ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ
ಅಪರಾಧಗಳನ್ನು ಮುಚ್ಚಿಹಾಕಬಹುದು, ಸಾಕ್ಷಿಗಳನ್ನು ತೆಪ್ಪಗಾಗಿಸಬಹುದು, ರಾಜಕೀಯ ಪಕ್ಷಗಳು ಪಿತೂರಿ ಮಾಡಬಹುದು ಆದರೆ ಇತಿಹಾಸ ತನ್ನದೇ ಆದ ರೀತಿಯಲ್ಲಿ ನೆನಪಿಟ್ಟುಕೊಳ್ಳುತ್ತದೆ. ಸೌಜನ್ಯ ಪ್ರಕರಣ ಅಷ್ಟು ಸುಲಭವಾಗಿ ಮರೆಯಾಗುವುದಿಲ್ಲ. ...................... ಕೇಳ್ರಪ್ಪೋ ಕೇಳಿ * ಬಿವಿಸೀ ಹಲವು ದಶಕಗಳ ಕಾಲ ಧರ್ಮಸ್ಥಳದಲ್ಲಿ ನಡೆದಂತಹ ಅತ್ಯಾಚಾರ ಮತ್ತು ಕೊಲೆಗಳ ಪ್ರಕರಣಗಳನ್ನು ಮುಚ್ಚಿಹಾಕಲಾಗಿದ್ದು, ಘಟನೆಯನ್ನು ತಿರುಚುವ ಮೂಲಕ, ದಾರಿತಪ್ಪಿಸಿ ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ಸಹ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ, ತಮ್ಮದೇ ಆದ ರೀತಿಯಲ್ಲಿ ಸತ್ಯವನ್ನು ಮುಚ್ಚಿಹಾಕಲು ಕೊಡುಗೆ ಸಲ್ಲಿಸಿವೆ. ಈ ಪಕ್ಷಗಳ ವ್ಯಾಖ್ಯಾನಗಳು ವಿಭಿನ್ನವಾಗಿದ್ದರೂ, ಅವುಗಳ ಗುರಿ ಒಂದೇ ಆಗಿದ್ದು, ಧರ್ಮಸ್ಥಳದ ಗುಂಪಿನ ಹಿತಾಸಕ್ತಿಗಳನ್ನು ರಕ್ಷಿಸುವುದೇ ಆಗಿದೆ. ಆದಾಗ್ಯೂ, ಎಷ್ಟೇ ವಿಳಂಬವಾದರೂ, ಸತ್ಯ ಸಾಯುವುದಿಲ್ಲ. ಸರ್ಕಾರವು ರಚಿಸಿರುವ ವಿಶೇಷ ತನಿಖಾ ದಳ (ಎಸ್ಐಟಿ) ಈ ಪ್ರಕರಣಗಳು ವಿರಮಿಸುವ ತಾಣವಾಗುತ್ತದೆ ಎಂದು ಭಾವಿಸಲಾಗಿತ್ತು. ಸಾರ್ವಜನಿಕರ ಆಕ್ರೋಶವನ್ನು ತಣಿಸಲು ಸರ್ಕಾರವು ಅನುಸರಿಸಿದ ತಾಂತ್ರಿಕ ಕಸರತ್ತು ಎಂದೂ, ಧರ್ಮಸ್ಥಳ ರಿಪಬ್ಲಿಕ್ ಸಂಸ್ಥಾನಕ್ಕೆ ಯಾವುದೇ ಹಾನಿಕಾರಕ ಸಾಕ್ಷಿಗಳು ಲಭ್ಯವಾಗುವುದಿಲ್ಲವೆಂದೂ ಭಾವಿಸಲಾಗಿತ್ತು. ಆದರೆ ಇತ್ತೀಚಿನ ಹೊಸ ಬೆಳವಣಿಗೆಗಳು ದೀರ್ಘಕಾಲ ಮುಚ್ಚಿಹೋಗಿದ್ದ ದುರಂತಗ...