ಮೀಮ್‍ನಿಂದ ಚಳವಳಿಯಾದ ಜಿರಳೆ ಜನತಾ ಪಕ್ಷ: ಮುಂದಿನ ಹೆಜ್ಜೆ ಏನು?

 ಪ್ರಚಲಿತ * ಬಿವಿಸೀ


ಮೇ 15, 2026ರಂದು ಸುಪ್ರೀಂಕೋರ್ಟ್‍ನಲ್ಲಿ ನಕಲಿ ಪದವಿ ವಿಷಯದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು "ಕೆಲವು ಯುವಕರು ಜಿರಳೆಯಂತೆ ಉದ್ಯೋಗವಿಲ್ಲದೆ ಮಾಧ್ಯಮ, ಆರ್‍ಟಿಐ ಕಾರ್ಯಕರ್ತರಾಗಿ ಸಿಸ್ಟಂ ಮೇಲೆ ದಾಳಿ ಮಾಡುತ್ತಾರೆ" ಎಂದು ನೀಡಿದ ಮೌಖಿಕ ಟೀಕೆ, ಇಂಟರ್ನೆಟ್‍ನಲ್ಲಿ ಕಿಡಿ ಹೊತ್ತಿಸಿತು. ಟೀಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿಜೆಐ ನಂತರ ಸ್ಪಷ್ಟನೆ ನೀಡಿದರೂ, ಇಂಟರ್ನೆಟ್ ಮುಂದೆ ಸಾಗಿತ್ತು.

ಅದರ ಬೆನ್ನಲ್ಲೇ ರಾಜಕೀಯ ಸಂವಹನ ತಂತ್ರಜ್ಞ ಅಭಿಜೀತ್ ದೀಪ್ಕೆ ಅವರು ಮೇ 16ರಂದು ಇನ್‍ಸ್ಟಾಗ್ರಾಮ್‍ನಲ್ಲಿ "ಕಾಕ್ರೋಚ್ ಜನತಾ ಪಕ್ಷ"  (ಸಿಜೆಪಿ) ಎಂಬ ವ್ಯಂಗ್ಯ ಖಾತೆ ತೆರೆದರು. "ಅರ್ಹತಾ ಮಾನದಂಡ: ನಿರುದ್ಯೋಗಿ, ಆಲಸಿ, ಕ್ರಾನಿಕಲಿ ಆನ್‍ಲೈನ್, ವೃತ್ತಿಪರವಾಗಿ ರಾಂಟ್ ಮಾಡುವ ಸಾಮಥ್ರ್ಯ" ಎಂದು ಬರೆದ ಮೊದಲ ಪೆÇೀಸ್ಟ್ ವೈರಲ್ ಆಯಿತು. ಮೂರು ವಾರಗಳಲ್ಲಿ ಸಿಜೆಪಿ ಇನ್‍ಸ್ಟಾಗ್ರಾಮ್‍ನಲ್ಲಿ 2 ಕೋಟಿ 200 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳಿಸಿತು. ಎಕ್ಸ್‍ನಲ್ಲಿ ಖಾತೆ ನಿಬರ್ಂಧವಾದರೂ "ಕಾಕ್ರೋಚಸ್ ಡೋಂಟ್ ಡೈ" ಎಂಬ ಟ್ಯಾಗ್‍ಲೈನ್‍ನೊಂದಿಗೆ ಹೊಸ ಖಾತೆ ತೆರೆದು ಮತ್ತೆ ಬೆಳೆಯಿತು.

ಆರಂಭದಲ್ಲಿ ಕೇವಲ ಮೀಮ್ ಮತ್ತು ವ್ಯಂಗ್ಯವಾಗಿದ್ದ ಸಿಜೆಪಿ, ಉದ್ಯೋಗ, ಪರೀಕ್ಷಾ ಅಕ್ರಮ, ಪೇಪರ್ ಸೋರಿಕೆ, ಯುವಕರ ನಿರಾಶೆಯ ಸಂಕೇತವಾಯಿತು. ಜೂನ್ 6ರಂದು ದೆಹಲಿಯ ಜಂತರ್ ಮಂತರ್‍ನಲ್ಲಿ ಮೊದಲ ಆಫ್‍ಲೈನ್ ಪ್ರತಿಭಟನೆ ನಡೆಯಿತು. ಸಾವಿರಾರು ಯುವಕರು ಕಾಕ್ರೋಚ್ ಮುಖವಾಡ ಧರಿಸಿ, ಪಠ್ಯಪುಸ್ತಕ ಹಿಡಿದು, ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿದರು. ಪರಿಸರವಾದಿ ಸೋನಮ್ ವಾಂಗ್ಚುಕ್ ಕೂಡ ವೇದಿಕೆ ಹಂಚಿಕೊಂಡು, ಇದನ್ನು "ಪ್ರತಿಭಟನೆಗಿಂತ ಮನವಿ" ಎಂದು ಬಣ್ಣಿಸಿದರು.

ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ, ಜೂನ್ 13ರೊಳಗೆ ಪ್ರಧಾನ್ ರಾಜೀನಾಮೆ ನೀಡದಿದ್ದರೆ ಬಹು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ದೆಹಲಿಯಲ್ಲಿ ಮತ್ತೆ ದೊಡ್ಡ ಮಟ್ಟದ ಪ್ರತಿಭಟನೆಗೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳನ್ನು ಕರೆತರುವ ಯೋಜನೆಯೂ ಇದೆ. ಆನ್‍ಲೈನ್ ಅರ್ಜಿಗೆ 8 ಲಕ್ಷ ಸಹಿಗಳು ಸಂಗ್ರಹವಾಗಿವೆ ಎಂಬುದನ್ನು ಪತ್ರಿಕೆ ವಿತರಣೆಯಲ್ಲಿ ಪ್ರಸ್ತಾಪಿಸಲಾಯಿತು.

ಈಗ ಮುಂದಿನ ಪ್ರಶ್ನೆ: ಮೀಮ್‍ನಿಂದ ಚಳವಳಿಯಾದ ಸಿಜೆಪಿ ಏನಾಗಲಿದೆ? ಮೊದಲ ಪರೀಕ್ಷೆ ಶಿಕ್ಷಣ ಸಚಿವರ ರಾಜೀನಾಮೆ. ಅದು ನಡೆದರೆ ಚಳವಳಿಗೆ ಬಲ ಸಿಗುತ್ತದೆ. ಆದರೆ ರಾಜಕೀಯ ವಿಶ್ಲೇಷಕರ ಪ್ರಕಾರ, ಅದು ತಕ್ಷಣಕ್ಕೆ ಅಸಂಭವ.

ಸಿಜೆಪಿ ನಾಯಕರು ಇದನ್ನು ಯಾವುದೇ ಪಕ್ಷಕ್ಕೆ ಸೇರಿರದ, ಯುವಕರಿಗಾಗಿ ಯುವಕರು ನಡೆಸುವ ಚಳವಳಿ ಎಂದು ಹೇಳುತ್ತಾರೆ. ಉದ್ದೇಶ ಶಿಕ್ಷಣ ವ್ಯವಸ್ಥೆ, ಉದ್ಯೋಗ, ಪಾರದರ್ಶಕತೆ ವಿಷಯದಲ್ಲಿ ಹೊಣೆಗಾರಿಕೆ ಕೇಳುವುದು. ಪಕ್ಷದ ಕಚೇರಿ, ಹಣವಿಲ್ಲದೆ, ಅಂತರ್ಜಾಲವೇ ಕೇಂದ್ರವಾಗಿರುವ ಈ ಮಾದರಿ, ಸಾಂಪ್ರದಾಯಿಕ ಪ್ರತಿಭಟನೆಯಿಂದ ಭಿನ್ನವಾಗಿದೆ.

ಮುಂದಿನ ದಿನಗಳಲ್ಲಿ ಸಿಜೆಪಿ ಬೀದಿಗಿಳಿಯುವ ವ್ಯಾಪ್ತಿ, ವಿದ್ಯಾರ್ಥಿಗಳ ಏಕೀಕರಣ, ಮತ್ತು ಸರ್ಕಾರದ ಪ್ರತಿಕ್ರಿಯೆ ನಿರ್ಧರಿಸುತ್ತದೆ. ಅದು ಕೇವಲ ವೈರಲ್ ಕ್ಷಣವಾಗಿ ಉಳಿಯುತ್ತದೆಯೇ, ಅಥವಾ ಉದ್ಯೋಗ-ಶಿಕ್ಷಣ ಕುರಿತು ರಾಷ್ಟ್ರೀಯ ಸಂವಾದವನ್ನು ಬದಲಿಸುವ ಶಕ್ತಿಯಾಗುತ್ತದೆಯೇ ಎಂಬುದೇ ಈಗಿನ ಕುತೂಹಲ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again