ಜನಗಣತಿ ರಾಜಕಾರಣದ ಮೇಲಿನ ಬಿಹಾರದ ತೀರ್ಪು
`ಎಷ್ಟು ಜನಸಂಖ್ಯೆಯೋ, ಅಷ್ಟು ಹಕ್ಕು' - ರಾಹುಲ್
ಗಾಂಧಿಯ ಅಪಾಯಕರ ಘೋಷಣೆಯ ತಿರಸ್ಕಾರ
ಇನ್
ಭಾರತದ ರಾಜಕೀಯ ಹಕ್ಕುಗಳನ್ನು ಜನಸಂಖ್ಯಾ ಅಂಕಗಣಿತಕ್ಕೆ ಕಟ್ಟಿಹಾಕುವ ಅವಕಾಶ ಇಲ್ಲ.
* ಬಿವಿಸೀ
ರಾಹುಲ್ ಗಾಂಧಿಯ ಚುನಾವಣಾ ಘೋಷಣೆ - "ಎಷ್ಟು ಜನಸಂಖ್ಯೆಯೋ, ಅಷ್ಟು ಹಕ್ಕು" ಬಿಹಾರದಲ್ಲಿ ಭಾರೀ ಹಿನ್ನಡೆಗೊಳಗಾಯಿತು. ಜಾತಿ ಆಧಾರಿತ ಆಶಾವಾದಗಳಿಗೆ ಈ ಘೋಷಣೆ ಶಕ್ತಿ ನೀಡುತ್ತದೆ ಎಂದು ಕಾಂಗ್ರೆಸ್ ಭಾವಿಸಿದ್ದರೂ, ಮತದಾರರು ಅದನ್ನು ಬೇರೆಯೇ ಆಗಿ ಗ್ರಹಿಸಿದರು. ಸಾಮಾಜಿಕ ವೈವಿಧ್ಯತೆ, ಜನಸಂಖ್ಯಾ ಆತಂಕ ಮತ್ತು ಆಂತರಿಕ ಸ್ಪರ್ಧೆಗಳಿಂದ ತುಂಬಿರುವ ಬಿಹಾರಕ್ಕೆ, ಈ ಸಂದೇಶ ಸಾಮಾಜಿಕ ನ್ಯಾಯದಂತೆ ಕಾಣದೇ, ದೇಶದ ಹಿತಾಸಕ್ತಿ ಮತ್ತು ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಬಹುದಾದ ಲೆಕ್ಕದಂತೆ ಕಂಡುಬಂತು.
ಈ ಘೋಷಣೆಯ ಮೂಲದಲ್ಲಿ ಒಂದು ಸರಳ ತತ್ವವಿದೆ: ಸಮುದಾಯವೊಂದರ ಸಂಖ್ಯೆ ಹೆಚ್ಚಾದರೆ ಅದೇ ಅನುಪಾತದಲ್ಲಿ ಅವರ ಹಕ್ಕು ಹೆಚ್ಚಾಗಬೇಕು. ಆದರೆ ಭಾರತದ ರಾಜಕೀಯ ಮತ್ತು ಸಾಮಾಜಿಕ ನಿರ್ಮಿತಿಯನ್ನು ಈ ರೀತಿಯ ಸರಳ ಲೆಕ್ಕಾಚಾರಕ್ಕೆ ಇಳಿಸಲಾಗದು. ಹಕ್ಕುಗಳು ನಾಗರಿಕತ್ವದಿಂದ, ಸಂವಿಧಾನಾತ್ಮಕ ಭರವಸೆಗಳಿಂದ, ಮತ್ತು ದೇಶದ ಒಕ್ಕೂಟದ ಸಂಕಲ್ಪದಿಂದ ಉಗಮಿಸುತ್ತವೆ - ಸಮುದಾಯಗಳ ಸಂಖ್ಯಾಬಲದಿಂದಲ್ಲ. ಒಮ್ಮೆ ಜನಸಂಖ್ಯೆಯೇ ಹಕ್ಕಿನ ಅಳತೆಗೋಲಾದರೆ, ಪ್ರತಿಯೊಂದು ಸಮುದಾಯವೂ ಸಂಖ್ಯೆಯನ್ನು ರಾಜಕೀಯ ಆಯುಧವೆಂದು ಕಾಣಲು ಆರಂಭಿಸುತ್ತದೆ. ಇನ್ನು ಜಾತಿ ಮತ್ತು ಕೋಮು ವಿಭಜನೆಗಳು ಗಟ್ಟಿಯಾಗಿರುವ ದೇಶಕ್ಕೆ ಇದು ದಹನಶೀಲವಾದ ತತ್ವ.
ವಿಮರ್ಶಕರು ಈ ಅಪಾಯವನ್ನು ತಕ್ಷಣವೇ ಗುರುತಿಸಿದರು. ಇದನ್ನು ನೀತಿಯಾಗಿ ಜಾರಿಗೊಳಿಸಿದರೆ, ರಾಜ್ಯಗಳಲ್ಲಿ ಜನಸಂಖ್ಯಾ ರಾಜಕಾರಣಕ್ಕೆ ಮತ್ತೊಂದು ಗಂಭೀರ ತಿರುವಿನಲ್ಲಿ ದೇಶದ ಸುರಕ್ಷತೆ ಮತ್ತು ಸಮಗ್ರ ಹಿತಾಸಕ್ತಿಗಳಿಗೆ ವಿರುದ್ಧ ನಡೆಯಬಹುದಾದ ಗುಂಪುಗಳಿಗೆ ಶಕ್ತಿ ತುಂಬುತ್ತದೆ ಎಂಬ ವಿಮರ್ಶೆಗಳು ಹರಿದಾಡಿದವು. ಅರ್ಹತೆ ಮತ್ತು ಅಗತ್ಯ ಆಧಾರಿತ ಕಲ್ಯಾಣ ವ್ಯವಸ್ಥೆಗಳನ್ನು ಸಮುದಾಯಗಳ ಸಂಖ್ಯೆ ಆಧಾರಿತ ಹಕ್ಕಿನ ನೀತಿ ದುರ್ಬಲಗೊಳಿಸುವ ಭೀತಿ ಇತ್ತು. ಅಂದರೆ, ರಾಜಕೀಯ ಸ್ಪರ್ಧೆಯನ್ನೇ ಜನಗಣತಿ ಆಧಾರಿತ ಸಮರಕ್ಷೇತ್ರವನ್ನಾಗಿಸುವ ಅಪಾಯ ಈ ಘೋಷಣೆಯಲ್ಲಿತ್ತು. ಈ ಅಪಾಯವನ್ನು ಬಿಹಾರದ ಜನರು ನಿರಾಕರಿಸಿದ್ದಾರೆ.
ದೇಶದಲ್ಲೇ ಹೆಚ್ಚು ಜನಸಾಂದ್ರತೆ ಹೊಂದಿರುವ ಬಿಹಾರದಲ್ಲಿ ಪ್ರಭಾವಿ ಅಲ್ಪಸಂಖ್ಯಾತ ಸಮುದಾಯವೂ ಇದೆ. ಹಲವು ಹಿಂದೂ ಓಬಿಸಿ, ಇಬಿಸಿ ಮತ್ತು ದಲಿತ ಸಮುದಾಯಗಳಿಗೆ, ಸಂಖ್ಯೆ ಆಧಾರಿತ ಹಕ್ಕಿನ ಮಾದರಿ ಕೊನೆಗೆ ತಮ್ಮನ್ನೇ ಹಿಂಬದಿಗೆ ತಳ್ಳಬಹುದು ಎಂಬ ಆತಂಕವಿತ್ತು. ಕಾಂಗ್ರೆಸ್ ಈ ಘೋಷಣೆಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ, ರಕ್ಷಣೆಗಳನ್ನೂ ವಿವರಿಸಲಿಲ್ಲ. ರಾಹುಲ್ ಗಾಂಧಿ ಘೋಷಣೆಗಳನ್ನು ಹೊರಹಾಕಿ ಮೌನವಾಗಿರುವುದು - ಗಂಭೀರ ಚಿಂತನೆ ಇಲ್ಲದೆ ಘೋಷಣೆಗಳನ್ನು ಎಸೆಯುತ್ತಾರೆ ಎಂಬ ಟೀಕೆಗೆ ಇದು ಮತ್ತಷ್ಟು ಬಲ ನೀಡಿತು.
ಬಿಹಾರದ ತೀರ್ಪು ಈಗ ಸ್ಪಷ್ಟವಾಗಿದೆ: ಭಾರತದ ರಾಜಕೀಯ ಹಕ್ಕುಗಳನ್ನು ಜನಸಂಖ್ಯಾ ಅಂಕಗಣಿತಕ್ಕೆ ಕಟ್ಟಿಹಾಕುವ ಅವಕಾಶ ಇಲ್ಲ. ರಾಹುಲ್ ಗಾಂಧಿ ಈ ಪಾಠವನ್ನು ಅರ್ಥಮಾಡಿಕೊಳ್ಳುತ್ತಾರೆಯೇ ಎಂಬುದೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜವಾಬ್ದಾರಿಯುತ ಸುಧಾರಣೆಗೆ ಮುಖಮಾಡುತ್ತದೆಯೋ, ಅಥವಾ ದೇಶದ ಒಕ್ಕೂಟಕ್ಕೆ ಅಪಾಯಕಾರಿಯಾದ ಘೋಷಣೆಗಳ ಹಿಂದೆ ಓಡುವುದೋ ಎಂದು ನಿರ್ಧರಿಸಲಿದೆ.
Comments
Post a Comment