ಧರ್ಮಸ್ಥಳ: ಕರ್ನಾಟಕದ ಯುವ ತಲೆಮಾರಿನ ಗಳಿಗೆ
ಎಸ್ಐಟಿ ತನಿಖೆಯು ಕೇವಲ ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧಗಳ ಬಗ್ಗೆ ಮಾತ್ರ ಅಲ್ಲ. ಅದು ಕರ್ನಾಟಕದ ರಾಜಕೀಯ ಪ್ರಾಮಾಣಿಕತೆಯ ಅಗ್ನಿಪರೀಕ್ಷೆಯಾಗಿದೆ. ಬಹುತೇಕ ಮಹಿಳೆಯರನ್ನೇ ಒಳಗೊಂಡಿರುವ, ಧರ್ಮಸ್ಥಳ ನರಮೇಧದ ಪ್ರಕರಣಗಳ ಬಗ್ಗೆ ಎಸ್ಐಟಿ ತನಿಖೆ ಕರ್ನಾಟಕದಲ್ಲಿ ಅವಿಶ್ವಾಸದ ಒಂದು ನಿರ್ಣಾಯಕ ಘಟ್ಟವಾಗಿ ಪರಿಣಮಿಸುತ್ತಿದೆ. ಸಾರ್ವಜನಿಕರಲ್ಲಿ ಭರವಸೆ ಮೂಡಿಸುವುದರ ಬದಲು, ಎಸ್ಐಟಿ ಮತ್ತು ಸರ್ಕಾರವು ಈ ಪ್ರಕರಣಗಳನ್ನು ನಿರ್ವಹಿಸುತ್ತಿರುವ ರೀತಿ ಗಮನಿಸಿದರೆ, ಇದು ತನಿಖೆಯ ಬಗ್ಗೆಯೇ ಅನುಮಾನಗಳನ್ನು ಹುಟ್ಟುಹಾಕಿದ್ದು, ಸತ್ಯವನ್ನು ಹೊರಗೆಡಹದಂತೆ, ಪ್ರಭಾವಶಾಲಿ ಕುಟುಂಬವನ್ನು ರಕ್ಷಿಸಲು ತನಿಖೆಯನ್ನು ನಡೆಸಲಾಗುತ್ತಿದೆ. ವಿಶ್ವಾಸ ದ್ರೋಹದ ಭಾವನೆ ವ್ಯಾಪಕವಾಗಿ ಹರಡುತ್ತಿದ್ದು, ಮಹಿಳಾ ಸಮೂಹಗಳ ಆಕ್ರೋಶವು ರಾಜ್ಯವ್ಯಾಪಿ ಪ್ರಭಾವ ಬೀರುವಂತಹ ರಾಜಕೀಯ ವಿವಾದವಾಗಿ ಪರಿಣಮಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ವಿವಿಧ ಜಿಲ್ಲೆಗಳಲ್ಲಿ, ಮಹಿಳಾ ಗುಂಪುಗಳು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದು, ಸರ್ಕಾರವು ನಾಚಿಕೆ ಇಲ್ಲದೆ ತನಿಖೆಯನ್ನು ಹಳ್ಳ ಹಿಡಿಸುತ್ತಿದೆ ಎಂದು ಆರೋಪಿಸುತ್ತಿವೆ. ಇವರ ಆಕ್ರೋಶವು ಹೆಚ್ಚಾಗಲು ಕಾರಣ, ಸೌಜನ್ಯಾಗೆ ನ್ಯಾಯ ಚಳುವಳಿಯನಾಯಕರಾದ ಮಹೇಶ್ ಶೆಟ್ಟಿ ತಿಮರೋಡಿ, ಚಿನ್ನಯ್ಯ ಅವರನ್ನು ಬಂಧಿಸಿರುವುದು. ನ್ಯಾಯಯುತ ತನಿಖೆಯನ್ನು ಬಿಂಬಿಸುವ ಬದಲು, ಈ ಬಂಧನಗಳು ಪ್ರತಿರೋಧವನ್ನು ಅಡಗಿಸುವ ಮತ್ತು ಧರ್ಮಸ್ಥಳದ ಪ್ರಭಾವಿ ...