಾಂಗ್ರೆಸ್ ನಾಯಕ ಎಮ್ ಎ ಗಫೂರ್ ಅವರನ್ನು ಯಾರನ್ನೋ ಮೆಚ್ಚಿಸಲು ಮರಳಿ ಮುನ್ನಲೆಗೆ ತರುವ ಸಲುವಾಗಿ ಕರ್ನಾಟಕ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರ(ಸಿಡಿಎ)ದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿಹಾಕಿದೆ. ಹಲವು ವರ್ಷಗಳ ಕಾಲ ಗಫೂರ್ ಅವರ ಸಾರ್ವಜನಿಕ ಚಟುವಟಿಕೆಗಳ ಬಗ್ಗೆ ಯಾವುದೇ ಸುದ್ದಿ ಕೇಳಿಬಂದಿರಲಿಲ್ಲ. ಹಠಾತ್ತನೆ ಅವರನ್ನು ಮರಳಿ ತಂದಿರುವುದು ಕರಾವಳಿ ಅಭಿವೃದ್ದಿಗಿಂತಲೂ ಹೆಚ್ಚಾಗಿ, ರಾಜಕೀಯ ನಿಷ್ಠಾವಂತರನ್ನು ಆಲಂಕಾರಿಕ ಹುದ್ದೆಗಳ ಮೂಲಕ ಸಮ್ಮಾನಿಸುವ ಕ್ರಮವಾಗಿ ತೋರುತ್ತದೆ. ಹಿಂದೆ ಹಲವು ವರ್ಷಗಳ ಕಾಲ ಕಾರ್ಯೋನ್ಮುಖವಾಗಿದ್ದರೂ ಯಾವುದೇ ಪ್ರಭಾವವನ್ನು ಬೀರುವುದಲ್ಲಿ ...

ಜನಗಣತಿ ರಾಜಕಾರಣದ ಮೇಲಿನ ಬಿಹಾರದ ತೀರ್ಪು

 `ಎಷ್ಟು ಜನಸಂಖ್ಯೆಯೋ, ಅಷ್ಟು ಹಕ್ಕು' - ರಾಹುಲ್ ಗಾಂಧಿಯ ಅಪಾಯಕರ ಘೋಷಣೆಯ ತಿರಸ್ಕಾರ ಇನ್ ಭಾರತದ ರಾಜಕೀಯ ಹಕ್ಕುಗಳನ್ನು ಜನಸಂಖ್ಯಾ ಅಂಕಗಣಿತಕ್ಕೆ ಕಟ್ಟಿಹಾಕುವ ಅವಕಾಶ ಇಲ್ಲ. * ಬಿವಿಸೀ ರಾಹುಲ್ ಗಾಂಧಿಯ ಚುನಾವಣಾ ಘೋಷಣೆ - "ಎಷ್ಟು ಜನಸಂಖ್ಯೆಯೋ, ಅಷ್ಟು ಹಕ್ಕು" ಬಿಹಾರದಲ್ಲಿ ಭಾರೀ ಹಿನ್ನಡೆಗೊಳಗಾಯಿತು. ಜಾತಿ ಆಧಾರಿತ ಆಶಾವಾದಗಳಿಗೆ ಈ ಘೋಷಣೆ ಶಕ್ತಿ ನೀಡುತ್ತದೆ ಎಂದು ಕಾಂಗ್ರೆಸ್ ಭಾವಿಸಿದ್ದರೂ, ಮತದಾರರು ಅದನ್ನು ಬೇರೆಯೇ ಆಗಿ ಗ್ರಹಿಸಿದರು. ಸಾಮಾಜಿಕ ವೈವಿಧ್ಯತೆ, ಜನಸಂಖ್ಯಾ ಆತಂಕ ಮತ್ತು ಆಂತರಿಕ ಸ್ಪರ್ಧೆಗಳಿಂದ ತುಂಬಿರುವ ಬಿಹಾರಕ್ಕೆ, ಈ ಸಂದೇಶ ಸಾಮಾಜಿಕ ನ್ಯಾಯದಂತೆ ಕಾಣದೇ, ದೇಶದ ಹಿತಾಸಕ್ತಿ ಮತ್ತು ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಲೆಕ್ಕದಂತೆ ಕಂಡುಬಂತು. ಈ ಘೋಷಣೆಯ ಮೂಲದಲ್ಲಿ ಒಂದು ಸರಳ ತತ್ವವಿದೆ: ಸಮುದಾಯವೊಂದರ ಸಂಖ್ಯೆ ಹೆಚ್ಚಾದರೆ ಅದೇ ಅನುಪಾತದಲ್ಲಿ ಅವರ ಹಕ್ಕು ಹೆಚ್ಚಾಗಬೇಕು. ಆದರೆ ಭಾರತದ ರಾಜಕೀಯ ಮತ್ತು ಸಾಮಾಜಿಕ ನಿರ್ಮಿತಿಯನ್ನು ಈ ರೀತಿಯ ಸರಳ ಲೆಕ್ಕಾಚಾರಕ್ಕೆ ಇಳಿಸಲಾಗದು. ಹಕ್ಕುಗಳು ನಾಗರಿಕತ್ವದಿಂದ, ಸಂವಿಧಾನಾತ್ಮಕ ಭರವಸೆಗಳಿಂದ, ಮತ್ತು ದೇಶದ ಒಕ್ಕೂಟದ ಸಂಕಲ್ಪದಿಂದ ಉಗಮಿಸುತ್ತವೆ - ಸಮುದಾಯಗಳ ಸಂಖ್ಯಾಬಲದಿಂದಲ್ಲ. ಒಮ್ಮೆ ಜನಸಂಖ್ಯೆಯೇ ಹಕ್ಕಿನ ಅಳತೆಗೋಲಾದರೆ, ಪ್ರತಿಯೊಂದು ಸಮುದಾಯವೂ ಸಂಖ್ಯೆಯನ್ನು ರಾಜಕೀಯ ಆಯುಧವೆಂದು ಕಾಣಲು ಆರಂಭಿಸುತ್ತದೆ. ಇನ್ನು ಜಾತಿ ಮತ್ತು ಕೋಮ...

ಶಿವಕುಮಾರ್ ಅಧಿಕಾರದಾಟದಲ್ಲಿ ಕಾಂಗ್ರೆಸ್ ಕುಸಿತ

 ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ ನೀಡಿ, ಪ್ರಧಾನ ಕಾರ್ಯದರ್ಶಿ ಅಥವಾ ಖಜಾಂಚಿಯ ಹುದ್ದೆ ನೀಡಬಹುದು. ರಾಜ್ಯದಲ್ಲಿ ಪಕ್ಷ ಮತ್ತು ಸರಕಾರದ ಮೇಲೆ ಡಿಕೆಶಿ ಹಿಡಿತವನ್ನು ಬಿಡಿಸಿ ಮುಕ್ತಗೊಳಿಸುವುದು ಹೈಕಮಾಂಡಿಗೆ ಸರಳ ಆಯ್ಕೆಯಾಗಬೇಕು.   * ಸಂಪಾದಕೀಯ ತಾನಿಲ್ಲದೇ ಪಕ್ಷ ಉಸಿರಾಡುವ ಸ್ಥಿತಿಯಲ್ಲೂ ಇರಲು ಸಾಧ್ಯವಿಲ್ಲ ಎಂದು  ಡಿ ಕೆ ಶಿವಕುಮಾರ್ ಭಾವಿಸಿದಂತಿದೆ. ಅವರು ಆಡುವ ಪ್ರತಿಯೊಂದು ಮಾತೂ, ನೀಡುವ ರಕ್ಷಣಾತ್ಮಕ ಪತ್ರಿಕಾ ಹೇಳಿಕೆಗಳು ಇದನ್ನೇ ಸೂಚಿಸುವಂತಿವೆ. ರಾಜಕೀಯದಲ್ಲಿ, ವಿಶೇಷವಾಗಿ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಶಾಶ್ವತವಲ್ಲ, ಯಾವ ಕುರ್ಚಿಯೂ ಬದಲಾವಣೆಗೆ ಹೊರತಾಗಿಲ್ಲ ಎಂದು ನಾಯಕರಿಗೆ ಸಂದೇಶ ನೀಡುವ ಒಂದು ಮಾದರಿ ಇದೆ. ಅಂಥಾ ದೇವರಾಜ ಅರಸರೇ ಕಾಂಗ್ರೆಸ್ಸಿಗೆ ಅನಿವಾರ್ಯವಾಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಪದವಿಯಿಂದ ಕೆಳಗಿಳಿಸುತ್ತದೆ ಎಂಬ ವರದಿಗಳು ಡಿಕೆಶಿ ಅವರನ್ನು ಕಂಗೆಡಿಸಿವೆ. ಸಂಯಮ ಕಾಪಾಡಿಕೊಳ್ಳುವುದರ ಬದಲು, ಡಿಕೆಶಿ ಆತಂಕ ಮತ್ತು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ. ಏನೇ ಆದರೂ ಸ್ಥಾನ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ತಾವೇನೂ ತಪ್ಪು ಮಾಡಿಲ್ಲ ಎಂದು ಹೇಳಿಕೊಳ್ಳುವ ಡಿಕೆಶಿ ಏಕಾಂಗಿಯಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ, ಆರಂಭದಿಂದಲೂ ದುಡಿದಿದ್ದೇನೆ ಎಂದೆಲ್ಲ ಹೇಳುತ್ತಿದ್ದಾರೆ. ಇದು ಆತ್ಮಪ್ರಶಂಸೆ, ಅಭದ್ರತೆಯನ್ನು ಸೂಚಿಸುತ್ತದೆಯೇ ಹೊರತು, ಬಲವನ್ನು...

SHIVAKUMAR’S DUAL POWER PLAY IS DRAGGING CONGRESS DOWN

  For months now, D.K. Shivakumar has carried himself as though the Karnataka Congress cannot breathe without him. Every syllable he utters, every defensive press statement he delivers, reinforces an image of a man who believes he is indispensable. But politics, especially within the Congress, has a way of reminding its leaders that nobody is permanent, and no throne is immune to change. Reports that the Congress high command is set to remove him from the Karnataka Pradesh Congress Committee presidency have clearly rattled him. Instead of composure, DKS has reacted with anxiety and bluster. He asserts that “come what may” he will not quit. He declares he has “committed no wrong,” and boasts that he single-handedly built the party from the ground up. This chest-thumping, however, speaks more of insecurity than strength. It reveals a leader who has mistaken the party’s temporary dependence on his purse strings for a deeper, lasting loyalty. Let’s be blunt: D.K. Shivakumar’s political...

ಸುಗುಣೇಂದ್ರರನ್ನು ಮಧ್ವಾಚಾರ್ಯರಿಗೆ ಸಮ ಎನ್ನುವುದು ಇಬ್ಬರಿಗೂ ನ್ಯಾಯವಲ್ಲ

 ವಿವಾದಾಸ್ಪದ ವ್ಯಕ್ತಿಗಳನ್ನು ಅನಗತ್ಯವಾಗಿ ವೈಭವೀಕರಿಸುವುದು ಅಷ್ಟ ಮಠಗಳು ಒಂದು ಕಾಲದಲ್ಲಿ ಹೊಂದಿದ್ದ ಆಧ್ಯಾತ್ಮಿಕ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಿದೆಯೇ ಎಂದು ಚರ್ಚಿಸಬೇಕಿದೆ. ............. ಅಲವಾದರಲವೆನ್ನಿ * ಬಿವಿಸೀ ಪುತ್ತಿಗೆ ಸುಗುಣೇಂದ್ರ ಸ್ವಾಮಿಯ ಸುತ್ತ ಹರಡಿಕೊಂಡಿರುವ ಗೊಂದಲಗಳು ಬಗೆಹರಿಯುವಂತೆ ತೋರುತ್ತಿಲ್ಲ. ಹಲವು ವರ್ಷಗಳ ಕಾಲ ಇವರು ವಾದ ವಿವಾದಗಳ ನಡುವೆ ಸಿಲುಕಿದ್ದು ಇದು ಮಧ್ವ ಸಂಪ್ರದಾಯದ ಮೂಲವನ್ನೇ ಅಲುಗಾಡಿಸುತ್ತಿರುವಂತಿದೆ.  ಕೆಲವು ವಿವಾದಗಳು ಸ್ವಯಂಕೃತವಾಗಿದ್ದರೆ, ಇನ್ನು ಕೆಲವು ಬೆಂಬಲಿಗರು ಮತ್ತು ವಿರೋಧಿಗಳು ಹೆಣೆದಿರುವ ನಿರೂಪಣೆಗಳು.  ಆದರೆ ಇತ್ತೀಚಿನ ಬೆಳವಣಿಗೆಗಳು ಇನ್ನೂ ವಿವಾದಾಸ್ಪದವಾಗಿದೆ. ಅರಕಲಗೂಡು ಅರೆಮಂದನಹಳ್ಳಿ ವಿಶ್ವ ಬ್ರಾಹ್ಮಣ ಸಂಸ್ಥಾನದ ಸ್ವಾಮಿಯು ಸುಗುಣೇಂದ್ರ ಸ್ವಾಮಿಯನ್ನು ಮಧ್ವಾಚಾರ್ಯರಿಗೆ ಸಮ ಎಂದು ಹೇಳಿರುವುದು ಈ ವಿವಾದವನ್ನು ಧಾರ್ಮಿಕ ವಾದ ವಿವಾದಗಳನ್ನೂ ಮೀರಿ ಗೊಂದಲ ಸೃಷ್ಟಿಸಿದೆ. ಇದು 800 ವರ್ಷಗಳ ಪರಂಪರೆಯ ತಾತ್ವಿಕ ಮೂಲಕ್ಕೇ ಧಕ್ಕೆ ಉಂಟುಮಾಡಿದೆ. ನಿಯಮದ ಉಲ್ಲಂಘನೆ: ಮ್ಲೇಚ್ಛರ ನಾಡಿನಲ್ಲಿ ಸುಗುಣೇಂದ್ರ ಅವರ ಕತೆ ಆರಂಭವಾಗಿದ್ದು, ಅವರು ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಪ್ರವಾಸ ಹೋಗಿದ್ದಾಗ. ಮಧ್ವಾಚಾರ್ಯರು ವಿದೇಶ ಪ್ರವಾಸ ಅಥವಾ ಸಾಗರೋಲ್ಲಂಘನವನ್ನು ನಿಷೇಧಿಸಿದ್ದರು, ಅಷ್ಟ ಮಠಗಳ ಯಾವುದೇ ಸ್ವಾಮಿಗಳೂ ಸಮುದ್ರಯಾನ ಮಾಡದಂತೆ ಕಟ್...

ಜಯಂತ್ ಮೇಲೆ ಹಲ್ಲೆ ನ್ಯಾಯಕ್ಕೆ ಬಗೆಯಲಾದ ದ್ರೋಹ

 ಒಬ್ಬ ಪ್ರತ್ಯಕ್ಷ ಸಾಕ್ಷಿಗೆ ಹೀಗಾಗಬಹುದಾದರೆ, ಸತ್ಯ ಅರಿಯುವ ಸಾಧ್ಯತೆಗಳು ಎಲ್ಲಿರುತ್ತವೆ ಎಂದು ಕೇಳುತ್ತಿದ್ದಾರೆ. ಅಹುದಾದರಹುದೆನ್ನಿ * ಬಿವಿಸೀ `ಸೌಜನ್ಯಾಗೆ ನ್ಯಾಯ' ಆಂದೋಲನದ ಪ್ರಮುಖರಲ್ಲಿ ಒಬ್ಬರಾದ ಟಿ ಜಯಂತ್ ಅವರ ಮೇಲೆ ಹಲ್ಲೆ ನಡೆಸಿರುವುದು, ತನಿಖೆಯ ಕೋಣೆಯೊಳಗೆ ನಡೆದಿರುವ ಕ್ರೂರ ವರ್ತನೆ ಮಾತ್ರವಲ್ಲ, ಇದು ರಾಜ್ಯ ಸರ್ಕಾರವು ಬಲಾಢ್ಯರನ್ನು ರಕ್ಷಿಸುತ್ತದೆ ಮತ್ತು ಪ್ರತಿರೋಧವನ್ನು ಶಿಕ್ಷಿಸುತ್ತದೆ ಎಂದು ಸಂದೇಶ ನೀಡುವ ಒಂದು ಪ್ರಕರಣವಾಗಿದೆ. ಔಪಚಾರಿಕ ನೋಟಿಸ್ ಪಡೆದ ಹಿನ್ನೆಲೆಯಲ್ಲಿ ಜಯಂತ್ ಎಸ್‍ಐಟಿ ಕಚೇರಿಯೊಳಗೆ ಪ್ರವೇಶಿಸಿದಾಗ, ತನಿಖೆಗೆ ಸಹಕರಿಸುವ ಒಬ್ಬ ನಾಗರಿಕನಾಗಿ ಪ್ರವೇಶಿಸಿದ್ದರು. ಆದರೆ ಅವರು ಹೊರಬರುವಾಗ, ಹಲ್ಲೆಗೊಳಗಾಗಿ, ನಿಂದನೆಗೀಡಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿಯಲ್ಲಿ ಬಂದಿದ್ದರು. ಇದೇ ಒಂದು ಹಗರಣವಾಗಿದೆ. ನಂತರದ ಬೆಳವಣಿಗೆಗಳೂ ನೈಜ ಹಗರಣವನ್ನು ಅನಾವರಣಗೊಳಿಸಿತ್ತು. ಏಕೆಂದರೆ ರಾಜ್ಯ ಸರ್ಕಾರ ಈ ಬೆಳವಣಿಗೆಯ ಬಗ್ಗೆ ಮೌನ ವಹಿಸಿರುವುದು ನಿಗೂಢವಾಗಿದೆ. ಜಯಂತ್ ಅವರು ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ವಿವರವಾದ ದೂರು ಸಲ್ಲಿಸಿದ್ದಾರೆ. ಎಸ್‍ಐಟಿ ಕಚೇರಿಯ ಒಳಗೆ ತಮ್ಮ ಮೇಲೆ ನಡೆದ ಹಲ್ಲೆಯಲ್ಲಿ ಗಾಯಗೊಂಡಿರುವುದಕ್ಕೆ ವೈದ್ಯಕೀಯ ಪುರಾವೆಗಳನ್ನು ಒದಗಿಸಿದ್ದಾರೆ. ಯಾವುದೇ ಸಾಮಾನ್ಯ ಕಾನೂನು ಪ್ರಕ್ರಿಯೆಯಲ್ಲಿ, ಎಫ್‍ಐಆರ್ ಕೆಲವೇ ನಿಮಿಷಗಳಲ್ಲಿ ದಾಖಲಾಗಬೇಕಿತ್ತು. ಆರೋಪಿ ಅಧಿಕಾರಿಗಳನ್ನು ಮತ್ತ...

MADHWACHARYA INSULTED: THE DANGEROUS GLORIFICATION OF A CONTROVERSIAL PONTIFF

  The turbulence surrounding Puttige Sugunendra Swami refuses to subside. For years, he has been at the centre of arguments that strike at the core of the Madhwa tradition. Some controversies were self-created, others manufactured by supporters or detractors. But the latest development — a pontiff from the Arakalgud Aremadanahalli Vishwa Brahmana Samsthana declaring Sugunendra Swami to be “equal to Madhwacharya” — has escalated matters beyond the realm of routine religious chatter. It has touched the doctrinal heart of an 800-year-old lineage. Breaking a Foundational Rule: Overseas Travel The Sugunendra saga began with his overseas tours across the United States and Australia to establish Krishna temples — a move strictly discouraged by Madhwacharya, who prohibited disciples of the Ashta Mutts from undertaking sea voyages. When Sugunendra Swami ignored this foundational injunction, the late Pejavar Swami registered strong and public objection. Yet Puttige proceeded, setting a prece...