ಪ್ರತಿಭಟನೆಗಳ ಮೇಲೆ ಮೋದಿ ಸರ್ಕಾರದ ನಿರಂತರ ಕಣ್ಗಾವಲು!
* ಬಿವಿಸೀ
ಭಾರತದಲ್ಲಿ ಸೂಕ್ತ ದತ್ತಾಂಶ ಗೌಪ್ಯತೆ ಹಾಗೂ ಸೈಬರ್ ಭದ್ರತಾ ಕಾಯ್ದೆಗಳ ಕೊರತೆಯ ನಡುವೆ, ಸರ್ಕಾರವು ನಾಗರಿಕರ ಮೇಲೆ ತಂತ್ರಜ್ಞಾನದ ಮೂಲಕ ನಿರಂತರ ಮತ್ತು ನಿಯಂತ್ರಣವಿಲ್ಲದ ಕಣ್ಗಾವಲು ಇಡುತ್ತಿದೆ. ಜಂತರ್ ಮಂತರ್ ಹಾಗೂ ರೈತರ ಪ್ರತಿಭಟನೆಗಳಂತಹ ಸ್ಥಳಗಳಲ್ಲಿ ದೆಹಲಿ ಮತ್ತು ಹರಿಯಾಣ ಪೆÇಲೀಸರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಕ್ಯಾಮೆರಾ ಡ್ರೋನ್ಗಳು, ನೈಜ ಸಮಯದಲ್ಲಿ ಮುಖ ಗುರುತಿಸುವ ತಂತ್ರಜ್ಞಾನ, ಸ್ವಯಂಚಾಲಿತ ವಾಹನ ಸಂಖ್ಯೆ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆಯ ಕನ್ನಡಿಗಳನ್ನು ಬಳಸಿ ಪ್ರತಿಭಟನಾಕಾರರ ಮುಖದ ದತ್ತಾಂಶ ಹಾಗೂ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಇತ್ತೀಚೆಗೆ ಸೋನಮ್ ವಾಂಗ್ಚುಕ್ ಅವರ ಪ್ರತಿಭಟನೆಯ ಸಂದರ್ಭದಲ್ಲಿ, ಸ್ಥಳದಲ್ಲಿದ್ದ ಹಲವು ವಿದ್ಯಾರ್ಥಿ ನಾಯಕರು ಹಾಗೂ ಹೋರಾಟಗಾರರ ಮೊಬೈಲ್ ಫೆÇೀನ್ಗಳನ್ನು ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಬಲವಂತವಾಗಿ ಲಾಕ್ ಮಾಡಿ, ಅವರ ಸಂವಹನವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು ಎಂಬ ಆರೋಪವಿದೆ. ಇದರೊಂದಿಗೆ ಪ್ರತಿಭಟನಾಕಾರರನ್ನು ಬೆಂಬಲಿಸುವ ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತುವ ವಿದ್ಯಾರ್ಥಿ ಸಂಘಟನೆಗಳ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅಮಾನತುಗೊಳಿಸುವುದು, ಪ್ರಸಾರ ತಡೆಯುವುದು ಹಾಗೂ ವಿಡಿಯೋಗಳನ್ನು ಸಂವೇದನಾಶೀಲ ವಿಷಯ ಎಂದು ವಿಭಾಗಿಸಿ ವ್ಯಾಪ್ತಿಯನ್ನು ಕಡಿಮೆ ಮಾಡುವ ಕೆಲಸ ನಡೆಯುತ್ತಿದೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಂತಹ ಶೈಕ್ಷಣಿಕ ಸಂಸ್ಥೆಗಳಲ್ಲಿ ಗ್ರಂಥಾಲಯ ಅಥವಾ ಪ್ರಯೋಗಾಲಯಗಳ ಪ್ರವೇಶದ ಹೆಸರಿನಲ್ಲಿ ಮುಖ ಗುರುತಿಸುವ ವ್ಯವಸ್ಥೆಯನ್ನು ತರಲಾಗುತ್ತಿದ್ದು, ಇದು ವಿದ್ಯಾರ್ಥಿಗಳ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಭಟನೆಯ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ. ಹರಿಯಾಣ ಪೆÇಲೀಸರು ಕೃಷಿ ಮತ್ತು ಸಂಚಾರ ನಿಯಂತ್ರಣಕ್ಕೆಂದು ಆರಂಭಿಸಿದ ಡ್ರೋನ್ ಯೋಜನೆಯನ್ನು, ರೈತರ ಪ್ರತಿಭಟನೆಯ ಮೇಲೆ ಕಣ್ಣೀರು ಅನಿಲ ಸಿಡಿಸಲು ಹಾಗೂ ಪ್ರತಿಭಟನಾಕಾರರ ದತ್ತಾಂಶ ತಯಾರಿಸಲು ಬಳಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಇಸ್ರೇಲಿ ಸಂಸ್ಥೆಗಳ ತಂತ್ರಜ್ಞಾನದ ಮಾದರಿಯನ್ನು ಅನುಸರಿಸಲಾಗುತ್ತಿದೆ.
ಆಧಾರ್ ಯೋಜನೆ ಪರಿಚಯಿಸಿದಾಗಿನಿಂದ ಆರಂಭಗೊಂಡು ಇತ್ತೀಚಿನ ಕೋಟ್ಯಂತರ ನಾಗರಿಕರ ವೈಯಕ್ತಿಕ ವಿವರಗಳ ಅಂತರ್ಜಾಲ ಸೋರಿಕೆಯವರೆಗೆ, ದೇಶದ ಸೈಬರ್ ಭದ್ರತಾ ವ್ಯವಸ್ಥೆಯು ಅತ್ಯಂತ ಕೇಂದ್ರಿತವಾಗಿ ಬಳಕೆಯಾಗುತ್ತಿದೆ. ಯಾವುದೇ ನಿರ್ದಿಷ್ಟ ಶಾಸನಬದ್ಧ ನಿಯಂತ್ರಣ ಅಥವಾ ಕಾಯ್ದೆಗಳಿಲ್ಲದೆ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಕಣ್ಗಾವಲಿಗೆ ಬಳಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಿಗೆ ಹಾಗೂ ಗೌಪ್ಯತೆಯ ಹಕ್ಕಿಗೆ ದೊಡ್ಡ ಬೆದರಿಕೆಯಾಗಿದೆ.
Comments
Post a Comment