Posts

Showing posts from October, 2025

ಶಿವಕುಮಾರ್: ಅಧಿಕಾರದ ಅಹಂಕಾರದ ಧ್ವನಿ ಮತ್ತು ರಾಜಕೀಯ ಸಂಸ್ಕಾರಹೀನತೆ

 * ಸಂಪಾದಕೀಯ ಬೆಂಗಳೂರು ಸುರಂಗ ರಸ್ತೆ ಯೋಜನೆ ಕುರಿತ ವಿವಾದ ಇದೀಗ ಕೇವಲ ಮೂಲಸೌಕರ್ಯ ಯೋಜನೆಯ ಮಿತಿಯನ್ನು ಮೀರಿ, ರಾಜ್ಯದ ರಾಜಕೀಯ ಸಂಸ್ಕಾರದ ಮಟ್ಟವನ್ನೇ ಪ್ರಶ್ನಿಸುವ ಹಂತಕ್ಕೇರಿದೆ. ಈ ವಿವಾದದ ಕೇಂದ್ರಬಿಂದುವಿನಲ್ಲಿ ಇಬ್ಬರು ಪ್ರಮುಖ ನಾಯಕರು - ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ. ನಗರದ ಹೃದಯಭಾಗದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವ ಭಾರೀ ಯೋಜನೆ, ಅದರ ಅಸಾಧಾರಣ ವೆಚ್ಚ ಮತ್ತು ತಾಂತ್ರಿಕ ಯೋಗ್ಯತೆ ಕುರಿತು ಹಲವು ವಾದ-ಪ್ರತಿವಾದಗಳು ನಡೆಯುತ್ತಿವೆ. ಯೋಜನೆಗೆ ವಿರುದ್ಧವಾಗಿ ತೇಜಸ್ವಿ ಸೂರ್ಯ ಅವರು ಧ್ವನಿಯೆತ್ತಿದ್ದಾರೆ. ಅವರು ಮಂಡಿಸಿರುವ ಪ್ರಶ್ನೆಗಳು ತಾರ್ಕಿಕವೂ, ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೂ ನಿಂತಿವೆ. ಬೆಂಗಳೂರು ನಗರದಲ್ಲಿನ ವಾಯುಮಾಲಿನ್ಯ, ವಾಹನ ದಟ್ಟಣೆ, ಸಾರ್ವಜನಿಕ ಸಾರಿಗೆ ವೃದ್ಧಿ ಇವುಗಳ ಮಧ್ಯೆ, ಭೂಮಿಯೊಳಗಿನ ಸುರಂಗ ಮಾರ್ಗಕ್ಕೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸುವ ಅಗತ್ಯವಿದೆಯೇ ಎಂಬುದು ಅವರ ಮೂಲ ಪ್ರಶ್ನೆ. ಆದರೆ ಈ ತಾರ್ಕಿಕ ಪ್ರಶ್ನೆಗೆ ತಾರ್ಕಿಕ ಹಾಗೂ ಸಮಂಜಸ ಉತ್ತರ ನೀಡುವುದರ ಬದಲು, ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡಿರುವುದು ವಿಷಾದನೀಯ. `ಈತ ಯಾರು?', `ಹುಡುಗ', `ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ' ಎಂಬ ಶಬ್ದಗಳು ಕೇವಲ ರಾಜಕೀಯ ಅಸಭ್ಯತೆಯಲ್ಲ, ಜನಪ್ರತ...

The SIT drama and the erosion of public faith in the Dharmasthala probe

Image
                                               Mr Pranab Mohanty, The question haunting Karnataka today is simple but deeply unsettling — will the Special Investigation Team (SIT) probing the Dharmasthala mass burial and Sowjanya cases present a truthful report, or will it tailor its findings to serve the interests of the powerful? What began as an exercise meant to restore faith in the system now appears to be descending into a political farce. When the SIT was first constituted under the leadership of Pranab Mohanty, many citizens and activists welcomed it as a sign that justice would finally be pursued without fear or favour. But that optimism has since evaporated. Even those who initially supported the SIT now question Mohanty’s independence and credibility. There is a growing belief that he is under immense pressure to deliver a report that tar...

ಎಸ್‍ಐಟಿ ನಾಟಕ ಮತ್ತು ಸಾರ್ವಜನಿಕ ವಿಶ್ವಾಸದ ಕುಸಿತ

Image
 ಸರ್ಕಾರದ ವರ್ತನೆಯೇ ಈ ಅನುಮಾನಗಳನ್ನು ಪುಷ್ಟೀಕರಿಸುವಂತಿದೆ                                                   ಎಸ್‍ಐಟಿ ತಂಡದ ಮುಖ್ಯಸ್ಥ ಮೊಹಂತಿ ಅಯೋಮಯ * ಬಿವಿಸೀ ಕರ್ನಾಟಕವನ್ನು ಇಂದು ಕಾಡುತ್ತಿರುವ ಜಟಿಲ ಪ್ರಶ್ನೆ ಅಷ್ಟೇ ಪ್ರಕ್ಷುಬ್ಧವೂ ಆಗಿದೆ. ಎಸ್‍ಐಟಿ ತನಿಖೆಯು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುವ ಅಸಹಜ ಸಾವುಗಳು, ಸಾಮೂಹಿಕ ಅಂತ್ಯಕ್ರಿಯೆಗಳು ಹಾಗೂ ಸೌಜನ್ಯ ಪ್ರಕರಣವನ್ನು ಶೋಧಿಸಿ ಸತ್ಯವಾದ ವರದಿಯನ್ನು ನೀಡುವುದೇ ಅಥವಾ ಪ್ರಬಲ ವ್ಯಕ್ತಿಗಳ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಸಿದ್ಧ ಪಡಿಸಲಾದ ವರದಿ ನೀಡುವುದೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಹೆಚ್ಚು ಮಾಡುವ ಉದ್ದೇಶದಿಂದ ರಚಿಸಲಾದ ತನಿಖೆಯು ಈಗ ರಾಜಕೀಯ ಪ್ರಹಸನದ ಹಾಗೆ ಕಾಣುತ್ತಿದೆ. ಎಸ್‍ಐಟಿ ತಂಡವನ್ನು ಪ್ರಣಬ್ ಮೊಹಂತಿ ಅವರ ನೇತೃತ್ವದಲ್ಲಿ ರಚಿಸಿದಾಗ, ಅನೇಕ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಅದನ್ನು ಸ್ವಾಗತಿಸಿದ್ದೇ ಅಲ್ಲದೆ, ಯಾವುದೇ ಭೀತಿ ಇಲ್ಲದೆ, ಪಕ್ಷಪಾತ ಇಲ್ಲದೆ ನ್ಯಾಯಯುತ ಮಾರ್ಗವನ್ನು ಅನುಸರಿಸಲಾಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಈ ಆಶಾಭಾವನೆ ಕ್ರಮೇಣ ಕರಗಿಹೋಗುತ್ತಿದೆ. ಆರಂಭದಲ್ಲಿ ಎಸ್‍ಐಟಿ ಬ...

Siddaramaiah must practise what he preaches

Image
  Chief Minister Siddaramaiah has been a consistent and forceful critic of the Modi government’s fiscal policies. He has accused the Centre of discriminating against Karnataka in the distribution of central funds, citing shortfalls in GST compensation and an unfair share from the divisible pool. His grievance has merit: data do show that BJP-ruled states and those crucial to the NDA’s survival, such as Bihar and Andhra Pradesh, have enjoyed a more generous flow of central resources. But fairness is a principle, not a slogan. And the question now being asked is whether Siddaramaiah himself practises the fiscal equity he demands from Delhi. Does his government distribute development funds across Karnataka’s 30 districts and 224 constituencies with the same sense of fairness he seeks from the Centre? Unfortunately, there are signs that it does not. At a public function in Puttur recently, Siddaramaiah proudly declared that his government had released ₹2,000 crore for that town’s devel...

ಸಿದ್ದರಾಮಯ್ಯ ನುಡಿದಂತೆ ನಡೆಯುವ ಮಹಾನುಭಾವನಾಗಲಿ

Image
  ಪುತ್ತೂರಿಗೆ ಬೇಕಾದ ಕನಿಷ್ಠ ಮಟ್ಟದ ಅಭಿವೃದ್ಧಿ ಮಂಗಳೂರಿಗೆ, ಉಡುಪಿಗೆ, ಕಾರ್ಕಳಕ್ಕೆ ಬೇಡವೇ? ............. ಖರೇ ಹೇಳಬೇಕಂದ್ರೆ * ಬಿವಿಸೀ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರವಾಗಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಬಲವಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಕೇಂದ್ರ ಸರ್ಕಾರವು ಕೇಂದ್ರ ಹಣಕಾಸು ನಿಧಿಯನ್ನು ಒದಗಿಸುವಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ, ಜಿಎಸ್‍ಟಿ ತೆರಿಗೆ ಪರಿಹಾರದಲ್ಲಿ ರಾಜ್ಯ ಕೊರತೆ ಎದುರಿಸುತ್ತಿದೆ, ವಿಭಜನಾರ್ಹ ಪರಿಹಾರ ನಿಧಿಯಲ್ಲಿ ಕರ್ನಾಟಕಕ್ಕೆ ಅರ್ಹ ಪಾಲನ್ನು ನೀಡುತ್ತಿಲ್ಲ ಎಂದು ಟೀಕಿಸುತ್ತಲೇ ಬಂದಿದ್ದಾರೆ. ಸಿದ್ದರಾಮಯ್ಯ ಅವರ ಆಕ್ಷೇಪಗಳಲ್ಲಿ ಸತ್ಯಾಂಶವಿದೆ. ದತ್ತಾಂಶಗಳೇ ತೋರುವಂತೆ, ಬಿಜೆಪಿ ಆಳ್ವಿಕೆಯ ರಾಜ್ಯಗಳು ಮತ್ತು ಎನ್‍ಡಿಎ ಮೈತ್ರಿಕೂಟದ ಉಳಿವಿಗೆ ನಿರ್ಣಾಯಕವಾಗುವ ರಾಜ್ಯಗಳಾದ ಬಿಹಾರ ಮತ್ತು ಆಂಧ್ರ ಪ್ರದೇಶಗಳು ಹೆಚ್ಚು ಉದಾರವಾದಿ ಕೇಂದ್ರ ಸರ್ಕಾರದ ಸಂಪನ್ಮೂಲಗಳನ್ನು ಪಡೆದುಕೊಳ್ಳುತ್ತಿವೆ. ಆದರೆ ನ್ಯಾಯವು ತತ್ವವಾಗಿರಬೇಕೇ ಹೊರತು ಕೇವಲ ಘೋಷಣೆ ಆಗಬಾರದು. ಸಿದ್ದರಾಮಯ್ಯ ಕೇಂದ್ರ ಸರ್ಕಾರದಿಂದ ಅಪೇಕ್ಷಿಸುವಂತಹ ಆರ್ಥಿಕ ಸಮಾನತೆಯ ನೀತಿಯನ್ನು ಸ್ವತಃ ಅನುಸರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಲಾಗುತ್ತಿದೆ. ರಾಜ್ಯ ಸರ್ಕಾರವು ಅಭಿವೃದ್ಧಿ ಹಣವನ್ನು ರಾಜ್ಯದ 30 ಜಿಲ್ಲೆಗಳಿಗೆ ಮತ್ತು 224 ಕ್ಷೇತ್ರಗಳಿಗೆ ಇದೇ ರೀತಿಯ ನ್ಯಾಯಯುತ ಮಾದರಿಯಲ್ಲಿ ವಿತರಿಸುತ್ತಿದೆಯೇ? ದುರದೃಷ...

ಕರ್ನಾಟಕದ ನದಿಗಳು ಅಪಾಯದಲ್ಲಿ; ಸರ್ಕಾರ ಕೂಡಲೇ ಕ್ರಮ ವಹಿಸಬೇಕು

 ತುರ್ತು ಕ್ರಮಗಳನ್ನು ಜರುಗಿಸದೆ ಹೋದರೆ ರಾಜ್ಯವು ಜೀವನಾಡಿಗಳನ್ನು ದ್ರವರೂಪದ ಹೊರೆಯನ್ನಾಗಿ ಕಾಣುವ ಅಪಾಯವನ್ನು ಎದುರಿಸಲಿದೆ. ................... ತಲ್ಲಣ * ಬಿವಿಸೀ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ (ಕೆಎಸ್‍ಪಿಸಿಬಿ) ಇತ್ತೀಚೆಗೆ ಗಂಭೀರ ಎಚ್ಚರಿಕೆಯನ್ನು ನೀಡಿದ್ದು, ರಾಜ್ಯದಲ್ಲಿರುವ 12 ಪ್ರಮುಖ ನದಿಗಳು ಮನುಷ್ಯರ ಬಳಕೆಗೆ ಯೋಗ್ಯವಿಲ್ಲ ಎಂದು ಹೇಳಿದೆ. ಈ ವಾಸ್ತವವು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆಘಾತಕಾರಿಯಾಗಿದ್ದು, ಪರಿಸರ ಸಮತೋಲನ ಮತ್ತು ಸುಸ್ಥಿರತೆಗೂ ಅಪಾಯ ತರುತ್ತದೆ. ಕುಡಿಯುವ ನೀರು, ಕೃಷಿ ಮತ್ತು ಕೈಗಾರಿಕೆಗಳಿಗೆ ಈ ನದಿಗಳನ್ನೇ ಅವಲಂಬಿಸುವ ಕರ್ನಾಟಕಕ್ಕೆ ಇದು ಗಂಭೀರ ಎಚ್ಚರಿಕೆಯಾಗಿದೆ. ಕೆಎಸ್‍ಪಿಸಿಬಿ ಸಲ್ಲಿಸಿರುವ ವಾರ್ಷಿಕ ನೀರಿನ ಗುಣಮಟ್ಟದ ವರದಿಯ ಅನುಸಾರ, ಕಲುಷಿತವಾಗಿರುವ ನದಿಗಳ ಪೈಕಿ ಕಾವೇರಿ, ಕೃಷ್ಣ, ತುಂಗಭದ್ರ, ಕಾಳಿ, ಭೀಮ, ಶಿಂಶಾ, ಕಬಿನಿ, ಮಲಪ್ರಭಾ, ಘಟಪ್ರಭಾ, ಹೇಮಾವತಿ ಮತ್ತು ಶರಾವತಿ ನದಿಗಳನ್ನು ಉಲ್ಲೇಖಿಸಲಾಗಿದೆ. ಈ ನದಿಗಳು ಒಟ್ಟಾರೆಯಾಗಿ ಏಳು ಕೋಟಿ ಜನರ ಅವಶ್ಯಕತೆಗಳನ್ನು ಪೂರೈಸುತ್ತಿದ್ದು, ಫಲವತ್ತಾದ ಕಾವೇರಿ ತಟದಿಂದ ಅತಿ ಹೆಚ್ಚು ಜನಸಂದಣಿ ಹೊಂದಿರುವ ಕರಾವಳಿಯ ದಕ್ಷಿಣ ಕನ್ನಡದವರೆಗೂ ಹರಿಯುತ್ತವೆ. ಅಪಾಯಕಾರಿ ಶೋಧ ಮಂಡಲಿಯ ನೀರು ಪರೀಕ್ಷೆಗಳಲ್ಲಿ ಕಂಡುಬಂದಿರುವಂತೆ, ಈ ನದಿಗಳ ಹಲವು ತೊರೆಗಳು ಅಪಾಯಕಾರಿ ಮಟ್ಟವನ್ನೂ ಮೀರಿರುವ ಬಯೋಕೆಮಿಕಲ್ ಆಕ್ಸಿಜನ್ ಅವಶ್ಯಕತೆಯನ್ನ...

Karnataka’s rivers in peril: an urgent call for statewide action

  The Karnataka State Pollution Control Board (KSPCB) has recently sounded a grave warning that water in 12 major rivers across the state is no longer fit for human consumption. This revelation strikes at the heart of public health and ecological sustainability in a state that relies heavily on these rivers for drinking water, agriculture, and industry. According to the KSPCB’s annual water quality report, the contaminated rivers include the  Cauvery, Krishna, Netravathi, Tungabhadra, Kali, Bhima, Shimsha, Kabini, Malaprabha, Ghataprabha, Hemavathi, and Sharavathi . These rivers collectively sustain over 7 crore people in Karnataka, flowing through regions that range from the fertile Cauvery basin to the densely populated coastal belt of Dakshina Kannada. The Alarming Findings The Board’s water testing revealed that several stretches of these rivers contained dangerously high levels of  biochemical oxygen demand (BOD) ,  coliform bacteria ,  ammonia , and  ...

ಆರೆಸ್ಸೆಸ್ ದಂಡ ರಾಷ್ಟ್ರಪ್ರೇಮವೇ? ಅಥವಾ ಭಯ ಹುಟ್ಟಿಸುವ ಸಂಕೇತವೇೀ?

 ಜನರ ಧೈರ್ಯಕ್ಕೆ ಭಯದ ದಂಡದ ನೆರಳು ಅಗತ್ಯವಿಲ್ಲ - ಜನರ ವಿಶ್ವಾಸದ ಬೆಳಕು ಸಾಕು. ............ ಖುಲ್ಲಂ ಖುಲ್ಲಾ * ಬಿವಿಸೀ ಭಾರತದ ಜನತಾಂತ್ರಿಕ ಪರಿಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಎಂದಿಗೂ ವಿವಾದದ ಕೇಂದ್ರವಾಗಿಯೇ ಉಳಿದಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಮೂರ್ತಿ ಹಾಗೂ ರಾಜ್ಯದ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅವರು ಕೇಳಿದ ಒಂದು ಸರಳವಾದ ಆದರೆ ತೀಕ್ಷ್ಣವಾದ ಪ್ರಶ್ನೆ: “ಸಂಘದ ಕಾರ್ಯಕರ್ತರು ಮೆರವಣಿಗೆಯ ವೇಳೆ ಕೈಯಲ್ಲಿ ದಂಡ ಹಿಡಿದು ಬೀದಿಗಿಳಿಯುವುದೇಕೆÉ?” ಮತ್ತೆ ದೇಶವ್ಯಾಪಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಆರೆಸ್ಸೆಸ್ ಈ ದಂಡವನ್ನು “ಶಾಖಾ ಶಿಸ್ತು”ವಿನ ಭಾಗವೆಂದು ಹೇಳಿಕೊಂಡರೂ, ನೂರಾರು ಕಾರ್ಯಕರ್ತರು ಖಾಕಿ ಪ್ಯಾಂಟ್, ಕಪ್ಪು ಟೋಪಿ ಧರಿಸಿ ಉದ್ದನೆಯ ದಂಡ ಹೆಗಲಿಗೇರಿಸಿ ಸಾಲು ಸಾಲಾಗಿ ನಡೆದು ಬಂದಾಗ ಅದು ಜನರಿಗೆ ಅರೆಸೈನಿಕ ಪರಾಕ್ರಮದ ಪ್ರದರ್ಶನದಂತಾಗುತ್ತದೆ. ಇದು ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಆತ್ಮವಿಶ್ವಾಸಕ್ಕಿಂತ ಭಯವನ್ನು ಮೂಡಿಸುವ ದೇಖಾವೆ. ಸಂಘದ ಉಡುಪು, ಡ್ರಿಲ್, ಮೆರವಣಿಗೆಗಳು ಮತ್ತು ಶಿಸ್ತಿನ ವ್ಯಾಯಾಮಗಳು ಯೂರೋಪಿನ 20ನೇ ಶತಮಾನದ ಫಾಸಿಸ್ಟ್ ಚಳವಳಿಗಳ ಮಾದರಿಯನ್ನು ನೆನಪಿಸುತ್ತವೆ. ಹಿಟ್ಲರ್ ಮತ್ತು ಮುಸ್ಸೋಲಿನಿ ಕಾಲದ “ರಾಷ್ಟ್ರಶಕ್ತಿ ಪ್ರದರ್ಶನ”ದಂತಿರುವ ಈ ದೃಶ್ಯಗಳು ಭಾರತದಂಥ ಕೋಮು ಸೂಕ್ಷ್ಮವಾಗಿರುವ ದೇಶದ ಜನರಲ್ಲಿ ಭಯ-ಭೀತಿ ಹುಟ್ಟಿಸುತ್ತವೆ. ಆರೆಸ್ಸೆಸ್...

ಕುಮಾರಸ್ವಾಮಿ ಮುಖ್ಯಮಂತ್ರಿ?: ನೈತಿಕವಾಗಿ ದಿವಾಳಿಯಾದ ಬಿಜೆಪಿ

 ಪಕ್ಷದ ತಳಪಾಯವನ್ನು ಮರಳಿ ಕಟ್ಟುವ ಬದಲು, ಅಪರಿಮಿತ ಸ್ವಾರ್ಥ, ಭೂ ಕಬಳಿಕೆ ಮತ್ತು ಸ್ವಜನ ಪಕ್ಷಪಾತದ ಆರೋಪಗಳನ್ನು ಎದುರಿಸುತ್ತಿರುವ ಹಸಿವೇ ಇಂಗದ ಜೆಡಿಎಸ್ ನಾಯಕನಿಗೆ ಮರುಜೀವ ಕೊಡುವ ಬಿಜೆಪಿ ನಿರ್ಧಾರ ಅಸಂಬದ್ಧ ಎನಿಸುತ್ತದೆ. ............................ ಅಹುದಾದರಹುದೆನ್ನಿ * ಬಿವಿಸೀ ಕರ್ನಾಟಕದ ರಾಜಕಾರಣದಲ್ಲಿ ಅಚ್ಚರಿಗಳಿಗೇನೂ ಕೊರತೆ ಇಲ್ಲ ಆದರೆ ಇತ್ತೀಚೆಗೆ ದೆಹಲಿಯ ರಾಜಕೀಯ ವಲಯದಿಂದ ಕೇಳಿಬರುತ್ತಿರುವ ಒಂದು ಗುಸು ಗುಸು ಸುದ್ದಿ ನಿಜಕ್ಕೂ ಅಸಂಬದ್ಧ ಎನಿಸುತ್ತದೆ. ಬಿಜೆಪಿ ಕರ್ನಾಟಕದಲ್ಲಿ ಜೆಡಿಎಸ್ ನಾಯಕ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರ ಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಬಿಂಬಿಸುವ ಈ ನಿರ್ಧಾರ ಅಪ್ರಬುದ್ಧ ನಿರ್ಣಯ ಎನಿಸುತ್ತದೆ. ಚುನಾವಣೆಗಳು ಇನ್ನೂ ಎರಡು ವರ್ಷ ದೂರ ಇದ್ದು, ಈ ಆಲೋಚನೆಯೇ ಎರಡೂ ಪಕ್ಷಗಳಲ್ಲಿ ಸಂಚಲನ ಉಂಟುಮಾಡಿರುವುದಲ್ಲದೆ, ಬಿಜೆಪಿಯ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ. ಈ ಸುದ್ದಿಯಲ್ಲಿ ಸತ್ಯಾಂಶವೇನಾದರೂ ಇದ್ದರೆ, ಇದು ಹತಾಶೆಯ ಸಂಕೇತವಾಗಿ ಕಾಣುವುದೇ ಹೊರತು, ಕಾರ್ಯತಂತ್ರವಾಗಿ ಅಲ್ಲ. ಕರ್ನಾಟಕದಲ್ಲಿ ಬಿಜೆಪಿ ಈಗಾಗಲೇ ಆಂತರಿಕ ಬಿರುಕುಗಳಿಂದ ದಿಕ್ಕೆಟ್ಟಿದ್ದು ನಾಯಕತ್ವದ ಕೊರತೆ, ಕುಸಿಯುತ್ತಿರುವ ಸಾರ್ವಜನಿಕ ವಿಶ್ವಾಸದಿಂದ ತತ್ತರಿಸುತ್ತಿದೆ. ಪಕ್ಷದ ತಳಪಾಯವನ್ನು ಮರಳಿ ಕಟ್ಟುವ ಬದಲು, ಅಪರಿಮಿತ ಸ್ವಾರ್ಥ, ಭೂ ಕಬಳಿಕೆ ಮತ್ತು ಸ್ವಜನ ಪಕ್ಷಪಾತದ ಆರೋಪಗಳನ್ನು ಎದುರ...

The BJP’s dangerous daydream: why projecting Kumaraswamy CM would be political suicide

  Politics in Karnataka is never short of surprises, but the latest rumour from New Delhi’s corridors borders on the absurd — that the BJP might project H D Kumaraswamy, the JD(S) leader and now Union Minister, as its next chief ministerial face. The elections are still two years away, yet this bizarre idea has already unsettled both parties and confused BJP’s own cadre. If there is even a shred of truth to it, the plan reeks of desperation rather than strategy. The BJP in Karnataka is already struggling to recover from internal fractures, leadership vacuum, and declining public confidence. Instead of rebuilding its base, the central leadership seems to be toying with the fantasy of resurrecting a discredited politician whose reputation is mired in land grab and nepotism charges. Kumaraswamy represents everything the BJP once claimed to fight against — dynasty, corruption, and opportunism. Worse still, such a move would send out a devastating message — that the BJP has  no cre...

When Godmen become untouchable: The Asaram shadow and the silence of Dharmasthala

  In 2013, when a 16-year-old girl accused self-styled godman Asaram of rape, India’s conscience shuddered. (Before this, several rape and deaths by Asaram and henchmen had occurred. The 2013 case only served as a trigger for hunting Asaram.) But instead of outrage, the first wave that hit was denial. Millions who had worshipped him refused to believe a “divine” man could commit such a sin. Asaram’s empire — temples, schools, media channels, and an army of fanatics — rose in defense. What followed was a war not just against the survivor but against truth itself. Journalists who dared to report were threatened, beaten, and vilified. Some were driven underground. The media’s moral spine was tested — and most of it snapped. This pattern is eerily familiar in Karnataka. In Dharmasthala, where a godman-family has reigned for decades under the cloak of philanthropy and piety, the same mixture of devotion, fear, and denial prevails. When accusations surfaced — from mysterious deaths ...

ದೇವಮಾನವರು ಅತೀತರಾದಾಗ - ಅಸಾರಾಂನಿಂದ ಧರ್ಮಸ್ಥಳದವರೆಗೆ

 2013ರಲ್ಲಿ 16 ವರ್ಷದ ಬಾಲಕಿಯೊಬ್ಬಳು ಸ್ವಘೋಷಿತ ದೇವಮಾನವ ಅಸಾರಾಂ ಅವರ ಮೇಲೆ ಅತ್ಯಾಚಾರದ ಆರೋಪ ಮಾಡಿದಾಗ, ಭಾರತದ ಸಾರ್ವಜನಿಕ ಪ್ರಜ್ಞೆ ಅಲ್ಲಾಡಿಹೋಗಿತ್ತು. (ಇದಕ್ಕೂ ಮುನ್ನ ಅಸಾರಾಂ ಮತ್ತು ಅವರ ಬೆಂಬಲಿಗರು ಹಲವು ಅತ್ಯಾಚಾರ, ಹತ್ಯೆಗಳಿಗೆ ಕಾರಣರಾಗಿದ್ದರು. 2013ರ ಪ್ರಕರಣವು ಅಸಾರಾಂ ಅವರನ್ನು ಬೆನ್ನಟ್ಟಲು ಒಂದು ಸ್ಪಷ್ಟ ಅವಕಾಶ ಒದಗಿಸಿತ್ತು.) ಆದರೆ ಆರಂಭದಲ್ಲಿ ಆಕ್ರೋಶದ ಬದಲು ವ್ಯಕ್ತವಾಗಿದ್ದು ನಿರಾಕರಣೆ. ಆತನನ್ನು ಆರಾಧಿಸುತ್ತಿದ್ದ ಲಕ್ಷಾಂತರ ಜನರು, ದೇವಮಾನವನೊಬ್ಬ ಇಂತಹ ಹೀನ ಅಪರಾಧ ಮಾಡುತ್ತಾನೆ ಎನ್ನುವುದನ್ನು ನಂಬಲು ಒಪ್ಪಲಿಲ್ಲ ಅಸಾರಾಂನ ಸಾಮ್ರಾಜ್ಯ, ದೇವಾಲಯಗಳು, ಶಾಲೆಗಳು, ಮಾಧ್ಯಮ ವಾಹಿನಿಗಳು, ಅಂಧ ಭಕ್ತರ ಪಡೆಗಳು, ಆತನ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತವು. ತದನಂತರ ನಡೆದದ್ದು ಸಂತ್ರಸ್ತೆಯ ವಿರುದ್ಧ ಸಮರ ಮಾತ್ರವಲ್ಲ, ಸತ್ಯದ ವಿರುದ್ಧವೇ ಯುದ್ಧ ನಡೆದಿತ್ತು. ವರದಿಯನ್ನು ಪ್ರಕಟಿಸಿದ  ಪತ್ರಕರ್ತರನ್ನು ಬೆದರಿಸಲಾಯಿತು, ಅವರ ಮೇಲೆ ದಾಳಿ ಮಾಡಲಾಯಿತು, ಅಪಮಾನಿಸಲಾಯಿತು. ಕೆಲವರು ಭೂಗತರಾಗಬೇಕಾಯಿತು. ಮಾಧ್ಯಮದ ಬೆನ್ನೆಲುಬು ನೈತಿಕವಾಗಿ ಅಗ್ನಿಪರೀಕ್ಷೆಗೊಳಗಾಗಿತ್ತು. ಬಹುತೇಕವಾಗಿ ಇದು ಕುಸಿದಿದ್ದವು. ಇದೇ ಮಾದರಿಯನ್ನು ಈಗ ಕರ್ನಾಟಕದಲ್ಲಿ ನೋಡುತ್ತಿದ್ದೇವೆ. ಧರ್ಮಸ್ಥಳದಲ್ಲಿ ದೇವಮಾನವ ಕುಟುಂಬವು ಹಲವು ದಶಕಗಳ ಕಾಲ ದಾನ ಧರ್ಮಗಳಲ್ಲಿ, ಸರಳತೆ ಮತ್ತು ಧರ್ಮನಿಷ್ಠೆಯ ನೆಪದಲ್ಲಿ, ಇದೇ ರೀತಿಯ ಭಕ್ತಿ, ...

ಭ್ರಷ್ಟಾಚಾರದ ಕಾವಲಿನಲ್ಲಿ: ಕುಸಿದ ವಿಧಾನಸಭಾಧ್ಯಕ್ಷರ ಹುದ್ದೆಯ ನೈತಿಕ ನೆಲೆ

Image
  ಜನತೆಯ ನಂಬಿಕೆ ಎಂಬ ಅಮೂಲ್ಯ ಆಸ್ತಿ ರಾಜಕೀಯದ ಕಮಿಷನ್ ಬಜಾರಿನಲ್ಲಿ ಹರಾಜಾಗುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ............ ವಾಸ್ತವವಾಗಿ, ಉನ್ನತ ಮಟ್ಟದ ಸಿಟ್ಟಿಂಗ್ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಖಾದರ್ ಅವರನ್ನು ದೋಷಮುಕ್ತ ಎಂದು ಸಾರುವವರೆಗೆ ಖಾದರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸ್ವಲ್ಪವಾದರೂ ಅವರ ಸ್ಥಾನದ ಗೌರವ ಉಳಿಸಿದಂತಾಗುತ್ತದೆ. ................ ನೇರಾನೇರ * ಬಿವಿಸೀ ಕರ್ನಾಟಕ ರಾಜಕೀಯದಲ್ಲಿ ಪ್ರತಿ ಬಾರಿ ಚುನಾವಣಾ ಬಿರುಗಾಳಿ ಎದ್ದಾಗ ನೈತಿಕತೆ, ಪಾರದರ್ಶಕತೆ, ಆಡಳಿತ ಶುದ್ಧಿ ಎಂಬ ಮಾತುಗಳು ಕೇಳಿಸುತ್ತವೆ. ಆದರೆ ಅಧಿಕಾರದ ಬಾಗಿಲು ಮುಚ್ಚುತ್ತಿದ್ದಂತೆಯೇ ಆ ಮಾತುಗಳು ಕಾಣೆಯಾಗಿಹೋಗುತ್ತವೆ. ಇದೀಗ ಮಾಜಿ ವಿಧಾನಸಭಾಧ್ಯಕ್ಷ ಮತ್ತು ಪ್ರಸ್ತುತ ಲೋಕಸಭಾ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಉತ್ತರಾಧಿಕಾರಿ, ಪ್ರಸ್ತುತ ಸ್ಪೀಕರ್ ವಿರುದ್ಧ ಮಾಡಿದ ಭ್ರಷ್ಟಾಚಾರದ ಆರೋಪಗಳು ಈ ನೈತಿಕ ಕುಸಿತದ ಹೊಸ ಮುಖವನ್ನು ತೆರೆದಿವೆ. ಕಾಗೇರಿ ಅವರು ಸದಾ ಶಾಂತ ಸ್ವಭಾವದ, ವಿಧಾನಸಭಾ ಶಿಸ್ತಿನ ಸಂಕೇತವೆಂದೇ ಪರಿಗಣಿಸಲ್ಪಟ್ಟ ನಾಯಕ. ಅವರ ಬಾಯಿಂದ ಈ ರೀತಿಯ ಆರೋಪಗಳು ಹೊರಬಂದಿರುವುದೇ ಜನರಲ್ಲಿ ಗಂಭೀರ ಚಿಂತನೆ ಹುಟ್ಟಿಸಿದೆ. ಅವರು ಹೇಳಿರುವಂತೆ, ಸ್ಪೀಕರ್ ಕಚೇರಿಯ ಖರ್ಚು, ಟೆಂಡರ್ ಪ್ರಕ್ರಿಯೆಗಳು ಹಾಗೂ ಕಟ್ಟಡ ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿದೆ. ಅಂದರೆ, ವಿಧಾನಸಭೆಯು ಕಾನೂನಿನ ಮಂದಿರವಾಗ...

ಬೆಳ್ತಂಗಡಿ: ಸೌಜನ್ಯಗೆ ನ್ಯಾಯ ಹೋರಾಟ ಉಲ್ಬಣ; ಸರ್ಕಾರದ ನಿಶ್ಚಲತೆ, ಎಸ್‍ಐಟಿ ಋಜುತ್ವಕ್ಕೆ ಸವಾಲು

Image
  ಅಗ್ನಿ ಪರೀಕ್ಷೆ * ಬಿವಿಸೀ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಮತ್ತೆ `ಸೌಜನ್ಯಗೆ ನ್ಯಾಯ' ಹೋರಾಟ ಕಿಡಿಕಾರುತ್ತಿದೆ. ಮೊನ್ನೆ ಪಟ್ಟಣದ ತಹಶೀಲ್ದಾರ್ ಕಚೇರಿಯ ಎದುರು ನಾಗರಿಕರು ಮನವಿ ಸಲ್ಲಿಸಲು ಪ್ರಯತ್ನಿಸಿದಾಗ, ಪೆÇಲೀಸರು ಒಡ್ಡಿದ ತಡೆಯಿಂದಾಗಿ ಪರಿಸ್ಥಿತಿ ವಿಷಮಗೊಂಡಿತು. ಕ್ಷಣಾರ್ಧದಲ್ಲಿ ವಾತಾವರಣ ಕದಡಿ, ಪೆÇಲೀಸರು ಮತ್ತು ಪ್ರತಿಭಟನಾಕಾರರು ಮುಖಾಮುಖಿಯಾಗುವಂತಾಯಿತು. ``ನಿಮಗೆ ತಹಶೀಲ್ದಾರರನ್ನು ಭೇಟಿಯಾಗಲು ಅನುಮತಿಯಿಲ್ಲ'' ಎಂದು ಪೊಲೀಸ್ ಅಧಿಕಾರಿ ಅಬ್ಬರಿಸಿದಾಗ, ಹೋರಾಟಗಾರರ ನಾಯಕಿ ಪ್ರಸನ್ನ ರವಿ ಸ್ವತಃ ಯಾರೊಂದಿಗೋ ಫೋನಿನಲ್ಲಿ ಮಾತನಾಡಿ ಆ ನಿಟ್ಟಿನಲ್ಲಿ ಅನುಮತಿ ಪಡೆದುಕೊಂಡರೂ, ಪ್ರತಿಭಟನಾಕಾರರಿಂದ ಮನವಿ ಪಡೆಯಲು ತಹಶೀಲ್‍ದಾರರಾಗಲೀ ಅವರಿಂದ ಅಧಿಕಾರ ಪಡೆದವರಾಗಲೀ ಯಾರೂ ಕಚೇರಿಯಲ್ಲಿ ಇರಲಿಲ್ಲ. 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮತ್ತು ಇತರ ಅನೇಕ ರೇಪ್ ಎಂಡ್ ಮರ್ಡರ್ ಪ್ರಕರಣಗಳಲ್ಲಿ ನಿಜವಾದ ಅಪರಾಧಿಗಳು ಯಾರೆಂಬುದು ಇನ್ನೂ ಬೆಳಕಿಗೆ ಬಂದಿಲ್ಲ. ವರ್ಷಗಳ ತನಿಖೆ, ಬದಲಾದ ಅಧಿಕಾರಿಗಳು, ರಾಜಕೀಯ ಬದಲಾವಣೆಗಳು - ಎಲ್ಲವೂ ನಡೆದರೂ ಸತ್ಯ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಜನರು ಸರ್ಕಾರದ ವಾಗ್ದಾನಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. "ನ್ಯಾಯ ತಡವಾದರೆ ಅದು ಅನ್ಯಾಯ" ಎನ್ನುವ ಮಾತು ಇಲ್ಲಿ ನಿಜವಾಗುತ್ತಿದೆ. ಈ ಪ್ರಕರಣ ಮಾತ್ರವಲ್ಲದೆ ಧರ್ಮಸ್ಥಳ ಮತ್ತು ಅದರ...

Boards without purpose, politics without shame

  Karnataka’s government keeps creating decorative posts to please its loyalists—while the state treasury gasps for air. By any measure of governance, Karnataka’s latest spree of appointments to boards and corporations is indefensible. These bodies—hundreds of them scattered across departments—are bureaucratic fossils: unfunded, inactive, and irrelevant. Yet the government insists on keeping them alive, not out of necessity but out of political convenience. The pretext is “representation.” The reality is  appeasement . These chairmanships and memberships are consolation prizes for party loyalists who didn’t make it to the cabinet. Once the list is announced, the appointees pose for photographs, bask briefly in media glare, and then vanish into irrelevance. With no funds to even hold a meeting, these bodies serve neither governance nor the public interest. The irony would be comical if it weren’t tragic. Even as the government filled these ornamental posts, the  State Admi...

ನಿಗಮ, ಮಂಡಳಿಗಳು ಯಾವ ಪುರುಷಾರ್ಥಕ್ಕೆ?

 ರಾಜ್ಯ ಸರ್ಕಾರವು ತನ್ನ ನಿಷ್ಠಾವಂತರನ್ನು ಸಂತೃಪ್ತಿಪಡಿಸುವ ಸಲುವಾಗಿ ಆಲಂಕಾರಿಕ ಹುದ್ದೆಗಳನ್ನು ಸೃಷ್ಟಿಸುತ್ತಿದೆ ಆದರೆ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ. ........................ ಖುಲ್ಲಂಖುಲ್ಲಾ * ಬಿವಿಸೀ ಆಳ್ವಿಕೆಯ ಯಾವುದೇ ಮಾನದಂಡದಲ್ಲಿ ನೋಡಿದರೂ ಕರ್ನಾಟಕದ ಇತ್ತೀಚಿನ ನಿಗಮ ಮಂಡಲಿಗಳ ನೇಮಕಾತಿ ಪ್ರಕ್ರಿಯೆಯನ್ನು ಸಮರ್ಥಿಸಲಾಗುವುದಿಲ್ಲ. ಈ ಸಂಸ್ಥೆಗಳು ವಿವಿಧ ವಿಭಾಗಗಳಲ್ಲಿ ಹರಡಿ ನೂರಾರು ಸಂಖ್ಯೆಯಲ್ಲಿದ್ದು, ಮೂಲತಃ ಅಧಿಕಾರಶಾಹಿಯ ಪಳೆಯುಳಿಕೆಗಳಾಗಿವೆ, ಅನುದಾನ ಇಲ್ಲದೆ, ನಿಷ್ಕ್ರಿಯವಾಗಿ ಬಹುಮಟ್ಟಿಗೆ ಅಪ್ರಸ್ತುತವಾಗಿಬಿಟ್ಟಿವೆ. ಆದರೂ ಸರ್ಕಾರ ಈ ಸಂಸ್ಥೆಗಳನ್ನು ಜೀವಂತವಾಗಿರಿಸಲು ಪರದಾಡುತ್ತಿದ್ದು, ಇದು ಅವಶ್ಯಕತೆಗಿಂತಲೂ ರಾಜಕೀಯ ಅನುಕೂಲಕ್ಕಾಗಿ ಕೈಗೊಳ್ಳುವ ಕ್ರಮವಾಗಿದೆ. ಈ ನೇಮಕಗಳಿಗೆ ಪ್ರಾತಿನಿಧ್ಯ ಎನ್ನುವುದು ನೆಪಮಾತ್ರವಾಗಿದ್ದು ಮೂಲತಃ ಇದು ತುಷ್ಟೀಕರಣದ ಕ್ರಮವಾಗಿದೆ. ಈ ಅಧ್ಯಕ್ಷಗಿರಿಗಳು ಮತ್ತು ಸದಸ್ಯತ್ವಗಳು ಪಕ್ಷದ ನಿಷ್ಠಾವಂತರಿಗೆ, ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದಿದ್ದವರಿಗೆ ನೀಡುವ ಸಮಾಧಾನಕರ ಬಹುಮಾನದಂತಾಗಿವೆ. ಒಮ್ಮೆ ಪಟ್ಟಿಯನ್ನು ಪ್ರಕಟಿಸಿದರೆ, ನೇಮಕಗೊಂಡವರು ತಮ್ಮ ಭಾವಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾರಂಭಿಸುತ್ತಾರೆ ಆದರೆ ಕ್ರಮೇಣ ಅಪ್ರಸ್ತುತವಾಗಿಬಿಡುತ್ತಾರೆ. ಒಂದು ಸಭೆ ನಡೆಸಲೂ ಸಹ ಹಣಕಾಸು ಸೌಲಭ್ಯ ಇಲ್ಲದಿರುವಾಗ ಈ ಸಂಸ್ಥೆಗಳು ಆಳ್ವಿಕೆಗೂ ನೆರವಾಗುವುದಿಲ್ಲ ಅಥವಾ ಸಾ...

ವಿದ್ಯಾರ್ಥಿ, ಶಿಕ್ಷಕರಿಗೆ ದ್ರೋಹ ಬಗೆದ ರಾಜ್ಯ ಸರ್ಕಾರ

 ಕರ್ನಾಟಕ ಸರ್ಕಾರದಿಂದ ನಿರ್ವಹಿಸಲ್ಪಡುವ ಶಾಲಾ ಕಾಲೇಜುಗಳು ಕ್ರಮೇಣ ಅವಸಾನದತ್ತ ಸಾಗುತ್ತಿದ್ದು, ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯು ಈ ವಿನಾಶಕಾರಿ ಬೆಳವಣಿಗೆಯ ನಡುವೆಯೂ ನಿರ್ಲಕ್ಷ್ಯದಿಂದಲೇ ವರ್ತಿಸುತ್ತಿದೆ. ಶಿಕ್ಷಕರಿಗೆ ಹಲವು ತಿಂಗಳುಗಳ ವೇತನ ಪಾವತಿಯಾಗಿಲ್ಲ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬಹುಮುಖ್ಯವಾದ ಅನುದಾನಗಳನ್ನು ಪಡೆಯುತ್ತಿಲ್ಲ. ಶಾಲಾ ಕೊಠಡಿಗಳು ಕುಸಿದು ಬೀಳುತ್ತಿವೆ. ತನ್ನ ಬಾಧ್ಯತೆ ಮತ್ತು ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಲು ರಾಜ್ಯ ಸರ್ಕಾರವು ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ವ್ಯವಸ್ಥೆಯನ್ನು ಅಳವಡಿಸಿದ್ದು, ಈ ಬೋಧಕರನ್ನು ವರ್ಷದ ಹತ್ತು ತಿಂಗಳುಗಳಲ್ಲಿ ದುಡಿಸಿಕೊಳ್ಳಲಾಗುತ್ತದೆ ತದನಂತರ ಬೇಸಿಗೆ ರಜೆಯಲ್ಲಿ ಇವರು ನಿರುದ್ಯೋಗಿಗಳಾಗುತ್ತಾರೆ.  ಈ ಹತ್ತು ತಿಂಗಳುಗಳ ಅವಧಿಯಲ್ಲೂ ವೇತನಗಳನ್ನು ವಿಳಂಬ ಮಾಡಲಾಗುತ್ತಿದೆ ಅಥವಾ ತಡೆಹಿಡಿಯಲಾಗುತ್ತಿದೆ. ಇದು ಅಸಾಂಪ್ರದಾಯಿಕ ಮಾತ್ರವೇ ಅಲ್ಲ, ಕ್ರೂರ ವ್ಯವಸ್ಥೆಯಾಗಿದೆ. ಸಮಾಜದ ಬೆನ್ನೆಲುಬಾಗಿರುವ ಬೋಧಕರನ್ನು ಬಳಸಿ ಬಿಸಾಡುವ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದು, ಕೆಲವರು ವೇತನ ರಹಿತ ಕೆಲಸದ ಭಾರಕ್ಕೆ ನಲುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವು ಈ ಬೆಳವಣಿಗೆಗೆ ಮೌನ ವಹಿಸಿದ್ದು ಅನ್ಯಮನಸ್ಕವಾಗಿ, ತಟಸ್ಥವಾಗಿ ಉಳಿದಿದೆ. ಪೆÇೀಷಕರು ಅಸಹಾಯಕರಾಗಿ ತಮ್ಮ ಮಕ್ಕಳ ಭವಿಷ್ಯದತ್ತ ನೋಡುತ್ತಿದ್ದು, ಈ ಮಕ್ಕಳ...

ರಾಷ್ಟ್ರೀಯವಾದದ ಅಪಕಲ್ಪನೆ ಭಾರತಕ್ಕೆ ದುಬಾರಿಯಾಗುತ್ತಿದೆ

 ರಾಷ್ಟ್ರೀಯವಾದವು ಆತ್ಮವಿಶ್ವಾಸವನ್ನು ಬೆಳೆಸಬೇಕೇ ಹೊರತು ಅಭದ್ರತೆಯನ್ನಲ್ಲ ......... ಅಹುದಾದರಹುದೆನ್ನಿ * ಬಿವಿಸೀ ಕಳೆದ ಒಂದು ದಶಕದಲ್ಲಿ ಭಾರತ ಉಗಮಿಸುತ್ತಿರುವ ಜಾಗತಿಕ ಶಕ್ತಿ ಎಂದೇ ಸ್ವತಃ ಬಿಂಬಿಸಿಕೊಳ್ಳುತ್ತಿದೆ. ಸೇನಾ ಸಾಮಥ್ರ್ಯದಿಂದ ಬಾಹ್ಯಾಕಾಶದವರೆಗೆ, ಸ್ಪಷ್ಟ ಸಂದೇಶವನ್ನು ರವಾನಿಸಿದ್ದು, ಭಾರತವನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲ ಎಂದು ಜಗತ್ತಿಗೆ ಸಾರಿ ಹೇಳುತ್ತಿದೆ. ಆದರೆ ಈ ಆತ್ಮವಿಶ್ವಾಸದ ಹಿಂದೆ ಬೆಳೆಯುತ್ತಿರುವ ಸಮಸ್ಯೆಯೂ ಅಡಗಿದೆ. ರಾಷ್ಟ್ರೀಯವಾದವು ಸಾಮಾನ್ಯವಾಗಿ ರಕ್ಷಣಾತ್ಮಕವಾಗಿ, ಭಾವನಾತ್ಮಕವಾಗಿ, ಸಮೀಪ ದೃಷ್ಟಿಯ ಮೂಲಕ ವ್ಯಕ್ತವಾಗುತ್ತದೆ. ಈ ಹೆಮ್ಮೆಯ ಅಪಕಲ್ಪನೆಯು ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವಕ್ಕೆ ಧಕ್ಕೆ ಉಂಟುಮಾಡುತ್ತಿದೆ. ನಮ್ಮ ದೇಶದ ಬಗ್ಗೆ ಹೆಮ್ಮೆಪಡುವುದು ತಪ್ಪಲ್ಲ. ಪ್ರತಿಯೊಂದು ದೇಶವೂ ಸಹ ತನ್ನ ಸಾಧನೆಗಳನ್ನು ಸಂಭ್ರಮಿಸಲು ಮತ್ತು ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಹಕ್ಕು ಪಡೆದಿರುತ್ತದೆ. ಆದರೆ ಸಮಸ್ಯೆ ಎದುರಾಗುವುದು ದೇಶಪ್ರೇಮವು ಹಗೆತನವಾಗಿ ಪರಿಣಮಿಸಿದಾಗ. ಪ್ರತಿಯೊಂದು ಜಾಗತಿಕ ಟೀಕೆಯನ್ನೂ ಸಹ ದೇಶದ ಮೇಲಿನ ದಾಳಿ ಎಂದು ಭಾವಿಸುವುದು, ತನ್ನ ನಿಲುವುಗಳನ್ನು ಒಪ್ಪದಿರುವುದನ್ನೇ ದೇಶದ್ರೋಹ ಎಂದು ಪರಿಗಣಿಸುವುದು ಸಾಮಾನ್ಯವಾಗಿಬಿಡುತ್ತದೆ. ಈ ಧೋರಣೆಯೇ ಭಾರತವನ್ನು, ಆತ್ಮವಿಶ್ವಾಸದಿಂದ ಇರಬೇಕಾದ ಸಮಯದಲ್ಲಿ ಅಸುರಕ್ಷಿತ ಎಂದು ಭಾವಿಸುವಂತಾಗಿದೆ. ಭ...

Misplaced nationalism is costing India its global leverage

  Over the past decade, India has proudly projected itself as a rising global power. From military strength to space exploration, the message has been clear — India is no longer a country that can be ignored. But behind this confidence lies a growing problem: nationalism that often turns defensive, emotional, and short-sighted. This misplaced sense of pride is slowly hurting India’s image abroad and limiting its diplomatic influence. There is nothing wrong in being proud of one’s country. Every nation has the right to celebrate its achievements and protect its interests. The problem begins when patriotism turns into hostility — when every global criticism is treated as an attack, and every disagreement is seen as anti-national. This attitude is making India appear insecure at a time when it should be confident. Take India’s foreign relations, for instance. Once known for its moral leadership and diplomatic balance, India is now increasingly seen as unwilling to listen or compromise...

Karnataka betrays its teachers and students: education in crisis

  Karnataka’s government-run schools and colleges are collapsing, and the state administration’s negligence is at the heart of this disaster. Teachers are routinely left unpaid for months. Colleges and universities are denied crucial grants. Classrooms are crumbling. The state, desperate to cut liabilities, has turned to a system of  guest teachers  and  guest lecturers —hired for barely ten months a year and dumped into unemployment once summer vacation begins. Even during those ten months, salaries are often delayed or withheld. This is not just unconventional; it is cruel. Educators, the backbone of society, are treated as disposable. Some have even taken their own lives under the unbearable stress of unpaid work. And the government? Silent, indifferent, unmoved. Parents watch helplessly as their children’s futures are mortgaged to administrative incompetence. Students’ learning suffers, morale collapses, and the entire public education system teeters on the edge....

ಶಿಸ್ತು ಕಳೆದುಕೊಂಡು ಕಳಾಹೀನವಾದ ರಾಜ್ಯ ಕಾಂಗ್ರೆಸ್

 ಕರ್ನಾಟಕದ ಕಾಂಗ್ರೆಸ್ ಪಕ್ಷವು ನಿರ್ಣಾಯಕ ಪರೀಕ್ಷೆಯನ್ನು ಎದುರಿಸುತ್ತಿದೆ ಅಲವಾದರಲವೆನ್ನಿ * ಬಿವಿಸೀ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಸರ್ವರಿಗೂ ಮುಕ್ತವಾದ ಅಖಾಡ ಆದಂತೆ ಕಾಣುತ್ತಿದ್ದು ಇಲ್ಲಿ ಪಕ್ಷದ ನಾಯಕರು ಆಂತರಿಕ ವ್ಯವಹಾರಗಳ ಬಗ್ಗೆ ಮಾತನಾಡುವಾಗ ಕಿಂಚಿತ್ತಾದರೂ ಸಂಯಮ ತೋರುತ್ತಿಲ್ಲ, ಅದರ ಪರಿಣಾಮಗಳ ಕುರಿತು ಯೋಚಿಸುತ್ತಿಲ್ಲ. ಪಕ್ಷದಲ್ಲಿ ಶಿಸ್ತು ಇಲ್ಲವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ರಾಜ್ಯದಲ್ಲಿ ಅಧಿಕಾರ ಹೊಂದಿರುವ ಪಕ್ಷವು ಸ್ಥಿರತೆ ಮತ್ತು ಸಹಕಾರವನ್ನು ತೋರುವುದರ ಬದಲು ಅಶಿಸ್ತನ್ನು ಪ್ರದರ್ಶಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಕೆ ಎನ್ ರಾಜಣ್ಣ ನಿರ್ಗಮನದೊಂದಿಗೆ ಆರಂಭವಾದ ಈ ಕತೆ ಬರುಬರುತ್ತಾ ಹದಗೆಡುತ್ತಿದೆ. ರಾಜಣ್ಣ ಅವರನ್ನು ಅವರ ಲಂಗುಲಗಾಮಿಲ್ಲದ ಆಕ್ರೋಶಭರಿತ ಮಾತುಗಳು ಮತ್ತು ಸರ್ಕಾರ ಹಾಗೂ ಪಕ್ಷದ ಬಗ್ಗೆ ಅನಗತ್ಯ ಹೇಳಿಕೆಗಳ ಕಾರಣಕ್ಕೆ ಸಚಿವ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಆದಾಗ್ಯೂ ಬೇಕಾಬಿಟ್ಟಿ, ವಿವೇಚನಾರಹಿತ ಹೇಳಿಕೆಗಳು ಮುಂದುವರೆದಿದ್ದು, ರಾಜಣ್ಣ ಅವರ ಸ್ಥಾನವನ್ನು ಈಗ ಮುಖ್ಯಮಂತ್ರಿಗಳ ಮಗ, ಎಂಎಲ್‍ಸಿ ಯತೀಂದ್ರ ಅವರೇ ಆಕ್ರಮಿಸಿದ್ದಾರೆ. ಇವರ ಹೇಳಿಕೆಗಳು ಗೊಂದಲವನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತಿವೆ. ಯತೀಂದ್ರ ಪದೇ ಪದೇ ಸಿದ್ದರಾಮಯ್ಯ ತಮ್ಮ ಐದು ವರ್ಷಗಳ ಅವಧಿಯನ್ನು ಪೂರೈಸಲಿದ್ದಾರೆ ಎಂದು ಹೇಳುತ್ತಲೇ ಬಂದಿದ್ದಾರೆ. ಈ ಹೇಳಿಕೆಗಳ ಹಿಂದಿನ ಸ್ಪಷ...

ರಾಜ್ಯದ ಹಣಕಾಸು ಬಿಕ್ಕಟ್ಟು, ಜನಕಲ್ಯಾಣವೇ ದೌರ್ಬಲ್ಯ

 ಉಚಿತಗಳಿಗೆ ವೆಚ್ಚ ಮಾಡಿದ ಸಂಪನ್ಮೂಲವನ್ನು ಉದ್ಯೋಗ ಸೃಷ್ಟಿಗೆ ವಿನಿಯೋಗ ಮಾಡಿದ್ದರೆ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು ಎಂದು ಬಲ್ಲವರು ಹೇಳುವ ಮಾತು. ಅಲವಾದರಲವೆನ್ನಿ * ಬಿವಿಸೀ ರಾಜ್ಯದ ಪ್ರಜ್ಞಾವಂತ ಜನರ ನಡುವೆ - ನಿವೃತ್ತ ಅಧಿಕಾರಿಗಳಿಂದ ಹಿಡಿದು ವಾಣಿಜ್ಯೋದ್ಯಮಿಗಳವರೆಗೆ - ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು, ದುಬಾರಿ ಬೆಲೆ ತೆರಬೇಕಾಗಿರುವಂಥದ್ದು ಎಂಬ ಆಲೋಚನೆ ಗಂಭೀರವಾಗಿ ನೆಲೆಯೂರುತ್ತಿದೆ. ಉದಾತ್ತ ಉದ್ದೇಶ ಮತ್ತು ರಾಜಕೀಯ ಉತ್ಸಾಹದೊಂದಿಗೆ ಜಾರಿಗೊಳಿಸಲಾದ ಈ ಯೋಜನೆಗಳು, ಉಚಿತ ವಿದ್ಯುತ್, ಉಚಿತ ಅಕ್ಕಿ, ಮಹಿಳೆಯರಿಗೆ ನೇರ ನಗದು ಪಾವತಿ, ಉಚಿತ ಬಸ್‍ಪ್ರಯಾಣ ಮತ್ತು ನಿರುದ್ಯೋಗ ಭತ್ಯೆ, ಇವೆಲ್ಲವೂ ಸೇರಿ ಸರ್ಕಾರಕ್ಕೆ ವರ್ಷಕ್ಕೆ 75 ಸಾವಿರ ಕೋಟಿ ರೂ ಹೊರೆಯಾಗುತ್ತಿದೆ. ಇದು ರಾಜ್ಯದ ಆದಾಯ ವೆಚ್ಚದ ಮೂರನೇ ಒಂದು ಭಾಗದಷ್ಟಾಗುತ್ತದೆ. ಒಂದು ಸಮಯದಲ್ಲಿ ಒಳಗೊಳ್ಳುವ (ಇನ್‍ಕ್ಲೂಸಿವ್) ಆಳ್ವಿಕೆಯ ಮಾದರಿ ಎಂದು ಹೆಸರಾಗಿದ್ದ ಈ ಯೋಜನೆಗಳು, ರಾಜ್ಯದ ಹಣಕಾಸು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡುತ್ತಿದೆ. ಸಾರ್ವಜನಿಕ ಕಾಮಗಾರಿಗಳು, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಹೀಗೆ ಎಲ್ಲ ಇಲಾಖೆಗಳೂ ಸಹ ಹಣಕಾಸು ಕೊರತೆ ಇರುವುದನ್ನು ವರದಿ ಮಾಡುತ್ತಿವೆ. ಗುತ್ತಿಗೆದಾರರು ತಮಗೆ ಬಿಲ್‍ಗಳ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿ ಸರಕಾರಕ್ಕೆ ಗಡುವು ನೀಡುತ್ತಿದ್ದಾರೆ, ಮೂಲ ಸೌಕರ್ಯಗ...

Karnataka Congress: discipline lost, confusion reigns

  The ruling Congress in Karnataka appears to have descended into a free-for-all, where party leaders speak on internal affairs with little restraint and no fear of repercussions. The absence of discipline is striking, especially in a party that holds power in the state and should ideally project stability and coherence. The saga began with Chief Minister Siddaramaiah’s camp follower K N Rajanna, who was eventually forced out of the ministry for his unbridled periodic outbursts on party and government matters. Yet, the culture of indiscriminate commentary persists. Rajanna’s place has now been taken by none other than Siddaramaiah’s son and MLC, Yatindra, whose statements have only deepened the confusion. Yatindra has repeatedly declared that “Siddaramaiah will complete his full five-year term,” a claim whose purpose remains unclear. Is he asserting his father’s authority, or attempting to signal stability amid rumblings within the party about leadership change? At the same time, h...